ETV Bharat / state

ಕಾಸಾಯಿಖಾನೆಗೆ ಸಾಗಿಸುತ್ತಿದ್ದ 60 ಹೋರಿಕರುಗಳ ರಕ್ಷಣೆ! - undefined

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಸುಮಾರು 60 ಹೋರಿ ಕರುಗಳನ್ನು ರಕ್ಷಣೆ ಮಾಡಲಾಗಿದೆ.

60 ಹೋರಿಕರುಗಳ ರಕ್ಷಣೆ
author img

By

Published : Jul 20, 2019, 3:53 PM IST

ಹಾಸನ: ಇವುಗಳು ಹುಟ್ಟಿ, ಇನ್ನೂ ತಿಂಗಳು ಕಳೆದಿಲ್ಲ. ಈ ಮುದ್ದಾದ ಪುಟ್ಟ ಪುಟ್ಟ ಕರುಗಳನ್ನು ಜನ್ಮ ನೀಡಿದ ತಾಯಿಯ ಮಾಲೀಕರು ಕಟುಕರ ಕೈಗೆ ಕೊಟ್ಟುಬಿಟ್ಟಿದ್ದಾರೆ. ಅದೃಷ್ಟವಶಾತ್ ಇವುಗಳ ಲಕ್ ಚೆನ್ನಾಗಿತ್ತು. ಕಟುಕರ ಕೈಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿವೆ.

ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಸುಮಾರು 60 ಹೋರಿ ಕರುಗಳನ್ನು ರಕ್ಷಣೆ ಮಾಡಲಾಗಿದೆ. ಸದ್ಯ ಇಲ್ಲಿನ ಪೊಲೀಸ್ ಠಾಣೆಯ ಆವರಣದಲ್ಲಿ ಈ ಕರುಗಳಿವೆ.

ಜಾನುವಾರು ವ್ಯಾಪಾರದ ನೆಪದಲ್ಲಿ ಕಸಾಯಿ ಖಾನೆಗೆ ರವಾನೆ...

ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಪ್ರತಿ ಶನಿವಾರ ವಾರದ ಸಂತೆ ನಡೆಯುತ್ತದೆ. ಸಂತೆಯ ಹಿಂದಿನ ದಿನವಾದ ನಿನ್ನೆ ದನಗಳ ವ್ಯಾಪಾರ ನಡೆಯುತ್ತೆ. ಕೊಳ್ಳುವ ಹಾಗೂ ಮಾರುವ ಪ್ರಕ್ರಿಯೆ ನಡೆಯುತ್ತದೆ. ನಿನ್ನೆ ಬಹಳ ಜೋರಾಗಿಯೇ ದನಗಳ ವ್ಯಾಪಾರವಾಗಿದೆ. ಕೆಲವು ರೈತರು ಜಾನುವಾರುಗಳ ವ್ಯಾಪಾರದ ಜೊತೆಗೆ ಹಣದ ಆಸೆಗೆ ಬಿದ್ದು, ಹುಟ್ಟಿ ತಿಂಗಳೂ ಕಳೆಯದ ಪುಟ್ಟ ಪುಟ್ಟ ಮುದ್ದಾದ ಹೋರಿ ಕರುಗಳನ್ನು ಒಂದಿಷ್ಟು ಹಣಕ್ಕೆ ಕಟುಕರಿಗೆ ಮಾರಿದ್ದು, ನಿಜಕ್ಕೂ ಕರುಳು ಹಿಂಡುವಂತ ವಿಚಾರ. ಅಷ್ಟೇ ಅಲ್ಲದೇ ಗೋ - ಹತ್ಯೆ ನಿಷೇಧ ಜಾರಿಯಾಗಿದ್ರೂ ಕೆಲ ಕಟುಕರು ಗೋ - ಮಾಂಸಕ್ಕಾಗಿ ಹಸು, ಎಮ್ಮೆ, ಹೋರಿ ಕರುಗಳನ್ನ ಕಡಿಮೆ ಬೆಲೆಗೆ ವ್ಯಾಪಾರ ಮಾಡಿ ಕಸಾಯಿಖಾನೆಗೆ ಕಳುಹಿಸುತ್ತಿರುವುದು ನಿಜಕ್ಕೂ ದುರಂತ.

