ETV Bharat / state

ಧಾರವಾಡ ಜಿಲ್ಲೆಯಲ್ಲಿ ನಾಳೆ ಎರಡು ಫಲಿತಾಂಶ: ಯಾರಿಗೆ ವಿಜಯಮಾಲೆ?

author img

By

Published : May 22, 2019, 7:02 PM IST

ಬಿಜೆಪಿ ಮತ್ತು ಮೈತ್ರಿ ಸರ್ಕಾರಕ್ಕೆ ಪ್ರತಿಷ್ಠೆಯ ಕಣವಾಗಿರುವ ಕುಂದಗೋಳ ವಿಧಾನಸಭಾ ಉಪಚುನಾವಣೆ ಹಾಗೂ ಲೋಕಸಭೆಯ ಫಲಿತಾಂಶ ನಾಳೆ ಹೊರಬೀಳಲಿವೆ. ಇದೀಗ ಗೆಲುವು ಯಾರಿಗೆ ಎಂಬುದನ್ನು ಕಾತರದಿಂದ ಕಾಯುತ್ತಿದ್ದಾರೆ ಧಾರವಾಡ ಜಿಲ್ಲೆಯ ಜನರು.

ಲೋಕಸಭಾ, ವಿಧಾನಸಭಾ ಉಪಚುನಾವಣೆ ಫಲಿತಾಂಶ

ಹುಬ್ಬಳ್ಳಿ: ತೀವ್ರ ಕುತೂಲಹ ಕೆರಳಿಸಿರುವ ಧಾರವಾಡ ಲೋಕಸಭಾ ಕ್ಷೇತ್ರದ ಜೊತೆಗೇ ಕುಂದಗೋಳ ವಿಧಾನಸಭಾ ಕ್ಷೇತ್ರದ ಪಚುನಾವಣೆಯ ಫಲಿತಾಂಶವೂ ನಾಳೆ ಹೊರಬೀಳಲಿದೆ.

ಲೋಕಸಭಾ ಅಖಾಡದಲ್ಲಿ ಬಿಜೆಪಿ ಪ್ರಹ್ಲಾದ್​ ಜೋಶಿ ಮತ್ತು ಮೈತ್ರಿ ಅಭ್ಯರ್ಥಿ ವಿನಯ್​ ಕುಲಕರ್ಣಿ ಮಧ್ಯೆ ನೇರ ಹಣಾಹಣಿ ಇದೆ. ಇತ್ತ ಕುಂದಗೋಳ ವಿಧಾನಸಭೆಯ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ ನಡುವೆ ನೇರ ಪೈಪೋಟಿ ಇದ್ದು ಅಂತಿಮವಾಗಿ ಗೆಲುವು ಯಾರಿಗೆ ಅನ್ನುವ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ.

ಪ್ರತಿಷ್ಠೆಯ ಪ್ರಶ್ನೆ:

ಕುಂದಗೋಳದ ಗೆಲುವು ಕೇವಲ ಕುಸುಮಾ ಹಾಗೂ ಚಿಕ್ಕನಗೌಡರ ಅವರಿಗೆ ಮಾತ್ರವಲ್ಲದೆ ಮೈತ್ರಿ ಹಾಗೂ ಬಿಜೆಪಿ ಪಕ್ಷದ ಮುಖಂಡರಿಗೂ ಸಹ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಚುನಾವಣೆ ಘೋಷಣೆಯಾಗಿದ್ದ ದಿನದಿಂದ ಕುಂದಗೋಳದಲ್ಲಿ ಬೀಡು ಬಿಟ್ಟಿದ್ದ ಮೈತ್ರಿ ಹಾಗೂ ಕಮಲ ಪಡೆಯ ನಾಯಕರ ಶ್ರಮದ ಪ್ರತಿಫಲ ನಾಳೆ ಗೊತ್ತಾಗಲಿದೆ. ಈ ಕಾರಣದಿಂದಾಗಿಯೇ ಕ್ಷೇತ್ರವನ್ನು ಬಿಟ್ಟುಕೊಡಬಾರದು ಎಂಬ ಉದ್ದೇಶದಿಂದ ಪ್ರಚಾರಕ್ಕಾಗಿ ಪಕ್ಷದ ಪ್ರಭಾವಿ ನಾಯಕರ ದಂಡೇ ಕ್ಷೇತ್ರದೆಡೆಗೆ ಹರಿದು ಬಂದಿದ್ದರು.

