ETV Bharat / state

ಭ್ರಷ್ಟ ರಾಜಕಾರಣಿಗಳು ಮೇಲೆ ಹೋದಷ್ಟೇ ವೇಗವಾಗಿ ಕೆಳಕ್ಕೆ ಬೀಳುತ್ತಾರೆ: ಇದಕ್ಕೆ ಇವರೇ ಸಾಕ್ಷಿ ಎಂದರು ಎಸ್ ಆರ್ ಹಿರೇಮಠ - ಎಸ್ ಆರ್ ಹಿರೇಮಠ ಆರೋಪಗಳು

ಭ್ರಷ್ಟ ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿರುವ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ, ಇಂತವರು ಮೇಲೆ ಹೋದಷ್ಟೇ ವೇಗವಾಗಿ ಕೆಳಕ್ಕೆ ಬೀಳುತ್ತಾರೆ. ಮದ್ಯದ ದೊರೆ ವಿಜಯ್ ಮಲ್ಯ ಕಥೆ ಇದೀಗ ಏನಾಗಿದೆ? ಅವರು ಏನು ಮಾಡಿದ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದರು.

SR Hiremath angry on corrupt politicians
ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ
author img

By

Published : Jan 6, 2023, 7:15 PM IST

ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ

ಗದಗ: ಭ್ರಷ್ಟ ರಾಜಕಾರಣಿಗಳನ್ನು ಜನ ಯಾವತ್ತೂ ಜನಪ್ರತಿನಿಧಿಗಳನ್ನಾಗಿ ಆರಿಸಿ ತರಬಾರದು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಹಾಗೂ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ಅಧಿಕಾರಿಗಳ ಜೊತೆ ಶಾಮೀಲಾಗಿ ಮಾಡಬಾರದ ಮಹಾಪರಾಧ ಕೆಲಸಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಬೆಂಗಳೂರಿನ ವಿಧಾನಸೌಧದಲ್ಲಿ ಸಿಕ್ಕ ಹಣದ ಪ್ರಕರಣವೇ ಸಾಕ್ಷಿ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜಕ್ಕೆ ಉತ್ತಮ ಸಂದೇಶ ಸಾರಿ: ಚಪ್ಪಾಳೆ ಆಗಬೇಕು ಅಂದರೆ ಅದು ಒಂದೇ ಕೈಯಿಂದ ಸಾಧ್ಯವಿಲ್ಲ. ಎರಡು ಕೈಗಳು ಸೇರಿದರೆ ಮಾತ್ರ ಅದು ಚಪ್ಪಾಳೆ ಆಗುತ್ತಿದೆ. ಇಲ್ಲಿಯೂ ಕೂಡ ಅದೇ ಆಗಿದೆ. ರಾಜಕಾರಣಿಗಳು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುವ ಬದಲಾಗಿ ಸ್ವಾರ್ಥ ಮತ್ತು ದುರಾಸೆ ಇಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ಜನರೇ ಇಂತವರಿಗೆ ತಕ್ಕ ಪಾಠ ಕಲಿಸಬೇಕು. ಅದುವೇ ಅವರಿಗೆ ನೀಡಬೇಕಾಡ ಕಠಿಣ ಶಿಕ್ಷೆ. ಇಂತವರನ್ನು ನಿರ್ಲಕ್ಷ್ಯ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಬೇಕು ಎಂದರು.