60 ಹೋರಿ ಕರುಗಳ ರಕ್ಷಣೆ...

ಕೆ.ಎ. 42. ಎ.8193 ಎಂಬ ವಾಹನದಲ್ಲಿ ಹೆಚ್ಚು ಕಡಿಮೆ 10-15 ಕರುಗಳನ್ನ ತುಂಬಬಹುದು. ಆದರೆ ಅಂತಹ ಚಿಕ್ಕ ವಾಹನದಲ್ಲಿ ಸರಿ ಸುಮಾರು 60 ಹೋರಿಕರುಗಳ ಕಾಲುಗಳನ್ನ ಒಂದಕ್ಕೊಂದು ಕಟ್ಟಿ ಕುತ್ತಿಗೆಗೆ ಹಗ್ಗ ಬಿಗಿದು ತುಂಬಿಕೊಂಡು ಚನ್ನರಾಯಪಟ್ಟಣದ ಸಂತೆಯಿಂದ ಕೇರಳದ ಕಸಾಯಿಖಾನೆಗೆ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಸ್ಥಳೀಯರು ವಾಹನ ತಡೆದು ಅವುಗಳನ್ನ ರಕ್ಷಣೆ ಮಾಡಿದ್ದಾರೆ.

60 ಹೋರಿಕರುಗಳ ರಕ್ಷಣೆ

ಚನ್ನರಾಯಪಟ್ಟಣ ಮಾರುಕಟ್ಟೆಯಲ್ಲಿ ದನಗಳ ಸುಂಕವನ್ನು ನಿಷೇಧಿಸಿ ಹಲವು ವರ್ಷಗಳೇ ಕಳೆದಿದ್ದರೂ, ಕೆಲವು ಸಂಘಟನೆಗಳ ಮುಖಂಡರು ಮಾತ್ರ ಜಾನುವಾರುಗಳ ಸಂತೆಗೆ ಬರುವ ಹಸು, ಎತ್ತು ಮತ್ತು ಕರುಗಳಿಗೆ ಇಂತಿಷ್ಟು ಹಣ ಪಾವತಿ ಮಾಡಬೇಕು ಎಂದು ಬೆದರಿಸಿ ಅವರಿಂದ ಹಣ ವಸೂಲಿ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಹಣ ನೀಡದಿದ್ದರೇ ಕಸಾಯಿ ಖಾನೆಗೆ ಮಾರಾಟ ಮಾಡುತ್ತಿರುವುದಾಗಿ ದೂರು ನೀಡುತ್ತೇವೆ ಎಂದು ಬೆದರಿಕೆ ಒಡ್ಡುವ ಆರೋಪಗಳು ಕೇಳಿ ಬರುತ್ತಿವೆ.

ಹಾಸನ: ಇವುಗಳು ಹುಟ್ಟಿ, ಇನ್ನೂ ತಿಂಗಳು ಕಳೆದಿಲ್ಲ. ಈ ಮುದ್ದಾದ ಪುಟ್ಟ ಪುಟ್ಟ ಕರುಗಳನ್ನು ಜನ್ಮ ನೀಡಿದ ತಾಯಿಯ ಮಾಲೀಕರು ಕಟುಕರ ಕೈಗೆ ಕೊಟ್ಟುಬಿಟ್ಟಿದ್ದಾರೆ. ಅದೃಷ್ಟವಶಾತ್ ಇವುಗಳ ಲಕ್ ಚೆನ್ನಾಗಿತ್ತು. ಕಟುಕರ ಕೈಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿವೆ.

ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಸುಮಾರು 60 ಹೋರಿ ಕರುಗಳನ್ನು ರಕ್ಷಣೆ ಮಾಡಲಾಗಿದೆ. ಸದ್ಯ ಇಲ್ಲಿನ ಪೊಲೀಸ್ ಠಾಣೆಯ ಆವರಣದಲ್ಲಿ ಈ ಕರುಗಳಿವೆ.

