ETV Bharat / state

ದೇಶದಲ್ಲಿ ಧರ್ಮ, ಸಂಸ್ಕೃತಿ, ಪರಂಪರೆ ಉಳಿವಿಗೆ ಮಠಮಾನ್ಯಗಳು ಕಾರಣ: ಸಿಎಂ ಬಿಎಸ್​ವೈ - ರವಿತಂದ್ರೆ ಗ್ರಾಮ

ದೇಶದಲ್ಲಿ ಧರ್ಮ, ಸಂಸ್ಕೃತಿ, ಪರಂಪರೆ ಉಳಿದಿದೆ ಎಂದರೆ ಅದಕ್ಕೆ ಕಾರಣ ಮಠಮಾನ್ಯಗಳು, ಈ ನಾಡಿನ ತಾಯಂದಿರ ಆಶೀರ್ವಾದ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.

It is because of Mutt Religion, culture and heritage are still residing in country:CM
ದೇಶದಲ್ಲಿ ಧರ್ಮ, ಸಂಸ್ಕೃತಿ, ಪರಂಪರೆ ವಿಳಿವಿಗೆ ಮಠಮಾನ್ಯಗಳು ಕಾರಣ: ಸಿಎಂ ಬಿಎಸ್​ವೈ
author img

By

Published : Jan 27, 2020, 2:54 PM IST

Updated : Jan 27, 2020, 5:43 PM IST

ಹಾಸನ: ದೇಶದಲ್ಲಿ ಧರ್ಮ, ಸಂಸ್ಕೃತಿ, ಪರಂಪರೆ ಉಳಿದಿದೆ ಎಂದರೆ ಅದಕ್ಕೆ ಕಾರಣ ಮಠಮಾನ್ಯಗಳು, ಈ ನಾಡಿನ ತಾಯಂದಿರ ಆಶೀರ್ವಾದ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ನಡೆದ ಸಪ್ತಮಾತೃಕಾ ದೇವೀರಮ್ಮ ದೇಗುಲ ಉದ್ಘಾಟನೆ ಮತ್ತು ರಂಭಾಪುರಿ ಪೀಠದ ಜಗದ್ಗುರುಗಳ 28ನೇ ಪೀಠಾರೋಹಣ ಮತ್ತು ವರ್ಧಂತಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ಬಳಿಕ ಬಿಎಸ್​ವೈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ದೇಶದಲ್ಲಿ ಧರ್ಮ, ಸಂಸ್ಕೃತಿ, ಪರಂಪರೆ ಉಳಿವಿಗೆ ಮಠಮಾನ್ಯಗಳು ಕಾರಣ: ಸಿಎಂ ಬಿಎಸ್​ವೈ

ರವಿತಂದ್ರೆ ಗ್ರಾಮ ಧಾರ್ಮಿಕ ಭಕ್ತಿ ಭಾವ ಕೇಂದ್ರ. ಇಂದಿನ ಕಾರ್ಯಕ್ರಮದಲ್ಲಿ ದೊಡ್ಡ ಪ್ರಮಾಣದಲ್ಲಿ ನಮ್ಮ ತಾಯಂದಿರೇ ಸೇರಿದ್ದು, ಇಂದು ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಉಳಿದಿದ್ರೆ ಅದು ಈ ರಾಜ್ಯದ ಕೋಟ್ಯಂತರ ತಾಯಂದಿರ ಆಶೀರ್ವಾದದಿಂದ. ಸದ್ಯ ನಮ್ಮ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದು, ಗುರುಗಳ ಆಶೀರ್ವಾದದಿಂದ ಇಂದಿನಿಂದ ಅಭಿವೃದ್ಧಿ ಪಥದ ಕಡೆ ಸಾಗಲಿದೆ ಎಂದರು.

ಇನ್ನು ನಮ್ಮ ನಾಡಿನಲ್ಲಿ ಧಾರ್ಮಿಕ, ಸಾಮಾಜಿಕ ಪ್ರಜ್ಞೆ ಮೂಡಿಸುವಲ್ಲಿ ರಂಭಾಪುರಿ ಶ್ರೀಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಡಾ. ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಧರ್ಮ, ಸಂಸ್ಕೃತಿ, ಪರಂಪರೆ ಉಳಿವಿಗಾಗಿ ಪ್ರವಾಸ ಮಾಡಿರುವಷ್ಟು ಬೇರೆ ಯಾವ ಮಠಾಧಿಪತಿಗಳು ಮಾಡಿಲ್ಲ. ಧರ್ಮ ಜಾಗೃತಿ ಮಾಡುತ್ತಿರುವವರಲ್ಲಿ ಜಗದ್ಗುರು ರಂಭಾಪುರಿ ಪೀಠಾಧಿಪತಿಗಳು ಮೊದಲಿಗರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ, ಮಾರ್ಚ್ 5ರಂದು ರಾಜ್ಯ ಬಜೆಟ್ ಮಂಡಿಸಲಿದ್ದು, ರೈತರ ಪರವಾಗಿ, ಮಹಿಳೆಯರ ಪರವಾಗಿ ಹಾಗೂ ಸಮಾಜದ ಒಳಿತನ್ನು ಕೇಂದ್ರೀಕರಿಸಿ ಈ ಬಾರಿಯ ಬಜೆಟ್ ಇರಲಿದೆ ಎಂದರು.