ಭಾಗಶಃ ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಭ್ರಷ್ಟಾಚಾರದ ಸ್ವರೂಪ ಡಿ ಕೆ ಶಿವಕುಮಾರ್ ರಾಜ್ಯ ಕಾಂಗ್ರೆಸ್​ ಪಕ್ಷದ ಅಧ್ಯಕ್ಷರಾಗಿದ್ದಾರೆ. ಮಾಡಬಾರದ ಕೆಲಸ ಮಾಡಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜೈಲು ಸೇರಿ ಹೊರ ಬಂದಿದ್ದಾರೆ. ಮತ್ತೊಂದು ಕಡೆ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಬಡವರ ಭೂಮಿಯನ್ನು ಕಬಳಿಸಿಕೊಂಡು ಕುಳಿತಿದ್ದಾರೆ. ಇಂತಹ ರಾಜಕಾರಣಿಗಳನ್ನು ಜನ ಯಾವತ್ತೂ ಜನಪ್ರತಿನಿಧಿಗಳನ್ನಾಗಿ ಮಾಡಬಾರದು. ಅದಕ್ಕಾಗಿ ನಾವು ಜನಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಪಾಪಾದ ಹಣ ಪ್ರಾಯಶ್ಚಿತ್ತಕ್ಕಲ್ಲದೇ ಸತ್ಪಾತ್ರಕ್ಕೆ ಸಲ್ಲದು. ಸಾರ್ವಜನಿಕರ ಜೀನವದಲ್ಲಿ ಪಾಲ್ಗೊಂಡು, ಸಂವಿಧಾನದ ಚೌಕಟ್ಟಿನಲ್ಲಿ ಇರಬೇಕಾದ ಜನಪ್ರತಿನಿಧಿಗಳು ಅಧಿಕಾರವನ್ನು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ. ದಿನಕ್ಕೆ 10 ಸಾವಿರ ಅಕ್ರಮ ಅದಿರನ್ನು ಕಳುಹಿಸಿದಂತಹ ಹಗಲು ದರೋಡೆಕೋರನಿಗೆ ಈ ರಾಜ್ಯದ ಜನ ಏನನ್ನೂ ಕೊಡಬಾರದು. ಮದ್ಯದ ದೊರೆ ವಿಜಯ್ ಮಲ್ಯ ಕಥೆ ಇದೀಗ ಏನಾಗಿದೆ? ಅವರು ಏನು ಮಾಡಿದ ಅನ್ನೋದು ಎಲ್ಲರಿಗೂ ಗೊತ್ತಿದೆ. ಹಾಗೆಯೇ ಅವನ ಬಲಗೈ ಬಂಟ ಬಿ ಶ್ರೀರಾಮುಲು ಬಿಎಸ್​ಆರ್​ ಕಾಂಗ್ರೆಸ್​ ಕಟ್ಟಿದ. ಅದು ಏನಾಯಿತು ಅಂತಲೂ ಗೊತ್ತು. ಇದೀಗ ಗಾಲಿ ಜನರ್ದನ ರೆಡ್ಡಿ ರಾಜಕೀಯಕ್ಕೆ ಬರುತ್ತಿದ್ದಾರೆ. ಇಂತವರಿಗೆ ಭವಿಷ್ಯವಿಲ್ಲ. ಇವರು ಮೇಲೆ ಹೋದಷ್ಟೇ ವೇಗವಾಗಿ ಮತ್ತೆ ಕೆಳಕ್ಕೆ ಬೀಳುತ್ತಾರೆ ಎಂದರು.

​ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇಂತಹವರಿಗೆ ಮುಂದೆ ಭವಿಷ್ಯ ಇಲ್ಲ. ಇವತ್ತು ಇಂತಹ ಅಧಿಕಾರಿಗಳನ್ನು ಹುಡುಕಿಕೊಂಡು ಅಧಿಕಾರಿಗಳು ಹಲವಡೆ ದಾಳಿ ಮಾಡುತ್ತಿದ್ದಾರೆ. ಅವರ ಸಮಗ್ರ ಆಸ್ತಿಯನ್ನು ಪೈಸಾ ಸಹಿತ ವಸೂಲಿ ಮಾಡಬೇಕು. ಯಾವತ್ತೋ ಆಗಬೇಕಾದ ಕೆಲಸ ಇವತ್ತು ಆಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಇದನ್ನು ನಾನು ಸ್ವಾಗತಿಸುವೆ ಎಂದರು.

ಇದನ್ನೂ ಓದಿ: ಹಣ ಕೊಡಲು ವಿಧಾನಸೌಧಕ್ಕೆ ಏಕೆ ಬರಬೇಕು, ಮನೆ, ಬೇರೆ ಕಡೆ ಕೊಡಬಹುದದಲ್ವಾ: ಸಚಿವ ಸಿಸಿ ಪಾಟೀಲ್

ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ

ಗದಗ: ಭ್ರಷ್ಟ ರಾಜಕಾರಣಿಗಳನ್ನು ಜನ ಯಾವತ್ತೂ ಜನಪ್ರತಿನಿಧಿಗಳನ್ನಾಗಿ ಆರಿಸಿ ತರಬಾರದು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಹಾಗೂ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ಅಧಿಕಾರಿಗಳ ಜೊತೆ ಶಾಮೀಲಾಗಿ ಮಾಡಬಾರದ ಮಹಾಪರಾಧ ಕೆಲಸಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಬೆಂಗಳೂರಿನ ವಿಧಾನಸೌಧದಲ್ಲಿ ಸಿಕ್ಕ ಹಣದ ಪ್ರಕರಣವೇ ಸಾಕ್ಷಿ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜಕ್ಕೆ ಉತ್ತಮ ಸಂದೇಶ ಸಾರಿ: ಚಪ್ಪಾಳೆ ಆಗಬೇಕು ಅಂದರೆ ಅದು ಒಂದೇ ಕೈಯಿಂದ ಸಾಧ್ಯವಿಲ್ಲ. ಎರಡು ಕೈಗಳು ಸೇರಿದರೆ ಮಾತ್ರ ಅದು ಚಪ್ಪಾಳೆ ಆಗುತ್ತಿದೆ. ಇಲ್ಲಿಯೂ ಕೂಡ ಅದೇ ಆಗಿದೆ. ರಾಜಕಾರಣಿಗಳು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುವ ಬದಲಾಗಿ ಸ್ವಾರ್ಥ ಮತ್ತು ದುರಾಸೆ ಇಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ಜನರೇ ಇಂತವರಿಗೆ ತಕ್ಕ ಪಾಠ ಕಲಿಸಬೇಕು. ಅದುವೇ ಅವರಿಗೆ ನೀಡಬೇಕಾಡ ಕಠಿಣ ಶಿಕ್ಷೆ. ಇಂತವರನ್ನು ನಿರ್ಲಕ್ಷ್ಯ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಬೇಕು ಎಂದರು.