ಜಾನುವಾರು ವ್ಯಾಪಾರದ ನೆಪದಲ್ಲಿ ಕಸಾಯಿ ಖಾನೆಗೆ ರವಾನೆ...

ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಪ್ರತಿ ಶನಿವಾರ ವಾರದ ಸಂತೆ ನಡೆಯುತ್ತದೆ. ಸಂತೆಯ ಹಿಂದಿನ ದಿನವಾದ ನಿನ್ನೆ ದನಗಳ ವ್ಯಾಪಾರ ನಡೆಯುತ್ತೆ. ಕೊಳ್ಳುವ ಹಾಗೂ ಮಾರುವ ಪ್ರಕ್ರಿಯೆ ನಡೆಯುತ್ತದೆ. ನಿನ್ನೆ ಬಹಳ ಜೋರಾಗಿಯೇ ದನಗಳ ವ್ಯಾಪಾರವಾಗಿದೆ. ಕೆಲವು ರೈತರು ಜಾನುವಾರುಗಳ ವ್ಯಾಪಾರದ ಜೊತೆಗೆ ಹಣದ ಆಸೆಗೆ ಬಿದ್ದು, ಹುಟ್ಟಿ ತಿಂಗಳೂ ಕಳೆಯದ ಪುಟ್ಟ ಪುಟ್ಟ ಮುದ್ದಾದ ಹೋರಿ ಕರುಗಳನ್ನು ಒಂದಿಷ್ಟು ಹಣಕ್ಕೆ ಕಟುಕರಿಗೆ ಮಾರಿದ್ದು, ನಿಜಕ್ಕೂ ಕರುಳು ಹಿಂಡುವಂತ ವಿಚಾರ. ಅಷ್ಟೇ ಅಲ್ಲದೇ ಗೋ - ಹತ್ಯೆ ನಿಷೇಧ ಜಾರಿಯಾಗಿದ್ರೂ ಕೆಲ ಕಟುಕರು ಗೋ - ಮಾಂಸಕ್ಕಾಗಿ ಹಸು, ಎಮ್ಮೆ, ಹೋರಿ ಕರುಗಳನ್ನ ಕಡಿಮೆ ಬೆಲೆಗೆ ವ್ಯಾಪಾರ ಮಾಡಿ ಕಸಾಯಿಖಾನೆಗೆ ಕಳುಹಿಸುತ್ತಿರುವುದು ನಿಜಕ್ಕೂ ದುರಂತ.

60 ಹೋರಿ ಕರುಗಳ ರಕ್ಷಣೆ...

ಕೆ.ಎ. 42. ಎ.8193 ಎಂಬ ವಾಹನದಲ್ಲಿ ಹೆಚ್ಚು ಕಡಿಮೆ 10-15 ಕರುಗಳನ್ನ ತುಂಬಬಹುದು. ಆದರೆ ಅಂತಹ ಚಿಕ್ಕ ವಾಹನದಲ್ಲಿ ಸರಿ ಸುಮಾರು 60 ಹೋರಿಕರುಗಳ ಕಾಲುಗಳನ್ನ ಒಂದಕ್ಕೊಂದು ಕಟ್ಟಿ ಕುತ್ತಿಗೆಗೆ ಹಗ್ಗ ಬಿಗಿದು ತುಂಬಿಕೊಂಡು ಚನ್ನರಾಯಪಟ್ಟಣದ ಸಂತೆಯಿಂದ ಕೇರಳದ ಕಸಾಯಿಖಾನೆಗೆ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಸ್ಥಳೀಯರು ವಾಹನ ತಡೆದು ಅವುಗಳನ್ನ ರಕ್ಷಣೆ ಮಾಡಿದ್ದಾರೆ.

