ETV Bharat / state

ಪಂಚಾಯತ್​ ಮುಖ್ಯಾಧಿಕಾರಿ ಕಿರುಕುಳ ಆರೋಪ: ವಾಲ್​​ಮ್ಯಾನ್ ನೇಣಿಗೆ ಶರಣು

ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ವಾಲ್​ಮ್ಯಾನ್​ ಆಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದಕ್ಕೆ ಪಟ್ಟಣ ಪಂಚಾಯತ್​ ಮುಖ್ಯಾಧಿಕಾರಿಗಳ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.

author img

By

Published : Oct 10, 2019, 9:52 AM IST

Wallman committed suicide at Gadag

ಗದಗ: ಪಟ್ಟಣ ಪಂಚಾಯತ್​ ಮುಖ್ಯಾಧಿಕಾರಿ ಕಿರುಕುಳಕ್ಕೆ ನೀಡಿದ್ದಾರೆ ಎಂದು ಡೆತ್​ನೋಟ್​ ಬರೆದಿಟ್ಟು ವಾಲ್​​ಮ್ಯಾನ್​ವೋರ್ವ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಘಟನೆ ನಡೆದಿದೆ.

ಮೂಲತಃ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಗ್ರಾಮದ ಬಸವರಾಜ್ ಹೊಸೂರ(32) ಆತ್ಮಹತ್ಯೆ ಮಾಡಿಕೊಂಡಿರುವ ವಾಲ್​ಮ್ಯಾನ್​. ಈತ ಶಿರಹಟ್ಟಿ ಪಟ್ಟಣ ಪಂಚಾಯತ್​ನಲ್ಲಿ ವಾಲ್​ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದ. ಈತನಿಗೆ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಅವರು ಕಿರುಕುಳ ನೀಡುತ್ತಿದ್ದರಂತೆ, ಇದರಿಂದ ಬೇಸತ್ತು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಪಂಚಾಯತ್​ ಮುಖ್ಯಾಧಿಕಾರಿ ಕಿರುಕುಳ ಆರೋಪ: ವಾಲ್​​ಮ್ಯಾನ್ ನೇಣಿಗೆ ಶರಣು

