ETV Bharat / state

ಅರಕಲಗೂಡು ಜನರ ರಕ್ಷಣೆಗೆ ನಾವು ಸಿದ್ಧ: ಶಾಸಕ ಎ.ಟಿ. ರಾಮಸ್ವಾಮಿ

author img

By

Published : Apr 19, 2020, 11:59 AM IST

ರಾಜ್ಯ ಸರ್ಕಾರ ಜನರಿಗೆ ಈಗಾಗಲೇ ಎರಡು ತಿಂಗಳ ಪಡಿತರ ವಿತರಣೆ ಮಾಡಿದೆ. ಕೇಂದ್ರ ಸರ್ಕಾರ ಎರಡು ತಿಂಗಳ ಆಹಾರ ಸಾಮಗ್ರಿಗಳನ್ನು ನೀಡಲು, ಪಡಿತರ ದಾಸ್ತಾನು ಮಾಡಲಾಗಿದೆ. ಅವುಗಳನ್ನು ಸಮರ್ಪಕವಾಗಿ ಲೋಪವಿಲ್ಲದೆ ವಿತರಣೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.

coronavirus virus in Hassan
ಶಾಸಕ ಎ.ಟಿ. ರಾಮಸ್ವಾಮಿ

ಅರಕಲಗೂಡು: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತೆಯಾಗಿ ಸರ್ಕಾರ ಶ್ರಮಿಸುತ್ತಿದೆ. ಅದರಂತೆ ಅರಕಲಗೂಡು ತಾಲೂಕಿನಲ್ಲಿ ನಾವು ಕೂಡ ಜನರ ರಕ್ಷಣೆಗಾಗಿ ಸಿದ್ದರಾಗಿದ್ದು, ಈಗಾಗಲೇ ಕ್ರಮ ಕೈಗೊಂಡಿದ್ದೇವೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು. ಅರಕಲಗೂಡಿನ ತಾಲೂಕು ಕಚೇರಿಯಲ್ಲಿ ಮಾತನಾಡಿದ ಅವರು, ಟಾಸ್ಕ್​​​​ಫೋರ್ಸ್ ಸಮಿತಿ ರಚಿಸಿದ್ದು, ತಾಲೂಕಿನಲ್ಲಿರುವ ಕಟ್ಟಡ ಕಾರ್ಮಿಕರು, ಅಲೆಮಾರಿಗಳು, ನಿರ್ಗತಿಕರು ಹಾಗೂ ಕಡು ಬಡವರನ್ನು ಗುರುತಿಸಿ ಆಹಾರ ಮತ್ತು ವಸತಿಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಜನರಿಗೆ ಈಗಾಗಲೇ ಎರಡು ತಿಂಗಳ ಪಡಿತರ ವಿತರಣೆ ಮಾಡಿದೆ. ಕೇಂದ್ರ ಸರ್ಕಾರ ಎರಡು ತಿಂಗಳ ಆಹಾರ ಸಾಮಗ್ರಿಗಳನ್ನು ನೀಡಲು, ಪಡಿತರ ದಾಸ್ತಾನು ಮಾಡಲಾಗಿದೆ. ಸಮರ್ಪಕವಾಗಿ ಲೋಪವಿಲ್ಲದೆ ವಿತರಣೆ ಮಾಡಲು ಸೂಚನೆ ನೀಡಿದ್ದೇನೆ ಎಂದರು.ರೈತರು ಬೆಳೆದಿರುವ ಬೆಳೆಯನ್ನು ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಕೊಳ್ಳುವವರ ಪಟ್ಟಿ ಮಾಡಲಾಗಿದ್ದು, ಅದರ ಮಾಹಿತಿ ರೈತರಿಗೆ ನೀಡಲು ಸಹಾಯವಾಣಿ(08175-221491)ಯನ್ನು ತೆರೆಯಲಾಗಿದೆ ಎಂದರು. ದಿನದ ಬೆಳಗ್ಗೆ 7ರಿಂದ ರಾತ್ರಿ 9 ರವರೆಗೆ ಮಾಹಿತಿ ನೀಡಲು ಸೂಚನೆ ನೀಡಲಾಗಿದ್ದು, ರೈತರು ಆತಂಕ ಪಡಬೇಕಾಗಿಲ್ಲ ಎಂದರು.