60 ಹೋರಿಕರುಗಳ ರಕ್ಷಣೆ

ಚನ್ನರಾಯಪಟ್ಟಣ ಮಾರುಕಟ್ಟೆಯಲ್ಲಿ ದನಗಳ ಸುಂಕವನ್ನು ನಿಷೇಧಿಸಿ ಹಲವು ವರ್ಷಗಳೇ ಕಳೆದಿದ್ದರೂ, ಕೆಲವು ಸಂಘಟನೆಗಳ ಮುಖಂಡರು ಮಾತ್ರ ಜಾನುವಾರುಗಳ ಸಂತೆಗೆ ಬರುವ ಹಸು, ಎತ್ತು ಮತ್ತು ಕರುಗಳಿಗೆ ಇಂತಿಷ್ಟು ಹಣ ಪಾವತಿ ಮಾಡಬೇಕು ಎಂದು ಬೆದರಿಸಿ ಅವರಿಂದ ಹಣ ವಸೂಲಿ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಹಣ ನೀಡದಿದ್ದರೇ ಕಸಾಯಿ ಖಾನೆಗೆ ಮಾರಾಟ ಮಾಡುತ್ತಿರುವುದಾಗಿ ದೂರು ನೀಡುತ್ತೇವೆ ಎಂದು ಬೆದರಿಕೆ ಒಡ್ಡುವ ಆರೋಪಗಳು ಕೇಳಿ ಬರುತ್ತಿವೆ.

Intro:ಅಮ್ಮ ನಮ್ಮನ್ನ ಭೂಮಿಗೇಕೆ ಬಿಟ್ಯಾಮ್ಮ... ನಮಗೆ ಜನ್ಮ ಕೊಡುವ ಬದಲು ಗರ್ಭದಲ್ಲಿಯೇ ಸಾಯುವಂತೆ ಮಾಡಿದ್ರೆ ಎಷ್ಟೋ ಚನ್ನಾಗಿತ್ತು. ನಾನು ಹೆಣ್ಣಾಗಿದ್ರೆ ಕೆಲ ವರ್ಷಗಳಾದ್ರು ಭೂಮಿಯಲ್ಲಿ ಬದುಕುವ ಅವಕಾಶವಿತ್ತು. ಆದ್ರೆ ಗಂಡಾಗಿ ಹುಟ್ಟಿ ಕಟುಕರ ಕೈಸೇರಿ ಪುಣ್ಯಾತ್ಮರುಗಳ ಕೈಗೆ ಸಿಕ್ಕಿ ಕೆಲವೇ ಕ್ಷಣದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದೇವೆ. ಎಲ್ಲಿದ್ದೀಯಮ್ಮ....ಅಮ್ಮ....ಅಮ್ಮ....ಅಯ್ಯೋ ಇದೇನು ಗಂಡು ಹುಟ್ಟಿದ್ರೆ ಖುಷಿಯಾಗೋ ಮಂದಿ ಕೇಳಿದ್ದೇನೆ. ಗಂಡು ಹುಟ್ಟಿದ್ದಕ್ಕೆ ಕಟುಕರ ಪಾಲು ಮಾಡಿದ್ದಾರೆ ಎನ್ನುತ್ತಿದ್ದೀರಲ್ಲ ಅಂತ ಕೇಳ್ತಿದ್ದೀರಾ... ಹಾಗಿದ್ರೆ ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

