ETV Bharat / state

ಕೋಲ್ಕತ್ತಾದಲ್ಲಿ ಗದಗ್​ನ ​ಯೋಧ ಹುತಾತ್ಮ : ಹುಟ್ಟೂರಿಗೆ ನಾಳೆ ಪಾರ್ಥಿವ ಶರೀರ - undefined

ಜಮ್ಮುಕಾಶ್ಮೀರ, ಅಸ್ಸಾಂ, ರಾಜಸ್ಥಾನದಲ್ಲಿ ಸೇವೆ ಸಲ್ಲಿಸಿದ್ದ ಗದಗ್​ನ ಯೋಧ ಕುಮಾರಸ್ವಾಮಿ ನಾಗರಾಳ ಅವರು ನಿನ್ನೆ ಸಂಜೆ ನಿಧನರಾಗಿದ್ದಾರೆ.

ಯೋಧ ಕುಮಾರಸ್ವಾಮಿ ನಾಗರಾಳ ಸಾವು
author img

By

Published : Jul 19, 2019, 10:06 PM IST

ಗದಗ: ಕಳೆದ 16 ವರ್ಷಗಳಿಂದ ಬಿಎಸ್ಎಫ್​​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಗದಗ ನಗರದ ಇರಾನಿ ಕಾಲೋನಿ ನಿವಾಸಿ ಕುಮಾರಸ್ವಾಮಿ ನಾಗರಾಳ(36) ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ.

ಜಮ್ಮುಕಾಶ್ಮೀರ, ಆಸ್ಸಾಂ, ರಾಜಸ್ಥಾನದಲ್ಲಿ ಸೇವೆ ಸಲ್ಲಿಸಿದ್ದ ಇವರು ಸದ್ಯ ಕೋಲ್ಕತ್ತಾದಲ್ಲಿ ಹೆಡ್ ಕಾನಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ಸೋಮವಾರ ಮನೆಯಿಂದ ಕರ್ತವ್ಯಕ್ಕೆ ತೆರಳುವ ವೇಳೆ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ತಲೆಗೆ ಏಟಾಗಿತ್ತು. ಅವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಯೋಧ ಕುಮಾರಸ್ವಾಮಿ ನಾಗರಾಳ ಸಾವು

ಆದರೆ ಮಿಲಿಟರಿ ಆಸ್ಪತ್ರೆಯಲ್ಲಿ ಗುಣಮುಖವಾಗದ ಕಾರಣ ನಾಲ್ಕು ದಿನಗಳಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಸೇನಾ ಸಿಬ್ಬಂದಿ ಇವ್ರನ್ನ ದಾಖಲು ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಇವರ ಪಾರ್ಥಿವ ಶರೀರ ವಿಶೇಷ ವಿಮಾನದ ಮೂಲಕ ಬೆಂಗಳೂರು ಮಾರ್ಗವಾಗಿ ನಾಳೆ ಬೆಳಗಿನ ಜಾವ ನಾಲ್ಕು ಗಂಟೆಗೆ ಗದಗ ನಗರಕ್ಕೆ ಬರಲಿದೆ.

ಯೋಧ ಕುಮಾರಸ್ವಾಮಿಯವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಸಾಯಿಬಾಬಾ ಮಂದಿರದ ಬಳಿ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆ ನಾಲ್ಕು ಗಂಟೆಯಿಂದ ಎಂಟು ಗಂಟೆಯವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆಯಲು ಜಿಲ್ಲಾಡಳಿತದ ವತಿಯಿಂದ ಅವಕಾಶ ಕಲ್ಪಿಸಲಾಗಿದೆ.

ಗದಗ: ಕಳೆದ 16 ವರ್ಷಗಳಿಂದ ಬಿಎಸ್ಎಫ್​​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಗದಗ ನಗರದ ಇರಾನಿ ಕಾಲೋನಿ ನಿವಾಸಿ ಕುಮಾರಸ್ವಾಮಿ ನಾಗರಾಳ(36) ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ.

ಜಮ್ಮುಕಾಶ್ಮೀರ, ಆಸ್ಸಾಂ, ರಾಜಸ್ಥಾನದಲ್ಲಿ ಸೇವೆ ಸಲ್ಲಿಸಿದ್ದ ಇವರು ಸದ್ಯ ಕೋಲ್ಕತ್ತಾದಲ್ಲಿ ಹೆಡ್ ಕಾನಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ಸೋಮವಾರ ಮನೆಯಿಂದ ಕರ್ತವ್ಯಕ್ಕೆ ತೆರಳುವ ವೇಳೆ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ತಲೆಗೆ ಏಟಾಗಿತ್ತು. ಅವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಯೋಧ ಕುಮಾರಸ್ವಾಮಿ ನಾಗರಾಳ ಸಾವು

ಆದರೆ ಮಿಲಿಟರಿ ಆಸ್ಪತ್ರೆಯಲ್ಲಿ ಗುಣಮುಖವಾಗದ ಕಾರಣ ನಾಲ್ಕು ದಿನಗಳಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಸೇನಾ ಸಿಬ್ಬಂದಿ ಇವ್ರನ್ನ ದಾಖಲು ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಇವರ ಪಾರ್ಥಿವ ಶರೀರ ವಿಶೇಷ ವಿಮಾನದ ಮೂಲಕ ಬೆಂಗಳೂರು ಮಾರ್ಗವಾಗಿ ನಾಳೆ ಬೆಳಗಿನ ಜಾವ ನಾಲ್ಕು ಗಂಟೆಗೆ ಗದಗ ನಗರಕ್ಕೆ ಬರಲಿದೆ.

