ETV Bharat / state

'ಹೇಳ್ದೇ, ಕೇಳ್ದೇ ಹೆಸ್ಕಾಂನವರು ವಿದ್ಯುತ್‌ ಸಂಪರ್ಕ ಕಿತ್ಕೊಂಡ್ಹೋದರು.. ದುಡಿದು ಬದುಕ್ತೀವಂದರೂ ಬಿಡ್ತಿಲ್ವಲ್ಲ..' - ಮಾಜಿ ಸೈನಿಕ

ಮಾಜಿ ಸೈನಿಕನ ಜಮೀನಿನಲ್ಲಿ ಕೊರೆಸಿದ್ದ ಕೊಳವೆ ಬಾವಿಗೆ ಅಳವಡಿಸಿದ್ದ ವಿದ್ಯುತ್​ ಸಂಪರ್ಕವನ್ನು ಹೆಸ್ಕಾಂ ಅಧಿಕಾರಿಗಳು ಸೂಚನೆಯನ್ನು ನೀಡದೆ ವಿದ್ಯುತ್​ ಸಂಪರ್ಕ ಕತ್ತರಿಸಿ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನಲ್ಲಿ ನಡೆದಿದೆ. ಇದರ ವಿರುದ್ಧ ಮಾಜಿ ಸೈನಿಕ ಫಕೀರಪ್ಪ ಶಂಭುಲಿಂಗಪ್ಪ ಆಲೂರ ಧರಣಿ ನಡೆಸುತ್ತಿದ್ದಾರೆ

ಮಾಜಿ ಸೈನಿಕನ ಪ್ರತಿಭಟನೆ
author img

By

Published : Jun 18, 2019, 11:43 PM IST

ಗದಗ: ಕೊಳವೆ ಬಾವಿಗೆ ಪರವಾನಿಗೆ ನೀಡುವಂತೆ ಆಗ್ರಹಿಸಿ ಮಾಜಿ ಸೈನಿಕನೊಬ್ಬ ಧರಣಿ ನಡೆಸಿರುವ ಘಟನೆ ಗದಗದ ರೋಣ ತಾಲೂಕಿನಲ್ಲಿ ನಡೆದಿದೆ.

ಸೂಚನೆ ನೀಡದೆ ವಿದ್ಯುತ್​ ಸಂಪರ್ಕ ಕಿತ್ತ ಹೆಸ್ಕಾಂ

ರೋಣ ತಾಲೂಕಿನ ನರೇಗಲ್ ಪಟ್ಟಣದ ಜಕ್ಕಲಿ ರಸ್ತೆಯಲ್ಲಿರುವ ಹೆಸ್ಕಾಂ ಕಚೇರಿ ಬಳಿ ಈ ಘಟನೆ ನಡೆದಿದ್ದು, ಮಾಜಿ ಸೈನಿಕ ಫಕೀರಪ್ಪ ಶಂಭುಲಿಂಗಪ್ಪ ಆಲೂರ ಧರಣಿ ನಡೆಸುತ್ತಿದ್ದಾರೆ. ಸೈನ್ಯದಲ್ಲಿ ಸೇವಾವಧಿ ಪೂರ್ಣಗೊಂಡ ನಂತರ ನರೇಗಲ್ ಸರಹದ್ದಿನ ರೋಣ ರಸ್ತೆಗೆ ಹೊಂದಿಕೊಂಡಂತೆ 5 ಎಕರೆ ಜಮೀನನಲ್ಲಿ ಕೃಷಿ ಮಾಡಿ ಜೀವನ ನಡೆಸುತ್ತಿದ್ದಾರೆ.

2017ರಲ್ಲಿ ಹೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್‌ರಿಂದ ಪರವಾನಿಗೆ ಪಡೆದು ಅಕ್ರಮ ಸಕ್ರಮ ಯೋಜನೆಯಡಿ ಕೊಳವೆ ಬಾವಿಯನ್ನು ಕೊರೆಸಿದ್ದರು. ಸತತ ಬರಗಾಲದಿಂದಾಗಿ ಕೊಳವೆ ಬಾವಿ ಬತ್ತಿ ಹೋಗಿದೆ. ಈ ಕಾರಣದಿಂದಾಗಿ ಮತ್ತೊಂದು ಕೊಳವೆಯನ್ನು ಕೊರೆಯಿಸಿದ್ದೆ. ಸದರಿ ಬಾವಿಯಲ್ಲಿ 2.5 ಅಡಿ ನೀರು ಬಿದ್ದಿದೆ.

