ETV Bharat / state

ಹೇಮಾವತಿ ಕ್ರಸ್ಟ್​​​​​ ಗೇಟ್​​ ಬಂದ್​: ವಾಟೆಹೊಳೆಯತ್ತ ಮುಖಮಾಡಿದ ಪ್ರವಾಸಿಗರು! - ಹೇಮಾವತಿ ಕ್ರೆಸ್ಟ್ ಗೇಟ್ ಬಂದ್

ನಿನ್ನೆ ಒಳಹರಿವಿನ ಪ್ರಮಾಣ ಕಡಿಮೆಯಾದ್ದರಿಂದ ಇಂದು ಹೇಮಾವತಿ ಜಲಾಶಯದ ಎಲ್ಲಾ ಕ್ರಸ್ಟ್ ಗೇಟ್​​ಗಳನ್ನು ಮುಚ್ಚಲಾಗಿದೆ.

ಹೇಮಾವತಿ ಕ್ರೆಸ್ಟ್ ಗೇಟ್ ಬಂದ್​..
author img

By

Published : Aug 12, 2019, 9:03 PM IST

ಹಾಸನ: ಒಂದು ವಾರದಿಂದ ಸುರಿದ ಮಳೆಯಿಂದಾಗಿ ಜಿಲ್ಲೆಯ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಕ್ರಸ್ಟ್ ಗೇಟ್​​ಗಳ ಮೂಲಕ ನದಿಗೆ ಬಿಡಲಾಗುತ್ತಿತ್ತು. ನಿನ್ನೆ ಒಳಹರಿವಿನ ಪ್ರಮಾಣ ಕಡಿಮೆಯಾದ್ದರಿಂದ ಇಂದು ಹೇಮಾವತಿ ಜಲಾಶಯದ ಎಲ್ಲಾ ಕ್ರಸ್ಟ್ ಗೇಟ್​​ಗಳನ್ನು ಮುಚ್ಚಲಾಗಿದೆ.

ಸಾಲು-ಸಾಲು ರಜೆ ಬಂದಿದ್ದರಿಂದ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಳೆಯ ನಡುವೆಯೂ ಕೂಡ ಹೇಮಾವತಿ ಜಲಾಶಯ ನೋಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇವತ್ತು ಬಕ್ರೀದ್ ಹಬ್ಬದ ಪ್ರಯುಕ್ತ ರಜೆ ಕಾರಣ ವಿವಿಧ ಭಾಗಗಳಿಂದ ಪ್ರವಾಸಿಗರು ಬಂದಿದ್ದರು. ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದರಿಂದ ಜಲಾಶಯದ ಎಲ್ಲಾ ಕ್ರಸ್ಟ್ ಗೇಟ್​ಗಳನ್ನು ಮುಚ್ಚಲಾಗಿತ್ತು. ಇದರಿಂದ ಪ್ರವಾಸಿಗರು ಬೇಸರದಿಂದ ವಾಪಸಾಗಿದ್ದಾರೆ.

ಹೇಮಾವತಿ ಕ್ರಸ್ಟ್ ಗೇಟ್ ಬಂದ್​

ಆಲೂರು ತಾಲೂಕಿನ ವಾಟೆಹೊಳೆ ಜಲಾಶಯದಿಂದ ಮಾತ್ರ ನೀರನ್ನು ಹರಿಬಿಡಲಾಗಿತ್ತು. ಹಾಗಾಗಿ ಹೇಮಾವತಿ ಜಲಾಶಯವನ್ನು ನೋಡಲು ಬಂದ ಸ್ಥಳೀಯ ಪ್ರವಾಸಿಗರು, ವಾಟೆಹೊಳೆಯತ್ತ ಮುಖ ಮಾಡಿದರು. 3 ಕ್ರಸ್ಟ್ ಗೇಟ್​​​ಗಳನ್ನ ಹೊಂದಿರುವ ವಾಟೆಹೊಳೆ 8 ವರ್ಷಗಳ ಬಳಿಕ ತುಂಬಿದ್ದು, ಜಲಾಶಯದಿಂದ 1,500 ಕ್ಯೂಸೆಕ್​​ ನೀರನ್ನು ಹೊರಬಿಡಲಾಗುತ್ತಿದೆ.

