ETV Bharat / state

ಹಾಸನಾಂಬ ಕಲಾಕ್ಷೇತ್ರದಲ್ಲಿ ಸ್ವಲ್ಪದರಲ್ಲೇ ತಪ್ಪಿದ ದುರಂತ, ಈಗಲಾದರೂ ಎಚ್ಚೆತ್ತುಕೊಳ್ಳುತ್ತಾ ಸರ್ಕಾರ?

author img

By

Published : Jan 17, 2020, 11:46 PM IST

ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದ ಶಿವಯೋಗಿ ಸಿದ್ದರಾಮೇಶ್ವರ ಮತ್ತು ಮಹಾಯೋಗಿ ವೇಮನ ಜಯಂತಿ ಉದ್ಘಾಟನಾ ಸಮಾರಂಭದ ವೇಳೆ ಬೃಹತ್ ಗಾತ್ರದ ಕಬ್ಬಿಣದ ಕಟೌಟ್ ಕೆಳಗೆ ಬಿದ್ದಿದೆ.

big-disaster-missing-in-hasanamba-temple
ಹಾಸನಾಂಬ ಕಲಾ ಕ್ಷೇತ್ರದಲ್ಲಿ ಸ್ವಲ್ಪದರಲ್ಲೆ ದುರಂತ

ಹಾಸನ: ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದ ಶಿವಯೋಗಿ ಸಿದ್ದರಾಮೇಶ್ವರ ಮತ್ತು ಮಹಾಯೋಗಿ ವೇಮನ ಜಯಂತಿ ಉದ್ಘಾಟನಾ ಸಮಾರಂಭದ ವೇಳೆ ಬೃಹತ್ ಗಾತ್ರದ ಕಬ್ಬಿಣದ ಕಟೌಟ್ ಕೆಳಗೆ ಬಿತ್ತು.

ಜಿಲ್ಲಾಧಿಕಾರಿ ಆರ್.ಗಿರೀಶ್ ಉದ್ಘಾಟನಾ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಕಬ್ಬಿಣದ ಕಟೌಟ್ ದಿಢೀರನೇ ಕಲಾಭವನದ ಕೆಲಸಗಾರ ಮಹಮ್ಮದ್ ಎಂಬಾತನ ಮೇಲೆ ಬಿದ್ದು ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ತಕ್ಷಣ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಚಿಕಿತ್ಸೆಗಾಗಿ ಗಾಯಾಳುವನ್ನು ಎಎಸ್ಪಿ ನಂದಿನಿ ಅವರ ಪೊಲೀಸ್ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.

ಹಾಸನಾಂಬ ಕಲಾ ಕ್ಷೇತ್ರದಲ್ಲಿ ಸ್ವಲ್ಪದರಲ್ಲೆ ದುರಂತ

ಹಾಸನಾಂಬ ಕಲಾಕ್ಷೇತ್ರದ ದುರಸ್ತಿ ಬಗ್ಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಕೂಡ ಬೇಸರವ್ಯಕ್ತಪಡಿಸಿ ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ.

ಹಾಸನ: ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದ ಶಿವಯೋಗಿ ಸಿದ್ದರಾಮೇಶ್ವರ ಮತ್ತು ಮಹಾಯೋಗಿ ವೇಮನ ಜಯಂತಿ ಉದ್ಘಾಟನಾ ಸಮಾರಂಭದ ವೇಳೆ ಬೃಹತ್ ಗಾತ್ರದ ಕಬ್ಬಿಣದ ಕಟೌಟ್ ಕೆಳಗೆ ಬಿತ್ತು.

ಜಿಲ್ಲಾಧಿಕಾರಿ ಆರ್.ಗಿರೀಶ್ ಉದ್ಘಾಟನಾ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಕಬ್ಬಿಣದ ಕಟೌಟ್ ದಿಢೀರನೇ ಕಲಾಭವನದ ಕೆಲಸಗಾರ ಮಹಮ್ಮದ್ ಎಂಬಾತನ ಮೇಲೆ ಬಿದ್ದು ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ತಕ್ಷಣ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಚಿಕಿತ್ಸೆಗಾಗಿ ಗಾಯಾಳುವನ್ನು ಎಎಸ್ಪಿ ನಂದಿನಿ ಅವರ ಪೊಲೀಸ್ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.

ಹಾಸನಾಂಬ ಕಲಾ ಕ್ಷೇತ್ರದಲ್ಲಿ ಸ್ವಲ್ಪದರಲ್ಲೆ ದುರಂತ

ಹಾಸನಾಂಬ ಕಲಾಕ್ಷೇತ್ರದ ದುರಸ್ತಿ ಬಗ್ಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಕೂಡ ಬೇಸರವ್ಯಕ್ತಪಡಿಸಿ ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ.

