ETV Bharat / state

2001ರ ಸಂಸತ್‌ ಮೇಲೆ ದಾಳಿ ನಡೆಸಿದ್ದ ಉಗ್ರರನ್ನ ಮಟ್ಟ ಹಾಕಿದ್ದ ಕನ್ನಡಿಗ.. - 2001 ಭಯೋತ್ಪಾದಕರು ದಾಳಿ

ಸಿಆರ್​ಪಿಎಫ್​ನಲ್ಲಿ ಯೋಧರಾಗಿ ಏಪ್ರಿಲ್‌ 17, 1984ರಲ್ಲಿ ತಮ್ಮ ಸೇವೆ ಪ್ರಾರಂಭಿಸಿದ್ದರು. ಕೇರಳ, ಪಂಜಾಬ್, ಜಮ್ಮು-ಕಾಶ್ಮೀರ, ದೆಹಲಿ, ನಾರ್ಥ್‌ ಈಸ್ಟ್ ಹಾಗೂ ಗುಜರಾತ್ ಸೇರಿ ಮುಂತಾದ ಸ್ಥಳಗಳಲ್ಲಿ 25 ವರ್ಷ 5 ತಿಂಗಳು 18 ದಿನಗಳ ಕಾಲ ದೇಶ ಸೇವೆ ಸಲ್ಲಿಸಿದ್ದಾರೆ.

Gadaga warrior Shivaputrappa
ಶಿವಪುತ್ರಪ್ಪ
author img

By

Published : Dec 13, 2019, 5:22 PM IST

ಗದಗ: 2001ರ ಡಿಸೆಂಬರ್ 13 ರಂದು ದೇಶ ಬೆಚ್ಚಿಬೀಳುವ ಘಟನೆಯೊಂದು ನಡೆದಿತ್ತು. ಇಂದಿಗೆ ಆ ದಾಳಿ ನಡೆದು 13 ವರ್ಷ. ನಮ್ಮ ಸಂಸತ್ತಿನ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾಗ ಗುಂಡಿನ ಅಟ್ಟಹಾಸಕ್ಕೆ ಹೆದರದೆ, ಭಯೋತ್ಪಾದಕರ ಗುಂಡಿಗೆ ಎದೆಕೊಟ್ಟು ಹೋರಾಡಿದ ವೀರನೊಬ್ಬ ಗದಗ ಜಿಲ್ಲೆಯಲ್ಲಿದ್ದಾರೆ.

ಉಗ್ರರೊಂದಿಗೆ ಕಾಳಗ ನಡೆಸಿದ್ದ ನಿವೃತ್ತ ಸಿಆರ್‌ಪಿಎಫ್‌ ಯೋಧ ಶಿವಪುತ್ರಪ್ಪ..

ಗದಗ ತಾಲೂಕಿನ ಹೊಂಬಳ ಗ್ರಾಮದ ಶಿವಪುತ್ರಪ್ಪ ವೀರಯೋಧ. ಇವರು ಅಂದು ಉಗ್ರರೊಂದಿಗೆ ಹೋರಾಡಿ, 8ಕ್ಕೂ ಹೆಚ್ಚು ಉಗ್ರರನ್ನು ಸದೆ ಬಡಿದು, ಇಬ್ಬರನ್ನು ಜೀವಂತವಾಗಿ ವಶಕ್ಕೆ ಪಡೆದಿದ್ದರು. ಜತೆಗೆ ಶಿವಪುತ್ರಪ್ಪ ಮೈಯೊಳಗೆ 5 ಗುಂಡು ಹೊಕ್ಕಿದ್ದವು. 94 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ, ಬದುಕಿ ಬಂದ ಅಪ್ರತಿಮ ದೇಶ ಪ್ರೇಮಿ. ಇಷ್ಟೆಲ್ಲಾ ಸಾಧನೆ ಮಾಡಿದ್ರೂ ಸಹ ಅವರು ಎಲೆಮರೆಯ ಕಾಯಿಯಂತೆ ತಾವು ಮಾಡಿದ ಸಾಧನೆ ದೊಡ್ಡದಲ್ಲ ಎನ್ನುತ್ತಿದ್ದಾರೆ.