ಡೆತ್​ನೋಟ್​​ ಬರೆದಿಟ್ಟ ವಾಲ್​ಮ್ಯಾನ್​:
ಪಟ್ಟಣ ಪಂಚಾಯತ್​ ಮುಖ್ಯಾಧಿಕಾರಿ ಇತ್ತೀಚೆಗೆ ಅಕ್ರಮ ನಳಗಳ ಸಂಪರ್ಕ ಕಡಿತಗೊಳಿಸಿ ವರದಿ ನೀಡುವಂತೆ ಹೇಳಿದ್ದರಂತೆ. ವಿನಾಕಾರಣ ನನಗೆ ಕಿರುಕುಳ ನೀಡೋದಲ್ಲದೆ, ತಮ್ಮ ಮನೆಯ ಕೆಲಸವನ್ನೂ ಮಾಡಿಸಿಕೊಳ್ಳುತ್ತಿದ್ದರು. ಮಾಡಲ್ಲ ಅಂದ್ರೆ ಅವರ ಪತಿಯಿಂದ ಬೆದರಿಕೆ ಹಾಕಿಸ್ತಿದ್ರು ಎಂದು ಡೆತ್​ನೋಟ್ ಬರೆದಿಟ್ಟು ಬಸವರಾಜ್ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಸಾರ್ವಜನಿಕರಿಂದ ಪ್ರತಿಭಟನೆ:
ಇನ್ನು ಬಸವರಾಜ್ ನ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣ ಪಂಚಾಯತ್​ ಬಳಿ ಜಮಾಯಿಸಿದ್ದ ಜನರು ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಿರಹಟ್ಟಿ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ. ಗದಗ ಜಿಲ್ಲೆಯ ನಗರಾಭಿವೃದ್ಧಿ ಕೋಶ ಹಾಗೂ ಉಪವಿಭಾಗಾಧಿಕಾರಿಗಳು ಭೇಟಿ ನೀಡಿ ಘಟನೆ‌ ಕುರಿತು ಮಾಹಿತಿ ಪಡೆದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಘಟನೆಯ ಮಾಹಿತಿ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಗರಾಭಿವೃದ್ಧಿ ಕೋಶಾಧಿಕಾರಿ ರುದ್ರೇಶ್ ಅವರು, ಪಟ್ಟಣ ಪಂಚಾಯತ್​ನ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಕಿರುಕುಳ ನೀಡುತ್ತಿದ್ದರು ಅಂತ ಆರೋಪಿಸಲಾಗ್ತಿದೆ. ಆದ್ರೆ ಯಾರು ಸಹ ಲಿಖಿತವಾಗಿ ದೂರು ಬರೆದು ಕೊಡುತ್ತಿಲ್ಲ. ಯಾವುದೇ ನೌಕರರಿಗೆ ಸಂಬಳ ಬರದಿದ್ರೆ ಅಧಿಕಾರಿಗಳ ಕಿರುಕುಳ ಇದ್ರೆ, ಗಮನಕ್ಕೆ ತನ್ನಿ ಎಂದು ತಿಳಿಸಲಾಗಿತ್ತು. ದೂರು ಕೊಟ್ರೆ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ತಂದೆ ಮೃತಪಟ್ಟಿದ್ದಕ್ಕಾಗಿ ಅನುಕಂಪದ ಆಧಾರದ ಮೇಲೆ ಬಸವರಾಜನಿಗೆ ವಾಲ್​ಮ್ಯಾನ್​ ಕೆಲಸ ಸಿಕ್ಕಿತ್ತು. ಸಿಕ್ಕ ಕೆಲಸವನ್ನು ಚೆನ್ನಾಗಿಯೇ ನಿರ್ವಹಣೆ ಮಾಡ್ತಿದ್ದ ಬಸವರಾಜನ ಸಾವಿಗೆ ಮರುಗದ ಮನಸ್ಸೇ ಅಲ್ಲಿರಲಿಲ್ಲ. ಏನೇ ಆಗ್ಲಿ ಕಿರುಕುಳದ ಆರೋಪವೀಗ ಕೇಳಿ ಬಂದಿದ್ದು, ಸೂಕ್ತ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ.

ಗದಗ: ಪಟ್ಟಣ ಪಂಚಾಯತ್​ ಮುಖ್ಯಾಧಿಕಾರಿ ಕಿರುಕುಳಕ್ಕೆ ನೀಡಿದ್ದಾರೆ ಎಂದು ಡೆತ್​ನೋಟ್​ ಬರೆದಿಟ್ಟು ವಾಲ್​​ಮ್ಯಾನ್​ವೋರ್ವ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಘಟನೆ ನಡೆದಿದೆ.

ಮೂಲತಃ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಗ್ರಾಮದ ಬಸವರಾಜ್ ಹೊಸೂರ(32) ಆತ್ಮಹತ್ಯೆ ಮಾಡಿಕೊಂಡಿರುವ ವಾಲ್​ಮ್ಯಾನ್​. ಈತ ಶಿರಹಟ್ಟಿ ಪಟ್ಟಣ ಪಂಚಾಯತ್​ನಲ್ಲಿ ವಾಲ್​ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದ. ಈತನಿಗೆ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಅವರು ಕಿರುಕುಳ ನೀಡುತ್ತಿದ್ದರಂತೆ, ಇದರಿಂದ ಬೇಸತ್ತು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಪಂಚಾಯತ್​ ಮುಖ್ಯಾಧಿಕಾರಿ ಕಿರುಕುಳ ಆರೋಪ: ವಾಲ್​​ಮ್ಯಾನ್ ನೇಣಿಗೆ ಶರಣು