ಶಾಸಕ ಎ.ಟಿ. ರಾಮಸ್ವಾಮಿ

ತೋಟಗಾರಿಕೆ ಅಧಿಕಾರಿಗಳು ಕೊಳ್ಳುವವರ ಬೆಲೆ ನಿಗದಿಯನ್ನು ತಿಳಿದುಕೊಂಡು, ಇಷ್ಟವೆನಿಸಿದ ಜಾಗದಲ್ಲಿ ಮಾರಲು ಸಹಾಯ ಮಾಡುತ್ತಾರೆ ಎಂದರು. ತಾಲೂಕು ಆಡಳಿತದಿಂದ 2,000 ಆಹಾರ ಸಾಮಗ್ರಿಗಳ ಕಿಟ್​​​​​ನ್ನು ನೀಡಲಾಗಿದೆ ಎಂದರು. ಅವುಗಳನ್ನು ಚರ್ಚೆ ಮಾಡಿ ಕೋವಿಡ್-19 ತಡೆ ಗಟ್ಟುವಲ್ಲಿ ನಿರತರಾಗಿರುವ ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರ ಕಾರ್ಯನಿರತ ಸಿಬ್ಬಂದಿಗೆ ವಿತರಣೆ ಮಾಡಲಾಗಿದೆ ಎಂದರು.

ಜನರು ಈ ಎಲ್ಲಾ ಅನೂಕೂಲತೆ ಬಳಸಿಕೊಂಡು ಸಾಮಾಜಿಕ ಅಂತರ ಕಾಪಾಡಬೇಕು. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಂದರೆಯಾದರೆ ತಾಲೂಕು ಆಡಳಿತ ವರ್ಗಕ್ಕೆ ಮಾಹಿತಿ ಒದಗಿಸಬೇಕು ಎಂದು ಮನವಿ ಮಾಡಿದರು. ಇಂದಿನಿಂದ ಜನರು ಕಟ್ಟು ನಿಟ್ಟಾಗಿ ಲಾಕ್​​ಡೌನ್​​​ ಪಾಲಿಸಲು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ಉಲ್ಲಂಘನೆ ಕಂಡು ಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