ಸಿಆರ್​ಪಿಎಫ್​ನಲ್ಲಿ ಯೋಧರಾಗಿ ಏಪ್ರಿಲ್‌ 17, 1984ರಲ್ಲಿ ತಮ್ಮ ಸೇವೆ ಪ್ರಾರಂಭಿಸಿದ್ದರು. ಕೇರಳ, ಪಂಜಾಬ್, ಜಮ್ಮು-ಕಾಶ್ಮೀರ, ದೆಹಲಿ, ನಾರ್ಥ್‌ ಈಸ್ಟ್ ಹಾಗೂ ಗುಜರಾತ್ ಸೇರಿ ಮುಂತಾದ ಸ್ಥಳಗಳಲ್ಲಿ 25 ವರ್ಷ 5 ತಿಂಗಳು 18 ದಿನಗಳ ಕಾಲ ದೇಶ ಸೇವೆ ಸಲ್ಲಿಸಿದ್ದಾರೆ.

2001ರ ಡಿಸೆಂಬರ್‌ 13ರಂದು ಉಗ್ರರು ಪಾರ್ಲಿಮೆಂಟ್ ಮೇಲೆ ದಾಳಿ ಮಾಡಲು ಮುಂದಾದ ವೇಳೆ ಶಿವಪುತ್ರಪ್ಪನವರು ದೆಹಲಿಯ ಪಾರ್ಲಿಮೆಂಟ್ ಬಳಿಯೇ ಕಾರ್ಯ ನಿರ್ವಹಿಸುತ್ತಿದ್ದರು. ಉಗ್ರರ ದಾಳಿಯ ಸಂದರ್ಭದಲ್ಲಿ ನಡೆದ ಘೋರ ಗುಂಡಿನ ದಾಳಿಯಲ್ಲಿ ಶಿವಪುತ್ರಪ್ಪ ಸತತ 12 ಗಂಟೆಗಳ ಕಾಲ ಉಗ್ರರೊಂದಿಗೆ ಗುಂಡಿನ ಕಾಳಗ ನಡೆಸಿದ್ದರು. ಈ ಸಂದರ್ಭದಲ್ಲಿ 10 ಸೈನಿಕರು ಹುತಾತ್ಮರಾದರು. 8 ಜನ ಉಗ್ರರನ್ನು ನಮ್ಮ ಸೈನಿಕ ಮಟ್ಟ ಹಾಕಿದ್ದರು.

ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಕೊಟ್ಟಿದ್ದರು. ಈ ವೇಳೆ ಸಾರ್ವಜನಿಕರು ಸೇರಿ ಒಟ್ಟು 17 ಜನರಿಗೆ ಗುಂಡುಗಳು ತಾಕಿತ್ತು ಎಂದು ತಮ್ಮ ಹೋರಾಟ ದಿನಗಳನ್ನು ಈಟಿವಿ ಭಾರತದೊಂದಿಗೆ ಮೆಲುಕು ಹಾಕಿದರು. ಇವರ ಅಪ್ರತಿಮ ಸಾಧನೆ ಧರ್ಮಪತ್ನಿ ಹಾಗೂ ಸ್ಥಳೀಯರು ಹೆಮ್ಮೆ ಪಡುತ್ತಿದ್ದಾರೆ. ನಿವೃತ್ತಿಯ ಈ ದಿನಗಳಲ್ಲೂ ಸಹ ಶಾಲಾ ಮಕ್ಕಳಿಗೆ ದೇಶಪ್ರೇಮದ ಪಾಠ ಮಾಡೋದು, ರಕ್ತದಾನ‌ ಮಾಡೋದು ಶಿವಪುತ್ರಪ್ಪ ಅವರ ಕಾಯಕ.

ಗದಗ: 2001ರ ಡಿಸೆಂಬರ್ 13 ರಂದು ದೇಶ ಬೆಚ್ಚಿಬೀಳುವ ಘಟನೆಯೊಂದು ನಡೆದಿತ್ತು. ಇಂದಿಗೆ ಆ ದಾಳಿ ನಡೆದು 13 ವರ್ಷ. ನಮ್ಮ ಸಂಸತ್ತಿನ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾಗ ಗುಂಡಿನ ಅಟ್ಟಹಾಸಕ್ಕೆ ಹೆದರದೆ, ಭಯೋತ್ಪಾದಕರ ಗುಂಡಿಗೆ ಎದೆಕೊಟ್ಟು ಹೋರಾಡಿದ ವೀರನೊಬ್ಬ ಗದಗ ಜಿಲ್ಲೆಯಲ್ಲಿದ್ದಾರೆ.