ಅನುಕಂಪ ತೋರುತ್ತಾರಾ ಮತದಾರ ಪ್ರಭುಗಳು:

ಇತ್ತೀಚೆಗೆ ಸಚಿವ ಸಿ.ಎಸ್. ಶಿವಳ್ಳಿ ಅಕಾಲಿಕವಾಗಿ ಇಹಲೋಕ ತ್ಯಜಿಸಿದ್ದರು. ಇವರಿಂದ ತೆರವಾದ ಕ್ಷೇತ್ರಕ್ಕೆ ಮರುಚುನಾವಣೆ ಆಗಿದ್ದು, ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಮತದಾರರು ಅನುಕಂಪದಿಂದ ಮತ ನೀಡಿ ಗೆಲ್ಲಿಸುತ್ತಾರಾ ಅಥವಾ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 634 ಮತಗಳ ಅಂತರದಿಂದ ಪರಾಜಿತರಾಗಿದ್ದ, ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ ಅವರಿಗೆ ಜನರು ಜೈ ಅಂತಾರಾ ಅನ್ನೋದನ್ನು ಕಾದು ನೋಡಬೇಕಿದೆ.

ಲೋಕಸಭಾ ಸ್ಥಾನ ಅಲಂಕರಿಸುವವರು ಯಾರು:

ಇನ್ನು ಧಾರವಾಡ ಲೋಕಸಭಾ ಚುನಾವಣೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು. ನಾಳೆ ಪ್ರಕಟವಾಗಲಿರುವ ಫಲಿತಾಂಶ ಯಾರ ಪರ ಇರಲಿದೆ ಅನ್ನೋದನ್ನು ಧಾರವಾಡ ಜಿಲ್ಲೆಯ ಜನ ಕಾತರದಿಂದ ಎದುರು ನೋಡುತ್ತಿದ್ದಾರೆ.

ಹುಬ್ಬಳ್ಳಿ: ತೀವ್ರ ಕುತೂಲಹ ಕೆರಳಿಸಿರುವ ಧಾರವಾಡ ಲೋಕಸಭಾ ಕ್ಷೇತ್ರದ ಜೊತೆಗೇ ಕುಂದಗೋಳ ವಿಧಾನಸಭಾ ಕ್ಷೇತ್ರದ ಪಚುನಾವಣೆಯ ಫಲಿತಾಂಶವೂ ನಾಳೆ ಹೊರಬೀಳಲಿದೆ.

ಲೋಕಸಭಾ ಅಖಾಡದಲ್ಲಿ ಬಿಜೆಪಿ ಪ್ರಹ್ಲಾದ್​ ಜೋಶಿ ಮತ್ತು ಮೈತ್ರಿ ಅಭ್ಯರ್ಥಿ ವಿನಯ್​ ಕುಲಕರ್ಣಿ ಮಧ್ಯೆ ನೇರ ಹಣಾಹಣಿ ಇದೆ. ಇತ್ತ ಕುಂದಗೋಳ ವಿಧಾನಸಭೆಯ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ ನಡುವೆ ನೇರ ಪೈಪೋಟಿ ಇದ್ದು ಅಂತಿಮವಾಗಿ ಗೆಲುವು ಯಾರಿಗೆ ಅನ್ನುವ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ.

