ETV Bharat / state

ಲಕ್ಷಾಂತರ ರೂ. ಮೌಲ್ಯದ ಮೆಣಸಿನಕಾಯಿ ಕದ್ದಿದ್ದ ಆರೋಪಿಗಳ ಬಂಧನ

author img

By

Published : Jan 22, 2020, 9:42 AM IST

ಲಕ್ಷಾಂತರ ರೂ. ಮೌಲ್ಯದ ಒಣ ಮೆಣಸಿನಕಾಯಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಗದಗ ಜಿಲ್ಲೆಯ ನರೇಗಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

Naregal police Operation:  accused areested
ನರೇಗಲ್ ಪೊಲೀಸರ ಕಾರ್ಯಾಚರಣೆ: ಮೆಣಸಿನಕಾಯಿ ಸಹಿತ ಆರೋಪಿಗಳ ಬಂಧನ

ಗದಗ: ಲಕ್ಷಾಂತರ ರೂ. ಮೌಲ್ಯದ ಒಣ ಮೆಣಸಿನಕಾಯಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಗದಗ ಜಿಲ್ಲೆಯ ನರೇಗಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

ತಿಮ್ಮಾಪುರ ಗ್ರಾಮದ ರಾಮು ಹರಣಶಿಕಾರಿ, ಗಣೇಶ ಹರಣಶಿಕಾರಿ ಮತ್ತು ರವಿ ಹರಣಶಿಕಾರಿ ಬಂಧಿತ ಆರೋಪಿಗಳು. ಜ. 10ರಂದು ರಾತ್ರಿ ವೇಳೆ ತೊಟಗಂಟಿ ಗ್ರಾಮದ ರೈತ ಕೃಷ್ಣಾ ಪಾಟೀಲ್ ಎಂಬುವರ ಜಮೀನಿನಲ್ಲಿ ಒಣ ಹಾಕಿದ್ದ ಲಕ್ಷಾಂತರ ರೂ. ಮೌಲ್ಯದ ಒಣ ಮೆಣಸಿನಕಾಯಿ ಕದ್ದು ವಾಹನದಲ್ಲಿ ಹಾಕಿಕೊಂಡು ಹೋಗುತ್ತಿದ್ದರಂತೆ. ಆಗ ರೈತ ಕೃಷ್ಣಾ ಪಾಟೀಲ್ ತಡೆದಾಗ, ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಆರೋಪಿತರು ಪರಾರಿಯಾಗಿದ್ದರು ಎನ್ನಲಾಗಿದೆ.

ಈ ಸಂಬಂಧ ನರೇಗಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ್ದ ವಾಹನ ಹಾಗೂ ಒಣ ಮೆಣಸಿನಕಾಯಿ ವಶಕ್ಕೆ ಪಡೆದುಕೊಂಡಿದ್ದಾರೆ.

ಗದಗ: ಲಕ್ಷಾಂತರ ರೂ. ಮೌಲ್ಯದ ಒಣ ಮೆಣಸಿನಕಾಯಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಗದಗ ಜಿಲ್ಲೆಯ ನರೇಗಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

ತಿಮ್ಮಾಪುರ ಗ್ರಾಮದ ರಾಮು ಹರಣಶಿಕಾರಿ, ಗಣೇಶ ಹರಣಶಿಕಾರಿ ಮತ್ತು ರವಿ ಹರಣಶಿಕಾರಿ ಬಂಧಿತ ಆರೋಪಿಗಳು. ಜ. 10ರಂದು ರಾತ್ರಿ ವೇಳೆ ತೊಟಗಂಟಿ ಗ್ರಾಮದ ರೈತ ಕೃಷ್ಣಾ ಪಾಟೀಲ್ ಎಂಬುವರ ಜಮೀನಿನಲ್ಲಿ ಒಣ ಹಾಕಿದ್ದ ಲಕ್ಷಾಂತರ ರೂ. ಮೌಲ್ಯದ ಒಣ ಮೆಣಸಿನಕಾಯಿ ಕದ್ದು ವಾಹನದಲ್ಲಿ ಹಾಕಿಕೊಂಡು ಹೋಗುತ್ತಿದ್ದರಂತೆ. ಆಗ ರೈತ ಕೃಷ್ಣಾ ಪಾಟೀಲ್ ತಡೆದಾಗ, ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಆರೋಪಿತರು ಪರಾರಿಯಾಗಿದ್ದರು ಎನ್ನಲಾಗಿದೆ.