Intro:ಹಾಸನ: ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದ ಶಿವಯೋಗಿ ಸಿದ್ದರಾಮೇಶ್ವರ ಮತ್ತು ಮಹಾಯೋಗಿ ವೇಮನ ಜಯಂತಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್ ಉದ್ಘಾಟನಾ ಭಾಷಣ ಮಾಡುತ್ತಿರುವಾಗಲೇ ದಿಢೀರನೇ ಬೃಹತ್ ಗಾತ್ರದ ಕಬ್ಬಿಣಕ್ಕೆ ಬಟ್ಟೆ ಸುತ್ತಿದ ಕಟೌಟ್ ಕೆಳಗೆ ಬಿದ್ದ ಪರಿಣಾಮ ಸಭಾಂಗಣದ ಮೇಲೆ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದ ಕಲಾಭವನದ ಕೆಲಸಗಾರನ ಮೇಲೆ ಬಿದ್ದು, ತಲೆಗೆ ತೀವ್ರತರವಾದ ಪೆಟ್ಟು ಬಿದ್ದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾದ ಘಟನೆ  ನಡೆದಿದೆ.
ಹಾಸನಾಂಬ ಕಲಾಕ್ಷೇತ್ರ ದುರಸ್ತಿ ಮಾಡುವಂತೆ ನಾನಾ ಸಂಘಟನೆಗಳು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ಗಮನಸೆಳೆಯಲಾಗಿತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರು ಕೂಡ ಕಲಾಭವನ ದುರಸ್ತಿ ವಿಚಾರವಾಗಿ ಬೃಹತ್ ಹೋರಾಟ ಮಾಡುವ ಬಗ್ಗೆ ಈಗಾಗಲೇ ಘೋಷಣೆ ಮಾಡಿದ್ದ ಸಂದರ್ಭದಲ್ಲಿ ಹಾಸನಾಂಬ ಕಲಾಕ್ಷೇತ್ರದ ಅವ್ಯವಸ್ಥೆಗೆ ನಿದರ್ಶನ ಎಂಬಂತೆ ಇಂತಹ ದುರ್ಘಟನೆ ಜಿಲ್ಲಾಧಿಕಾರಿಗಳ ಎದುರೆ ಸಂಭವಿಸಿದೆ.
ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಷಣ ಮಾಡುತ್ತಿರುವ ವೇಳೆ ಕಲಾಭವನದಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕ ಮಹಮದ್ ಎಂಬುವರು ಕಾರ್ಯಕ್ರಮವನ್ನು ಸಭಾಂಗಣದ ಒಂದು ಬದಿ ನಿಂತು ವೀಕ್ಷಣೆ ಮಾಡುತ್ತಿರುವಾಗ ಪಕ್ಕದಲ್ಲೆ ಡಿಸಿ ಹಿಂಭಾಗವಿದ್ದ ಬೃಹತ್ ಗಾತ್ರದ ಕಬ್ಬಿಣಕ್ಕೆ ಬಟ್ಟೆ ಸುತ್ತಿದ ಕಟೌಟ್ ದಿಢೀರನೇ ವೃದ್ಧನ ಮೇಲೆ ಬಿದ್ದಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದು ತೀವ್ರತರವಾದ ರಕ್ತ ಸೋರಿದೆ.
 ತಕ್ಷಣ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಚಿಕಿತ್ಸೆಗಾಗಿ ಎಎಸ್ಪಿ ನಂದಿನಿರವರ ಪೊಲೀಸ್ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಹಾಸನಾಂಬ ಕಲಾಕ್ಷೇತ್ರದ ದುರಸ್ತಿ ಬಗ್ಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಕೂಡ ಬೇಸರವ್ಯಕ್ತಪಡಿಸಿ ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ. ಆದರೇ ಅಷ್ಟರೊಳಗೆ ಇಂತಹ ದುರ್ಘಟನೆ ಸಂಭವಿಸಿದೆ. ಈಗಲಾದರೂ ತುರ್ತಾಗಿ ಕಲಾಭವನ ದುರಸ್ತಿ ಮಾಡುತ್ತಾ ಎಂಬದು ಸಾರ್ವಜನಿಕರ ಪ್ರಶ್ನೆ.

ಬೈಟ್ : ಶಿವಕುಮಾರ್ , ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ.


Body:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.


Conclusion:೦
ETV Bharat Logo

Copyright © 2024 Ushodaya Enterprises Pvt. Ltd., All Rights Reserved.