ಅಣ್ಣಾ...ಬಾಯಿ ಒಣಗುತ್ತಿದೆ. ಹೊಟ್ಟೆ ಹಸಿವಾಗುತ್ತಿದೆ. ಹುಲ್ಲೋ...ನೀರೋ ಕೊಡಿ...ಇಲ್ವಾದ್ರೆ ನಾನು ಸತ್ತೇ ಹೋಗುವೆ...ನಂಗೆ...ನಂಗೆ...ಅಂತ ಕಳ್ತಿರೋ ಇವುಗಳಿಗೆ ನೀರು, ಹಾಲು, ಹಸಿ-ತರಕಾರಿ, ಸೊಪ್ಪು, ಹುಲ್ಲು ಕೊಟ್ಟು ಆರೈಕೆ ಮಾಡುತ್ತಿರುವ ಇವರಿಗೆಲ್ಲಾ ಎಷ್ಟು ಥ್ಯಾಂಕ್ಸ್ ಹೇಳಿದ್ರು ಸಾಲದು. ಹೌದು ಇವುಗಳು ಹುಟ್ಟಿ ಇನ್ನು ತಿಂಗಳುಗಳು ಕಳೆದಿಲ್ಲ. ಈ ಮುದ್ದಾದ ಪುಟ್ಟ ಪುಟ್ಟ ಕರುಗಳಿಗೆ ಜನ್ಮ ನೀಡಿದ ತಾಯಿಯ ಮಾಲೀಕರು ಕಟುಕರ ಪಾಲು ಮಾಡಿಬಿಟ್ಟಿದ್ರು. ಅದೃಷ್ಟವಾಶಾತ್ ಇವುಗಳ ಲಕ್ ಚನ್ನಾಗಿತ್ತು ಅಂತ ಕಾಣುತ್ತೆ. ಕಟುಕರ ಕೈಯಿಂದ ಕೂದಲೆಳೆಯಲ್ಲಿ ಪಾರಾಗಿದ್ದು ಅದೃಷ್ಟವೇ ಸರಿ. ಇವುಗಳನ್ನ ರಕ್ಷಿಸಿದ ಇಷ್ಟು ಮಂದಿಗೆ ತಮ್ಮ ಭಾಷೆಯಲ್ಲಿಯೇ ಚಿರಋಣಿ ಹೇಳುತ್ತಿದ್ದವು. ಹೌದು ಇದೆಲ್ಲಾ ನಾವು ಹೇಳುತ್ತಿರುವುದಲ್ಲ. ಕಟುಕರ ಕೈಗೆ ಸಿಕ್ಕಿ ನರಳಿ ಸಾವಿನ ದವಡೆಯಿಂದ ಪಾರಾಗಿ ಸದ್ಯ ಪೊಲೀಸ್ ಠಾಣೆಯ ಆವರಣದಲ್ಲಿರುವ ಮೂಕ ಪ್ರಾಣಿಗಳ ಮನದೊಳಗಿನ ನೋವಿನ ಮಾತುಗಳು ಎಂದ್ರೆ ತಪ್ಪಾಗಲ್ಲ.

*ಜಾನುವಾರ ವ್ಯಾಪಾರದ ನೆಪದಲ್ಲಿ ಕಸಾಯಿ ಖಾನೆಗೆ ರವಾನೆ*
ಹೌದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಪ್ರತಿ ಶನಿವಾರ ವಾರದ ಸಂತೆ ನಡೆಯುತ್ತದೆ. ನಾಳೆ ಮಾಮೂಲಿ ಸಂತೆಯಾಗಿರುವುದರಿಂದ ಹಿಂದಿನ ದಿನವಾದ ಇಂದು ದನಗಳ ವ್ಯಾಪಾರ ನಡೆಯುತ್ತೆ. ಕೊಳ್ಳುವ-ಮಾರುವ ಪ್ರಕ್ರಿಯೆ ನಡೆಯುವುದು ಸರ್ವೆ ಸಾಮಾನ್ಯ. ಇಂದು ಕೂಡಾ ಶುಕ್ರವಾರವಾಗಿದ್ರಿಂದ ಬಹಳ ಜೋರಾಗಿಯೇ ದನಗಳ ವ್ಯಾಪಾರವಾಗಿದೆ. ಕೆಲವು ರೈತರು ಜಾನುವಾರುಗಳ ವ್ಯಾಪಾರದ ಜೊತೆಗೆ ಹಣದ ಆಸೆಗೆ ಬಿದ್ದು, ಹುಟ್ಟಿ ತಿಂಗಳುಗಳು ಕಳೆಯದ ಪುಟ್ಟ ಪುಟ್ಟ ಮುದ್ದಾದ ಹೋರಿಕರುವನ್ನ ಒಂದಿಷ್ಟು ಹಣಕ್ಕೆ ಕಟುಕರಿಗೆ ಮಾರಿದ್ದು ನಿಜಕ್ಕೂ ಕರುಳು ಹಿಂಡುವಂತ ವಿಚಾರವಷ್ಟೆಯಲ್ಲದೇ ಗೋ-ಹತ್ಯೆ ನಿಷೇಧ ಜಾರಿಯಾಗಿದ್ರು ಕೆಲವು ಮಂದಿ ಕಟುಕರು ಗೋ-ಮಾಂಸಕ್ಕಾಗಿ ಹಸು, ಎಮ್ಮೆ, ಹೋರಿಕರುಗಳನ್ನ ಕಡಿಮೆ ಬೆಲೆಗೆ ವ್ಯಾಪಾರ ಮಾಡಿ ಕಸಾಯಿಖಾನೆಗೆ ಕಳುಹಿಸುತ್ತಿರುವುದು ನಿಜಕ್ಕೂ ದುರಂತ ಎಂದ್ರೆ ತಪ್ಪಾಗಲ್ಲ.

