ETV Bharat / state

ಮಳೆಗೆ ಕೊಚ್ಚಿ ಹೋದ ರಸ್ತೆಗಳು: ದುರಸ್ತಿಗೆ ಮುಂದಾಗದ ಅಧಿಕಾರಿಗಳ ವಿರುದ್ಧ ಆಕ್ರೋಶ

ಉತ್ತರ ಕರ್ನಾಟಕದಲ್ಲಿ ಮಳೆರಾಯನ ಆರ್ಭಟಕ್ಕೆ ಜನ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಮಳೆಯಿಂದ ಜಿಲ್ಲೆಯ ಹಲವು ಸೇತುವೆಗಳು ಕೊಚ್ಚಿ ಹೋಗಿದ್ದು, ರಸ್ತೆಗಳು ಸಂಪೂರ್ಣ ಹಾಳಾಗಿ ಜನಸಂಪರ್ಕವೇ ಇಲ್ಲದಂತಾಗಿದೆ.

author img

By

Published : Aug 18, 2019, 3:32 AM IST

Hubli district

ಹುಬ್ಬಳ್ಳಿ : ಭಾರೀ ಮಳೆ ಮತ್ತು ಪ್ರವಾಹದ ಪರಿಣಾಮ ಜಿಲ್ಲೆಯ ಹಲವು ಸೇತುವೆಗಳು ಕೊಚ್ಚಿ ಹೋಗಿದ್ದು, ರಸ್ತೆಗಳು ಸಂಪೂರ್ಣ ಹಾಳಾಗಿ ಜನಸಂಪರ್ಕವೇ ಇಲ್ಲದಂತಾಗಿದೆ. ಇಷ್ಟಾದರೂ ದುರಸ್ತಿ ಮಾಡಲು ಅಧಿಕಾರಿಗಳಾಗಲಿ, ಜನಪ್ರತಿನಿಧಿಯಾಗಲಿ ಇತ್ತ ಸುಳಿಯುತ್ತಿಲ್ಲ ಎಂಬುದು ಇಲ್ಲಿನ ಗ್ರಾಮಸ್ಥರ ಆರೋಪವಾಗಿದೆ.

ಮಳೆಯಿಂದ ಸೇತುವೆ, ರಸ್ತೆಗಳು ಹಾಳಾಗಿರುವುದು

ನವಲಗುಂದ ತಾಲೂಕಿನ ಶಿರಕೋಳ ಹನಸಿ ಗ್ರಾಮದ ನಡುವಿನ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿ ಹತ್ತು ದಿನಗಳೆ ಕಳೆದಿದೆ. ಆದರೆ ಈ ಬಗ್ಗೆ ಯಾರು ಕ್ಯಾರೆ ಅನ್ನುತಿಲ್ಲ.
ರೈತರು ಮತ್ತು ಸಾರ್ವಜನಿಕರು ಜಮೀನುಗಳಿಗೆ, ಬೇರೆ ಗ್ರಾಮಕ್ಕೆ ತೆರಳಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಶಿರಕೋಳ ಹನಸಿ ನಡುವೆ 2 ಕಿಲೋ ಮೀಟರ್ ರಸ್ತೆ ಕೊಚ್ಚಿಕೊಂಡು ಹೋಗಿದ್ದು, ಇದರಿಂದ 22 ಕಿಲೋಮೀಟರ್ ನಷ್ಟು ಸುತ್ತಿಕೊಂಡು ಗ್ರಾಮಕ್ಕೆ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳ ಪರದಾಟ:
ರಸ್ತೆ ಕೊಚ್ಚಿಕೊಂಡು ಹೋಗಿರುವುದರಿಂದ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಹೋಗದ ಪರಿಸ್ಥಿತಿ ಬಂದೊದಗಿದೆ. ಹಲವು ದಿನಗಳಿಂದ ಶಾಲಾ ಕಾಲೇಜುಗಳಿಗೆ ಹೋಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಈ ಕುರಿತಂತೆ ಅಧಿಕಾರಿಗಳಿಗೆ ಮನವಿ ಮಾಡಿದರು ಏನು ಪ್ರಯೋಜನವಾಗಿಲ್ಲ.

