ETV Bharat / state

ಲೋಕಕಂಟಕ ಪ್ರಕೃತಿ ಕಂಟಕ ಉಂಟಾಗಿ ಮನುಷ್ಯ ಹುಚ್ಚನಾಗುತ್ತಾನೆ: ಕೋಡಿಮಠ ಶ್ರೀ ಭವಿಷ್ಯ

author img

By

Published : Oct 22, 2022, 5:43 PM IST

ಪ್ರಾಕೃತಿಕ ವಿಕೋಪಗಳ ಭೀತಿ ಒಂದೆಡೆಯಾದರೆ ಮತ್ತೊಂದೆಡೆ ಮನುಷ್ಯ ಮನುಷ್ಯನನ್ನು ನಂಬದೇ ತನ್ನ ಮನಸ್ಥಿತಿಯ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚನಂತೆ ಆಗುತ್ತಾನೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

kodimatt swamiji told about future in Hassan
ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ

ಅರಸೀಕೆರೆ(ಹಾಸನ) : ರಾಜ ಭೀತಿ, ಯುದ್ಧ ಬೀತಿ ಸೇರಿದಂತೆ ಲೋಕ ಕಂಟಕ, ಪ್ರಾಕೃತಿಕ ಕಂಟಕ, ಪ್ರಾದೇಶಿಕ ಕಂಟಕ ಭೂಕಂಪನ ಹೀಗೆ ನಾನಾ ದುಷ್ಪರಿಣಾಮಗಳು ಮನುಕುಲದ ಮೇಲೆ ಬೀರಲಿದೆ. ಮುಂದಿನ ಮೂರು ತಿಂಗಳು ಮನುಕುಲ ಜಾಗರೂಕತೆಯಿಂದ ಇರಬೇಕಾಗುತ್ತದೆ ಎಂದು ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಮತ್ತೊಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.

ಲೋಕ ಕಲ್ಯಾಣಾರ್ಥವಾಗಿ ಒಂದು ಮಂಡಲ ಕಾಲ ಶ್ರೀಮಠದಲ್ಲಿ ತಾವು ಕೈಗೊಂಡಿರುವ ಮಹಾರುದ್ರ ಜಪಾಯಾಗದ ಶನಿವಾರದ ಪೂಜಾ ಕಾರ್ಯವನ್ನು ಮುಗಿಸಿ ಸುದ್ದಿಗರೊಂದಿಗೆ ಮಾತನಾಡಿದ ಶ್ರೀಗಳು, ಪ್ರಾಕೃತಿಕ ವಿಕೋಪಗಳ ಭೀತಿ ಒಂದೆಡೆಯಾದರೆ, ಮತ್ತೊಂದೆಡೆ ಮನುಷ್ಯ ಮನುಷ್ಯನನ್ನು ನಂಬದೇ ತನ್ನ ಮನಸ್ಥಿತಿಯ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚನಂತೆ ಆಗುತ್ತಾನೆ. ದೇಹದ ಆಶಕ್ತತೆಯಿಂದ ಹಾದಿ ಬೀದಿಯಲ್ಲಿ ಬಿದ್ದು ಸಾಯುವಂತ ಕಾಲ ಮುಂದಿನ ದಿನಗಳಲ್ಲಿ ಬರಲಿದೆ ಎಂದು ಭವಿಷ್ಯ ನುಡಿದರು.

ಲೋಕಕಂಟಕ ಪ್ರಕೃತಿ ಕಂಟಕ ಉಂಟಾಗಿ ಮನುಷ್ಯ ಹುಚ್ಚನಾಗುತ್ತಾನೆ

ಈ ಎಲ್ಲದರಿಂದ ಮನುಷ್ಯ ಮುಕ್ತನಾಗಬೇಕಾದರೆ ದೈವದ ಮೇಲೆ ಭಕ್ತಿ ಜಪ ತಪಗಳ ಮೂಲಕ ಭಗವಂತನೆಡೆಗೆ ಮುಖ ಮಾಡಿದರೆ ಭವಿಷ್ಯದಲ್ಲಿ ಸಂಭವಿಸುವ ದುಷ್ಪರಿಣಾಮದಿಂದ ಪಾರಾಗಲು ಸಾಧ್ಯವಾಗಲಿದೆ ಎಂದು ಸ್ವಾಮೀಜಿ ಹೇಳಿದರು.

ಸರ್ವರ ಒಳಿತು ಬಯಸಿ, ಲೋಕ ಕಲ್ಯಾಣಕ್ಕಾಗಿ ತಾವು ಮಹಾರುದ್ರ ಜಪಾಯಾಗವನ್ನು ಕೈಗೊಂಡಿದ್ದು, ಶ್ರೀಮಠದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಳ್ಳುವ ಮೂಲಕ ಭಗವಂತನ ಒಲುಮೆಗೆ ಪಾತ್ರರಾಗುವಂತೆ ಸ್ವಾಮೀಜಿ ಕರೆ ನೀಡಿದರು.