ಪ್ರತಿಷ್ಠೆಯ ಪ್ರಶ್ನೆ:

ಕುಂದಗೋಳದ ಗೆಲುವು ಕೇವಲ ಕುಸುಮಾ ಹಾಗೂ ಚಿಕ್ಕನಗೌಡರ ಅವರಿಗೆ ಮಾತ್ರವಲ್ಲದೆ ಮೈತ್ರಿ ಹಾಗೂ ಬಿಜೆಪಿ ಪಕ್ಷದ ಮುಖಂಡರಿಗೂ ಸಹ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಚುನಾವಣೆ ಘೋಷಣೆಯಾಗಿದ್ದ ದಿನದಿಂದ ಕುಂದಗೋಳದಲ್ಲಿ ಬೀಡು ಬಿಟ್ಟಿದ್ದ ಮೈತ್ರಿ ಹಾಗೂ ಕಮಲ ಪಡೆಯ ನಾಯಕರ ಶ್ರಮದ ಪ್ರತಿಫಲ ನಾಳೆ ಗೊತ್ತಾಗಲಿದೆ. ಈ ಕಾರಣದಿಂದಾಗಿಯೇ ಕ್ಷೇತ್ರವನ್ನು ಬಿಟ್ಟುಕೊಡಬಾರದು ಎಂಬ ಉದ್ದೇಶದಿಂದ ಪ್ರಚಾರಕ್ಕಾಗಿ ಪಕ್ಷದ ಪ್ರಭಾವಿ ನಾಯಕರ ದಂಡೇ ಕ್ಷೇತ್ರದೆಡೆಗೆ ಹರಿದು ಬಂದಿದ್ದರು.

ಅನುಕಂಪ ತೋರುತ್ತಾರಾ ಮತದಾರ ಪ್ರಭುಗಳು:

ಇತ್ತೀಚೆಗೆ ಸಚಿವ ಸಿ.ಎಸ್. ಶಿವಳ್ಳಿ ಅಕಾಲಿಕವಾಗಿ ಇಹಲೋಕ ತ್ಯಜಿಸಿದ್ದರು. ಇವರಿಂದ ತೆರವಾದ ಕ್ಷೇತ್ರಕ್ಕೆ ಮರುಚುನಾವಣೆ ಆಗಿದ್ದು, ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಮತದಾರರು ಅನುಕಂಪದಿಂದ ಮತ ನೀಡಿ ಗೆಲ್ಲಿಸುತ್ತಾರಾ ಅಥವಾ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 634 ಮತಗಳ ಅಂತರದಿಂದ ಪರಾಜಿತರಾಗಿದ್ದ, ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ ಅವರಿಗೆ ಜನರು ಜೈ ಅಂತಾರಾ ಅನ್ನೋದನ್ನು ಕಾದು ನೋಡಬೇಕಿದೆ.

ಲೋಕಸಭಾ ಸ್ಥಾನ ಅಲಂಕರಿಸುವವರು ಯಾರು:

ಇನ್ನು ಧಾರವಾಡ ಲೋಕಸಭಾ ಚುನಾವಣೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು. ನಾಳೆ ಪ್ರಕಟವಾಗಲಿರುವ ಫಲಿತಾಂಶ ಯಾರ ಪರ ಇರಲಿದೆ ಅನ್ನೋದನ್ನು ಧಾರವಾಡ ಜಿಲ್ಲೆಯ ಜನ ಕಾತರದಿಂದ ಎದುರು ನೋಡುತ್ತಿದ್ದಾರೆ.

