ETV Bharat / state

ಕ್ಷುಲಕ ಕಾರಣಕ್ಕೆ ಕೈದಿಗಳಿಬ್ಬರ ನಡುವೆ ಜಗಳ: ಓರ್ವನಿಗೆ ಗಾಯ

author img

By

Published : Dec 26, 2019, 12:29 PM IST

ಕ್ಷುಲಕ ಕಾರಣಕ್ಕೆ ವಿಚಾರಣಾಧೀನ ಕೈದಿಗಳಿಬ್ಬರು ಜಗಳ ಮಾಡಿಕೊಂಡು ಕಲ್ಲಿನಿಂದ ಹೊಡೆದಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ವಿಶ್ವೇಶ್ವರನಗರದ ಉಪ ಕಾರಾಗೃಹದಲ್ಲಿ ಬುಧವಾರ ಸಂಜೆ ನಡೆದಿದ್ದು, ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾನೆ.

hubli
ಕ್ಷುಲಕ ಕಾರಣಕ್ಕೆ ಕೈದಿಗಳಿಬ್ಬರ ನಡುವೆ ಜಗಳ: ಓರ್ವನಿಗೆ ಗಾಯ

ಹುಬ್ಬಳ್ಳಿ: ಕ್ಷುಲಕ ಕಾರಣಕ್ಕೆ ವಿಚಾರಣಾಧೀನ ಕೈದಿಗಳಿಬ್ಬರು ಜಗಳ ಮಾಡಿಕೊಂಡು ಕಲ್ಲಿನಿಂದ ಹೊಡೆದಾಡಿಕೊಂಡಿರುವ ಘಟನೆ ಇಲ್ಲಿನ ವಿಶ್ವೇಶ್ವರನಗರದ ಉಪ ಕಾರಾಗೃಹದಲ್ಲಿ ಬುಧವಾರ ಸಂಜೆ ನಡೆದಿದ್ದು, ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾನೆ.

ರಾಯನಾಳ ಗ್ರಾಮದ ಸಿದ್ದಪ್ಪ ಗದಿಗೆಪ್ಪ ಕೋಳೂರ (36) ಹಲ್ಲೆಗೀಡಾದ ಕೈದಿಯಾಗಿದ್ದು, ಬಮ್ಮಸಮುದ್ರ ಗ್ರಾಮದ ಖಾದರಸಾಬ ಮಹಮ್ಮದ್ ಸಾಬ ಮುನಿಯಾರ್ (40) ಹಲ್ಲೆ ನಡೆಸಿದ ವಿಚಾರಣಾಧೀನ ಕೈದಿಯಾಗಿದ್ದಾನೆ.

ಬುಧವಾರ ಸಂಜೆ 5 ಗಂಟೆಗೆ ಬಂಧಿಖಾನೆಯಿಂದ ಹೊರ ಆವರಣದಲ್ಲಿ ಬಿಡುವು ನೀಡಲಾಗಿತ್ತು. ಆ ವೇಳೆ ಸಿದ್ದಪ್ಪ ಹಾಗೂ ಖಾದರ್ ಇಬ್ಬರೂ ಮಾತನಾಡುತ್ತ ಕುಳಿತಿದ್ದರು. ನಂತರ 6 ಗಂಟೆಗೆ ಒಳಗೆ ಹೋಗುವ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು, ನಿನ್ನನ್ಯಾರೂ ಭೇಟಿ ಮಾಡಲು ಬರುವುದಿಲ್ಲ. ನಿನಗೆ ಜೈಲೇ ಗತಿ ಎಂದು ಸಿದ್ದಪ್ಪ ಹೇಳಿದ್ದ. ಈ ಮಾತಿನಿಂದ ಸಿಟ್ಟಾದ ಖಾದರ್ ಪಕ್ಕದಲ್ಲೇ ಇದ್ದ ಕಲ್ಲು ತೆಗೆದುಕೊಂಡು ಸಿದ್ದಪ್ಪನ‌ ತಲೆಗೆ ಹೊಡೆದಿದ್ದಾನೆ. ನಂತರ ಗಾಯಾಳುವನ್ನು ಕೂಡಲೇ ಕಿಮ್ಸ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಇನ್ನೂ ಅಶೋಕನಗರ ಠಾಣೆ ಪೋಲಿಸರು ಘಟನೆಯನ್ನು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿದ್ದಪ್ಪ ಹಾಗೂ ಖಾದರ್ ಇಬ್ಬರೂ ಕೊಲೆ ಆರೋಪಿಗಳಾಗಿದ್ದು, ಸಿದ್ದಪ್ಪ 2015 ರಲ್ಲಿ, ಖಾದರ್ 2017ರಲ್ಲಿ ಜೈಲಿಗೆ ದಾಖಲಾಗಿದ್ದಾರೆ.

