ETV Bharat / state

ಶೂಟೌಟ್ ಪ್ರಕರಣ: ಚಾಳಿ ಬಿಡಲೊಲ್ಲದ ಭಾವನನ್ನು ಇಹಲೋಕಕ್ಕೆ ಕಳುಹಿಸಿದ ಭಾಮೈದ !

author img

By

Published : Jan 18, 2021, 10:47 PM IST

ಜ.15 ರಂದು ಹಾಸನ ನಗರದ ಹೊರವಲಯದಲ್ಲಿನ ಹೂವಿನಹಳ್ಳಿ ಕಾವಲು ಬಳಿ ಸಂತೋಷ್ ಮೃತ ದೇಹ ಪತ್ತೆಯಾಗಿದೆ. ಈತನಿಗೆ ಕಂಠಪೂರ್ತಿ ಕುಡಿಸಿ ಬಳಿಕ ಬಂದೂಕಿನಿಂದ ಕೊಲೆಗೈಯ್ಯಲಾಗಿತ್ತು. ತದನಂತರ ಸಂತೋಷನ ಭಾಮೈದುನನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ.

a-man-killed-his-brother-in-law
ಶೂಟೌಟ್ ಪ್ರಕರಣ

ಹಾಸನ: ಕೇವಲ 48 ಗಂಟೆಗಳಲ್ಲಿ ಶೂಟೌಟ್ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಡಿಕೇರಿ ತಾಲೂಕಿನ ಅಮಕ್ಕಂದೂರು ಗ್ರಾಮದ ಕಾಫಿತೋಟದ ಮಾಲೀಕ ಕೆ.ಟಿ. ಅನುಕೂಲ್ (41), ಚಾಲಕ ಸುರೇಶ್ (36) ಅಡುಗೆ ಕೆಲಸ ಮಾಡುವ ಸತೀಶ್ (34) ಮತ್ತು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಸಮೀಪದ ಕಟ್ಟೆಹೊಳೆ ಗ್ರಾಮದ ಜೆ.ಸಿ. ಸುದೀನ್ ಕುಮಾರ್ @ ಆದರ್ಶ್ (30) ಬಂಧಿತ ಆರೋಪಿಗಳು.

ಯಾರು ಈ ಸಂತೋಷ್..? ಏನಿದು ಘಟನೆ?

ಹಾಸನ ನಗರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ವಾಸವಾಗಿದ್ದ ವಿದ್ಯುತ್ ಇಲಾಖೆಯ ಸಹಾಯಕ ಅಭಿಯಂತರ ಸಂತೋಷ್ ಮತ್ತು ಜಯಶ್ರೀ 13 ವರ್ಷಗಳ ಹಿಂದೆ ಪ್ರೀತಿ ಮಾಡಿ ವಿವಾಹ ಆಗಿದ್ದರು. ಇವರಿಬ್ಬರಿಗೆ ಈಗ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಮದುವೆಯಾದ ಹೊಸದರಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಸಂಸಾರ ಮಾಡುತ್ತಿದ್ದ. ಇದೇ ವೇಳೆಗೆ ಸಂತೋಷ್ ತಂದೆ ಅಕಾಲಿಕ ಮರಣ ಹೊಂದಿದ್ದರಿಂದ ಅನುಕಂಪದ ಆಧಾರದ ಮೇಲೆ ತಂದೆಯ ಕೆಲಸ ಈತನಿಗೆ ನೀಡಲಾಗಿತ್ತು. ಪ್ರೀತಿಸಿ ಮದುವೆಯಾಗಿದ್ದ ಈತ ತಂದೆಯ ಕೆಲಸವನ್ನು ಗಿಟ್ಟಿಸಿಕೊಂಡಿದ್ದ. ಇದಾದ ನಂತರ ಸರ್ಕಾರಿ ಕೆಲಸದ ಅಮಲಿನಲ್ಲಿ ಕುಡಿತದ ದಾಸನಾಗಿ ಪ್ರತಿನಿತ್ಯ ಹೆಂಡತಿಗೆ ಕಿರುಕುಳ ಕೊಡುತ್ತಿದ್ದ. ಇಷ್ಟೆ ಅಲ್ಲ, ಕಳೆದ ಒಂದು ವರ್ಷದಿಂದ ಕೆಲಸಕ್ಕೆ ಹೋಗದೆ ಗೈರು ಹಾಜರಾಗಿದ್ದು, ಕಚೇರಿಯಿಂದ ಹಲವು ನೋಟಿಸ್ ಕೂಡಾ ಬಂದಿವೆಯಂತೆ.

