ETV Bharat / state

ದತ್ತ ಪೀಠವನ್ನು ಹಿಂದೂಗಳಿಗೆ ಒಪ್ಪಿಸಲು ಆಗ್ರಹಿಸಿ ಶ್ರೀರಾಮಸೇನೆಯಿಂದ ಜಪ ಯಜ್ಞ: ಮುತಾಲಿಕ್​

author img

By

Published : Jul 2, 2020, 3:46 PM IST

ಕೊರೊನಾ ಮಹಾಮಾರಿಯಿಂದ ಮುಕ್ತಿ ಸಿಗಲು ಮತ್ತು ದತ್ತ ಪೀಠವನ್ನು ಹಿಂದೂಗಳಿಗೆ ಒಪ್ಪಿಸುವಂತೆ ಆಗ್ರಹಿಸಿ ಜಪ ಯಜ್ಞ ಮಾಡುವುದಾಗಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ತಿಳಿಸಿದ್ದಾರೆ.

Srirama Sena Chief Pramod Muthalik Press Meet
ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್​ ಮುತಾಲಿಕ್

ಹುಬ್ಬಳ್ಳಿ : ದತ್ತ ಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕೆಂದು ಆಗ್ರಹಿಸಿ ಜುಲೈ 5 ರಂದು ಗುರು ದೇವದತ್ತ ನಾಮದ ಒಂದು ಕೋಟಿ ಜಪ ಯಜ್ಞ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್​ ಮುತಾಲಿಕ್ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹರಡುತ್ತಿದೆ. ಈ ದಿಸೆಯಲ್ಲಿ ಎಲ್ಲರೂ ಮನೆಯಲ್ಲೇ ಇದ್ದುಕೊಂಡು ಕೊರೊನಾ ತಡೆಗೆ ಯಜ್ಞ ಮಾಡಿ ತಮ್ಮ ಆರೋಗ್ಯ ಹಾಗೂ ದೇಶದ ಆರೊಗ್ಯ ಕಾಪಾಡಬೇಕು ಎಂದು ಮನವಿ ಮಾಡಿದರು.

ದತ್ತ ಪೀಠದ ಕುರಿತು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್​ ಮುತಾಲಿಕ್ ಮಾಧ್ಯಮಗೋಷ್ಠಿ

ಕಳೆದ 22 ವರ್ಷಗಳಿಂದ ದತ್ತ ಪೀಠಕ್ಕಾಗಿ ಕಾನೂನು ಹೋರಾಟ ನಡೆಯುತ್ತಿದೆ.‌ ಈಗಾಗಲೇ ಕೋರ್ಟ್ ಹಿಂದೂಗಳ ಪರ ಆದೇಶ ನೀಡಿದ್ದರೂ ಅದನ್ನು ಪ್ರಶ್ನಿಸಿ ಸುಪ್ರೀಂ ಕೊರ್ಟ್​ಗೆ ಮೇಲ್ಮನವಿ ಸಲ್ಲಿಸಲಾಗಿದೆ.‌ ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಜಸ್ಟೀಸ್​ ನಾಗಮೋಹನ್ ದಾಸ್​ ವರದಿ ಸ್ವೀಕಾರ ಮಾಡಿದೆ. ಆದ್ರೆ, ಆ ವರದಿಯಿಂದ ಹಿಂದೂಗಳಿಗೆ ಅನ್ಯಾಯವಾಗಲಿದೆ.‌ ಹೀಗಾಗಿ ಬಿಜೆಪಿ ಸರ್ಕಾರ ಈ ವರದಿಯನ್ನು ಮರುಪರಿಶೀಲಿಸಿ ಹಿಂದೂಗಳಿಗೆ ದತ್ತ ಪೀಠವನ್ನು ಒಪ್ಪಿಸಿ ಸುಗ್ರೀವಾಜ್ಞೆ ಹೊರಡಿಸಬೇಕು ಆಗ್ರಹಿಸಿ ಯಜ್ಞದ ಮೂಲಕ ಸರ್ಕಾರಕ್ಕೆ ಒತ್ತಡ ಹಾಕಲಾಗುತ್ತಿದೆ ಎಂದರು.