Intro:*ನಾಳೆ ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆ ಫಲಿತಾಂಶ*

*ಯಾವರಿಗೆ ಕೈ, ಯಾರಿಗೆ ಕಮಲ*

ಹುಬ್ಬಳ್ಳಿ-02

ಬಹು ನಿರೀಕ್ಷೆಯನ್ನು ಹುಟ್ಟು ಹಾಕಿರುವ ಕುಂದಗೋಳ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಇನ್ನೇನು ನಾಳೆ ಹೊರಬೀಳಲಿದೆ. ಚುನಾವಣೆಯ ಫಲಿತಾಂಶದ ಕಾವು ಏರಿರುವದು ಕಂಡು ಬರುತ್ತಿದೆ. 
ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕುಸುಮಾ ಶಿವಳ್ಳಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಐ. ಚಿಕ್ಕನಗೌಡರ ಸ್ಪರ್ಧೆ ಎದುರಿಸಿದ್ದು,  ಚುನಾವಣೆ ಟಿಕೆಟ್ ಘೋಷಣೆಯಾದಾಗಿನಿಂದಲೂ ಇಬ್ಬರೂ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಮಾಡುವ  ಮೂಲಕ ಮತದಾರ ಪ್ರಭುಗಳ ಮನವೊಲಿಸುವ ಕೆಲಸ ಮಾಡಿದ್ದರು. 
ಅಲ್ಲದೇ ಪಕ್ಷದ ಮುಖಂಡರು ಸಹ ಕುಂದಗೋಳ ಪ್ರಚಾರದಲ್ಲಿ ಭಾಗಿಯಾಗುವ ಮೂಲಕ ಅಭ್ಯರ್ಥಿಗಳಿಗೆ ಬೆಂಬಲವಾಗಿ ನಿಂತು  ಚುನಾವಣೆ ಎದುರಿಸಿದ್ದಾರೆ. 
ಈಗ ಎಲ್ಲರ ದೃಷ್ಟಿ ಫಲಿತಾಂಶದ ಕಡೆಗೆ ಇದೆ. ಒಂದು ಕಡೆ ದಿ. ಸಿ.ಎಸ್. ಶಿವಳ್ಳಿ ಅಕಾಲಿಕ ನಿಧನದ ಅನುಕಂಪ ಕುಸುಮಾ ಅವರ ಗದ್ದುಗೆ ಏರಲು ಕಾರಣವಾಗುತ್ತಾ ಅಥವಾ ಮೋದಿ ಅಲೆಯಿಂದ ಚಿಕ್ಕನಗೌಡರ ಅವರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರಾ ಎಂಬ ಕುತೂಹಲ ಕ್ಷೇತ್ರದ ತುಂಬೆಲ್ಲಾ ಮನೆ ಮಾಡಿದೆ. 
 
*ಪ್ರತಿಷ್ಠೆಯ ಪ್ರಶ್ನೆ* : ಕುಂದಗೋಳ ಗೆಲುವು ಕೇವಲ ಕುಸುಮಾ ಹಾಗೂ ಚಿಕ್ಕನಗೌಡರ ಅವರಿಗೆ ಮಾತ್ರವಲ್ಲದೆ ಮೈತ್ರಿ ಹಾಗೂ ಬಿಜೆಪಿ ಪಕ್ಷದ ಮುಖಂಡರಿಗೂ ಸಹ  ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಚುನಾವಣೆ ಘೋಷಣೆಗೊಂಡ ಹಿನ್ನಲೆಯಲ್ಲಿ ಕುಂದಗೋಳದಲ್ಲಿ ಬಿಡು ಬಿಟ್ಟಿದ್ದ ಮೈತ್ರಿ ಹಾಗೂ ಕಮಲ ಪಡೆಯ ನಾಯಕರ ಶ್ರಮದ ಪ್ರತಿಫಲ ನಾಳೆ ಹೊರ ಬಿಳಲಿದೆ. ಈ ಕಾರಣದಿಂದಾಗಿಯೇ ಕ್ಷೇತ್ರವನ್ನು ಬಿಟ್ಟುಕೊಡಬಾರದು ಎಂಬ ಉದ್ದೇಶದಿಂದ ಪ್ರಚಾರಕ್ಕಾಗಿ ಪಕ್ಷದ  ಪ್ರಭಾವಿ ನಾಯಕರ ದಂಡೇ ಕ್ಷೇತ್ರದೆಡೆಗೆ ಹರಿದು ಬಂದು ಭರ್ಜರಿ ಪ್ರಚಾರ ಮಾಡಿರುವದು ಸಹ ಗಮನಾರ್ಹ ಸಂಗತಿಯಾಗಿದೆ. 
*ಭರ್ಜರಿ ಪ್ರಚಾರ ಯಾತ್ರೆ* : ಅಭ್ಯರ್ಥಿಗಳು ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೂ ತೆರಳುವ ಮೂಲಕ ಚುನಾವಣೆಗೆ ಭರ್ಜರಿ ಪ್ರಚಾರವನ್ನೇ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೆಲುವಿನ ನಿರೀಕ್ಷೆಯೂ ಹೆಚ್ಚಾಗಿಯೇ ಇದೆ. 
 