ಕಿರುಕುಳದ ಹಿನ್ನೆಲೆ ಕೊಲೆ:

ಜ.15 ರಂದು ಹಾಸನ ನಗರದ ಹೊರವಲಯದಲ್ಲಿನ ಹೂವಿನಹಳ್ಳಿ ಕಾವಲು ಬಳಿ ಸಂತೋಷ್ ಮೃತದೇಹ ಪತ್ತೆಯಾಗಿದೆ. ಈತನಿಗೆ ಕಂಠಪೂರ್ತಿ ಕುಡಿಸಿ ಬಳಿಕ ಬಂದೂಕಿನಿಂದ ಕೊಲೆಗೈಯ್ಯಲಾಗಿತ್ತು. ತದ ನಂತರ ಸಂತೋಷನ ಭಾಮೈದುನನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ.

ಚಾಳಿ ಬಿಡಲೊಲ್ಲದ ಭಾವನನ್ನು ಇಹಲೋಕಕ್ಕೆ ಕಳುಹಿಸಿದ ಭಾಮೈದ

ಚಾಳಿ ಬಿಟ್ಟಿರಲಿಲ್ಲವಂತೆ ಭಾವ:

13 ವರ್ಷಗಳ ಹಿಂದೆ ನನ್ನ ಭಾವ-ಅಕ್ಕ ಪ್ರೀತಿ ಮಾಡಿ ಮದುವೆಯಾಗಿದ್ರು. ಬಳಿಕ ಭಾವ ಅಕ್ಕನಿಗೆ ಸಹಿಸಲಾರದ ಕಿರುಕುಳ ನೀಡುತ್ತಿದ್ದ. ಇದ್ರಿಂದ ಬೇಸತ್ತಿದ್ದ ಅಕ್ಕ ಸಾಯಲು ಸಿದ್ದವಾಗಿದ್ದಳು. ಏನೂ ತಪ್ಪು ಮಾಡದ ಅಕ್ಕ ಸಾಯುವುದರಲ್ಲಿ ಯಾವ ಅರ್ಥವಿಲ್ಲ. ಬುದ್ದಿವಾದ ಹೇಳಿ ಸರಿಮಾಡೊಣ ಎಂದು ಹತ್ತಾರು ಬಾರಿ ಪೋಷಕರೊಂದಿಗೆ ಮಾತುಕತೆ ನಡೆಸಿ ಹೊಂದು ಮಾಡಲು ಪ್ರಯತ್ನಿಸಿದ್ದೆವು. ಭಾವ ತನ್ನ ಚಾಳಿಯನ್ನ ಬಿಡಲಿಲ್ಲ. ಕೊನೆಗೆ ಭಾವನನ್ನ ಮುಗಿಸುವ ಸ್ಕೆಚ್ ಹಾಕಿದೆವು ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಬಾಮೈದ.

ಮಡಿಕೇರಿಯಿಂದ ಬಂದಿದ್ದ ಶೂಟರ್:

ಕುಡಿತದ ದಾಸನಾಗಿದ್ದ ಭಾವನಿಗೆ ಭಾಮೈದುನ ಪಾರ್ಟಿ ನೆಪದಲ್ಲಿ ಫೋನ್ ಮಾಡಿ ಕರೆಸಿಕೊಂಡಿದ್ದಾನೆ. ನಂತರ ಹಾಸನ ಹೊರವಲಯದ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಈ ಭಾಮೈದುನನ ಜೊತೆ ಇನ್ನು ಮೂರು ಮಂದಿ ಕೂಡ ಇದ್ದು, ಇವರೆಲ್ಲಾ ಸೇರಿಕೊಂಡು ಸಂಜೆಯಿಂದ ರಾತ್ರಿಯ ತನಕ ಕಂಠಪೂರ್ತಿ ಕುಡಿಸಿದ್ದಾರೆ. ಬಳಿಕ ತಮ್ಮ ಪ್ಲಾನ್ ಪ್ರಕಾರ ಮಡಿಕೇರಿಯಿಂದ ಬಂದಿದ್ದ ಸಹಚರರಲ್ಲಿ ಒಬ್ಬನಾದ ಅನುಕೂಲ್ ತಾನು ತಂದಿದ್ದ ರಿವಾಲ್ವರ್​ನಿಂದ ಸಂತೋಷನ ದೇಹದ ವಿವಿಧ ಭಾಗಗಳಿಗೆ ಎಂಟು ಸುತ್ತು ಗುಂಡು ಹಾರಿಸಿದ್ದಾನೆ. ದೇಹದೊಳಗೆ 5 ಗುಂಡುಗಳು ಸೇರಿದ್ದರಿಂದ ಸಂತೋಷ್ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.

