ಹುಬ್ಬಳ್ಳಿ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಕೆಟ್ಟ ಆಡಳಿತ ನೀಡಿತ್ತು. ಅದಕ್ಕೆ ನಾಂದಿ ಹಾಡಲು ಅನರ್ಹ ಶಾಸಕರು ಸಮರ್ಥ ನಿರ್ಧಾರ ಕೈಗೊಂಡಿದ್ದಾರೆ. ಅವರು ಮಾಡಿದ ಕಾರ್ಯ ನಾಡನ್ನ ಕಾಪಾಡುವಂತದ್ದು. ಹೀಗಾಗಿ ಅವರಿಗೆ ನಾವು ಎಷ್ಟು ಮಾನ್ಯತೆ,ಗೌರವ ಸಲ್ಲಿಸಿದ್ರು ಸಾಲದು ಎಂದು ಡಿಸಿಎಂ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕೋರ್ಕಮಿಟಿ ಸಭೆಯಲ್ಲಿ ಅನರ್ಹ ಶಾಸಕರ ಬಗ್ಗೆ ಸಿಎಂ ಭಾವನಾತ್ಮಕವಾಗಿ ಮಾತನಾಡಿದ್ದಾರೆ ಎಂಬ ಸುದ್ದಿಯಿದೆ. ಆದರೆ,ಅದು ಅವರದ್ದೇ ಧ್ವನಿ ಎನ್ನುವುದೂ ಕೂಡ ಗೊತ್ತಿಲ್ಲ. ಇದಕ್ಕೆ ಹೆಚ್ಚಿನ ಮಾನ್ಯತೆ ಕೊಡೋದು ಬೇಡ ಎಂದರು.
ಸಿದ್ದರಾಮಯ್ಯ ಅವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಹಕ್ಕಿಲ್ಲ. ಅವರಿಂದ ನಾವು ಹೇಳಿಸಿಕೊಳ್ಳುಯವ ಅವಶ್ಯಕತೆ ಇಲ್ಲ. ಅವರು ತಮ್ಮ ಬೆನ್ನು ನೋಡಿಕೊಳ್ಳಲಿ. ಅವರ ಕಾಲದಲ್ಲಿ ಬರಗಾಲವಿತ್ತು. ಅವರು ಮೊದಲು ಬರಗಾಲದ ಅಂಕಿ ಅಂಶ ಕೊಡಲಿ. ಬರಗಾಲದ ಸಂದರ್ಭದಲ್ಲಿ ಅವರು ಪ್ರವಾಸವನ್ನೇ ಮಾಡಲಿಲ್ಲ. ವಿರೋಧ ಪಕ್ಷದಲ್ಲಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದರು.
ಪಠ್ಯಪುಸ್ತಕದಿಂದ ಟಿಪ್ಪುವನ್ನ ತಗೆದು ಹಾಕುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪು ಪಠ್ಯವನ್ನು ಸಂಪೂರ್ಣವಾಗಿ ತೆಗೆಯುವ ಬದಲು,ಅವರ ಮತಾಂಧತೆ,ಕ್ರೌರ್ಯದ ವಿಚಾರಗಳು ಜನರಿಗೆ ತಿಳಿಯುವಂತಾಗಬೇಕು. ಮಕ್ಕಳುಗಳು ಓದಬೇಕು ಎಂದರು.