ಕೊರೊನಾ ತಡೆಗೆ ಆಯುರ್ವೇದದಲ್ಲಿ ಸಂಶೋಧನೆಯಾಗುತ್ತಿದೆ. ಗಿರಿಧರ ಕಜೆ ಹಾಗೂ ಪತಂಜಲಿಯವರು ಕಂಡು ಹಿಡಿದಿರುವ ಔಷಧಿಗಳನ್ನು‌ ಸರ್ಕಾರ ಅಂಗೀಕರಿಸಬೇಕು ಎಂದು ಮುತಾಲಿಕ್​ ಇದೇ ವೇಳೆ ಒತ್ತಾಯಿಸಿದರು.

ಹುಬ್ಬಳ್ಳಿ : ದತ್ತ ಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕೆಂದು ಆಗ್ರಹಿಸಿ ಜುಲೈ 5 ರಂದು ಗುರು ದೇವದತ್ತ ನಾಮದ ಒಂದು ಕೋಟಿ ಜಪ ಯಜ್ಞ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್​ ಮುತಾಲಿಕ್ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹರಡುತ್ತಿದೆ. ಈ ದಿಸೆಯಲ್ಲಿ ಎಲ್ಲರೂ ಮನೆಯಲ್ಲೇ ಇದ್ದುಕೊಂಡು ಕೊರೊನಾ ತಡೆಗೆ ಯಜ್ಞ ಮಾಡಿ ತಮ್ಮ ಆರೋಗ್ಯ ಹಾಗೂ ದೇಶದ ಆರೊಗ್ಯ ಕಾಪಾಡಬೇಕು ಎಂದು ಮನವಿ ಮಾಡಿದರು.

ದತ್ತ ಪೀಠದ ಕುರಿತು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್​ ಮುತಾಲಿಕ್ ಮಾಧ್ಯಮಗೋಷ್ಠಿ

ಕಳೆದ 22 ವರ್ಷಗಳಿಂದ ದತ್ತ ಪೀಠಕ್ಕಾಗಿ ಕಾನೂನು ಹೋರಾಟ ನಡೆಯುತ್ತಿದೆ.‌ ಈಗಾಗಲೇ ಕೋರ್ಟ್ ಹಿಂದೂಗಳ ಪರ ಆದೇಶ ನೀಡಿದ್ದರೂ ಅದನ್ನು ಪ್ರಶ್ನಿಸಿ ಸುಪ್ರೀಂ ಕೊರ್ಟ್​ಗೆ ಮೇಲ್ಮನವಿ ಸಲ್ಲಿಸಲಾಗಿದೆ.‌ ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಜಸ್ಟೀಸ್​ ನಾಗಮೋಹನ್ ದಾಸ್​ ವರದಿ ಸ್ವೀಕಾರ ಮಾಡಿದೆ. ಆದ್ರೆ, ಆ ವರದಿಯಿಂದ ಹಿಂದೂಗಳಿಗೆ ಅನ್ಯಾಯವಾಗಲಿದೆ.‌ ಹೀಗಾಗಿ ಬಿಜೆಪಿ ಸರ್ಕಾರ ಈ ವರದಿಯನ್ನು ಮರುಪರಿಶೀಲಿಸಿ ಹಿಂದೂಗಳಿಗೆ ದತ್ತ ಪೀಠವನ್ನು ಒಪ್ಪಿಸಿ ಸುಗ್ರೀವಾಜ್ಞೆ ಹೊರಡಿಸಬೇಕು ಆಗ್ರಹಿಸಿ ಯಜ್ಞದ ಮೂಲಕ ಸರ್ಕಾರಕ್ಕೆ ಒತ್ತಡ ಹಾಕಲಾಗುತ್ತಿದೆ ಎಂದರು.

ಕೊರೊನಾ ತಡೆಗೆ ಆಯುರ್ವೇದದಲ್ಲಿ ಸಂಶೋಧನೆಯಾಗುತ್ತಿದೆ. ಗಿರಿಧರ ಕಜೆ ಹಾಗೂ ಪತಂಜಲಿಯವರು ಕಂಡು ಹಿಡಿದಿರುವ ಔಷಧಿಗಳನ್ನು‌ ಸರ್ಕಾರ ಅಂಗೀಕರಿಸಬೇಕು ಎಂದು ಮುತಾಲಿಕ್​ ಇದೇ ವೇಳೆ ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.