ಹುಬ್ಬಳ್ಳಿ: ಕ್ಷುಲಕ ಕಾರಣಕ್ಕೆ ವಿಚಾರಣಾಧೀನ ಕೈದಿಗಳಿಬ್ಬರು ಜಗಳ ಮಾಡಿಕೊಂಡು ಕಲ್ಲಿನಿಂದ ಹೊಡೆದಾಡಿಕೊಂಡಿರುವ ಘಟನೆ ಇಲ್ಲಿನ ವಿಶ್ವೇಶ್ವರನಗರದ ಉಪ ಕಾರಾಗೃಹದಲ್ಲಿ ಬುಧವಾರ ಸಂಜೆ ನಡೆದಿದ್ದು, ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾನೆ.

ರಾಯನಾಳ ಗ್ರಾಮದ ಸಿದ್ದಪ್ಪ ಗದಿಗೆಪ್ಪ ಕೋಳೂರ (36) ಹಲ್ಲೆಗೀಡಾದ ಕೈದಿಯಾಗಿದ್ದು, ಬಮ್ಮಸಮುದ್ರ ಗ್ರಾಮದ ಖಾದರಸಾಬ ಮಹಮ್ಮದ್ ಸಾಬ ಮುನಿಯಾರ್ (40) ಹಲ್ಲೆ ನಡೆಸಿದ ವಿಚಾರಣಾಧೀನ ಕೈದಿಯಾಗಿದ್ದಾನೆ.

ಬುಧವಾರ ಸಂಜೆ 5 ಗಂಟೆಗೆ ಬಂಧಿಖಾನೆಯಿಂದ ಹೊರ ಆವರಣದಲ್ಲಿ ಬಿಡುವು ನೀಡಲಾಗಿತ್ತು. ಆ ವೇಳೆ ಸಿದ್ದಪ್ಪ ಹಾಗೂ ಖಾದರ್ ಇಬ್ಬರೂ ಮಾತನಾಡುತ್ತ ಕುಳಿತಿದ್ದರು. ನಂತರ 6 ಗಂಟೆಗೆ ಒಳಗೆ ಹೋಗುವ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು, ನಿನ್ನನ್ಯಾರೂ ಭೇಟಿ ಮಾಡಲು ಬರುವುದಿಲ್ಲ. ನಿನಗೆ ಜೈಲೇ ಗತಿ ಎಂದು ಸಿದ್ದಪ್ಪ ಹೇಳಿದ್ದ. ಈ ಮಾತಿನಿಂದ ಸಿಟ್ಟಾದ ಖಾದರ್ ಪಕ್ಕದಲ್ಲೇ ಇದ್ದ ಕಲ್ಲು ತೆಗೆದುಕೊಂಡು ಸಿದ್ದಪ್ಪನ‌ ತಲೆಗೆ ಹೊಡೆದಿದ್ದಾನೆ. ನಂತರ ಗಾಯಾಳುವನ್ನು ಕೂಡಲೇ ಕಿಮ್ಸ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಇನ್ನೂ ಅಶೋಕನಗರ ಠಾಣೆ ಪೋಲಿಸರು ಘಟನೆಯನ್ನು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿದ್ದಪ್ಪ ಹಾಗೂ ಖಾದರ್ ಇಬ್ಬರೂ ಕೊಲೆ ಆರೋಪಿಗಳಾಗಿದ್ದು, ಸಿದ್ದಪ್ಪ 2015 ರಲ್ಲಿ, ಖಾದರ್ 2017ರಲ್ಲಿ ಜೈಲಿಗೆ ದಾಖಲಾಗಿದ್ದಾರೆ.

