ETV Bharat / state

ಗಾಂಧೀಜಿ ಒಬ್ಬರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ : ಬಿ ಎಲ್ ಸಂತೋಷ್​

ದೇಶದ ಮೂಲೆ ಮೂಲೆಗಳಲ್ಲಿ ಸ್ವಾತಂತ್ರ್ಯ ಹೋರಾಟ ರೂಪುಗೊಂಡಿತ್ತು. ಅನೇಕ ಮಹನೀಯರ ತ್ಯಾಗ-ಬಲಿದಾನದಿಂದ ಸ್ವಾತಂತ್ರ್ಯ ಲಭಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿದರು.

author img

By

Published : Oct 9, 2022, 8:27 PM IST

b l Santhosh
ಬಿ ಎಲ್ ಸಂತೋಷ

ಹುಬ್ಬಳ್ಳಿ : ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಗಾಂಧೀಜಿ ಒಬ್ಬರೇ ಅಲ್ಲ‌. ಅವರೊಬ್ಬರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ. ದೇಶದ ಮೂಲೆ ಮೂಲೆಗಳಲ್ಲಿ ಸ್ವಾತಂತ್ರ್ಯ ಹೋರಾಟ ರೂಪುಗೊಂಡಿತ್ತು. ಅನೇಕ ಮಹನೀಯರ ತ್ಯಾಗ-ಬಲಿದಾನದಿಂದ ಸ್ವಾತಂತ್ರ್ಯ ಲಭಿಸಿದೆ. ಆದರೆ ಕೆಲವು ಇತಿಹಾಸಕಾರರು ಸತ್ಯವನ್ನು ಹೇಳಲೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿದರು.

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವರಾಜ್​​ 75 ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನೇತಾಜಿ ಸುಭಾಷ್ ಚಂದ್ರ ಬೋಸ್ ಪುತ್ಥಳಿ ಸ್ಥಾಪಿಸಲು 2014 ಬರಬೇಕಾಯಿತು. ವಾಮ ಪಂಥೀಯರಿಂದಲೇ ಈ ದೇಶ ಹಾಳಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಸಾವರ್ಕರ್ ಕೊಡುಗೆ ನೆನಪಿಸದಿದ್ದರೆ ನರಕಕ್ಕೆ ಹೋಗ್ತೀರಾ ಎಂದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್

ಭಾರತ್ ಮಾತಾಕಿ, ವಂದೇ ಮಾತರಂ ಘೋಷಣೆ ಹಾಕಿದರೆ ಆರ್​ಎಸ್​ಎಸ್​ನವರು ಇದ್ದಾರೆ, ಸಭೆ ಮಾಡುತ್ತಿದ್ದಾರೆ ಅಂತಾರೆ. ಇದೊಂದು ವಿಕೃತಿ. ಆರ್​ಎಸ್​ಎಸ್​, ಎಬಿವಿಪಿ ಘೋಷಣೆಗಳ ಪೆಟೆಂಟ್ ತಗೊಂಡಿಲ್ಲ. ಗಾಂಧೀಜಿ ಹೋರಾಟದ ಬಗ್ಗೆ ನಮಗೆ ಶ್ರದ್ಧೆ ಇದೆ, ಅದರೆ ಉಳಿದವರನ್ನೂ ನಾವು ನೆನಪಿಟ್ಟುಕೊಳ್ಳಬೇಕು. ಎಡಪಂಥೀಯರಿಂದ ಈ ದೇಶಕ್ಕೆ ಆಗಿರುವ ಅನ್ಯಾಯ ಬೇರೆ ಯಾವ ದೇಶಕ್ಕೂ ಆಗಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಮೊಧೇರಾ ದೇಶದ ಮೊದಲ ಸೌರಶಕ್ತಿ ಗ್ರಾಮ: ನನ್ನ ಜಾತಿ ಲೆಕ್ಕಿಸದೆ ಗೆಲ್ಲಿಸಿದ್ದಾರೆ ಎಂದ ಪ್ರಧಾನಿ ಮೋದಿ

ಹುಬ್ಬಳ್ಳಿ : ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಗಾಂಧೀಜಿ ಒಬ್ಬರೇ ಅಲ್ಲ‌. ಅವರೊಬ್ಬರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ. ದೇಶದ ಮೂಲೆ ಮೂಲೆಗಳಲ್ಲಿ ಸ್ವಾತಂತ್ರ್ಯ ಹೋರಾಟ ರೂಪುಗೊಂಡಿತ್ತು. ಅನೇಕ ಮಹನೀಯರ ತ್ಯಾಗ-ಬಲಿದಾನದಿಂದ ಸ್ವಾತಂತ್ರ್ಯ ಲಭಿಸಿದೆ. ಆದರೆ ಕೆಲವು ಇತಿಹಾಸಕಾರರು ಸತ್ಯವನ್ನು ಹೇಳಲೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿದರು.

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವರಾಜ್​​ 75 ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನೇತಾಜಿ ಸುಭಾಷ್ ಚಂದ್ರ ಬೋಸ್ ಪುತ್ಥಳಿ ಸ್ಥಾಪಿಸಲು 2014 ಬರಬೇಕಾಯಿತು. ವಾಮ ಪಂಥೀಯರಿಂದಲೇ ಈ ದೇಶ ಹಾಳಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಸಾವರ್ಕರ್ ಕೊಡುಗೆ ನೆನಪಿಸದಿದ್ದರೆ ನರಕಕ್ಕೆ ಹೋಗ್ತೀರಾ ಎಂದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್

ಭಾರತ್ ಮಾತಾಕಿ, ವಂದೇ ಮಾತರಂ ಘೋಷಣೆ ಹಾಕಿದರೆ ಆರ್​ಎಸ್​ಎಸ್​ನವರು ಇದ್ದಾರೆ, ಸಭೆ ಮಾಡುತ್ತಿದ್ದಾರೆ ಅಂತಾರೆ. ಇದೊಂದು ವಿಕೃತಿ. ಆರ್​ಎಸ್​ಎಸ್​, ಎಬಿವಿಪಿ ಘೋಷಣೆಗಳ ಪೆಟೆಂಟ್ ತಗೊಂಡಿಲ್ಲ. ಗಾಂಧೀಜಿ ಹೋರಾಟದ ಬಗ್ಗೆ ನಮಗೆ ಶ್ರದ್ಧೆ ಇದೆ, ಅದರೆ ಉಳಿದವರನ್ನೂ ನಾವು ನೆನಪಿಟ್ಟುಕೊಳ್ಳಬೇಕು. ಎಡಪಂಥೀಯರಿಂದ ಈ ದೇಶಕ್ಕೆ ಆಗಿರುವ ಅನ್ಯಾಯ ಬೇರೆ ಯಾವ ದೇಶಕ್ಕೂ ಆಗಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಮೊಧೇರಾ ದೇಶದ ಮೊದಲ ಸೌರಶಕ್ತಿ ಗ್ರಾಮ: ನನ್ನ ಜಾತಿ ಲೆಕ್ಕಿಸದೆ ಗೆಲ್ಲಿಸಿದ್ದಾರೆ ಎಂದ ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.