ಇನ್ನು ಜಮೀನುಗಳ ಕೆಲಸ ಸಂಪೂರ್ಣ ನಿಂತಿದ್ದು, ಯಾವುದೇ ರೀತಿಯ ಕೃಷಿ ಚಟುವಟಿಗಳಿಗೆ ಅವಕಾಶವಿಲ್ಲದಂತಾಗಿದೆ‌. ಮೊದಲೇ ಕಳೆ ತುಂಬಿ ಇಡೀ ಬೆಳೆಗಳು ಹಾಳಾಗುತಿದ್ದು, ರೈತಾಪಿ ಜನರು ತಲೆ ಮೇಲೆ ಕೈ ಹೊತ್ತುಕೊಂಡು ಕೂತಿದ್ದಾರೆ. ತಾಲೂಕಿನ ಸುಮಾರು 7 ಸೇತುವೆಗಳು ಸಂಪೂರ್ಣ ಕೊಚ್ಚಿ ಹೋಗಿದ್ದು, ಯಾವುದೇ ರೀತಿಯ ಕೆಲಸ ಕಾರ್ಯಗಳಿಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ಅವಾಂತರ ಸೃಷ್ಟಿಯಾದ್ರೂ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳು ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೋರಾಟದ ಹಾದಿ ಹಿಡಿಯಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿ : ಭಾರೀ ಮಳೆ ಮತ್ತು ಪ್ರವಾಹದ ಪರಿಣಾಮ ಜಿಲ್ಲೆಯ ಹಲವು ಸೇತುವೆಗಳು ಕೊಚ್ಚಿ ಹೋಗಿದ್ದು, ರಸ್ತೆಗಳು ಸಂಪೂರ್ಣ ಹಾಳಾಗಿ ಜನಸಂಪರ್ಕವೇ ಇಲ್ಲದಂತಾಗಿದೆ. ಇಷ್ಟಾದರೂ ದುರಸ್ತಿ ಮಾಡಲು ಅಧಿಕಾರಿಗಳಾಗಲಿ, ಜನಪ್ರತಿನಿಧಿಯಾಗಲಿ ಇತ್ತ ಸುಳಿಯುತ್ತಿಲ್ಲ ಎಂಬುದು ಇಲ್ಲಿನ ಗ್ರಾಮಸ್ಥರ ಆರೋಪವಾಗಿದೆ.

ಮಳೆಯಿಂದ ಸೇತುವೆ, ರಸ್ತೆಗಳು ಹಾಳಾಗಿರುವುದು

ನವಲಗುಂದ ತಾಲೂಕಿನ ಶಿರಕೋಳ ಹನಸಿ ಗ್ರಾಮದ ನಡುವಿನ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿ ಹತ್ತು ದಿನಗಳೆ ಕಳೆದಿದೆ. ಆದರೆ ಈ ಬಗ್ಗೆ ಯಾರು ಕ್ಯಾರೆ ಅನ್ನುತಿಲ್ಲ.
ರೈತರು ಮತ್ತು ಸಾರ್ವಜನಿಕರು ಜಮೀನುಗಳಿಗೆ, ಬೇರೆ ಗ್ರಾಮಕ್ಕೆ ತೆರಳಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಶಿರಕೋಳ ಹನಸಿ ನಡುವೆ 2 ಕಿಲೋ ಮೀಟರ್ ರಸ್ತೆ ಕೊಚ್ಚಿಕೊಂಡು ಹೋಗಿದ್ದು, ಇದರಿಂದ 22 ಕಿಲೋಮೀಟರ್ ನಷ್ಟು ಸುತ್ತಿಕೊಂಡು ಗ್ರಾಮಕ್ಕೆ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳ ಪರದಾಟ:
ರಸ್ತೆ ಕೊಚ್ಚಿಕೊಂಡು ಹೋಗಿರುವುದರಿಂದ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಹೋಗದ ಪರಿಸ್ಥಿತಿ ಬಂದೊದಗಿದೆ. ಹಲವು ದಿನಗಳಿಂದ ಶಾಲಾ ಕಾಲೇಜುಗಳಿಗೆ ಹೋಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಈ ಕುರಿತಂತೆ ಅಧಿಕಾರಿಗಳಿಗೆ ಮನವಿ ಮಾಡಿದರು ಏನು ಪ್ರಯೋಜನವಾಗಿಲ್ಲ.

ಇನ್ನು ಜಮೀನುಗಳ ಕೆಲಸ ಸಂಪೂರ್ಣ ನಿಂತಿದ್ದು, ಯಾವುದೇ ರೀತಿಯ ಕೃಷಿ ಚಟುವಟಿಗಳಿಗೆ ಅವಕಾಶವಿಲ್ಲದಂತಾಗಿದೆ‌. ಮೊದಲೇ ಕಳೆ ತುಂಬಿ ಇಡೀ ಬೆಳೆಗಳು ಹಾಳಾಗುತಿದ್ದು, ರೈತಾಪಿ ಜನರು ತಲೆ ಮೇಲೆ ಕೈ ಹೊತ್ತುಕೊಂಡು ಕೂತಿದ್ದಾರೆ. ತಾಲೂಕಿನ ಸುಮಾರು 7 ಸೇತುವೆಗಳು ಸಂಪೂರ್ಣ ಕೊಚ್ಚಿ ಹೋಗಿದ್ದು, ಯಾವುದೇ ರೀತಿಯ ಕೆಲಸ ಕಾರ್ಯಗಳಿಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ಅವಾಂತರ ಸೃಷ್ಟಿಯಾದ್ರೂ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳು ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೋರಾಟದ ಹಾದಿ ಹಿಡಿಯಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