*60 ಹೋರಿ ಕರುಗಳ ರಕ್ಷಣೆ*:
ಕೆ.ಎ.42, ಎ.8193 ಎಂಬ ವಾಹನದಲ್ಲಿ ಬಹುಶಃ 10-15 ಕರುಗಳನ್ನ ತುಂಬಬಹುದು. ಆದ್ರೆ ಅಂತಹ ಚಿಕ್ಕ ವಾಹನದಲ್ಲಿ ಸರಿ ಸುಮಾರು 60 ಹೋರಿಕರುಗಳ ಕಾಲುಗಳನ್ನ ಒಂದಕ್ಕೊಂದು ಕಟ್ಟಿ ಕುತ್ತಿಗೆಗೆ ಹಗ್ಗ ಬಿಗಿದು ತುಂಬಿಕೊಂಡು ಚನ್ನರಾಯಪಟ್ಟಣದ ಸಂತೆಯಿಂದ ಕೇರಳಾ ರಾಜ್ಯದ ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ವೇಳೆ ಸ್ಥಳೀಯ ಯುವ ಬ್ರಿಗೇಟ್ ಮತ್ತು ಹಿಂದುಪರ ಸಂಘಟನೆಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಆದ್ರೆ ವಾಹನ ಚಾಲಕ ಮಾತ್ರ ಅಲ್ಲಿಂದ ಪರಾರಿಯಾಗಿದ್ದು, ವಾಹನದ ಕ್ಲೀನರ್ ಸಿಕ್ಕಿಬಿದ್ದು, ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾನೆ.

*ಹಣದ ಹಿಂದೆ ಬಿದ್ದು ಮಾರಾಟ*:
ಹಿಂದೆ ವಯಸ್ಸಾದ ದನಗಳನ್ನು ಮಾತ್ರ ಕಸಾಯಿಖಾನೆಗೆ ಮಾರುತ್ತಿದ್ರು. ಹೂಡುವ ಎತ್ತುಗಳು ಸೇರಿದಂತೆ ಹರೆಯದ ದನಗಳನ್ನೂ ಈಗ ಸಾಗಿಸಲಾಗುತ್ತಿದೆ. ಇಲ್ಲಿನ ಜಾನುವಾರು ಸಂತೆಗೆ ಬರುವ ಹಸು, ಹೋರಿ, ಎಮ್ಮೆಗಳನ್ನ ಸ್ಥಳೀಯ ರೈತರಿಗಿಂತ ನಾನಾ ಕಡೆಯಿಂದ ಬರುವ ಕಸಾಯಿಖಾನೆ ದಲ್ಲಾಳಿಗಳು ಹೆಚ್ಚಿಗೆ ಖರೀದಿಸುತ್ತಿದ್ದಾರೆ ಎನ್ನುವುದು ಅಚ್ಚರಿ ವಿಷಯ. ಯಾಂತ್ರಿಕೃತ ಬೇಸಾಯ ಹೆಚ್ಚಾಗುತ್ತಿದ್ದು, ಜಾನುವಾರು ಕೃಷಿ ಚಟುವಟಿಕೆಗಳು ಮಂದ ಇರುವುದರಿಂದ ಎತ್ತುಗಳನ್ನು ರೈತರು ಸಂತೆಗೆ ತಂದು ಮಾರುತ್ತಿದ್ದಾರೆ.