ಅರಕಲಗೂಡು: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತೆಯಾಗಿ ಸರ್ಕಾರ ಶ್ರಮಿಸುತ್ತಿದೆ. ಅದರಂತೆ ಅರಕಲಗೂಡು ತಾಲೂಕಿನಲ್ಲಿ ನಾವು ಕೂಡ ಜನರ ರಕ್ಷಣೆಗಾಗಿ ಸಿದ್ದರಾಗಿದ್ದು, ಈಗಾಗಲೇ ಕ್ರಮ ಕೈಗೊಂಡಿದ್ದೇವೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು. ಅರಕಲಗೂಡಿನ ತಾಲೂಕು ಕಚೇರಿಯಲ್ಲಿ ಮಾತನಾಡಿದ ಅವರು, ಟಾಸ್ಕ್​​​​ಫೋರ್ಸ್ ಸಮಿತಿ ರಚಿಸಿದ್ದು, ತಾಲೂಕಿನಲ್ಲಿರುವ ಕಟ್ಟಡ ಕಾರ್ಮಿಕರು, ಅಲೆಮಾರಿಗಳು, ನಿರ್ಗತಿಕರು ಹಾಗೂ ಕಡು ಬಡವರನ್ನು ಗುರುತಿಸಿ ಆಹಾರ ಮತ್ತು ವಸತಿಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಜನರಿಗೆ ಈಗಾಗಲೇ ಎರಡು ತಿಂಗಳ ಪಡಿತರ ವಿತರಣೆ ಮಾಡಿದೆ. ಕೇಂದ್ರ ಸರ್ಕಾರ ಎರಡು ತಿಂಗಳ ಆಹಾರ ಸಾಮಗ್ರಿಗಳನ್ನು ನೀಡಲು, ಪಡಿತರ ದಾಸ್ತಾನು ಮಾಡಲಾಗಿದೆ. ಸಮರ್ಪಕವಾಗಿ ಲೋಪವಿಲ್ಲದೆ ವಿತರಣೆ ಮಾಡಲು ಸೂಚನೆ ನೀಡಿದ್ದೇನೆ ಎಂದರು.ರೈತರು ಬೆಳೆದಿರುವ ಬೆಳೆಯನ್ನು ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಕೊಳ್ಳುವವರ ಪಟ್ಟಿ ಮಾಡಲಾಗಿದ್ದು, ಅದರ ಮಾಹಿತಿ ರೈತರಿಗೆ ನೀಡಲು ಸಹಾಯವಾಣಿ(08175-221491)ಯನ್ನು ತೆರೆಯಲಾಗಿದೆ ಎಂದರು. ದಿನದ ಬೆಳಗ್ಗೆ 7ರಿಂದ ರಾತ್ರಿ 9 ರವರೆಗೆ ಮಾಹಿತಿ ನೀಡಲು ಸೂಚನೆ ನೀಡಲಾಗಿದ್ದು, ರೈತರು ಆತಂಕ ಪಡಬೇಕಾಗಿಲ್ಲ ಎಂದರು.

ಶಾಸಕ ಎ.ಟಿ. ರಾಮಸ್ವಾಮಿ

ತೋಟಗಾರಿಕೆ ಅಧಿಕಾರಿಗಳು ಕೊಳ್ಳುವವರ ಬೆಲೆ ನಿಗದಿಯನ್ನು ತಿಳಿದುಕೊಂಡು, ಇಷ್ಟವೆನಿಸಿದ ಜಾಗದಲ್ಲಿ ಮಾರಲು ಸಹಾಯ ಮಾಡುತ್ತಾರೆ ಎಂದರು. ತಾಲೂಕು ಆಡಳಿತದಿಂದ 2,000 ಆಹಾರ ಸಾಮಗ್ರಿಗಳ ಕಿಟ್​​​​​ನ್ನು ನೀಡಲಾಗಿದೆ ಎಂದರು. ಅವುಗಳನ್ನು ಚರ್ಚೆ ಮಾಡಿ ಕೋವಿಡ್-19 ತಡೆ ಗಟ್ಟುವಲ್ಲಿ ನಿರತರಾಗಿರುವ ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರ ಕಾರ್ಯನಿರತ ಸಿಬ್ಬಂದಿಗೆ ವಿತರಣೆ ಮಾಡಲಾಗಿದೆ ಎಂದರು.

ಜನರು ಈ ಎಲ್ಲಾ ಅನೂಕೂಲತೆ ಬಳಸಿಕೊಂಡು ಸಾಮಾಜಿಕ ಅಂತರ ಕಾಪಾಡಬೇಕು. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಂದರೆಯಾದರೆ ತಾಲೂಕು ಆಡಳಿತ ವರ್ಗಕ್ಕೆ ಮಾಹಿತಿ ಒದಗಿಸಬೇಕು ಎಂದು ಮನವಿ ಮಾಡಿದರು. ಇಂದಿನಿಂದ ಜನರು ಕಟ್ಟು ನಿಟ್ಟಾಗಿ ಲಾಕ್​​ಡೌನ್​​​ ಪಾಲಿಸಲು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ಉಲ್ಲಂಘನೆ ಕಂಡು ಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.