ETV Bharat / state

ಇಷ್ಟು ಸಣ್ಣ ವಿಷಯಕ್ಕೆ ತಂದೆ-ಮಗನ ಮೇಲೆ ಚಾಕು ಇರಿತ..

author img

By

Published : Feb 3, 2020, 7:32 PM IST

ಪಂಚರ್ ಅಂಗಡಿಗೆ ಬಂದ ಇಬ್ಬರು ವ್ಯಕ್ತಿಗಳು ಪಂಚರ್​ ತೆಗೆದು ಕೊಡಲಿಲ್ಲ ಎಂದು ಅಂಗಡಿಯಲ್ಲಿದ್ದ ತಂದೆ ಹಾಗೂ ಮಗನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.

Unknown persons attacked a father and son at Hubli
ಕ್ಷುಲ್ಲಕ ಕಾರಣಕ್ಕೆ ತಂದೆ -ಮಗನ ಮೇಲೆ ಚಾಕು ಇರಿತ

ಹುಬ್ಬಳ್ಳಿ: ಯುವಕರ ಗುಂಪೊಂದು ಕ್ಷುಲಕ ಕಾರಣಕ್ಕೆ ತಂದೆ ಮತ್ತು ಮಗನ ಮೇಲೆ ಹಲ್ಲೆ ಮಾಡಿ ಪರಾರಿಯಾದ ಘಟನೆ ಮಂಟೂರ ರಸ್ತೆಯ ಕಸ್ತೂರ ಬಾ ನಗರದಲ್ಲಿ ನಡೆದಿದೆ.

ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ತಂದೆ ಹಾಗೂ ಮಗ..

ಫುಡ್​ ಇನ್‌ಸ್ಪೆಕ್ಟರ್​ ಎ ಎ ಕತಿಬ್ (48), ಇವರ ಮಗ ಸಯ್ಯದ್ ಮಹಮ್ಮದ್ ಅದ್ನಾನ್ (20) ಹಲ್ಲೆಗೊಳಗಾದವರು. ಇವರು ಪಂಚರ್ ಅಂಗಡಿ ನಡೆಸುತ್ತಿದ್ದಾರೆ. ನಿನ್ನೆ ಅಂಗಡಿಗೆ ಬಂದ ಫಸಲ್ ಪುಣೆವಾಲೆ, ಮೋಸಿನ್ ಥಾಸ್ ವಾಲೆ ಎಂಬುವರು ಪಂಚರ್​ ತೆಗೆದು ಕೊಡುವಂತೆ ಕೇಳಿದ್ದಾರೆ. ಆದರೆ, ಇಂದು ಅಂಗಡಿಗೆ ರಜೆ ಇದೆ. ಪಂಚರ್ ​ತೆಗೆಯುವುದಿಲ್ಲ ಎಂದಿದ್ದಾರೆ. ಇದಕ್ಕೆ ಕೋಪಗೊಂಡ ಅವರಿಬ್ಬರು, ಐದಾರು ಜನರನ್ನು ಕರೆದು ಸಯ್ಯದ್ ಮತ್ತು ಆತನ ಮಗನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.

ಹಲ್ಲೆಯಲ್ಲಿ ಸಯ್ಯದ್​​ ಮುಖ ಹಾಗೂ ಎಡ ಭಾಗದಲ್ಲಿ ಸಣ್ಣ ಪುಟ್ಟ ಗಾಯಗಳಾಗಿವೆ. ಕತಿಬ್​​ ಬೆನ್ನಿಗೆ, ಕೈ ಬೆರಳುಗಳು, ತಲೆಗೆ ಗಂಭೀರ ಗಾಯವಾಗಿವೆ. ಗಾಯಾಳುಗಳನ್ನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಕುರಿತು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹುಬ್ಬಳ್ಳಿ: ಯುವಕರ ಗುಂಪೊಂದು ಕ್ಷುಲಕ ಕಾರಣಕ್ಕೆ ತಂದೆ ಮತ್ತು ಮಗನ ಮೇಲೆ ಹಲ್ಲೆ ಮಾಡಿ ಪರಾರಿಯಾದ ಘಟನೆ ಮಂಟೂರ ರಸ್ತೆಯ ಕಸ್ತೂರ ಬಾ ನಗರದಲ್ಲಿ ನಡೆದಿದೆ.

ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ತಂದೆ ಹಾಗೂ ಮಗ..

ಫುಡ್​ ಇನ್‌ಸ್ಪೆಕ್ಟರ್​ ಎ ಎ ಕತಿಬ್ (48), ಇವರ ಮಗ ಸಯ್ಯದ್ ಮಹಮ್ಮದ್ ಅದ್ನಾನ್ (20) ಹಲ್ಲೆಗೊಳಗಾದವರು. ಇವರು ಪಂಚರ್ ಅಂಗಡಿ ನಡೆಸುತ್ತಿದ್ದಾರೆ. ನಿನ್ನೆ ಅಂಗಡಿಗೆ ಬಂದ ಫಸಲ್ ಪುಣೆವಾಲೆ, ಮೋಸಿನ್ ಥಾಸ್ ವಾಲೆ ಎಂಬುವರು ಪಂಚರ್​ ತೆಗೆದು ಕೊಡುವಂತೆ ಕೇಳಿದ್ದಾರೆ. ಆದರೆ, ಇಂದು ಅಂಗಡಿಗೆ ರಜೆ ಇದೆ. ಪಂಚರ್ ​ತೆಗೆಯುವುದಿಲ್ಲ ಎಂದಿದ್ದಾರೆ. ಇದಕ್ಕೆ ಕೋಪಗೊಂಡ ಅವರಿಬ್ಬರು, ಐದಾರು ಜನರನ್ನು ಕರೆದು ಸಯ್ಯದ್ ಮತ್ತು ಆತನ ಮಗನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.