ಹಾಸನ: ಒಂದು ವಾರದಿಂದ ಸುರಿದ ಮಳೆಯಿಂದಾಗಿ ಜಿಲ್ಲೆಯ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಕ್ರಸ್ಟ್ ಗೇಟ್​​ಗಳ ಮೂಲಕ ನದಿಗೆ ಬಿಡಲಾಗುತ್ತಿತ್ತು. ನಿನ್ನೆ ಒಳಹರಿವಿನ ಪ್ರಮಾಣ ಕಡಿಮೆಯಾದ್ದರಿಂದ ಇಂದು ಹೇಮಾವತಿ ಜಲಾಶಯದ ಎಲ್ಲಾ ಕ್ರಸ್ಟ್ ಗೇಟ್​​ಗಳನ್ನು ಮುಚ್ಚಲಾಗಿದೆ.

ಸಾಲು-ಸಾಲು ರಜೆ ಬಂದಿದ್ದರಿಂದ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಳೆಯ ನಡುವೆಯೂ ಕೂಡ ಹೇಮಾವತಿ ಜಲಾಶಯ ನೋಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇವತ್ತು ಬಕ್ರೀದ್ ಹಬ್ಬದ ಪ್ರಯುಕ್ತ ರಜೆ ಕಾರಣ ವಿವಿಧ ಭಾಗಗಳಿಂದ ಪ್ರವಾಸಿಗರು ಬಂದಿದ್ದರು. ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದರಿಂದ ಜಲಾಶಯದ ಎಲ್ಲಾ ಕ್ರಸ್ಟ್ ಗೇಟ್​ಗಳನ್ನು ಮುಚ್ಚಲಾಗಿತ್ತು. ಇದರಿಂದ ಪ್ರವಾಸಿಗರು ಬೇಸರದಿಂದ ವಾಪಸಾಗಿದ್ದಾರೆ.

ಹೇಮಾವತಿ ಕ್ರಸ್ಟ್ ಗೇಟ್ ಬಂದ್​

ಆಲೂರು ತಾಲೂಕಿನ ವಾಟೆಹೊಳೆ ಜಲಾಶಯದಿಂದ ಮಾತ್ರ ನೀರನ್ನು ಹರಿಬಿಡಲಾಗಿತ್ತು. ಹಾಗಾಗಿ ಹೇಮಾವತಿ ಜಲಾಶಯವನ್ನು ನೋಡಲು ಬಂದ ಸ್ಥಳೀಯ ಪ್ರವಾಸಿಗರು, ವಾಟೆಹೊಳೆಯತ್ತ ಮುಖ ಮಾಡಿದರು. 3 ಕ್ರಸ್ಟ್ ಗೇಟ್​​​ಗಳನ್ನ ಹೊಂದಿರುವ ವಾಟೆಹೊಳೆ 8 ವರ್ಷಗಳ ಬಳಿಕ ತುಂಬಿದ್ದು, ಜಲಾಶಯದಿಂದ 1,500 ಕ್ಯೂಸೆಕ್​​ ನೀರನ್ನು ಹೊರಬಿಡಲಾಗುತ್ತಿದೆ.

Intro:ಕಳೆದ ಒಂದು ವಾರದಿಂದ ಸುರಿದ ಮಳೆ ಮತ್ತು ನೆರೆಗೆ ಜಿಲ್ಲೆಯ ಎಲ್ಲ ಜಲಾಶಯಗಳು ಭರ್ತಿಯಾಗಿ ಹೆಚ್ಚುವರಿ ನೀರನ್ನು ಕ್ರೆಸ್ಟ್ ಗೇಟ್ ಗಳ ಮೂಲಕ ನದಿಗೆ ಬಿಡಲಾಗುತ್ತಿದ್ದು, ನೆನ್ನೆಯಿಂದ ಒಳಹರಿವಿನ ಪ್ರಮಾಣ ಇಳಿಮುಖವಾದ್ದರಿಂದ ಇವತ್ತು ಹೇಮಾವತಿ ಜಲಾಶಯದ ಎಲ್ಲಾ ಕ್ರೆಸ್ಟ್ ಗೇಟ್ ಗಳನ್ನು ಮುಚ್ಚಲಾಗಿದೆ.

