ಧಾರವಾಡ: ಎನ್ಆರ್ಸಿ, ಸಿಎಎ ಹಾಗೂ ಎನ್ಪಿಆರ್ ಅವಶ್ಯಕತೆ ನಮಗಿಲ್ಲ, ಪ್ರತಿ 10 ವರ್ಷಕ್ಕೊಮ್ಮೆ ಸೆನ್ಸಸ್ ಆಗುತ್ತೆ, ಅದರಲ್ಲಿ ಜನಸಂಖ್ಯೆ ಗೊತ್ತಾಗುತ್ತದೆ. ದೇಶದಲ್ಲಿ ಹಲವು ಸಮಸ್ಯೆಗಳವೆ ಅದರ ಬಗ್ಗೆ ಗಮನ ಹರಿಸಲಿ ಎಂದು ಅಂಬೇಡ್ಕರ್ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಜ ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ ಇದನ್ನ ನಾವು ಜನರ ಬಳಿ ತೆಗೆದುಕೊಂಡು ಹೋಗುತಿದ್ದೇವೆ, ಜನ ಕೂಡಾ ಅರ್ಥಿಕತೆ ಬಗ್ಗೆ ಮಾತನಾಡುತಿದ್ದಾರೆ. ಸರ್ಕಾರದ ವಿರುದ್ಧ ಧ್ವನಿ ಎತ್ತುವುದು ಇಂದು ಅವಶ್ಯಕ, ದೇಶದಲ್ಲಿ ಡಿಟೆನ್ಷನ್ ಕ್ಯಾಂಪ್ ಮಾಡಲಾಗುತ್ತಿದೆ. ಡಿಟೆನ್ಷನ್ ಕ್ಯಾಂಪ ಮಾಡುವುದರ ಉದ್ದೇಶ ಏನು ಎನ್ಆರ್ಸಿ ತರುವುದಕ್ಕಾಗಿಯೇ ಅದನ್ನ ಮಾಡಲಾಗಿದೆ ಎಂದರು.
ಮೋದಿ ಜನರ ದಾರಿ ತಪ್ಪಿಸುವ ಮಾತನಾಡಬಾರದು. ಸಂವಿಧಾನ ಅಷ್ಟೇ ಅಲ್ಲ, ಈ ದೇಶದ ಜನರೇ ತೊಂದರೆಯಲ್ಲಿದ್ದಾರೆ ಆದರೆ ಸರ್ಕಾರ ಮಾತ್ರ ಮುಸ್ಲಿಂರ ಮುಖ ತೊರಿಸುತ್ತಿದೆ, ಆದರೆ ನಿಜವಾಗಿ ಇದು ಹಿಂದೂ ವಿರೋಧಿ ಸರ್ಕಾರ ಎಂದು ಆರೋಪವಿದೆ.
ಜೆಎನ್ಯು ಕಾಲೇಜಿನಲ್ಲಿ, ಹಿಂದೂ ಸಂಘಟನೆ ಹೆಸರಿನಲ್ಲಿ ಅಲ್ಲಿ ಗೂಂಡಾಗಿರಿ ನಡೆದಿದ್ದಕ್ಕೆ ನಾನು ವಿರೋಧ ವ್ಯಕ್ತಪಡಿಸುತ್ತೇನೆ.ನಮ್ಮ ಮಾತು ಕೇಳದೆ ಇದ್ರೆ ಹೊಡೆಯುತ್ತೇವೆ ಅನ್ನೊದೆ ಇದರ ಅರ್ಥ. ಸಂವಿಧಾನ ಸುಡುವ ಮಾತನ್ನ ಪ್ರಸಾದ್ ಎನ್ನುವವರು ಮಾತನಾಡಿದ್ದಾರೆ, ಆರ್ಎಸ್ಎಸ್ ಮುಖವೇ ಹಿಟ್ಲರಿಸಂ ಎಂದು ದೂರಿದರು.