ಹಲ್ಲೆಯಲ್ಲಿ ಸಯ್ಯದ್​​ ಮುಖ ಹಾಗೂ ಎಡ ಭಾಗದಲ್ಲಿ ಸಣ್ಣ ಪುಟ್ಟ ಗಾಯಗಳಾಗಿವೆ. ಕತಿಬ್​​ ಬೆನ್ನಿಗೆ, ಕೈ ಬೆರಳುಗಳು, ತಲೆಗೆ ಗಂಭೀರ ಗಾಯವಾಗಿವೆ. ಗಾಯಾಳುಗಳನ್ನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಕುರಿತು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:Hubli Body:ಸ್ಲಗ್ :- ಕ್ಷುಲ್ಲಕ ಕಾರಣಕ್ಕೆ ತಂದೆ ಮಗನ ಮೇಲೆ ಚಾಕು ಇರಿತ..


ಹುಬ್ಬಳ್ಳಿ:- ಯುವಕರ ಗುಂಪೊಂದು ಕ್ಷುಲಕ ಕಾರಣಕ್ಕೆ ತಂದೆ ಮತ್ತು ಮಗನ ಮೇಲೆ ಹಲ್ಲೇ ಮಾಡಿ ಚಾಕು ಹಾಕಿ ಪರಾರಿಯಾದ ಘಟನೆ ಇಲ್ಲಿನ ಮಂಟೂರ ರಸ್ತೆಯ ಕಸ್ತೂರ ಬಾ ನಗರದಲ್ಲಿ ನಡೆದಿದೆ.ಫುಡ್ ಇನ್ಸ್ಪೆಕ್ಟರ್ ಎ.ಎ.ಕತಿಬ್ (48), ಇವರ ಮಗ ಸಯ್ಯದ್ ಮಹಮ್ಮದ್ ಅದ್ನಾನ್ (20) ಗೆ ಹಲ್ಲೇಗೆ ಒಳಗಾದವರಾಗಿದ್ದು, ರವಿವಾರ ಸಂಜೆ ಮನೆಯ ಹತ್ತಿರದ ತಮ್ಮ ಪಂಚರ್ ಅಂಗಡಿಯಲ್ಲಿ ಸಯ್ಯದ್ ಮಹಮ್ಮದ್ ಇದ್ದಾಗ ಫಸಲ್ ಪುಣೆವಾಲೆ, ಮೋಸಿನ್ ಥಾಸ್ ವಾಲೆ ಬಂದು ಪಂಚರ್ ತೆಗೆದುಕೊಡುವಂತೆ ಹೇಳಿದ್ದಾರೆ. ಆಗ ರವಿವಾರ ಅಂಗಡಿಗೆ ರಜೆ ಪಂಚರ್ ತೆಗೆಯುವುದಿಲ್ಲ ಎಂದು ಹೇಳಿದಕ್ಕೆ ಇಬ್ಬರು ಸೇರಿಕೊಂಡು ಪಂಚರ್ ತೆಗೆಯುವುದಿಲ್ಲ ಎಂದು ಹೇಳುತ್ತೀಯಾ ಎಂದು ಸಯ್ಯದ್ ಮೇಲೆ ಹಲ್ಲೇ ಮಾಡಿದ್ದಾರೆ. ಆಗ ಮನೆಯಲ್ಲಿದ್ದ ಕುಟುಂಬಸ್ಥರು ಹೊರಗೆ ಬಂದಾಗ ಮತ್ತೆ 5-6 ಜನರನ್ನು ಕರೆಸಿಕೊಂಡು ಮನಬಂದಂತೆ ಥಳಿಸಿ ಎ.ಎ.ಕತಿಬ್ ಅವರಿಗೆ ಎ.ಎ.ಕತಿಬ್ ಗೆ ಬೆನ್ನಿಗೆ ಚಾಕು ಹಾಕಲಾಗಿದ್ದು, ಕೈಯ ಬೆರಳುಗಳು ಮತ್ತು ತಲೆಗೆ ಗಾಯಗಳಾಗಿವೆ. ಇನ್ನೂ ಸಯ್ಯದ್ ಗೆ ಮುಖದ ಮೇಲೆ ಎದೆಯ ಭಾಗಕ್ಕೆ ಚಾಕು ಇರಿದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಗಂಭೀರವಾಗಿ ಗಾಯಗೊಂಡ ಎ.ಎ.ಕತಿಬ್ ಅವರನ್ನು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಬೆಂಡಿಗೇರಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ತನಿಖೆ ಕೈಗೊಂಡಿದ್ದಾರೆ..

__________________


ಬೈಟ್:- ಎ.ಎ.ಕತಿಬ್( ಹಲ್ಲೆಗೊಳಗಾದವರು)

ಬೈಟ್:-ಸಯ್ಯದ್ ಅದ್ನಾನ್( ಹಲ್ಲೆಗೊಳಗಾದವರ ಮಗ)Conclusion:Yallappa kundagol
ETV Bharat Logo

Copyright © 2024 Ushodaya Enterprises Pvt. Ltd., All Rights Reserved.