*ಅನುಕಂಪ ತೋರುತ್ತಾರಾ ಮತದಾರ ಪ್ರಭುಗಳು* ?:  ಇತ್ತೀಚೆಗೆ ಅಕಾಲಿಕ ನಿಧನಕ್ಕೊಳಗಾದ ಸಿ.ಎಸ್. ಶಿವಳ್ಳಿ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಮತದಾರ ಅನುಕಂಪದಿಂದ ಮತ ನೀಡಿ ಗೆಲ್ಲಿಸುತ್ತಾರಾ ಅಥವಾ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 634 ಮತಗಳ ಅಂತರದಿಂದ ಪರಾಜಿತಗೊಂಡಿದ್ದ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಅವರಿಗೆ ಜನರು ಅನುಕಂಪ ತೋರಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೇ ಗೆಲುವು ಯಾರ ತೆಕ್ಕೆಗೆ ಬೀಳಲಿದೆ ಎಂಬ ಪ್ರಶ್ನೆಗೆ ನಾಳೆ ತೆರೆ ಬೀಳಲಿದೆ. 
 
*ಲೋಕಸಭಾ ಸ್ಥಾನ ಅಲಂಕರಿಸುವವರು ಯಾರು* : ಧಾರವಾಡ ಲೋಕಸಭಾ ಚುನಾವಣೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟು ಹಲವಾರು ರೋಚಕ ಬದಲಾವಣೆಗಳ ಮೂಲಕ ಚುನಾವಣೆ ಏರ್ಪಟ್ಟಿದ್ದು, ನಾಳೆ ನಡೆಯಲಿರುವ ಫಲಿತಾಂಶದಿಂದ ಯಾವ ಹೂವು ಯಾರ ಮುಡಿಗೆ ಎಂಬುದೇ ಎಲ್ಲರ ಮುಂದಿರುವ ಯಕ್ಷ ಪ್ರಶ್ನೆಯಾಗಿದೆ. ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಹಾಗೂ ಬಿಜೆಪಿಯ ಘಟಾನುಘಟಿ ನಾಯಕರುಗಳಾದ ವಿನಯ ಕುಲಕರ್ಣಿ ಹಾಗೂ ಪ್ರಲ್ಹಾದ ಜೋಶಿ ಕಣದಲ್ಲಿದ್ದು,ಯಶಸ್ವಿಯಾಗಿ ಮತದಾನ ನಡೆದಿದೆ.ಅಲ್ಲದೇ ಇನ್ನೆನೂ ನಾಳೆ ನಡೆಯಲಿರುವ ಮತ ಏಣಿಕೆಯಲ್ಲಿ ಯಾರು ಜಯಶಾಲಿಯಾಗುವ ಮೂಲಕ ಧಾರವಾಡ ಲೋಕಸಭಾ ಸಂಸದರಾಗಿ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದೆ ಕಾದು ನೋಡಬೇಕಿರುವ ಸಂಗತಿಯಾಗಿದೆ.Body:Plz use Conclusion:Candidates photos

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.