ಡೆತ್​ನೋಟ್​​ ಬರೆದಿಟ್ಟ ವಾಲ್​ಮ್ಯಾನ್​:
ಪಟ್ಟಣ ಪಂಚಾಯತ್​ ಮುಖ್ಯಾಧಿಕಾರಿ ಇತ್ತೀಚೆಗೆ ಅಕ್ರಮ ನಳಗಳ ಸಂಪರ್ಕ ಕಡಿತಗೊಳಿಸಿ ವರದಿ ನೀಡುವಂತೆ ಹೇಳಿದ್ದರಂತೆ. ವಿನಾಕಾರಣ ನನಗೆ ಕಿರುಕುಳ ನೀಡೋದಲ್ಲದೆ, ತಮ್ಮ ಮನೆಯ ಕೆಲಸವನ್ನೂ ಮಾಡಿಸಿಕೊಳ್ಳುತ್ತಿದ್ದರು. ಮಾಡಲ್ಲ ಅಂದ್ರೆ ಅವರ ಪತಿಯಿಂದ ಬೆದರಿಕೆ ಹಾಕಿಸ್ತಿದ್ರು ಎಂದು ಡೆತ್​ನೋಟ್ ಬರೆದಿಟ್ಟು ಬಸವರಾಜ್ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಸಾರ್ವಜನಿಕರಿಂದ ಪ್ರತಿಭಟನೆ:
ಇನ್ನು ಬಸವರಾಜ್ ನ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣ ಪಂಚಾಯತ್​ ಬಳಿ ಜಮಾಯಿಸಿದ್ದ ಜನರು ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಿರಹಟ್ಟಿ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ. ಗದಗ ಜಿಲ್ಲೆಯ ನಗರಾಭಿವೃದ್ಧಿ ಕೋಶ ಹಾಗೂ ಉಪವಿಭಾಗಾಧಿಕಾರಿಗಳು ಭೇಟಿ ನೀಡಿ ಘಟನೆ‌ ಕುರಿತು ಮಾಹಿತಿ ಪಡೆದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಘಟನೆಯ ಮಾಹಿತಿ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಗರಾಭಿವೃದ್ಧಿ ಕೋಶಾಧಿಕಾರಿ ರುದ್ರೇಶ್ ಅವರು, ಪಟ್ಟಣ ಪಂಚಾಯತ್​ನ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಕಿರುಕುಳ ನೀಡುತ್ತಿದ್ದರು ಅಂತ ಆರೋಪಿಸಲಾಗ್ತಿದೆ. ಆದ್ರೆ ಯಾರು ಸಹ ಲಿಖಿತವಾಗಿ ದೂರು ಬರೆದು ಕೊಡುತ್ತಿಲ್ಲ. ಯಾವುದೇ ನೌಕರರಿಗೆ ಸಂಬಳ ಬರದಿದ್ರೆ ಅಧಿಕಾರಿಗಳ ಕಿರುಕುಳ ಇದ್ರೆ, ಗಮನಕ್ಕೆ ತನ್ನಿ ಎಂದು ತಿಳಿಸಲಾಗಿತ್ತು. ದೂರು ಕೊಟ್ರೆ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ತಂದೆ ಮೃತಪಟ್ಟಿದ್ದಕ್ಕಾಗಿ ಅನುಕಂಪದ ಆಧಾರದ ಮೇಲೆ ಬಸವರಾಜನಿಗೆ ವಾಲ್​ಮ್ಯಾನ್​ ಕೆಲಸ ಸಿಕ್ಕಿತ್ತು. ಸಿಕ್ಕ ಕೆಲಸವನ್ನು ಚೆನ್ನಾಗಿಯೇ ನಿರ್ವಹಣೆ ಮಾಡ್ತಿದ್ದ ಬಸವರಾಜನ ಸಾವಿಗೆ ಮರುಗದ ಮನಸ್ಸೇ ಅಲ್ಲಿರಲಿಲ್ಲ. ಏನೇ ಆಗ್ಲಿ ಕಿರುಕುಳದ ಆರೋಪವೀಗ ಕೇಳಿ ಬಂದಿದ್ದು, ಸೂಕ್ತ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ.