ಇನ್ನು ಮೊದಲಿನ ಕೊಳವೆ ಬಾವಿಗೆ ಬಳಕೆ ಮಾಡಿಕೊಂಡಿದ್ದ ವಿದ್ಯುತ್ ಸಂಪರ್ಕವನ್ನೇ ಈ ಕೊಳಬೆ ಬಾವಿ ಮೋಟಾರ್​ಗೂ ಬಳಕೆ ಮಾಡಿಕೊಂಡಿದ್ದೆ. ಆದರೆ, ಪಕ್ಕದ ತೋಟದ ವ್ಯಕ್ತಿ ಹೆಸ್ಕಾಂಗೆ ಈ ಬಗ್ಗೆ ದೂರನ್ನು ನೀಡಿದ್ದಾರೆ. ದೂರನ್ನು ಆಧರಿಸಿ ಬಂದ ಹೆಸ್ಕಾಂ ಅಧಿಕಾರಿಗಳು ನೋಟಿಸ್​ ನೀಡದೇ, ವಿಚಾರಣೆ ಮಾಡದೇ ನನ್ನ ತೋಟದಲ್ಲಿದ್ದ ಸರ್ವೀಸ್ ವೈಯರ್​ ಹಾಗೂ ಸ್ಟಾರ್ಟರ್​​​ ಮಷಿನ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಸದ್ಯ ತೋಟದಲ್ಲಿ ನಾಟಿ ಮಾಡಿರುವ ಕಬ್ಬಿಗೆ ತುರ್ತಾಗಿ ನೀರಿನ ಅವಶ್ಯಕತೆ ಇದೆ. ಹಾಗೆ ಕೃಷಿಯೊಂದಿಗೆ ನಡೆಸಿರುವ ಹೈನುಗಾರಿಕೆಯ 35 ಆಕಳುಗಳಿಗೆ ನೀರಿನ ಸಮಸ್ಯೆ ಉದ್ಭವಿಸಿದೆ. ಹಾಗೇ ಮೀನುಗಳಿಗೆ ನೀರಿನ ಅವಶ್ಯಕತೆ ಇದೆ ಎಂದು ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳ ಜೊತೆ ಮನವಿ ಮಾನಾಡಿದರೂ, ಪರವಾನಿಗೆ ನೀಡುತ್ತಿಲ್ಲ ಎಂದು ಮಾಜಿ ಸೈನಿಕ ಆರೋಪಿಸಿದರು.

ಗದಗ: ಕೊಳವೆ ಬಾವಿಗೆ ಪರವಾನಿಗೆ ನೀಡುವಂತೆ ಆಗ್ರಹಿಸಿ ಮಾಜಿ ಸೈನಿಕನೊಬ್ಬ ಧರಣಿ ನಡೆಸಿರುವ ಘಟನೆ ಗದಗದ ರೋಣ ತಾಲೂಕಿನಲ್ಲಿ ನಡೆದಿದೆ.

ಸೂಚನೆ ನೀಡದೆ ವಿದ್ಯುತ್​ ಸಂಪರ್ಕ ಕಿತ್ತ ಹೆಸ್ಕಾಂ

ರೋಣ ತಾಲೂಕಿನ ನರೇಗಲ್ ಪಟ್ಟಣದ ಜಕ್ಕಲಿ ರಸ್ತೆಯಲ್ಲಿರುವ ಹೆಸ್ಕಾಂ ಕಚೇರಿ ಬಳಿ ಈ ಘಟನೆ ನಡೆದಿದ್ದು, ಮಾಜಿ ಸೈನಿಕ ಫಕೀರಪ್ಪ ಶಂಭುಲಿಂಗಪ್ಪ ಆಲೂರ ಧರಣಿ ನಡೆಸುತ್ತಿದ್ದಾರೆ. ಸೈನ್ಯದಲ್ಲಿ ಸೇವಾವಧಿ ಪೂರ್ಣಗೊಂಡ ನಂತರ ನರೇಗಲ್ ಸರಹದ್ದಿನ ರೋಣ ರಸ್ತೆಗೆ ಹೊಂದಿಕೊಂಡಂತೆ 5 ಎಕರೆ ಜಮೀನನಲ್ಲಿ ಕೃಷಿ ಮಾಡಿ ಜೀವನ ನಡೆಸುತ್ತಿದ್ದಾರೆ.