ದೇವಿತಂದ್ರೆ, ಹೇಮಾವತಿ ಬಲದಂಡೆ ನಾಲೆ ಪ್ರದೇಶಕ್ಕೆ ಒಳಪಡುವ ಮುಳುಗಡೆ ಗ್ರಾಮ. ಹಾಗಾಗಿ, ಇಲ್ಲಿನ ಗ್ರಾಮಸ್ಥರು ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದ್ದು, ಕೂಡಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ವಸತಿ ನಿರ್ಮಾಣ ಮಾಡಿಕೊಡುವುದಾಗಿ ಸಿಎಂ ಭರವಸೆ ನೀಡಿದರು.

ಹಾಸನ: ದೇಶದಲ್ಲಿ ಧರ್ಮ, ಸಂಸ್ಕೃತಿ, ಪರಂಪರೆ ಉಳಿದಿದೆ ಎಂದರೆ ಅದಕ್ಕೆ ಕಾರಣ ಮಠಮಾನ್ಯಗಳು, ಈ ನಾಡಿನ ತಾಯಂದಿರ ಆಶೀರ್ವಾದ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ನಡೆದ ಸಪ್ತಮಾತೃಕಾ ದೇವೀರಮ್ಮ ದೇಗುಲ ಉದ್ಘಾಟನೆ ಮತ್ತು ರಂಭಾಪುರಿ ಪೀಠದ ಜಗದ್ಗುರುಗಳ 28ನೇ ಪೀಠಾರೋಹಣ ಮತ್ತು ವರ್ಧಂತಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ಬಳಿಕ ಬಿಎಸ್​ವೈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ದೇಶದಲ್ಲಿ ಧರ್ಮ, ಸಂಸ್ಕೃತಿ, ಪರಂಪರೆ ಉಳಿವಿಗೆ ಮಠಮಾನ್ಯಗಳು ಕಾರಣ: ಸಿಎಂ ಬಿಎಸ್​ವೈ

ರವಿತಂದ್ರೆ ಗ್ರಾಮ ಧಾರ್ಮಿಕ ಭಕ್ತಿ ಭಾವ ಕೇಂದ್ರ. ಇಂದಿನ ಕಾರ್ಯಕ್ರಮದಲ್ಲಿ ದೊಡ್ಡ ಪ್ರಮಾಣದಲ್ಲಿ ನಮ್ಮ ತಾಯಂದಿರೇ ಸೇರಿದ್ದು, ಇಂದು ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಉಳಿದಿದ್ರೆ ಅದು ಈ ರಾಜ್ಯದ ಕೋಟ್ಯಂತರ ತಾಯಂದಿರ ಆಶೀರ್ವಾದದಿಂದ. ಸದ್ಯ ನಮ್ಮ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದು, ಗುರುಗಳ ಆಶೀರ್ವಾದದಿಂದ ಇಂದಿನಿಂದ ಅಭಿವೃದ್ಧಿ ಪಥದ ಕಡೆ ಸಾಗಲಿದೆ ಎಂದರು.

ಇನ್ನು ನಮ್ಮ ನಾಡಿನಲ್ಲಿ ಧಾರ್ಮಿಕ, ಸಾಮಾಜಿಕ ಪ್ರಜ್ಞೆ ಮೂಡಿಸುವಲ್ಲಿ ರಂಭಾಪುರಿ ಶ್ರೀಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಡಾ. ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಧರ್ಮ, ಸಂಸ್ಕೃತಿ, ಪರಂಪರೆ ಉಳಿವಿಗಾಗಿ ಪ್ರವಾಸ ಮಾಡಿರುವಷ್ಟು ಬೇರೆ ಯಾವ ಮಠಾಧಿಪತಿಗಳು ಮಾಡಿಲ್ಲ. ಧರ್ಮ ಜಾಗೃತಿ ಮಾಡುತ್ತಿರುವವರಲ್ಲಿ ಜಗದ್ಗುರು ರಂಭಾಪುರಿ ಪೀಠಾಧಿಪತಿಗಳು ಮೊದಲಿಗರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ, ಮಾರ್ಚ್ 5ರಂದು ರಾಜ್ಯ ಬಜೆಟ್ ಮಂಡಿಸಲಿದ್ದು, ರೈತರ ಪರವಾಗಿ, ಮಹಿಳೆಯರ ಪರವಾಗಿ ಹಾಗೂ ಸಮಾಜದ ಒಳಿತನ್ನು ಕೇಂದ್ರೀಕರಿಸಿ ಈ ಬಾರಿಯ ಬಜೆಟ್ ಇರಲಿದೆ ಎಂದರು.