ಯೋಧ ಕುಮಾರಸ್ವಾಮಿಯವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಸಾಯಿಬಾಬಾ ಮಂದಿರದ ಬಳಿ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆ ನಾಲ್ಕು ಗಂಟೆಯಿಂದ ಎಂಟು ಗಂಟೆಯವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆಯಲು ಜಿಲ್ಲಾಡಳಿತದ ವತಿಯಿಂದ ಅವಕಾಶ ಕಲ್ಪಿಸಲಾಗಿದೆ.

Intro:
ಆ್ಯಂಕರ್- ಕಳೆದ 16 ವರ್ಷಗಳಿಂದ ಬಿಎಸ್ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಗದಗ ನಗರದ ಇರಾನಿ ಕಾಲೋನಿ ಮೂಲದ ಮೂವತ್ತಾರು ವಯಸ್ಸಿನ ಕುಮಾರಸ್ವಾಮಿ ನಾಗರಾಳ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ. ಜಮ್ಮುಕಾಶ್ಮೀರ, ಆಸ್ಸಾಂ, ರಾಜಸ್ಥಾನದಲ್ಲಿ ಸೇವೆ ಸಲ್ಲಿಸಿದ್ದ ಇವರು ಸದ್ಯ ಕೋಲ್ಕಾತ್ತಾದಲ್ಲಿ ಹೆಡ್ ಕಾನಸ್ಟೇಬಲ್ ಆಗಿ ಕಾರ್ಯ ನಿರ್ವಹಿಸ್ತಾಯಿದ್ರು. ಕಳೆದ ಸೋಮವಾರ ಮನೆಯಿಂದ ಕರ್ತವ್ಯಕ್ಕೆ ತೆರಳುವ ವೇಳೆ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ತಲೆಗೆ ಏಟಾಗಿ ಮಿಲಿಟರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ರೆ ಮಿಲಿಟರಿ ಆಸ್ಪತ್ರೆಯಲ್ಲಿ ಗುಣಮುಖವಾಗದ ಕಾರಣ ನಾಲ್ಕು ದಿನಗಳಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಸೇನಾ ಸಿಬ್ಬಂದಿ ಇವ್ರನ್ನ ದಾಖಲು ಮಾಡಿತ್ತು.ಆದ್ರೆ ವಿಧಿಯಾಟದ ಪರಿಣಾಮ ಆ ಚಿಕಿತ್ಸೆಯೂ ಕೂಡಾ ಫಲ ಕೊಡದೇ ನಿನ್ನೆ ಇಹಲೋಕಯಾತ್ರೆ ನಡೆಸಿದ್ದಾರೆ. ಇವರ ಪಾರ್ಥಿವ ಶರೀರ ವಿಶೇಷ ವಿಮಾನದ ಮೂಲಕ ಬೆಂಗಳೂರು ಮಾರ್ಗವಾಗಿ ನಾಳೆ ಬೆಳಗಿನ ಜಾವ ನಾಲ್ಕು ಗಂಟೆಗೆ ಗದಗ ನಗರಕ್ಕೆ ರವಾನೆಯಾಗಲಿದೆ.ಮೃತ ಯೋಧ ಕುಮಾರಸ್ವಾಮಿಯ ಅಕಾಲಿಕ ಮರಣಕ್ಕೆ ಪತ್ನಿ , ಓರ್ವ ಸಹೋದರಿ ಹಾಗೂ ಇರ್ವರು ಅಣ್ಣಂದಿರು ಹಾಗೂ ತಂದೆತಾಯಿಗಳು ಕಂಬನಿ ಮಿಡಿದಿದ್ದಾರೆ.ಇನ್ನೂ ಯೋಧ ಕುಮಾರಸ್ವಾಮಿಯವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಸಾಯಿಬಾಬಾ ಮಂದಿರದ ಬಳಿ ನಾಳೆ ಬೆಳಿಗ್ಗೆ ನಾಲ್ಕು ಗಂಟೆಯಿಂದ ಎಂಟು ಗಂಟೆಯವರೆಗೆ ಸಾರ್ವಜನಿಜಕರಿಗೆ ಜಿಲ್ಲಾಡಳಿತದ ವತಿಯಿಂದ ಅವಕಾಶ ಕಲ್ಪಿಸಲಾಗಿದೆ.

ಬೈಟ್-ಶ್ರೀಶೈಲ ನಾಗರಾಳ.ಯೋಧನ ಸಹೋದರ.Body:ಗದಗConclusion:ಗದಗ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.