ಧಾರವಾಡ: ಪಿಎಫ್ಐ ಒಂದು ದೇಶದ್ರೋಹಿ ಸಂಘಟನೆ. ಅದರ ಬಗ್ಗೆ ಹೆಚ್ಚು ಹೇಳಬೇಕಾದ ಅವಶ್ಯಕತೆ ಇಲ್ಲ. ಸುಪ್ರೀಂ ಕೋರ್ಟಿನ ತಿರ್ಮಾನದ ನಂತರವೇ ಟ್ರಸ್ಟ್ ರಚಿಸಿ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶಕ್ಕೆ ಸೇರಿದ ಮಂದಿರ ಅದು. ಶ್ರೀರಾಮ ಎಲ್ಲರಿಗೂ ಸೇರಿದವನು. ಆತನ ಆದರ್ಶ ಜಾತಿ ಮತ ಪಂಥ ಎಲ್ಲವನ್ನೂ ಮೀರಿರುವಂಥದ್ದು. ಆದ್ದರಿಂದಲೇ ರಾಮನಿಗೆ ಮರ್ಯಾದಾ ಪುರುಷೋತ್ತಮ ಎಂಬ ಹೆಸರು ಬಂದಿರುವುದು. ಪಿಎಫ್ಐ ಸಂಘಟನೆಗಳು ಹೇಳುವುದೆಲ್ಲಾ ಸತ್ಯವಲ್ಲ ಎಂದು ಕಿಡಿಕಾರಿದರು.
ಬೇರೆ ದೇಶಗಳಲ್ಲಿ ನೂರರಷ್ಟು ಇಸ್ಲಾಮ್ ಇದೆ, ಅಲ್ಲಿ ಕೂಡ ಅವರು ಶಾಂತವಾಗಿಲ್ಲ. ಆದರೆ ಭಾರತದಲ್ಲಿ ಮುಸ್ಲಿಂರು ಶಾಂತತೆಯಿಂದ ಬಾಳುತ್ತಿರುವುದಕ್ಕೆ ಕಾರಣ ಭಾರತದ ಮಣ್ಣಿನಲ್ಲಿ ಹಾಗೂ ರಕ್ತದಲ್ಲಿ ಇರುವ ಧರ್ಮ ಐಕ್ಯತೆ ಗುಣ ಎಂದರು.
ಇನ್ನು ಇದೇ ವೇಳೆ ಪಿಎಫ್ಐ ಸಂಘಟನೆ ಆರ್ಎಸ್ಎಸ್ ಬಗ್ಗೆ ಸರ್ಟಿಫಿಕೇಟ್ ಕೊಡುವ ಅಗತ್ಯತೆ ಇಲ್ಲ ಎಂದು ಹರಿಹಾಯ್ದರು.