Intro:ಹುಬ್ಬಳ್ಳಿ-05

ಕ್ಷುಲಕ ಕಾರಣಕ್ಕೆ ವಿಚಾರಣಾಧೀನ ಕೈದಿಗಳಿಬ್ಬರು ಜಗಳ ಮಾಡಿಕೊಂಡು ಕಲ್ಲಿನಿಂದ ಹೊಡೆದಾಡಿಕೊಂಡಿರುವ ಘಟನೆ ಇಲ್ಲಿನ ವಿಶ್ವೇಶ್ವರನಗರದ ಉಪ ಕಾರಾಗೃಹದಲ್ಲಿ ಬುಧವಾರ ಸಂಜೆ ನಡೆದಿದ್ದು, ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾನೆ. ರಾಯನಾಳ ಗ್ರಾಮದ ಸಿದ್ದಪ್ಪ ಗದಿಗೆಪ್ಪ ಕೋಳೂರ (36), ಹಲ್ಲೆಗೀಡಾದವನಾಗಿದ್ದು, ತಾಲೂಕಿನ ಬಮ್ಮಸಮುದ್ರ ಗ್ರಾಮದ ಖಾದರಸಾಬ ಮಹಮ್ಮದ್ ಸಾಬ ಮುನಿಯಾರ್ (40) ಹಲ್ಲೆ ನಡೆಸಿದ ವಿಚಾರಣಾಧೀನ ಕೈದಿಯಾಗಿದ್ದಾನೆ.

ಬುಧವಾರ ಸಂಜೆ 5 ಗಂಟೆಗೆ ಬಂಧಿಖಾನೆಯಿಂದ ಹೊರ ಆವರಣದಲ್ಲಿ ಬಿಡುವು ನೀಡಲಾಗಿತ್ತು.ಆ ವೇಳೆ ಸ್ನೇಹಿತರಾಗಿದ್ದ ಸಿದ್ದಪ್ಪ ಹಾಗೂ ಖಾದರ್ ಇಬ್ಬರೂ ಮಾತನಾಡುತ್ತ ಕುಳಿತಿದ್ದರು. ನಂತರ 6 ಗಂಟೆಗೆ ಒಳಗೆ ಹೊರಡುವ ವೇಳೆ ಇಬ್ಬರ ನಡುವೆ ಜಗಳ ಸಂಭವಿಸಿ, ನಿನಗ್ಯಾರೂ ಭೇಟಿ ಮಾಡಲು ಬರುವುದಿಲ್ಲ. ನಿನಗೆ ಜೈಲೇ ಗತಿ ಎಂದು ಸಿದ್ದಪ್ಪ ಹೇಳಿದ್ದ, ಈ ಮಾತಿನಿಂದ ಸಿಟ್ಟಾದ ಖಾದರ್ ಪಕ್ಕದಲ್ಲೇ ಇದ್ದ ಕಲ್ಲು ತೆಗೆದುಕೊಂಡು ಸಿದ್ದಪ್ಪನ‌ ತಲೆಗೆ ಹೊಡೆದಿದ್ದಾನೆ. ನಂತರ ಗಾಯಾಳುವನ್ನು ಕೂಡಲೇ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಇನ್ನೂ ಅಶೋಕನಗರ ಠಾಣೆ ಪೋಲಿಸರು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿದ್ದಪ್ಪ ಹಾಗೂ ಖಾದರ್ ಇಬ್ಬರೂ ಕೊಲೆ ಆರೋಪಿಗಳಾಗಿದ್ದು, ಸಿದ್ದಪ್ಪ 2015 ರಲ್ಲಿ ಖಾದರ್ 2017 ರಲ್ಲಿ ಸಬ್ ಜೈಲಿಗೆ ದಾಖಲಾಗಿದ್ದಾರೆ.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.