ಇದನ್ನೂ ಓದಿ : ಬೆಂಕಿಯಿಂದ ಕಾಟ, ಮತಾಂಧತೆ ಹೆಚ್ಚಳ, ಸಾವು ನೋವುಗಳಾಗುತ್ತವೆ: ಕೋಡಿಮಠ ಸ್ವಾಮೀಜಿ ಭವಿಷ್ಯ

ಅರಸೀಕೆರೆ(ಹಾಸನ) : ರಾಜ ಭೀತಿ, ಯುದ್ಧ ಬೀತಿ ಸೇರಿದಂತೆ ಲೋಕ ಕಂಟಕ, ಪ್ರಾಕೃತಿಕ ಕಂಟಕ, ಪ್ರಾದೇಶಿಕ ಕಂಟಕ ಭೂಕಂಪನ ಹೀಗೆ ನಾನಾ ದುಷ್ಪರಿಣಾಮಗಳು ಮನುಕುಲದ ಮೇಲೆ ಬೀರಲಿದೆ. ಮುಂದಿನ ಮೂರು ತಿಂಗಳು ಮನುಕುಲ ಜಾಗರೂಕತೆಯಿಂದ ಇರಬೇಕಾಗುತ್ತದೆ ಎಂದು ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಮತ್ತೊಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.

ಲೋಕ ಕಲ್ಯಾಣಾರ್ಥವಾಗಿ ಒಂದು ಮಂಡಲ ಕಾಲ ಶ್ರೀಮಠದಲ್ಲಿ ತಾವು ಕೈಗೊಂಡಿರುವ ಮಹಾರುದ್ರ ಜಪಾಯಾಗದ ಶನಿವಾರದ ಪೂಜಾ ಕಾರ್ಯವನ್ನು ಮುಗಿಸಿ ಸುದ್ದಿಗರೊಂದಿಗೆ ಮಾತನಾಡಿದ ಶ್ರೀಗಳು, ಪ್ರಾಕೃತಿಕ ವಿಕೋಪಗಳ ಭೀತಿ ಒಂದೆಡೆಯಾದರೆ, ಮತ್ತೊಂದೆಡೆ ಮನುಷ್ಯ ಮನುಷ್ಯನನ್ನು ನಂಬದೇ ತನ್ನ ಮನಸ್ಥಿತಿಯ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚನಂತೆ ಆಗುತ್ತಾನೆ. ದೇಹದ ಆಶಕ್ತತೆಯಿಂದ ಹಾದಿ ಬೀದಿಯಲ್ಲಿ ಬಿದ್ದು ಸಾಯುವಂತ ಕಾಲ ಮುಂದಿನ ದಿನಗಳಲ್ಲಿ ಬರಲಿದೆ ಎಂದು ಭವಿಷ್ಯ ನುಡಿದರು.

ಲೋಕಕಂಟಕ ಪ್ರಕೃತಿ ಕಂಟಕ ಉಂಟಾಗಿ ಮನುಷ್ಯ ಹುಚ್ಚನಾಗುತ್ತಾನೆ

ಈ ಎಲ್ಲದರಿಂದ ಮನುಷ್ಯ ಮುಕ್ತನಾಗಬೇಕಾದರೆ ದೈವದ ಮೇಲೆ ಭಕ್ತಿ ಜಪ ತಪಗಳ ಮೂಲಕ ಭಗವಂತನೆಡೆಗೆ ಮುಖ ಮಾಡಿದರೆ ಭವಿಷ್ಯದಲ್ಲಿ ಸಂಭವಿಸುವ ದುಷ್ಪರಿಣಾಮದಿಂದ ಪಾರಾಗಲು ಸಾಧ್ಯವಾಗಲಿದೆ ಎಂದು ಸ್ವಾಮೀಜಿ ಹೇಳಿದರು.

ಸರ್ವರ ಒಳಿತು ಬಯಸಿ, ಲೋಕ ಕಲ್ಯಾಣಕ್ಕಾಗಿ ತಾವು ಮಹಾರುದ್ರ ಜಪಾಯಾಗವನ್ನು ಕೈಗೊಂಡಿದ್ದು, ಶ್ರೀಮಠದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಳ್ಳುವ ಮೂಲಕ ಭಗವಂತನ ಒಲುಮೆಗೆ ಪಾತ್ರರಾಗುವಂತೆ ಸ್ವಾಮೀಜಿ ಕರೆ ನೀಡಿದರು.

ಇದನ್ನೂ ಓದಿ : ಬೆಂಕಿಯಿಂದ ಕಾಟ, ಮತಾಂಧತೆ ಹೆಚ್ಚಳ, ಸಾವು ನೋವುಗಳಾಗುತ್ತವೆ: ಕೋಡಿಮಠ ಸ್ವಾಮೀಜಿ ಭವಿಷ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.