ETV Bharat / state

ಪೊಲೀಸ್​​ ಠಾಣೆಯಲ್ಲಿ ಆರೋಪಿ ಸಾವು: ಲಾಕಪ್​​​ ಡೆತ್​​​​​​​​​​​​​​​​​​​​ ಎಂದು ಪೋಷಕರ ಆರೋಪ - undefined

ಡಕಾಯಿತಿ ಪ್ರಕರಣ ಸಂಬಂಧ ನುಗ್ಗೆಹಳ್ಳಿ ಪೊಲೀಸ್​ ಠಾಣೆಯಲ್ಲಿ ವಿಚಾರಣೆ ನಡೆಸುವ ವೇಳೆ ಆರೋಪಿ ಅವಿನಾಶ್ (26) ಎಂಬಾತ ಮೃತಪಟ್ಟಿದ್ದು, ಪೋಷಕರು ಲಾಕಪ್ ಡೆತ್ ಎಂದು ಆರೋಪಿಸಿದ್ದಾರೆ.

ಲಾಕಪ್​ ಡೆತ್
author img

By

Published : Apr 27, 2019, 7:09 PM IST

ಹಾಸನ: ಡಕಾಯಿತಿ ಪ್ರಕರಣ ಸಂಬಂಧ ಪೊಲೀಸ್​ ಠಾಣೆಯಲ್ಲಿ ವಿಚಾರಣೆ ನಡೆಸುವ ವೇಳೆ ಆರೋಪಿಯೊಬ್ಬ ಸಾವಿಗೀಡಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ಅವಿನಾಶ್ (26) ಎಂಬಾತ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಠಾಣೆಯಲ್ಲಿ ಹೃದಯಾಘಾತವಾಗಿ ಈತ ಮೃತಪಟ್ಟ ಎಂದು ಪೊಲೀಸರು ಹೇಳುತ್ತಿದ್ದರೆ, ಆತನ ಪೋಷಕರು ಇದು ಲಾಕಪ್ ಡೆತ್ ಎಂದು ಆರೋಪಿಸಿದ್ದಾರೆ.

ಲಾಕಪ್​ ಡೆತ್

ಏನಿದು ಘಟನೆ?

ಡಕಾಯಿತಿ ಪ್ರಕರಣದ ಸಂಬಂಧ ಮತ್ತೊಬ್ಬ ಆರೋಪಿ ಜತೆ ಅವಿನಾಶ್​ನನ್ನೂ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಪೊಲೀಸ್ ಠಾಣೆಗೆ ಕರೆದು ತಂದು ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಅವಿನಾಶ್ ಮೃತಪಟ್ಟಿದ್ದಾನೆ ಎಂದು ಸ್ಥಳೀಯರ ಮೂಲಕ ಪೋಷಕರಿಗೆ ಗೊತ್ತಾಗಿದೆ. ಸುದ್ದಿ ತಿಳಿದು ಠಾಣೆಗೆ ಬಂದು ನೋಡಿದಾಗ ಅವಿನಾಶ್ ಸಾವಿಗೀಡಾಗಿದ್ದು ದೃಢಪಟ್ಟಿದೆ.

ಈ ಸುದ್ದಿ ಹರಡುತ್ತಿದ್ದಂತೆ ಪೊಲೀಸ್ ಠಾಣೆಯ ಮುಂದೆ ಸಾವಿರಾರು ಮಂದಿ ಜಮಾಯಿಸಿದ್ದರು. ಪರಿಸ್ಥಿತಿ ನಿಯಂತ್ರಣಕ್ಕಾಗಿ ನಾಲ್ವರು ಜಿಲ್ಲಾ ಮೀಸಲು ಪೊಲೀಸರನ್ನು ಗ್ರಾಮದಲ್ಲಿ ನಿಯೋಜನೆ ಮಾಡಲಾಗಿದೆ.

ಹಾಸನ: ಡಕಾಯಿತಿ ಪ್ರಕರಣ ಸಂಬಂಧ ಪೊಲೀಸ್​ ಠಾಣೆಯಲ್ಲಿ ವಿಚಾರಣೆ ನಡೆಸುವ ವೇಳೆ ಆರೋಪಿಯೊಬ್ಬ ಸಾವಿಗೀಡಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ಅವಿನಾಶ್ (26) ಎಂಬಾತ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಠಾಣೆಯಲ್ಲಿ ಹೃದಯಾಘಾತವಾಗಿ ಈತ ಮೃತಪಟ್ಟ ಎಂದು ಪೊಲೀಸರು ಹೇಳುತ್ತಿದ್ದರೆ, ಆತನ ಪೋಷಕರು ಇದು ಲಾಕಪ್ ಡೆತ್ ಎಂದು ಆರೋಪಿಸಿದ್ದಾರೆ.