ಮಾರಾಟಗಾರರು ಕಸಾಯಿಖಾನೆ ದಲ್ಲಾಳಿಗಳೋ ಅಥವಾ ರೈತರೊ ಎನ್ನುವುದನ್ನು ಲೆಕ್ಕ ಹಾಕುವುದಿಲ್ಲ. ಹೆಚ್ಚಿನ ಬೆಲೆ ನೀಡುವವರಿಗೆ ಸಲೀಸಾಗಿ ಮಾರಿಬಿಡುತ್ತಾರೆ. ಮಾರಾಟ ನಂತರದ ಸಾಧಕಬಾದಕಗಳ ಬಗ್ಗೆ ಯೋಚಿಸುವುದಿಲ್ಲ. ಸಂತೆಯಲ್ಲಿ ಖರೀದಿಸುವ ದನಗಳನ್ನು ಯಾವ ಕರುಣೆಯಿಲ್ಲದೇ ಲಾರಿಯಲ್ಲಿ ದಲ್ಲಾಳಿಗಳು ತುಂಬುತ್ತಾರೆ. ಬೆಳಗ್ಗೆ ಮನೆಯಲ್ಲಿ ಮೇವು ತಿಂದು, ನೀರು ಕುಡಿದದ್ದೆ ಪುಣ್ಯ. ಕಸಾಯಿಖಾನೆ ತಲುಪುವವರೆಗೆ ದನಗಳಿಗೆ ಏನನ್ನೂ ನೀಡುವುದಿಲ್ಲ. ಬಿಸಿಲಿನ ಝಳಕ್ಕೆ ತತ್ತರಿಸಿ ಬಾಯಲ್ಲಿ ನೊರೆ ಬಂದರೂ ದಲ್ಲಾಳಿಗಳಿಗೆ ಅನುಕಂಪ ಬರುವುದಿಲ್ಲ. ಕಸಾಯಿಖಾನೆಗೆ ಹೋಗುವ ದನಗಳ ಲೆಕ್ಕವನ್ನು ಇಲ್ಲಿನ ಎಪಿಎಂಸಿ ಮಾರುಕಟ್ಟೆಯ ನೌಕರರು ಇಡುವುದಿಲ್ಲ. ಬೇರೆ ಬೇರೆ ರೈತರ ಹೆಸರಲ್ಲಿ ಖರೀದಿ ತೋರಿಸಿ ಮಾರಾಟ ಮಾಡಲಾಗುತ್ತಿದೆಯಂತೆ.

*ಕೆಲ ಸಂಘಟನೆಗಳಿಂದ ಹಣ ವಸೂಲಿ*:
ಚನ್ನರಾಯಪಟ್ಟಣ ಮಾರುಕಟ್ಟೆಯಲ್ಲಿ ದನಗಳ ಸುಂಕವನ್ನ ನಿಷೇಧಿಸಿ ಹವಲು ವರ್ಷಗಳೇ ಕಳೆದಿದ್ದರೂ ಕೆಲವು ಸಂಘಟನೆಗಳ ಮುಖಂಡರು ಮಾತ್ರ ಜಾನುವಾರುಗಳ ಸಂತೆಗೆ ಬರುವ ಹಸುಗಳಿಗೆ, ಎತ್ತುಗಳಿಗೆ, ಮತ್ತು ಕರುಗಳಿಗೆ ಇಂತಿಷ್ಟು ಹಣವನ್ನ ಪಾವತಿ ಮಾಡಬೇಕು ಎಂದು ಬೆದರಿಸಿ ಅವರಿಂದ ಹಣ ವಸೂಲಿ ಮಾಡುತ್ತಾರಂತೆ. ಹಣ ನೀಡದಿದ್ದರೇ ಕಸಾಯಿ ಖಾನೆಗೆ ಮಾರಾಟ ಮಾಡುತ್ತಿರುವುದಾಗಿ ದೂರು ನೀಡುತ್ತೇವೆ ಎಂದು ಬೆದರಿಕೆ ಹೊಡ್ಡುವ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಪಟ್ಟಣದ ಓರ್ವ ಪೊಲೀಸ್ ಪೇದೆಯ ಸಾಥ್ ಕೂಡಾ ಇದೆ ಎಂಬುದು ಸ್ಥಳೀಯರ ಆರೋಪವಾಗಿದೆ.