Intro:ಹುಬ್ಬಳಿBody:ಸ್ಲಗ್: ಮಳೆಯ ಅವಾಂತರ ಗ್ರಾಮಕ್ಕಿಲ್ಲ ರಸ್ತೆ


ಹುಬ್ಬಳ್ಳಿ:- ಭಾರೀ ಮಳೆ ಮತ್ತು ಪ್ರವಾಹದ ಪರಿಣಾಮ ಜಿಲ್ಲೆಯಲ್ಲಿರುವ ಹಲವು ಸೇತುವೆಗಳು ಕೊಚ್ಚಿಹೋಗಿದ್ದು ರಸ್ತೆಗಳು ಸಂಪೂರ್ಣ ಹಾಳಾಗಿ ಜನಸಂಪರ್ಕವೇ ಇಲ್ಲದಂತಾಗಿದ್ದು ಇಷ್ಟೊಂದು ಹದಗೆಟ್ಟಿದ್ದರಯ ರಸ್ತೆ ದುರಸ್ತಿ ಮಾಡಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದೆ ಬರದೇ ಬೇಜವಾಬ್ದಾರಿ ತನ ತೋರಿಸುತ್ತಿದ್ದಾರೆ......
ನವಲಗುಂದ ತಾಲೂಕಿನ ಶಿರಕೋಳ ಹನಸಿ ಗ್ರಾಮದ ನಡುವಿನ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿ ಹತ್ತು ದಿನಗಳೆ ಕಳೆದರು ಈ ಬಗ್ಗೆ ಯಾರು ಕ್ಯಾರೆ ಅನ್ನುತಿಲ್ಲ.
ರೈತರು ಮತ್ತು ಸಾರ್ವಜನಿಕರು ಜಮೀನುಗಳಿಗೆ ಇನ್ನೊಂದು ಗ್ರಾಮಕ್ಕೆ ತೆರಳಲು ಬಾರದ ಸ್ಥಿತಿ ನಿರ್ಮಾಣವಾಗಿದೆ.
ಶಿರಕೋಳ ಹನಸಿ ನಡುವೆ 2 ಕಿಲೋಮೀಟರ್ ರಸ್ತೆ ಕೊಚ್ಚಿಕೊಂಡು ಹೋಗಿದ್ದು ಇದರಿಂದ 22 ಕಿಲೋಮೀಟರ್ ನಷ್ಟು ಸುತ್ತಿಕೊಂಡು ಗ್ರಾಮಕ್ಕೆ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ಕೊಚ್ಚಿಕೊಂಡು ಹೋಗಿದ್ದರಿಂದ ಶಾಲಾ ವಿದ್ಯಾರ್ಥಿಗಳು ಶಾಲಾ ಕಾಲೇಜು ವಿದ್ಯಾರ್ಥಿಗಳು ಶಾಲೆಗೆ ಮತ್ತು ಕಾಲೇಜಿಗ ಹೋಗದ ಪರಿಸ್ಥಿತಿ ಬಂದೊದಗಿದೆ. ಸುಮಾರು ದಿನಗಳಿಂದ ಶಾಲಾ ಕಾಲೇಜುಗಳಿಗೆ ಹೋಗದೇ ಪರದಾಡುತಿದ್ದಾರೆ. ಈ ಕುರಿತಂತೆ ಅಧಿಕಾರಿಗಳಿಗೆ ಮನವಿ ಮಾಡಿದರು ಏನು ಪ್ರಯೋಜನವಾಗಿಲ್ಲ. ಇನ್ನು ಜಮೀನುಗಳ ಕೆಲಸ ಸಂಪೂರ್ಣ ನಿಂತಿದ್ದು ಯಾವುದೇ ರೀತಿಯ ಕೃಷಿಚಟುವಟಿಗಳಿಗೆ ಅವಕಾಶವಿಲ್ಲದಂತಾಗಿದೆ‌. ಮೊದಲೇ ಕಳೆ ತುಂಬಿ ಇಡೀ ಬೆಳೆಗಳು ಹಾಳಾಗುತಿದ್ದು ರೈತಾಪಿ ಜನರು ತೆಲೆ ಮೇಲೆ ಕೈ ಹೊತ್ತುಕೊಂಡು ಕುಳಿತು ಕೊಂಡಿದ್ದಾರೆ.
ತಾಲೂಕಿನ ಸುಮಾರು ೭ ಸೇತುವೆಗಳು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು ಯಾವುದೇ ರೀತಿಯ ಕೆಲಸ ಕಾರ್ಯಗಳಿಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ರೈತರು ಶಾಲಾ ಕಾಲೇಜು ವಿದ್ಯಾರ್ಥಿಗಳು ಪರ ಬಾರದ ಕಷ್ಟ ಪಡುತಿದ್ದಾರೆ. ತತ್ವ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾದ್ರೂ ಕೂಡ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಬಾರದ ಹಿನ್ನೆಲೆಯಲ್ಲಿ ಸ್ಥಳೀಯರಯ ಹೋರಾಟದ ಹಾದಿ ಹೀಡಿಯಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ...

___________________________

ಹುಬ್ಬಳ್ಳಿ: ಸ್ಟ್ರಿಂಜರ

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.