ಸಾಲು-ಸಾಲು ರಜೆ ಬಂದಿದ್ದರಿಂದ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಳೆಯ ನಡುವೆಯೂ ಕೂಡ ಹೇಮಾವತಿ ಜಲಾಶಯದ ಒಡಲಿನಿಂದ ಧುಮ್ಮಿಕ್ಕಿ ಹೊರಬರುವ ಹಾನ್ನೋರೆ ಯಂತಹ ನೀರನ್ನ ನೋಡಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇವತ್ತು ಬಕ್ರೀದ್ ಹಬ್ಬದ ಪ್ರಯುಕ್ತ ರಜೆ ಇದ್ದದ್ದರಿಂದ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಭಾಗಗಳಿಂದ ಬಂದಿದ್ದ ಪ್ರವಾಸಿಗರು ಬಂದಿದ್ರು. ಒಳ ಹರಿವಿನ ಪ್ರಮಾಣ ಕಡಿಮೆಯಾಗಿದ್ದರಿಂದ ಜಲಾಶಯದ ಎಲ್ಲಾ ಕ್ರಸ್ಟ್ ಗೇಟ್ ಗಳನ್ನು ಮುಚ್ಚಿದ್ದರಿಂದ ಪ್ರವಾಸಿಗರು ಬೇಸರದಿಂದ ವಾಪಸಾಗಿದ್ದಾರೆ.

ಆದರೆ ಹೇಮಾವತಿ ನೀರನ್ನು ನಿಲ್ಲಿಸಿದ್ದರು, ಆಲೂರು ತಾಲೂಕಿನ ವಾಟೆಹೊಳೆ ಜಲಾಶಯದಿಂದ ಮಾತ್ರ ನೀರಿನ ಹರಿ ಬಿಡಲಾಗುತ್ತದೆ. ಹಾಗಾಗಿ ಹೇಮಾವತಿ ಜಲಾಶಯವನ್ನು ನೋಡಲು ಬಂದ ಸ್ಥಳೀಯ ಪ್ರವಾಸಿಗರು ಅಲ್ಲಿಂದ ವಾಟೇಹೊಳೆಯತ್ತ ಮುಖ ಮಾಡುತ್ತಿದ್ದಾರೆ. 3 ಕ್ರಸ್ಟ್ ಗೇಟ್ ಗಳನ್ನ ಹೊಂದಿರುವ ವಾಟೆಹೊಳೆ 8 ವರ್ಷಗಳ ಬಳಿಕ ತುಂಬಿದ್ದು, ಜಲಾಶಯದಿಂದ 1500 ಕ್ಯೂಸೆಕ್ಸ್ ನಷ್ಟು ನೀರನ್ನು ಹೊರಬಿಡಲಾಗುತ್ತಿದೆ ಹಾಗಾಗಿ ಪ್ರವಾಸಿಗರ ಸಂಖ್ಯೆ ಕೂಡ ಇವತ್ತು ವಾಟೆಹೊಳೆಯಲ್ಲಿ ಗುಣವಾಗಿತ್ತು. ಆದರೆ ಪಶ್ಚಿಮಘಟ್ಟಗಳಲ್ಲಿ ಮತ್ತು ಚಿಕ್ಕಮಗಳೂರು ಭಾಗದಲ್ಲಿ ಮಳೆಯ ಪ್ರಮಾಣ ಎಂದು ಕಡಿಮೆಯಾದರೆ ವಾಟೆಹೊಳೆ ಜಲಾಶಯದ ನೀರನ್ನು ಕೂಡ ಎರಡು ದಿನಗಳಲ್ಲಿ ನಿಲ್ಲಿಸಬಹುದು.

8 ವರ್ಷಗಳ ಬಳಿಕ ಜಲಾಶಯದ ಸೌಂದರ್ಯ ರಾಶಿಯನ್ನು ಸವಿವಂತಹ ಪ್ರವಾಸಿಗರು ಇನ್ನೆರಡು ದಿನಗಳ ಕಾಲ ವಾಟೆಹೊಳೆ ಗೆ ಹೋಗಿ ನೋಡಬಹುದು ಮಿಸ್ ಮಾಡಿಕೊಂಡರೆ ಮತ್ತೆ ಜಲಾಶಯ ತುಂಬುವ ತನಕ ಕಾಯಲೇಬೇಕು....

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.