29 ಗುಂಡುಗಳ ವಶ:

ಶೂಟೌಟ್ ಮಾಡಿದ ಬಳಿಕ ಪ್ರಕರಣ ಭೇದಿಸುವಲ್ಲಿ ಯಾಶಸ್ವಿಯಾಗಿರುವ ಪೊಲೀಸರು ಬಂಧಿತರಿಂದ ಒಂದು ರಿವಾಲ್ವರ್, 29 ಸಜೀವ ಗುಂಡುಗಳು ಮತ್ತು ಒಂದು ಡಸ್ಟರ್ ಕಾರ್ ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಾಸನ: ಕೇವಲ 48 ಗಂಟೆಗಳಲ್ಲಿ ಶೂಟೌಟ್ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಡಿಕೇರಿ ತಾಲೂಕಿನ ಅಮಕ್ಕಂದೂರು ಗ್ರಾಮದ ಕಾಫಿತೋಟದ ಮಾಲೀಕ ಕೆ.ಟಿ. ಅನುಕೂಲ್ (41), ಚಾಲಕ ಸುರೇಶ್ (36) ಅಡುಗೆ ಕೆಲಸ ಮಾಡುವ ಸತೀಶ್ (34) ಮತ್ತು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಸಮೀಪದ ಕಟ್ಟೆಹೊಳೆ ಗ್ರಾಮದ ಜೆ.ಸಿ. ಸುದೀನ್ ಕುಮಾರ್ @ ಆದರ್ಶ್ (30) ಬಂಧಿತ ಆರೋಪಿಗಳು.

ಯಾರು ಈ ಸಂತೋಷ್..? ಏನಿದು ಘಟನೆ?

ಹಾಸನ ನಗರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ವಾಸವಾಗಿದ್ದ ವಿದ್ಯುತ್ ಇಲಾಖೆಯ ಸಹಾಯಕ ಅಭಿಯಂತರ ಸಂತೋಷ್ ಮತ್ತು ಜಯಶ್ರೀ 13 ವರ್ಷಗಳ ಹಿಂದೆ ಪ್ರೀತಿ ಮಾಡಿ ವಿವಾಹ ಆಗಿದ್ದರು. ಇವರಿಬ್ಬರಿಗೆ ಈಗ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಮದುವೆಯಾದ ಹೊಸದರಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಸಂಸಾರ ಮಾಡುತ್ತಿದ್ದ. ಇದೇ ವೇಳೆಗೆ ಸಂತೋಷ್ ತಂದೆ ಅಕಾಲಿಕ ಮರಣ ಹೊಂದಿದ್ದರಿಂದ ಅನುಕಂಪದ ಆಧಾರದ ಮೇಲೆ ತಂದೆಯ ಕೆಲಸ ಈತನಿಗೆ ನೀಡಲಾಗಿತ್ತು. ಪ್ರೀತಿಸಿ ಮದುವೆಯಾಗಿದ್ದ ಈತ ತಂದೆಯ ಕೆಲಸವನ್ನು ಗಿಟ್ಟಿಸಿಕೊಂಡಿದ್ದ. ಇದಾದ ನಂತರ ಸರ್ಕಾರಿ ಕೆಲಸದ ಅಮಲಿನಲ್ಲಿ ಕುಡಿತದ ದಾಸನಾಗಿ ಪ್ರತಿನಿತ್ಯ ಹೆಂಡತಿಗೆ ಕಿರುಕುಳ ಕೊಡುತ್ತಿದ್ದ. ಇಷ್ಟೆ ಅಲ್ಲ, ಕಳೆದ ಒಂದು ವರ್ಷದಿಂದ ಕೆಲಸಕ್ಕೆ ಹೋಗದೆ ಗೈರು ಹಾಜರಾಗಿದ್ದು, ಕಚೇರಿಯಿಂದ ಹಲವು ನೋಟಿಸ್ ಕೂಡಾ ಬಂದಿವೆಯಂತೆ.

ಕಿರುಕುಳದ ಹಿನ್ನೆಲೆ ಕೊಲೆ:

ಜ.15 ರಂದು ಹಾಸನ ನಗರದ ಹೊರವಲಯದಲ್ಲಿನ ಹೂವಿನಹಳ್ಳಿ ಕಾವಲು ಬಳಿ ಸಂತೋಷ್ ಮೃತದೇಹ ಪತ್ತೆಯಾಗಿದೆ. ಈತನಿಗೆ ಕಂಠಪೂರ್ತಿ ಕುಡಿಸಿ ಬಳಿಕ ಬಂದೂಕಿನಿಂದ ಕೊಲೆಗೈಯ್ಯಲಾಗಿತ್ತು. ತದ ನಂತರ ಸಂತೋಷನ ಭಾಮೈದುನನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ.