ಲಾಕಪ್​ ಡೆತ್

ಏನಿದು ಘಟನೆ?

ಡಕಾಯಿತಿ ಪ್ರಕರಣದ ಸಂಬಂಧ ಮತ್ತೊಬ್ಬ ಆರೋಪಿ ಜತೆ ಅವಿನಾಶ್​ನನ್ನೂ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಪೊಲೀಸ್ ಠಾಣೆಗೆ ಕರೆದು ತಂದು ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಅವಿನಾಶ್ ಮೃತಪಟ್ಟಿದ್ದಾನೆ ಎಂದು ಸ್ಥಳೀಯರ ಮೂಲಕ ಪೋಷಕರಿಗೆ ಗೊತ್ತಾಗಿದೆ. ಸುದ್ದಿ ತಿಳಿದು ಠಾಣೆಗೆ ಬಂದು ನೋಡಿದಾಗ ಅವಿನಾಶ್ ಸಾವಿಗೀಡಾಗಿದ್ದು ದೃಢಪಟ್ಟಿದೆ.

ಈ ಸುದ್ದಿ ಹರಡುತ್ತಿದ್ದಂತೆ ಪೊಲೀಸ್ ಠಾಣೆಯ ಮುಂದೆ ಸಾವಿರಾರು ಮಂದಿ ಜಮಾಯಿಸಿದ್ದರು. ಪರಿಸ್ಥಿತಿ ನಿಯಂತ್ರಣಕ್ಕಾಗಿ ನಾಲ್ವರು ಜಿಲ್ಲಾ ಮೀಸಲು ಪೊಲೀಸರನ್ನು ಗ್ರಾಮದಲ್ಲಿ ನಿಯೋಜನೆ ಮಾಡಲಾಗಿದೆ.

Intro:====EXCLUSIVE===


ಹಾಸನ: ಕಳೆದ ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೋರ್ವನನ್ನ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸುವ ವೇಳೆ ಪೊಲೀಸ್ ಠಾಣೆಯಲ್ಲಿ ಸಾವಿಗೀಡಾಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಅವಿನಾಶ್ (26) ಅನುಮಾನಾಸ್ಪದವಾಗಿ ಪೊಲೀಸ್ ಠಾಣೆಯಲ್ಲಿಯೇ ಸಾವಿಗೀಡಾಗಿರೋ ಆರೋಪಿ. ಮೇಲ್ನೋಟಕ್ಕೆ ಇದೊಂದು ಸಹಜ ಸಾವು ಎಂದು ಹೇಳಲಾದರೂ ಪೋಷಕರು ಮಾತ್ರ ಇದೊಂದು ಲಾಕಪ್ ಡೆತ್ ಎಂಬ ಆರೋಪವನ್ನು ಮಾಡ್ತಿದ್ದಾರೆ. ಪೊಲೀಸ್ ಠಾಣೆಗೆ ಕರೆತಂದು ವೇಳೆ ಆರೋಪಿಗೆ ಹೃದಯಾಘಾತ ವಾಗಿದೆ. ಹಾಗಾಗಿ ಆರೋಪಿ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ಪೋಷಕರಿಗೆ ಹೇಳಿದ್ರು ಪೋಷಕರು ಮಾತ್ರ ಇದನ್ನು ಲಾಕಪ್ ಡೆತ್ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಇಂತಹ ಘಟನೆ ನಡೆದಿರುವುದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ. ಕಳೆದ ಎರಡು ದಿನಗಳ ಹಿಂದೆ ಡಕಾಯಿತಿ ಪ್ರಕರಣದ ಸಂಬಂಧ ಮತ್ತೊಬ್ಬ ಆರೋಪಿ ಜೊತೆಗೆ ಅಭಯನನ್ನು ಕೂಡ ಠಾಣೆಗೆ ಕರೆದು ತಂದು ವಿಚಾರಣೆ ಮಾಡಿದ್ದಾರೆ.