ಈ ಸಂಬಂಧ ನರೇಗಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ್ದ ವಾಹನ ಹಾಗೂ ಒಣ ಮೆಣಸಿನಕಾಯಿ ವಶಕ್ಕೆ ಪಡೆದುಕೊಂಡಿದ್ದಾರೆ.

Intro:ಮೆಣಸಿನಕಾಯಿ ಕಳ್ಳರ ಬಂಧನ... ಚಿನ್ನದ ಬೆಲೆ ಇದ್ದಾಗ ಒಣ ಮೆಣಸಿನಕಾಯಿ ಕಳ್ಳತನ ಮಾಡಿದ ಕಿಲಾಡಿಗಳು.. ನರೇಗಲ್ ಪೊಲೀಸರಿಂದ ಕಾರ್ಯಾಚರಣೆ..

ಆ್ಯಂಕರ್:- ಒಣ ಮೆಣಸಿನಕಾಯಿಗೆ ಚಿನ್ನದ ಬೆಲೆ ಇದ್ದಾಗ ಲಕ್ಷಾಂತರ ಮೌಲ್ಯದ ಒಣ ಮೆಣಸಿನಕಾಯಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ, ಗದಗ ಜಿಲ್ಲೆಯ ನರೇಗಲ್ ಪೊಲೀಸರು ಯಶ್ವಿಯಾಗಿದ್ದಾರೆ ತಿಮ್ಮಾಪುರ ಗ್ರಾಮದ ರಾಮು ಹರಣಶಿಕಾರಿ, ಗಣೇಶ ಹರಣಶಿಕಾರಿ, ರವಿ ಹರಣಶಿಕಾರಿ ಎನ್ನುವವರು ಬಂಧಿಸಿ, ಕೃತ್ಯಕ್ಕೆ ಉಪಯೋಗಿಸಿದ ವಾಹನ ಹಾಗೂ ಒಣ ಮೆಣಸಿನಕಾಯಿ ವಶಕ್ಕೆ ಪಡೆದುಕೊಂಡಿದ್ದಾರೆ. ಜನವರಿ 10 ರಂದು ರಾತ್ರಿ ವೇಳೆ ತೊಟಗಂಟಿ ಗ್ರಾಮದ ರೈತ ಕೃಷ್ಣಾ ಪಾಟೀಲ್ ಅವರ ಜಮೀನಿನಲ್ಲಿನ ಒಣ ಹಾಕಿದ ಲಕ್ಷಾಂತರ ಮೌಲ್ಯದ ಒಣ ಮೆಣಸಿನಕಾಯಿಯನ್ನು ವಾಹನದಲ್ಲಿ ಹಾಕಿಕೊಂಡು ಹೋಗುವಾಗ ರೈತ ಕೃಷ್ಣಾ ಪಾಟೀಲ್ ತಡೆದಾಗ, ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಆರೋಪಿತರು ಪರಾರಿಯಾಗಿದ್ದರು. ಆ ಸಮಯದಲ್ಲಿ ಒಂದು ಕ್ವಿಂಟಾಲ್ ಒಣ‌ ಮೆಣಸಿನಕಾಯಿ 33 ಸಾವಿರ ರೂಪಾಯಿ ಮಾರಾಟವಾಗುತ್ತಿತ್ತು. ಹಾಗಾಗಿ ಕಳ್ಳರು ಒಣ ಮೆಣಸಿನಕಾಯಿ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡ್ತಾಯಿದ್ರು. ಒಣ ಮೆಣಸಿನಕಾಯಿ ಕಳ್ಳರು ಜಿಲ್ಲೆಗೆ ಬಂದಿದ್ದಾರೆ ಎಂದು ಒಣ ಮೆಣಸಿನಕಾಯಿ ಬೆಳೆದ ರೈತರ ಆತಂಕಕ್ಕೆ ಕಾರಣವಾಗಿತ್ತು. ಹಗಲು ರಾತ್ರಿ ಎನ್ನದೆ ತಾವು ಬೆಳೆದ ಮೆಣಸಿನಕಾಯಿ ರಕ್ಷಣೆ ಮಾಡಿಕೊಳ್ಳಲು ರೈತ ವರ್ಗ ಶ್ರಮವಹಿಸಿತ್ತು. ಸದ್ಯ ಒಣ ಮೆಣಸಿನಕಾಯಿ ಕಳ್ಳತನ ಮಾಡಿದ ಆರೋಪಿಗಳನ್ನು ನರೇಗಲ್ ಪೊಲೀಸರು ಬಂಧಿಸಿದ್ದರಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ...
Body:GConclusion:G
ETV Bharat Logo

Copyright © 2024 Ushodaya Enterprises Pvt. Ltd., All Rights Reserved.