ಉಗ್ರರೊಂದಿಗೆ ಕಾಳಗ ನಡೆಸಿದ್ದ ನಿವೃತ್ತ ಸಿಆರ್‌ಪಿಎಫ್‌ ಯೋಧ ಶಿವಪುತ್ರಪ್ಪ..

ಗದಗ ತಾಲೂಕಿನ ಹೊಂಬಳ ಗ್ರಾಮದ ಶಿವಪುತ್ರಪ್ಪ ವೀರಯೋಧ. ಇವರು ಅಂದು ಉಗ್ರರೊಂದಿಗೆ ಹೋರಾಡಿ, 8ಕ್ಕೂ ಹೆಚ್ಚು ಉಗ್ರರನ್ನು ಸದೆ ಬಡಿದು, ಇಬ್ಬರನ್ನು ಜೀವಂತವಾಗಿ ವಶಕ್ಕೆ ಪಡೆದಿದ್ದರು. ಜತೆಗೆ ಶಿವಪುತ್ರಪ್ಪ ಮೈಯೊಳಗೆ 5 ಗುಂಡು ಹೊಕ್ಕಿದ್ದವು. 94 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ, ಬದುಕಿ ಬಂದ ಅಪ್ರತಿಮ ದೇಶ ಪ್ರೇಮಿ. ಇಷ್ಟೆಲ್ಲಾ ಸಾಧನೆ ಮಾಡಿದ್ರೂ ಸಹ ಅವರು ಎಲೆಮರೆಯ ಕಾಯಿಯಂತೆ ತಾವು ಮಾಡಿದ ಸಾಧನೆ ದೊಡ್ಡದಲ್ಲ ಎನ್ನುತ್ತಿದ್ದಾರೆ.

ಸಿಆರ್​ಪಿಎಫ್​ನಲ್ಲಿ ಯೋಧರಾಗಿ ಏಪ್ರಿಲ್‌ 17, 1984ರಲ್ಲಿ ತಮ್ಮ ಸೇವೆ ಪ್ರಾರಂಭಿಸಿದ್ದರು. ಕೇರಳ, ಪಂಜಾಬ್, ಜಮ್ಮು-ಕಾಶ್ಮೀರ, ದೆಹಲಿ, ನಾರ್ಥ್‌ ಈಸ್ಟ್ ಹಾಗೂ ಗುಜರಾತ್ ಸೇರಿ ಮುಂತಾದ ಸ್ಥಳಗಳಲ್ಲಿ 25 ವರ್ಷ 5 ತಿಂಗಳು 18 ದಿನಗಳ ಕಾಲ ದೇಶ ಸೇವೆ ಸಲ್ಲಿಸಿದ್ದಾರೆ.

2001ರ ಡಿಸೆಂಬರ್‌ 13ರಂದು ಉಗ್ರರು ಪಾರ್ಲಿಮೆಂಟ್ ಮೇಲೆ ದಾಳಿ ಮಾಡಲು ಮುಂದಾದ ವೇಳೆ ಶಿವಪುತ್ರಪ್ಪನವರು ದೆಹಲಿಯ ಪಾರ್ಲಿಮೆಂಟ್ ಬಳಿಯೇ ಕಾರ್ಯ ನಿರ್ವಹಿಸುತ್ತಿದ್ದರು. ಉಗ್ರರ ದಾಳಿಯ ಸಂದರ್ಭದಲ್ಲಿ ನಡೆದ ಘೋರ ಗುಂಡಿನ ದಾಳಿಯಲ್ಲಿ ಶಿವಪುತ್ರಪ್ಪ ಸತತ 12 ಗಂಟೆಗಳ ಕಾಲ ಉಗ್ರರೊಂದಿಗೆ ಗುಂಡಿನ ಕಾಳಗ ನಡೆಸಿದ್ದರು. ಈ ಸಂದರ್ಭದಲ್ಲಿ 10 ಸೈನಿಕರು ಹುತಾತ್ಮರಾದರು. 8 ಜನ ಉಗ್ರರನ್ನು ನಮ್ಮ ಸೈನಿಕ ಮಟ್ಟ ಹಾಕಿದ್ದರು.

ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಕೊಟ್ಟಿದ್ದರು. ಈ ವೇಳೆ ಸಾರ್ವಜನಿಕರು ಸೇರಿ ಒಟ್ಟು 17 ಜನರಿಗೆ ಗುಂಡುಗಳು ತಾಕಿತ್ತು ಎಂದು ತಮ್ಮ ಹೋರಾಟ ದಿನಗಳನ್ನು ಈಟಿವಿ ಭಾರತದೊಂದಿಗೆ ಮೆಲುಕು ಹಾಕಿದರು. ಇವರ ಅಪ್ರತಿಮ ಸಾಧನೆ ಧರ್ಮಪತ್ನಿ ಹಾಗೂ ಸ್ಥಳೀಯರು ಹೆಮ್ಮೆ ಪಡುತ್ತಿದ್ದಾರೆ. ನಿವೃತ್ತಿಯ ಈ ದಿನಗಳಲ್ಲೂ ಸಹ ಶಾಲಾ ಮಕ್ಕಳಿಗೆ ದೇಶಪ್ರೇಮದ ಪಾಠ ಮಾಡೋದು, ರಕ್ತದಾನ‌ ಮಾಡೋದು ಶಿವಪುತ್ರಪ್ಪ ಅವರ ಕಾಯಕ.

Intro:ಸಂಸತ್ ಮೇಲೆ ದಾಳಿಯಾಗಿ ಇಂದಿಗೆ ೧೮ ವರ್ಷ, ಅಂದು ೫ ಗುಂಡು ತಗುಲಿದ್ರೂ ೮ ಜನ ಭಯೋತ್ಪಾದಕರನ್ನು ಸದೆಬಡಿದಿದ್ದ ಗದಗ ಜಿಲ್ಲೆ ಯೋಧ. ೯೪ ದಿನ ಆಸ್ಪತ್ರೆಯಲ್ಲಿದ್ದು ಸಾವನ್ನು ಗೆದ್ದುಬಂದ ದೇಶಭಕ್ತ