ವಿಚಾರಣೆ ವೇಳೆ ಅವಿನಾಶ್ ಮೃತಪಟ್ಟಿರುವ ವಿಚಾರ ಸ್ಥಳೀಯರ ಮೂಲಕ ಪೋಷಕರಿಗೆ ಗೊತ್ತಾಗಿದೆ. ವಿಚಾರ ತಿಳಿದ ಬಳಿಕ ಠಾಣೆಗೆ ಬಂದು ನೋಡಿದಾಗ ಅವಿನಾಶ್ ಮನೆಯಲ್ಲಿಯೇ ಸಾವಿಗೀಡಾಗಿರುವುದು ತಿಳಿದು ಬಂದಿದ್ದು ಸ್ಥಳದಲ್ಲಿಯೇ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ವಿಚಾರ ಸ್ಥಳೀಯರ ಗಮನಕ್ಕೆ ಬಂದಾಗ ವೇಳೆ ಪೊಲೀಸ್ ಠಾಣೆಯ ಮುಂದೆ ಸಾವಿರಾರು ಮಂದಿ ಜಮಾಯಿಸಿದ್ದಾರೆ ಪರಿಸ್ಥಿತಿ ನಿಯಂತ್ರಣ ಮಾಡಲು ಪೊಲೀಸರು ನಾಲ್ಕು ಜಿಲ್ಲಾ ಮೀಸಲು ಪೊಲೀಸ್ ನಿಯೋಜನೆ ಮಾಡಿದ್ದು ಮತ್ತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೊಡಮಾಡಲಾಗಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಅವಿನಾಶ್ ಪ್ರಕರಣವನ್ನು ಮುಚ್ಚಿಹಾಕಲು ಆತನ ಕುಟುಂಬಕ್ಕೆ ಪರಿಹಾರವಾಗಿ 6 ಲಕ್ಷ ರೂಪಾಯಿಗಳನ್ನು ಪೊಲೀಸ್ ಇಲಾಖೆ ನೀಡಲು ಮುಂದಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಸಂಧಾನ ಕಾರ್ಯ ಕೂಡ ನಡೆದಿದೆಯಂತೆ. ಹಾಗಾಗಿ ಸರ್ಕಾರಿ ವೈದ್ಯರ ನೆರವಿನ ಮೂಲಕ ಇದೊಂದು ಹೃದಯಾಘಾತ ವಾಗಿರುವ ಪ್ರಕರಣ ಎಂದು ಮುಚ್ಚಿ ಹಾಕಲು ಪೊಲೀಸರು ಮುಂದಾಗಿದ್ದಾರೆ ಎಂಬುದು ಕೂಡ ಪೋಷಕರ ಗಂಭೀರ ಆರೋಪವಾಗಿದೆ. ಜೊತೆಗೆ ನುಗ್ಗೆಹಳ್ಳಿ ಠಾಣಾಧಿಕಾರಿ ಮಧು ಅವರು ಕೂಡ ಈ ಸಂಬಂಧ ನನಗೇನು ಗೊತ್ತಿಲ್ಲ ನನ್ನ ಕೆಳಹಂತದ ಪೊಲೀಸರು ಆರೋಪಿಗಳನ್ನು ಕರೆತರುವ ವೇಳೆ ಆತ ಮೃತಪಟ್ಟಿದ್ದಾನೆ ಎಂಬುದಾಗಿ ಸ್ವತಃ ದೂರನ್ನು ಕೂಡ ನೀಡಿದ್ದಾರೆ

ಒಟ್ಟಾರೆ ಡಕಾಯಿತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆಗೆ ಕರೆತಂದು ವೇಳೆ ಆರೋಪಿ ಸಾವಿಗೀಡಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ನಿಜಕ್ಕೂ ಪೊಲೀಸರ ಅಲ್ಲಿಂದಲೇ ಅವಿನಾಶ್ ಸಾವಿಗೀಡಾಗಿದ್ದಾನೆ ಅಥವಾ ನಿಜವಾಗಿಯೂ ಆತನಿಗೆ ಹೃದಯಾಘಾತವಾಗಿದೆ ಎಂಬುದನ್ನು ಮರಣೋತ್ತರ ಪರೀಕ್ಷೆ ಬಳಿಕ ಬಹಿರಂಗವಾಗಲಿದೆ.


Body:೦


Conclusion:೦

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.