2017ರಲ್ಲಿ ಹೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್‌ರಿಂದ ಪರವಾನಿಗೆ ಪಡೆದು ಅಕ್ರಮ ಸಕ್ರಮ ಯೋಜನೆಯಡಿ ಕೊಳವೆ ಬಾವಿಯನ್ನು ಕೊರೆಸಿದ್ದರು. ಸತತ ಬರಗಾಲದಿಂದಾಗಿ ಕೊಳವೆ ಬಾವಿ ಬತ್ತಿ ಹೋಗಿದೆ. ಈ ಕಾರಣದಿಂದಾಗಿ ಮತ್ತೊಂದು ಕೊಳವೆಯನ್ನು ಕೊರೆಯಿಸಿದ್ದೆ. ಸದರಿ ಬಾವಿಯಲ್ಲಿ 2.5 ಅಡಿ ನೀರು ಬಿದ್ದಿದೆ.

ಇನ್ನು ಮೊದಲಿನ ಕೊಳವೆ ಬಾವಿಗೆ ಬಳಕೆ ಮಾಡಿಕೊಂಡಿದ್ದ ವಿದ್ಯುತ್ ಸಂಪರ್ಕವನ್ನೇ ಈ ಕೊಳಬೆ ಬಾವಿ ಮೋಟಾರ್​ಗೂ ಬಳಕೆ ಮಾಡಿಕೊಂಡಿದ್ದೆ. ಆದರೆ, ಪಕ್ಕದ ತೋಟದ ವ್ಯಕ್ತಿ ಹೆಸ್ಕಾಂಗೆ ಈ ಬಗ್ಗೆ ದೂರನ್ನು ನೀಡಿದ್ದಾರೆ. ದೂರನ್ನು ಆಧರಿಸಿ ಬಂದ ಹೆಸ್ಕಾಂ ಅಧಿಕಾರಿಗಳು ನೋಟಿಸ್​ ನೀಡದೇ, ವಿಚಾರಣೆ ಮಾಡದೇ ನನ್ನ ತೋಟದಲ್ಲಿದ್ದ ಸರ್ವೀಸ್ ವೈಯರ್​ ಹಾಗೂ ಸ್ಟಾರ್ಟರ್​​​ ಮಷಿನ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಸದ್ಯ ತೋಟದಲ್ಲಿ ನಾಟಿ ಮಾಡಿರುವ ಕಬ್ಬಿಗೆ ತುರ್ತಾಗಿ ನೀರಿನ ಅವಶ್ಯಕತೆ ಇದೆ. ಹಾಗೆ ಕೃಷಿಯೊಂದಿಗೆ ನಡೆಸಿರುವ ಹೈನುಗಾರಿಕೆಯ 35 ಆಕಳುಗಳಿಗೆ ನೀರಿನ ಸಮಸ್ಯೆ ಉದ್ಭವಿಸಿದೆ. ಹಾಗೇ ಮೀನುಗಳಿಗೆ ನೀರಿನ ಅವಶ್ಯಕತೆ ಇದೆ ಎಂದು ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳ ಜೊತೆ ಮನವಿ ಮಾನಾಡಿದರೂ, ಪರವಾನಿಗೆ ನೀಡುತ್ತಿಲ್ಲ ಎಂದು ಮಾಜಿ ಸೈನಿಕ ಆರೋಪಿಸಿದರು.