ದೇವಿತಂದ್ರೆ, ಹೇಮಾವತಿ ಬಲದಂಡೆ ನಾಲೆ ಪ್ರದೇಶಕ್ಕೆ ಒಳಪಡುವ ಮುಳುಗಡೆ ಗ್ರಾಮ. ಹಾಗಾಗಿ, ಇಲ್ಲಿನ ಗ್ರಾಮಸ್ಥರು ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದ್ದು, ಕೂಡಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ವಸತಿ ನಿರ್ಮಾಣ ಮಾಡಿಕೊಡುವುದಾಗಿ ಸಿಎಂ ಭರವಸೆ ನೀಡಿದರು.

Intro:ಹಾಸನ: ದೇಶದಲ್ಲಿ ಧರ್ಮ ಸಂಸ್ಕೃತಿ ಪರಂಪರೆಯ ಉಳಿದಿದೆ ಎಂದರೆ ಅದಕ್ಕೆ ಕಾರಣ ಮಠಮಾನ್ಯಗಳು ಅಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲೆ ಕೆಆರ್ ನಗರ ತಾಲ್ಲೂಕಿನ ದೇವಿತಂದ್ರೆ ಗ್ರಾಮದಲ್ಲಿ ನಡೆದ ಸಪ್ತಮಾತೃಕಾ ದೇವಿರಮ್ಮ ದೇಗುಲ ಉದ್ಘಾಟನೆ ಮತ್ತು ರಂಭಾಪುರಿ ಪೀಠದ ಜಗದ್ಗುರುಗಳ 28ನೇ ಪೀಠಾರೋಹಣ ಮತ್ತು ವರ್ಧಂತಿ ಕಾರ್ಯಕ್ರಮದ ಉದ್ಘಾಟನೆ ಮಾಡಿದ ಬಳಿಕ ತಮ್ಮ ಭಾಷಣದಲ್ಲಿ ಅವರು ಮಾತನಾಡಿದರು.

ರವಿತಂದ್ರೆ ಗ್ರಾಮ ಧಾರ್ಮಿಕ ಭಕ್ತಿಭಾವ ಕೇಂದ್ರ. ಇಂದಿನ ಕಾರ್ಯಕ್ರಮದಲ್ಲಿ ದೊಡ್ಡ ಪ್ರಮಾಣದಲ್ಲಿ ನಮ್ಮ ತಾಯಂದಿರ ಸೇರಿದ್ದು, ಇವತ್ತೇನಾದರೂ ನಮ್ಮ ಧರ್ಮ ನಮ್ಮ ಸಂಸ್ಕೃತಿ ಪರಂಪರೆ ಉಳಿದಿದ್ರೆ ಅದು ಈ ರಾಜ್ಯದ ಕಟ್ಯಾಂತರ ತಾಯಂದಿರ ಆಶೀರ್ವಾದದಿಂದ. ಸದ್ಯ
ನಮ್ಮ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದು, ಗುರುಗಳ ಆಶೀರ್ವಾದದಿಂದ ಇಂದಿನಿಂದ ಅಭಿವೃದ್ಧಿ ಪಥದ ಕಡೆ ಸಾಗಲಿದೆ ಎಂದ್ರು.

ನಮ್ಮ ನಾಡಿನಲ್ಲಿ ಸಾಮಾಜಿಕ ಧಾರ್ಮಿಕ ಸಾಮಾಜಿಕ ಪ್ರಜ್ಞೆ ಮೂಡಿಸುವಲ್ಲಿ ರಂಭಾಪುರಿ ಶ್ರೀಗಳು ಹೆಚ್ಚು ಪಾತ್ರ ವಹಿಸಿದ್ದಾರೆ. ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಧರ್ಮ ಸಂಸ್ಕೃತಿ ಪರಂಪರೆಯ ಉಳಿವಿಗಾಗಿ ಪ್ರವಾಸ ಮಾಡಿರುವಷ್ಟು ಬೇರೆ ಯಾವ ಮಠಾಧಿಪತಿಗಳು ಮಾಡಿಲ್ಲ. ಧರ್ಮ ಜಾಗೃತಿಯನ್ನು ಮಾಡುತ್ತಿರುವವರಲ್ಲಿ ಜಗದ್ಗುರು ರಂಭಾಪುರಿ ಪೀಠ ಮೊದಲಿಗರು ಎಂದು ಬಣ್ಣಿಸಿದರು.