Intro:ಮುಖ್ಯಾಧಿಕಾರಿ ಕಿರುಕುಳ ಆರೋಪ, ವಾಲ್ ಮನ್ ನೇಣಿಗೆ ಶರಣು.......ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ಘಟನೆ....ಬಸವರಾಜ್ ನೇಣಿಗೆ ಶರಣಾದ ವಾಲ್ಮನ್

ಆಂಕರ್-ಆತ ಪಟ್ಟಣ ಪಂಚಾಯತಿ ವಾಲ್ಮನ್ ಆಗಿದ್ದ. ಇಡೀ ಊರಿಗೆ ಊರೇ ಆತನಿಗೆ ಹತ್ತಿರವಾಗಿತ್ತು. ಚಿಕ್ಕ ಮಕ್ಳನ್ನೂ ಸಹ ಮರ್ಯಾದೆಯಿಂದ ಮಾತಡಸ್ತಿದ್ದ ಆತ. ಆದ್ರೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯಗೆ ಶರಣಾಗಿದ್ದಾನೆ.

ವಾ/ಓಂ೧-ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ ಯುವಕ........ಯುವಕನ ಮನೆ ಮುಂದೆ ಜಮಾಯಿಸಿರೋ ಸ್ಥಳೀಯರು....ಘಟನೆ ಖಂಡಿಸಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರೋ ಸಾರ್ವಜನಿಕರು....ಎಸ್ ಇದೆಲ್ಲಾ ನಡೆದಿರೋದು ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ.....ಇಲ್ಲಿನ‌ ಪಟ್ಟಣಪಂಚಾಯತಿ ವಾಲ್ಮನ್ ೩೨ ವರ್ಷದ ಬಸವರಾಜ್ ಹೊಸೂರು ಇಂದು ನೇಣಿಗೆ ಶರಣಾಗಿದ್ದಾನೆ. ವಿಚಾರ ಗೊತ್ತಾಗಿದ್ದೇ ತಡ ಪಟ್ಟಣದ ಜನ್ರೆಲ್ಲಾ ಆತನ ಮನೆ ಮುಂದೆ ಜಮಾಯಿಸಿದ್ದಾರೆ. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶೋಭ ಬೆಳ್ಳಿಕೊಪ್ಪ ಅವರು ನೀಡಿದ ನೋಟಿಸ್ ಈತನ ಸಾವಿಗೆ ಕಾರಣ ಅಂತ ಜನ್ರೆಲ್ಲಾ ಮಾತಾಡಿಕೊಳ್ತಿದ್ದಾರೆ. ಹೌದು ಎಲ್ರ ಜೊತೆಗೂ ಹೊಂದಿಕೊಂಡು ತನ್ನ ಕೆಲಸ ಮಾಡ್ತಿದ್ದ ಬಸವರಾಜನಿಗೆ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಕಿರುಕುಳ ನೀಡ್ತಿದ್ರಂತೆ. ಮೂಲತಃ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಗ್ರಾಮದ ಬಸವರಾಜ್ ಹೊಸೂರ(32) ತಾನು ವಾಸವಿದ್ದ ಮನೆಯಲ್ಲಿ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಇತ್ತೀಚೆಗೆ ಅಕ್ರಮ ನಳಗಳ ಸಂಪರ್ಕ ಕಡಿತಗೊಳಿಸಿ ವರದಿ ನೀಡುವಂತೆ ನೀಡಿದ್ರು. ಅಷ್ಟೇ ಅಲ್ಲ ವಿನಾಕಾರಣ ನನಗೆ ಕಿರುಕುಳ ನೀಡೋದಲ್ದೆ ತಮ್ಮ‌ ಮನೆಯ ಕೆಲಸವನ್ನೂ ಮಾಡಿಸಿಕೊಳ್ತಿದ್ರು. ಮಾಡಲ್ಲ ಅಂದ್ರೆ ಗಂಡನಿಂದ ಬೆದರಿಕೆ ಹಾಕಿಸ್ತಿದ್ರು ಅಂತ ಡೆತ್ ನೋಟ್ ಬರೆದಿಟ್ಟು, ಬಸವರಾಜ್ ನೇಣಿಗೆ ಶರಣಾಗಿದ್ದಾನೆ. ಇದಕ್ಕೆಲ್ಲಾ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಅವರ ಕಿರುಕುಳವೇ ಕಾರಣ ಎನ್ನೋದು ಸ್ಥಳೀಯರ ಅಭಿಪ್ರಾಯವೂ ಆಗಿದೆ.

