ಹುಬ್ಬಳ್ಳಿ: ಹಿಂದೆ ನಗರ ಭಾಗದಲ್ಲಿ ಕ್ರೀಡಾಪಟುಗಳು ಆಟ ಆಡಲು ದೂರ ಹೋಗಬೇಕಿರಲಿಲ್ಲ. ತಾವು ವಾಸಿಸುವ ಪ್ರದೇಶಗಳಲ್ಲಿ ಒಂದು ಅಥವಾ ಎರಡು ಕ್ರೀಡಾಂಗಣಗಳು ಸಿಗುತ್ತಿದ್ದವು. ಆದರೀಗ ಖಾಸಗೀಕರಣ ಹಾಗೂ ರಿಯಲ್ ಎಸ್ಟೇಟ್ ಎಫೆಕ್ಟ್ನಿಂದ ಕ್ರೀಡಾಂಗಣಗಳು ಮಾಯವಾಗುತ್ತಿವೆ.
ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಹುಬ್ಬಳ್ಳಿ-ಧಾರವಾಡದಲ್ಲೂ ಹಲವು ಕ್ರೀಡಾಂಗಣಗಳು ವಾಣಿಜ್ಯೀಕರಣವಾಗಿವೆ. ನಗರದ ನೆಹರೂ ಕ್ರೀಡಾಂಗಣ ಮಹಾನಗರ ಪಾಲಿಕೆ ಸುಪರ್ದಿಗೆ ಬಂದರೂ ಕೂಡ ಇಲ್ಲಿ ಕ್ರೀಡಾ ಚಟುವಟಿಕೆ ನಡೆಯುವುದಕ್ಕಿಂತ ಹೆಚ್ಚಾಗಿ ಸರ್ಕಾರಿ ಹಾಗೂ ಖಾಸಗಿ ಸಭೆ ಸಮಾರಂಭಗಳಿಗೆ ಮೀಸಲಾಗಿದೆ. ಇನ್ನು ಕೆಎಸ್ಸಿಎ ಹಾಗೂ ರೈಲ್ವೆ ಕ್ರೀಡಾಂಗಣಗಳಿದ್ದೂ ಇಲ್ಲದಂತಿವೆ. ಕೆಎಸ್ಸಿಎದಲ್ಲಿ ಹಣ ಪಾವತಿ ಮಾಡಬೇಕಿದೆ. ರೈಲ್ವೆ ಕ್ರೀಡಾಂಗಣ ರೈಲ್ವೆ ಸಿಬ್ಬಂದಿಗೆ ಸೀಮಿತವಾಗಿವೆ.
ಓದಿ: ಕೇಂದ್ರ ಸಚಿವ ಸದಾನಂದಗೌಡ ಅಸ್ವಸ್ಥ: ಝೀರೋ ಟ್ರಾಫಿಕ್ ಮೂಲಕ ಹೆಬ್ಬಾಳದ ಆಸ್ಟರ್ ಆಸ್ಪತ್ರೆಗೆ ಶಿಫ್ಟ್
ಈ ಹಿಂದೆ ಆಟವಾಡಲು ಇದ್ದ ಖಾಲಿ ಜಾಗಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು, ಬಿಲ್ಡರ್ಗಳು ಕಬಳಿಸಿದ್ದಾರೆ. ಯಾವುದೇ ಜಾಗವನ್ನು ಖಾಲಿ ಬಿಡದೆ ದೊಡ್ಡ ದೊಡ್ಡ ಬಿಲ್ಡಿಂಗ್ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೊರೊನಾ ಪೂರ್ವದಲ್ಲಿ ಕ್ರೀಡೆ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದ ಜನರು ಈಗ ಕ್ರೀಡಾಂಗಣದತ್ತ ಮುಖ ಮಾಡುತ್ತಿದ್ದಾರೆ. ಆದರೆ ಜನರು ವ್ಯಾಯಾಮ ಮಾಡಲು ಕ್ರೀಡಾಂಗಣಗಳ ಕೊರತೆ ಎದುರಿಸುವ ಸ್ಥಿತಿ ನಗರಗಳಲ್ಲಿ ಇದ್ದು, ಜನಪ್ರತಿನಿಧಿಗಳು ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.