ಇನ್ನು ರಂಭಾಪುರಿ ಪೀಠ ಪ್ರಾಚೀನವಾದ ಮಠ. ಭಾರತೀಯ ಸಂಸ್ಕೃತಿ, ಸಂಪ್ರದಾಯ, ಧರ್ಮ ಜಾಗೃತಿಯನ್ನು ಮೂಡಿಸುವಂತಹ ಪೀಠವಾಗಿ ರಾಜ್ಯದಲ್ಲಿ ಪರಿಣಾಮವಾಗಿದೆ ಕೆಲಸ ಮಾಡಿದೆ. ಅಲ್ಲದೆ ಜಾತಿ-ಮತ-ಪಂಥ ಎನ್ನದೇ ಜಾತ್ಯತೀತ ಧರ್ಮವನ್ನು ಪಾಲಿಸುವ ಏಕೈಕ ಧರ್ಮ ಕೇಂದ್ರವಾಗಿ ಹೊರಹೊಮ್ಮಿದ್ದು,
ನಮಗಾಗಿ ಬದುಕುವುದಕ್ಕಿಂತ ಸಮಾಜಕ್ಕೆ ನಾವು ಬದುಕಬೇಕು ಎಂದುಕೊಂಡಿದೆ ರಂಭಾಪುರಿ ಪೀಠ ಎಂದ್ರು.

ಮಾರ್ಚ್ ಐದರಂದು ರಾಜ್ಯ ಬಜೆಟ್ ಮಂಡಿಸಲಿದ್ದು ರೈತರ ಪರವಾಗಿ ಮಹಿಳೆಯರ ಪರವಾಗಿ ಸಮಾಜದ ಒಳಿತಿಗೆ ಈ ಬಾರಿ ಬಜೆಟ್ ಇರಲಿದೆ ಎಂದ್ರು.

ದೇವಿತಂದ್ರೆ ಹೇಮಾವತಿ ಬಲದಂಡೆ ನಾಲೆ ಪ್ರದೇಶಕ್ಕೆ ಒಳಪಡುವ ಮುಳುಗಡೆ ಗ್ರಾಮ ಹಾಗಾಗಿ ಇಲ್ಲಿನ ಗ್ರಾಮಸ್ಥರು ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದ್ದು ಕೂಡಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ವಸತಿ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದರು.

ಮಾಸಾಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆ : ಮುಖ್ಯಮಂತ್ರಿ ಬಿಎಸ್ ವೈ
ಹಾಸನ ಜ27 (ಕರ್ನಾಟಕ ವಾರ್ತೆ ) ಈ ಮಾಸಾಂತ್ಯದೊಳಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ
ಸಿಂಗನ ಕುಪ್ಪೆ ಗ್ರಾಮದ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು

ತಮ್ಮ ದಾವೋಸ್ ಭೇಟಿ‌ ಅತ್ಯಂತ ಫಲಪ್ರದವಾಗಿದೆ ರಾಜ್ಯದಲ್ಲಿ ಅನೇಕರು ಬಂಡವಾಳ ಹೂಡುಲು ಆಸಕ್ತಿ ತೋರಿದ್ದಾರೆ ಎಂದು ಹೇಳಿದರು. ಹಲವು ಕೈಗಾರಿಕೋದ್ಯಮಿಗಳು ನಮ್ಮ ರಾಜ್ಯಕ್ಕೆ ಬರಲು ಒಪ್ಪಿದ್ದಾರೆ

40 ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳನ್ನು ತಾವು ವೈಯಕ್ತಿಕವಾಗಿ ಭೇಟಿ ಮಾಡಿ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ವಿನಂತಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು

ಎಸ್‌ಎಂ.ಕೃಷ್ಣ ಅವರ ನಂತರ 16 ವರ್ಷಗಳು ಕಳೆದ ಮೇಲೆ ತಾವು ದಾವೂಸ್ ಗೆ ಹೋಗಿದ್ದು ತುಂಬಾ ಉಪಯುಕ್ತ ವಾಯ್ತು. ಬಹಳ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆ ಅಭಿವೃದ್ಧಿ ಮಾಡಲು ಭರವಸೆ ದೊರೆತಿದೆ ಇದರಿಂದ ಕೃಷಿ ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲೂ ಅನುಕೂಲ ಆಗಲಿದೆ ಎಂದ್ರು.

ಬೈಟ್: ಬಿಎಸ್ ಯಡಿಯೂರಪ್ಪ, ಮುಖ್ಯಮಂತ್ರಿ.


Body:7203289


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
Last Updated : Jan 27, 2020, 5:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.