ಬೈಟ್೦೧-ಸಂತೋಷ್, ಮಾಜಿ ಸದಸ್ಯ.

ವಾ/ಓಂ೨- ಇನ್ನು ಬಸವರಾಜ್ ನ ಆತ್ಮಹತ್ಯೆ ಸುದ್ದಿ ಹರಡುತ್ತಿದ್ದಂತೆಯೇ ಸಾರ್ವಜನಿಕರು ಪಟ್ಟಣ ಪಂಚಾಯತಿ ಬಳಿ ಜಮಾಯಿಸಿ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ವಿರುದ್ಧ ಘೋಷಣೆ ಕೂಗಿದ್ರು. ಶಿರಹಟ್ಟಿ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಬೀಡುಬಿಟ್ಟಿದ್ದಾರೆ. ಗದಗ ಜಿಲ್ಲೆಯ ನಗರಾಭಿವೃದ್ಧಿ ಕೋಶ ಹಾಗೂ ಉಪವಿಭಾಗಾಧಿಕಾರಿಗಳು ಭೇಡಿ ನೀಡಿ ಘಟನೆ‌ ಕುರಿತು ಮಾಹಿತಿ ಪಡೆದು ಪರಿಸ್ಥಿತಿ ತಿಳಿಗೊಳಿಸಿದ್ರು. ಘಟನೆಯ ಮಾಹಿತಿ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಗರಾಭಿವೃದ್ಧಿ ಕೋಶಾಧಿಕಾರಿ ರುದ್ರೇಶ್, ಪಟ್ಟಣ ಪಂಚಾಯತನ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಕಿರುಕುಳ ನೀಡುತ್ತಿದ್ದರು ಅಂತ ಆರೋಪಿಸಲಾಗ್ತಿದೆ. ಆದ್ರೆ ಯಾರು ಸಹ ಲಿಖಿತವಾಗಿ ಬರೆದು ಕೊಡುತ್ತಿಲ್ಲ. ಯಾವುದೇ ನೌಕರರಿಗೆ ಸಂಬಳ ಬರದಿದ್ರೆ ಅಧಿಕಾರಿಗಳ ಕಿರುಕುಳ ಇದ್ರೆ, ಗಮನಕ್ಕೆ ತನ್ನಿ ಎಂದು ತಿಳಿಸಲಾಗಿತ್ತು. ಯಾರಾದ್ರು ರೈಟಿಂಗ್ ನಲ್ಲಿ ಕೊಟ್ರೆ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಅಂದ್ರು.

ಬೈಟ್೦೨-ರುದ್ರೇಶ, ನಗರಾಭಿವೃದ್ದಿ ಕೋಶಾಧಿಕಾರಿ.

ತಂದೆ ಮೃತಪಟ್ಟಿದ್ದಕ್ಕಾಗಿ ಅನುಕಂಪದ ಆಧಾರದ ಮೇಲೆ ಬಸವರಾಜನಿಗೆ ವಾಲ್ಮನ್ ಕೆಲಸ ಸಿಕ್ಕಿತ್ತು. ಸಿಕ್ಕ ಕೆಲಸವನ್ನು ಚೆನ್ನಾಗಿಯೇ ನಿರ್ವಹಣೆ ಮಾಡ್ತಿದ್ದ ಬಸವರಾಜನ ಸಾವಿಗೆ ಮರುಗದ ಮನಸ್ಸೇ ಅಲ್ಲಿರಲಿಲ್ಲ. ಏನೇ ಆಗ್ಲಿ ಕಿರುಕುಳದ ಆರೋಪವೀಗ ಕೇಳಿಬಂದಿದ್ದು, ಸೂಕ್ತ ತನಿಖೆಯಾಗಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಬೇಕು ಎನ್ನೋದು ಸಾರ್ವಜನಿಕರ ಆಗ್ರಹವಾಗಿದೆ.Body:GConclusion:G
ETV Bharat Logo

Copyright © 2024 Ushodaya Enterprises Pvt. Ltd., All Rights Reserved.