ಆಂಕರ್-೨೦೦೧ ರ ಡಿಸೆಂಬರ್ ೧೩ ದೇಶವೇ ಬೆಚ್ಚಿಬೀಳುವಂತ ಘಟನೆ ನಡೆದೋಗಿತ್ತು. ಆ ಘಟನೆ‌ ನಡೆದು ಇಂದಿಗೆ ಸರಿಯಾಗಿ ೧೮ ವರ್ಷ ತುಂಬುತ್ತೆ. ಹೌದು ಅಂದು ನಮ್ಮ ಸಂಸತ್ತಿನ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ರು. ಅಂತಹ ಭಯೋತ್ಪಾದಕರ ಗುಂಡಿನ ಅಟ್ಟಹಾಸಕ್ಕೆ ಹೆದರದೆ, ಭಯೋತ್ಪಾದಕರ ಗುಂಡಿಗೆ ಎದೆಕೊಟ್ಟು ಹೋರಾಡಿದ ವೀರನೊಬ್ಬ ಗದಗ ಜಿಲ್ಲೆಯಲ್ಲಿದ್ದಾರೆ. ಅವರೇ ಗದಗ ತಾಲೂಕಿನ ಹೊಂಬಳ ಗ್ರಾಮದ ವೀರಯೋಧ ಶಿವಪುತ್ರಪ್ಪ. ಈ ಶಿವಪುತ್ರಪ್ಪ ಅಂದು ಉಗ್ರರೊಂದಿಗೆ ಹೋರಾಡಿ, 8 ಕ್ಕೂ ಹೆಚ್ಚು ಉಗ್ರರನ್ನು ಸದೆ ಬಡಿದು, ಇಬ್ಬರನ್ನು ಜೀವಂತವಾಗಿ ವಶಕ್ಕೆ ಪಡೆದು, ತಾವು 5 ಗುಂಡುಗಳನ್ನು ತಿಂದಿದ್ರು. 94 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ, ಬದುಕಿ ಬಂದ ಅಪ್ರತಿಮ ದೇಶ ಪ್ರೇಮಿ ಶಿವಪುತ್ರಪ್ಪ. ಇಷ್ಟೆಲ್ಲಾ ಸಾಧನೆ ಮಾಡಿದ್ರೂ ಸಹ ತಾವು ಎಲೆ ಮರೆಯ ಕಾಯಿಯಂತೆ ತಾವು ಮಾಡಿದ ಸಾಧನೆ ದೊಡ್ಡದಲ್ಲ ಎಂದು ಬದುಕುತ್ತಿದ್ದಾರೆ. ಸಿಆರ್.ಪಿ.ಎಪ್ ನಲ್ಲಿ ಯೋಧರಾಗಿ 17 ಏಪ್ರೀಲ್ 1984 ರಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಕೇರಳ, ಪಂಜಾಬ್, ಜಮ್ಮು ಕಾಶ್ಮೀರ, ದೆಹಲಿ, ನಾರ್ಥ್ ಈಸ್ಟ್, ಗುಜರಾತ್ ಮುಂತಾದ ಸ್ಥಳಗಳಲ್ಲಿ ಇವರು ಒಟ್ಟು 25 ವರ್ಷ 5 ತಿಂಗಳು 18 ದಿನಗಳ ಕಾಲ  ದೇಶಸೇವೆಯನ್ನು ಸಲ್ಲಿಸಿದರು. 2001 ರ ಡಿಸೆಂಬರ್ 13 ರಂದು ಉಗ್ರರು ಪಾರ್ಲಿಮೆಂಟ್ ಮೇಲೆ ದಾಳಿ ಮಾಡಲು ಮುಂದಾದ ವೇಳೆಯಲ್ಲಿ ಶಿವಪುತ್ರಪ್ಪ ದೆಹಲಿಯ ಪಾರ್ಲಿಮೆಂಟ್ ಬಳಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದರು. ಉಗ್ರರ ದಾಳಿಯ ಸಂದರ್ಭದಲ್ಲಿ ನಡೆದ ಘನಘೋರ ಗುಂಡಿನ ದಾಳಿಯಲ್ಲಿ ಶಿವಪುತ್ರಪ್ಪ ಸತತ 12 ಗಂಟೆಗಳ ಕಾಲ ಉಗ್ರರೊಂದಿಗೆ ಗುಂಡಿನ ಕಾಳಗ ನಡೆಸಿದ್ದರು. ಈ ಸಂದರ್ಭದಲ್ಲಿ 10 ಸೈನಿಕರು ಹುತಾತ್ಮರಾದರು. 8 ಜನ ಉಗ್ರರರನ್ನು ನಮ್ಮ ಸೈನಿಕ ಸೆದೆಬಡಿದಿದ್ದರು. ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಕೊಟ್ಟಿದ್ದರು. ಈ ವೇಳೆಯಲ್ಲಿ ಸಾರ್ವಜನಿಕರು ಸೇರಿದಂತೆ ಒಟ್ಟು 17 ಜನ್ರಿಗೆ ಗುಂಡುಗಳು ತಾಕಿತ್ತು ಎಂದು ತಮ್ಮ ಹೋರಾಟವನ್ನು ಮೆಲುಕು ಹಾಕುವ ವೇಳೆಯಲ್ಲಿ ಶಿವಪುತ್ರಪ್ಪ ಅವರ ಕಣ್ಣಂಚಲ್ಲಿ ನೀರಿತ್ತು. ಇನ್ನು ಇವರ ಈ ಅಪ್ರತಿಮ ಸಾಧನೆಗೆ ಇವರ ಧರ್ಮಪತ್ನಿಯೂ ಸಹ ಹೆಮ್ಮೆ ಪಡ್ತಾರೆ. ಇನ್ನು ನಿವೃತ್ತಿಯ ಈ ದಿನಗಳಲ್ಲೂ ಸಹ ಶಾಲಾ ಮಕ್ಕಳಿಗೆ ದೇಶಪ್ರೇಮದ ಪಾಠ ಮಾಡೋದು, ರಕ್ತದಾನ‌ ಮಾಡೋದು ಶಿವಪುತ್ರಪ್ಪ ಅವರ ಕಾಯಕವಾಗಿದೆ.Body:GConclusion:G
ETV Bharat Logo

Copyright © 2025 Ushodaya Enterprises Pvt. Ltd., All Rights Reserved.