ಹಾಸನ: ಜಿಲ್ಲೆಯಲ್ಲಿ ಇಂದು ಹೊಸದಾಗಿ 13 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 112ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇಂದು ಪತ್ತೆಯಾಗಿರುವ ಪಕ್ರರಣಗಳಲ್ಲಿ 13 ಚನ್ನರಾಯಪಟ್ಟಣ ತಾಲೂಕಿನವುಗಳಾಗಿವೆ. ಇವರೆಲ್ಲ ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದು, ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್ ಮಾಡಲಾಗಿತ್ತು. ಇಂದು ಬಂದ ವರದಿಯಲ್ಲಿ 13 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಇವರೆಲ್ಲರನ್ನು ಐಸೋಲೇಷನ್ ವಾರ್ಡ್ಗೆ ವರ್ಗಾಹಿಸಲಾಗಿದೆ ಎಂದರು.
ಈವರಗೆ ದಾಖಲಾಗಿರುವ ಎಲ್ಲರೂ ಆರೋಗ್ಯಯುತವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇನ್ನು 400 ಮಂದಿಯ ಗಂಟಲು ಪರೀಕ್ಷಾ ವರದಿ ಬರಬೇಕಾಗಿದೆ. ನಗರದಲ್ಲಿ ಎರಡು ಬಡಾವಣೆಗಳನ್ನು ಸೀಲ್ಡೌನ್ ಮಾಡಲಾಗಿದ್ದು, ಜಿಲ್ಲಾಡಳಿತದ ವತಿಯಿಂದ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಸೋಂಕಿತರ ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದು, ಈ ಸಂಬಂಧ ಓರ್ವನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶ್ರಿನಿವಾಸ ಗೌಡ ತಿಳಿಸಿದರು.
ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿ: ಒಟ್ಟು 112 ಪಾಸಿಟಿವ್ ಪ್ರಕರಣಗಳು ದಾಖಲು
- ಚನ್ನರಾಯಪಟ್ಟಣದಲ್ಲಿ- 80 ಪ್ರಕರಣಗಳು
- ಹೊಳೆನರಸೀಪುರದಲ್ಲಿ- 16 ಪ್ರಕರಣಗಳು
- ಆಲೂರಿನಲ್ಲಿ- 3 ಪ್ರಕರಣಗಳು
- ಹಾಸನ ನಗರದಲ್ಲಿ- 9 ಪ್ರಕರಣಗಳು
- ಅರಕಲಗೂಡು ತಾಲೂಕಿನಲ್ಲಿ -3 ಪ್ರಕರಣಗಳು
- ಅರಸೀಕೆರೆ ತಾಲೂಕಿನಲ್ಲಿ ಒಂದು ಪ್ರಕರಣಗಳು ದಾಖಲಾಗಿವೆ.
ಇನ್ನು ಹೊರ ರಾಜ್ಯ ಅಥವಾ ಅನುಮಾನಾಸ್ಪದವಾಗಿ ಜಿಲ್ಲೆಗೆ ಆಗಮಿಸುವ ಮತ್ತು ಕೊರೊನಾ ಪ್ರಕರಣದ ಸಂಬಂಧ ಯಾವುದೇ ಮಾಹಿತಿ ಬೇಕಾದಲ್ಲಿ ಜಿಲ್ಲಾಡಳಿತ ಹೆಲ್ಪ್ಲೈನ್ ಸಂಖ್ಯೆ 08172-261111 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.