ಚಾಳಿ ಬಿಡಲೊಲ್ಲದ ಭಾವನನ್ನು ಇಹಲೋಕಕ್ಕೆ ಕಳುಹಿಸಿದ ಭಾಮೈದ

ಚಾಳಿ ಬಿಟ್ಟಿರಲಿಲ್ಲವಂತೆ ಭಾವ:

13 ವರ್ಷಗಳ ಹಿಂದೆ ನನ್ನ ಭಾವ-ಅಕ್ಕ ಪ್ರೀತಿ ಮಾಡಿ ಮದುವೆಯಾಗಿದ್ರು. ಬಳಿಕ ಭಾವ ಅಕ್ಕನಿಗೆ ಸಹಿಸಲಾರದ ಕಿರುಕುಳ ನೀಡುತ್ತಿದ್ದ. ಇದ್ರಿಂದ ಬೇಸತ್ತಿದ್ದ ಅಕ್ಕ ಸಾಯಲು ಸಿದ್ದವಾಗಿದ್ದಳು. ಏನೂ ತಪ್ಪು ಮಾಡದ ಅಕ್ಕ ಸಾಯುವುದರಲ್ಲಿ ಯಾವ ಅರ್ಥವಿಲ್ಲ. ಬುದ್ದಿವಾದ ಹೇಳಿ ಸರಿಮಾಡೊಣ ಎಂದು ಹತ್ತಾರು ಬಾರಿ ಪೋಷಕರೊಂದಿಗೆ ಮಾತುಕತೆ ನಡೆಸಿ ಹೊಂದು ಮಾಡಲು ಪ್ರಯತ್ನಿಸಿದ್ದೆವು. ಭಾವ ತನ್ನ ಚಾಳಿಯನ್ನ ಬಿಡಲಿಲ್ಲ. ಕೊನೆಗೆ ಭಾವನನ್ನ ಮುಗಿಸುವ ಸ್ಕೆಚ್ ಹಾಕಿದೆವು ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಬಾಮೈದ.

ಮಡಿಕೇರಿಯಿಂದ ಬಂದಿದ್ದ ಶೂಟರ್:

ಕುಡಿತದ ದಾಸನಾಗಿದ್ದ ಭಾವನಿಗೆ ಭಾಮೈದುನ ಪಾರ್ಟಿ ನೆಪದಲ್ಲಿ ಫೋನ್ ಮಾಡಿ ಕರೆಸಿಕೊಂಡಿದ್ದಾನೆ. ನಂತರ ಹಾಸನ ಹೊರವಲಯದ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಈ ಭಾಮೈದುನನ ಜೊತೆ ಇನ್ನು ಮೂರು ಮಂದಿ ಕೂಡ ಇದ್ದು, ಇವರೆಲ್ಲಾ ಸೇರಿಕೊಂಡು ಸಂಜೆಯಿಂದ ರಾತ್ರಿಯ ತನಕ ಕಂಠಪೂರ್ತಿ ಕುಡಿಸಿದ್ದಾರೆ. ಬಳಿಕ ತಮ್ಮ ಪ್ಲಾನ್ ಪ್ರಕಾರ ಮಡಿಕೇರಿಯಿಂದ ಬಂದಿದ್ದ ಸಹಚರರಲ್ಲಿ ಒಬ್ಬನಾದ ಅನುಕೂಲ್ ತಾನು ತಂದಿದ್ದ ರಿವಾಲ್ವರ್​ನಿಂದ ಸಂತೋಷನ ದೇಹದ ವಿವಿಧ ಭಾಗಗಳಿಗೆ ಎಂಟು ಸುತ್ತು ಗುಂಡು ಹಾರಿಸಿದ್ದಾನೆ. ದೇಹದೊಳಗೆ 5 ಗುಂಡುಗಳು ಸೇರಿದ್ದರಿಂದ ಸಂತೋಷ್ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.

29 ಗುಂಡುಗಳ ವಶ:

ಶೂಟೌಟ್ ಮಾಡಿದ ಬಳಿಕ ಪ್ರಕರಣ ಭೇದಿಸುವಲ್ಲಿ ಯಾಶಸ್ವಿಯಾಗಿರುವ ಪೊಲೀಸರು ಬಂಧಿತರಿಂದ ಒಂದು ರಿವಾಲ್ವರ್, 29 ಸಜೀವ ಗುಂಡುಗಳು ಮತ್ತು ಒಂದು ಡಸ್ಟರ್ ಕಾರ್ ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.