ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರವೂ ಇಲ್ಲ ಬಾಬರಿ ಮಸೀದಿಯೂ ಇಲ್ಲ. ಇರುವುದು ಬಾವರಿ ಬೌದ್ಧ ವಿಹಾರ. ಈ ಹಿನ್ನೆಲೆ, ಇದನ್ನು ಬೌದ್ಧರಿಗೆ ನೀಡಬೇಕು ಎಂದು ಜೈ ಭೀಮ ಸಂಘಟನೆಯ ಮುಖಂಡ ಪೀತಾಂಬ್ರಪ್ಪ ಬಿಳ್ಳಾರ ಆಗ್ರಹಿಸಿದರು.
ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಯಾವುದೇ ರಾಮಮಂದಿರವಾಗಲಿ, ಬಾಬರಿ ಮಸೀದಿಯಾಗಲಿ ಇಲ್ಲ ಅಲ್ಲಿರುವುದು ಬಾವರಿ ಬೌದ್ದ ವಿಹಾರ. ಆದರೆ, ಸುಪ್ರೀಂಕೋರ್ಟ್ಗೆ ಸುಳ್ಳು ದಾಖಲೆಗಳನ್ನು ನೀಡಿ ವಾಸ್ತವ ಸ್ಥಿತಿಯನ್ನು ಮರೆಮಾಚಲಾಗುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಉತ್ಖನನದ ವೇಳೆಯಲ್ಲಿ ರಾಮಮಂದಿರ ಹಾಗೂ ಮಸೀದಿಗೆ ಸಂಬಂಧಿಸಿದ ಯಾವುದೇ ಅವಶೇಷಗಳು ಲಭ್ಯವಾಗಿಲ್ಲ. ಲಭ್ಯವಾಗಿರುವುದು ಬೌದ್ಧ ಧರ್ಮದ ಅವಶೇಷಗಳು ಹಾಗೂ ದಾಖಲೆಗಳು. ಈ ಹಿನ್ನೆಲೆಯಲ್ಲಿ ಕೂಡಲೇ ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಅಯೋಧ್ಯೆಯನ್ನ ಬೌದ್ಧ ಧರ್ಮಕ್ಕೆ ನೀಡಬೇಕು ಎಂದು ಅವರು ಆಗ್ರಹಿಸಿದರು.