*ಗಂಡಿಗೂ-ಹೋರಿಗೂ ಇಷ್ಟೆ ವ್ಯತ್ಯಾಸ*.
ಇಟ್ಟರೇ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ, ಸುಟ್ಟರೇ ವಿಭೂತಿಯಾದೆ, ನೀನ್ಯಾರಿಗಾದೆಯೋ ಎಲೆ ಮಾನವ ಎನ್ನುವ ಗಾದೆ ಮಾತಿನಂತೆ ಗೋವುಗಳು ಮನುಷ್ಯರಿಗೆ ಕಲ್ಪವೃಕ್ಷವಿದ್ದಂತೆ. ಗೋವಿಗೆ ನಾವು ದೇವಾನು ದೇವತೆಯ ಸ್ಥಾನವನ್ನ ಕಲ್ಪಿಸಿದ್ದು, ಹಣದ ಆಸೆಗೆ ಬಲಿಯಾಗಿ ಕಟುಕರ ಪಾಲು ಮಾಡುತ್ತಿದ್ದೇವೆ. ಹೆಣ್ಣು ಕರು ಹುಟ್ಟಿದ್ರೆ ಜೀವನ ಪರ್ಯಂತ ಸಾಗುವ ನಾವು ಅದೇ ಹೆಣ್ಣು ಮಗಳು ಹುಟ್ಟಿದ್ರೆ ಮೂಗು ಮುರಿಯುತ್ತೇವೆ. ಅದೇ ಗಂಡು ಮಗು ಹುಟ್ಟಿದ್ರೆ ವಂಶೋದ್ದಾರಕ ಎನ್ನುವ ಈ ಮಾನವ ಅದೇ ಹೋರಿ ಕರು ಹುಟ್ಟಿದ್ರೆ ಶಾಪವೆಂಬಂತೆ ಕಟುಕರ ಪಾಲು ಮಾಡ್ತಿರೋದು ಎಂಥ ವಿಪರ್ಯಾಸ ನೋಡಿ...

ಒಟ್ಟಾರೆ ರೈತರ ಬೆನ್ನೆಲುಬಾಗಿರೋ ಜಾನುವಾರುಗಳನ್ನ ಸಾಕುವುದು ಇಂದಿನ ದಿನದಲ್ಲಿ ಕಷ್ಟಕರವಾಗಿದೆ. ಆದ್ರೆ ಹಣದ ಆಸೆಗೆ ಬಲಿಯಾಗಿ ಪುಟ್ಟ ಪುಟ್ಟ ಕರುಗಳನ್ನ ಕಟುಕರಿಗೆ ಮಾರಾಟ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಸದ್ಯ ಯುವ ಬ್ರಿಗೇಟ್ ಮತ್ತು ಹಿಂದುಪರ ಸಂಘಟನೆಗಳ ಶ್ರಮದಿಂದ ಸಾವಿನ ದವಡೆಯಲ್ಲಿದ್ದ ಪುಟ್ಟ ಪುಟ್ಟ ಕರುಗಳು ಮತ್ತೊಂದು ಜನ್ಮ ತಳೆದಿದ್ದು, ಮೈಸೂರಿನ ಪಿಂಚರ್ ಪೊಲ್ ಗೋ ಶಾಲೆಗೆ ಕಳುಹಿಸಿಕೊಡಲಾಗಿದೆ. ಆದ್ರೆ ಇಂತಹ ಪ್ರಕರಣಗಳು ರಾಜ್ಯದಲ್ಲಿ ಅದೆಷ್ಟು ನಡೆಯುತ್ತಿವೆ. ಆದ್ರೆ ಎಲ್ಲೋ ಒಂದು ಇಂತಹ ಪ್ರಕರಣಗಳು ಕಣ್ಣಿಗೆ ಬೀಳುತ್ತಿವೆ. ಇನ್ನು ಮುಂದಾದ್ರು ಸರ್ಕಾರ ಇಂತಹ ಗೋ-ಹತ್ಯೆಗೆ ಮುಂದಾಗುವವರ ವಿರುದ್ದ ಕ್ರಮ ಜರುಗಿಸುತ್ತಾ ಕಾದು ನೋಡಬೇಕಿದೆ.

*ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ*.Body:0Conclusion:0

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.