Intro:
ಗದಗ: ಕೊಳವೆ ಬಾವಿಗೆ ಪರವಾನಿಗೆ ನೀಡುವಂತೆ ಆಗ್ರಹಿಸಿ ಮಾಜಿ ಸೈನಿಕನೊಬ್ಬ ಧರಣಿ ನಡೆಸುವ ಘಟನೆ ಗದಗನಲ್ಲಿ ನಡೆದಿದೆ. ರೋಣ ತಾಲೂಕಿನ ನರೆಗಲ್ ಪಟ್ಟಣದ ಜಕ್ಕಲಿ ರಸ್ತೆಯಲ್ಲಿ ಇರುವ ಹೆಸ್ಕಾಂ ಕಚೇರಿಯ ಆವರಣದಲ್ಲಿ ಮಾಜಿ ಸೈನಿಕ ಫಕೀರಪ್ಪ ಶಂಭುಲಿಂಗಪ್ಪ ಆಲೂರ ದರಣಿ ನಡೆಸುತ್ತಿದ್ದಾನೆ
ಸೈನ್ಯದಲ್ಲಿ ಸೇವಾವಧಿ ಪೂರ್ಣಗೊಂಡ ನಂತರ ನರೇಗಲ್ ಸರಹದ್ದಿನ ರೋಣ ರಸ್ತೆಗೆ 5 ಎಕರೆ ಜಮೀನನಲ್ಲಿ ಕೃಷಿಕನಾಗಿ ಜೀವನ ನಡೆಸುತ್ತಿದ್ದರು. 2017ರಲ್ಲಿ ಹೆಸ್ಕಾಂನ ಕಾರ್ಯನಿರ್ವಾಹ ಇಂಜಿನಿಯರನಿಂದ ಪರವಾನಿಗೆ ಪಡೆದು ಅಕ್ರಮ ಸಕ್ರಮ ಯೋಜನೆಯಡಿ ಕೊಳವೆ ಬಾವಿಯನ್ನು ಹೊಲದಲ್ಲಿ ಹಾಕಿಸಿದ್ದರು. ಸತತ ಬರಗಾಲದಿಂದಾಗಿ ಕೊಳವೆ ಬಾವಿಯಲ್ಲಿನ ನೀರು ಈಚಗೆ ಬತ್ತಿ ಹೋಗಿದೆ. ಆದರೆ ಕಾರಣ ಈ ಮೊದಲು ಇದ್ದ ಕೊಳವೆ ಬಾವಿಯ ದಕ್ಷಿಣಕ್ಕೆ ಸ್ವಲ್ಪ ದೂರ ಮತ್ತೊಂದು ಕೊಳವೆಯನ್ನು ಕೊರೆಯಿಸಿದ್ದೆ ಸದರಿ ಬಾವಿಯಲ್ಲಿ 2.5 ನೀರು ಬಿದ್ದಿದೆ. ಮೊದಲಿನ ಕೊಳವೆ ಬಾವಿಗೆ ಬಳಕೆ ಮಾಡಿಕೊಂಡಿದ್ದ ವಿದ್ಯುತ್ ಸಂಪರ್ಕವನ್ನೇ ಇದಕ್ಕೆ ಬಳಕೆ ಮಾಡಿಕೊಂಡಿದ್ದೇ ಆದರೆ ಪಕ್ಕದ ತೋಟದ ಖಾಸಗಿ ವ್ಯಕ್ತಿಯೋರ್ವರು ಹೆಸ್ಕಾಂಗೆ ಕೊಳವೆ ಬಾವಿ ಹಾಕಿಸಿರುವ ಕುರಿತು ದೂರನ್ನು ನೀಡಿದ್ದಾರೆ. ದೂರನ್ನು ಆಧರಿಸಿದ ಬಂದ ಹೆಸ್ಕಾಂ ಅಧಿಕಾರಿಗಳು ನೋಟಿಸು ನೀಡದೇ, ವಿಚಾರಣೆ ಮಾಡದೇ ನನ್ನ ತೋಟದಲ್ಲಿದ್ದ ಸರ್ವಿಸ್ ವೈಯರ ಹಾಗೂ ಸ್ಟಾಟರ ಮಷಿನ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿದರು. ತೋಟದಲ್ಲಿ ನಾಟಿ ಮಾಡಿರುವ ಕಬ್ಬಿಗೆ ತುರ್ತಾಗಿ ನೀರಿನ ಅವಶ್ಯಕತೆ ಇದೆ ಹಾಗೆ ಕೃಷಿಯೊಂದಿಗೆ ನಡೆಸಿರುವ ಹೈನುಗಾರಿಕೆಯ 35 ಆಕಳುಗಳಿಗೆ ನೀರಿನ ಸಮಸ್ಯೆ ಉದ್ಭವಿಸಿದೆ ಹಾಗೂ ಮೀನುಗಳಿಗೆ ನೀರಿನ ಅವಶ್ಯಕತೆ ಇದೆ ಎಂದು ಮೇ ತಿಂಗಳಿನಿಂದ ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳ ಕಚೇರಿಗೆ ಅಲೆದರು ಪರವಾನಿಗೆ ನೀಡುತ್ತಿಲ್ಲ. ಮಾಜಿ ಸೈನಿಕನೋರ್ವ ಮಾದರಿ ರೈತನಾಗಿ ಜೀವನ ನಡೆಸಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದರು.Body:GConclusion:G
ETV Bharat Logo

Copyright © 2025 Ushodaya Enterprises Pvt. Ltd., All Rights Reserved.