ಭಾಗಶಃ ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಭ್ರಷ್ಟಾಚಾರದ ಸ್ವರೂಪ ಡಿ ಕೆ ಶಿವಕುಮಾರ್ ರಾಜ್ಯ ಕಾಂಗ್ರೆಸ್​ ಪಕ್ಷದ ಅಧ್ಯಕ್ಷರಾಗಿದ್ದಾರೆ. ಮಾಡಬಾರದ ಕೆಲಸ ಮಾಡಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜೈಲು ಸೇರಿ ಹೊರ ಬಂದಿದ್ದಾರೆ. ಮತ್ತೊಂದು ಕಡೆ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಬಡವರ ಭೂಮಿಯನ್ನು ಕಬಳಿಸಿಕೊಂಡು ಕುಳಿತಿದ್ದಾರೆ. ಇಂತಹ ರಾಜಕಾರಣಿಗಳನ್ನು ಜನ ಯಾವತ್ತೂ ಜನಪ್ರತಿನಿಧಿಗಳನ್ನಾಗಿ ಮಾಡಬಾರದು. ಅದಕ್ಕಾಗಿ ನಾವು ಜನಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಪಾಪಾದ ಹಣ ಪ್ರಾಯಶ್ಚಿತ್ತಕ್ಕಲ್ಲದೇ ಸತ್ಪಾತ್ರಕ್ಕೆ ಸಲ್ಲದು. ಸಾರ್ವಜನಿಕರ ಜೀನವದಲ್ಲಿ ಪಾಲ್ಗೊಂಡು, ಸಂವಿಧಾನದ ಚೌಕಟ್ಟಿನಲ್ಲಿ ಇರಬೇಕಾದ ಜನಪ್ರತಿನಿಧಿಗಳು ಅಧಿಕಾರವನ್ನು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ. ದಿನಕ್ಕೆ 10 ಸಾವಿರ ಅಕ್ರಮ ಅದಿರನ್ನು ಕಳುಹಿಸಿದಂತಹ ಹಗಲು ದರೋಡೆಕೋರನಿಗೆ ಈ ರಾಜ್ಯದ ಜನ ಏನನ್ನೂ ಕೊಡಬಾರದು. ಮದ್ಯದ ದೊರೆ ವಿಜಯ್ ಮಲ್ಯ ಕಥೆ ಇದೀಗ ಏನಾಗಿದೆ? ಅವರು ಏನು ಮಾಡಿದ ಅನ್ನೋದು ಎಲ್ಲರಿಗೂ ಗೊತ್ತಿದೆ. ಹಾಗೆಯೇ ಅವನ ಬಲಗೈ ಬಂಟ ಬಿ ಶ್ರೀರಾಮುಲು ಬಿಎಸ್​ಆರ್​ ಕಾಂಗ್ರೆಸ್​ ಕಟ್ಟಿದ. ಅದು ಏನಾಯಿತು ಅಂತಲೂ ಗೊತ್ತು. ಇದೀಗ ಗಾಲಿ ಜನರ್ದನ ರೆಡ್ಡಿ ರಾಜಕೀಯಕ್ಕೆ ಬರುತ್ತಿದ್ದಾರೆ. ಇಂತವರಿಗೆ ಭವಿಷ್ಯವಿಲ್ಲ. ಇವರು ಮೇಲೆ ಹೋದಷ್ಟೇ ವೇಗವಾಗಿ ಮತ್ತೆ ಕೆಳಕ್ಕೆ ಬೀಳುತ್ತಾರೆ ಎಂದರು.

​ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇಂತಹವರಿಗೆ ಮುಂದೆ ಭವಿಷ್ಯ ಇಲ್ಲ. ಇವತ್ತು ಇಂತಹ ಅಧಿಕಾರಿಗಳನ್ನು ಹುಡುಕಿಕೊಂಡು ಅಧಿಕಾರಿಗಳು ಹಲವಡೆ ದಾಳಿ ಮಾಡುತ್ತಿದ್ದಾರೆ. ಅವರ ಸಮಗ್ರ ಆಸ್ತಿಯನ್ನು ಪೈಸಾ ಸಹಿತ ವಸೂಲಿ ಮಾಡಬೇಕು. ಯಾವತ್ತೋ ಆಗಬೇಕಾದ ಕೆಲಸ ಇವತ್ತು ಆಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಇದನ್ನು ನಾನು ಸ್ವಾಗತಿಸುವೆ ಎಂದರು.

ಇದನ್ನೂ ಓದಿ: ಹಣ ಕೊಡಲು ವಿಧಾನಸೌಧಕ್ಕೆ ಏಕೆ ಬರಬೇಕು, ಮನೆ, ಬೇರೆ ಕಡೆ ಕೊಡಬಹುದದಲ್ವಾ: ಸಚಿವ ಸಿಸಿ ಪಾಟೀಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.