ETV Bharat / state

ವಿಮಾನ ನಿಲ್ದಾಣಕ್ಕಾಗಿ ಮನೆ ನೀಡಿದವ್ರು ಇಂದು ಬೀದಿಗೆ ಬಿದ್ದಿದ್ದಾರೆ.....!

author img

By

Published : Sep 2, 2019, 5:20 PM IST

ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ಮಿಸುವ ಸಲುವಾಗಿ ಮನೆಗಳಿದ್ದ ಜಾಗವನ್ನು ಬಳಸಿಕೊಂಡು ಅಲ್ಲಿದ್ದ ನಿವಾಸಿಗಳಿಗೆ ಬೇರೆಡೆ ನಿವಾಸ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದ ಆಡಳಿತ, ಸದ್ಯ ಮನೆಗಳ ನಿರ್ಮಾಣವಾಗಿದ್ದರೂ ಅವುಗಳನ್ನು ಹಾಳು ಬಿಟ್ಟಿದೆಯೇ ಹೊರತು ಇನ್ನೂ ಫಲಾನುಭವಿಗಳಿಗೆ ನೀಡಿಲ್ಲ.

ವಿಮಾನ ನಿಲ್ದಾಣಕ್ಕಾಗಿ ಮನೆ ನೀಡಿದವ್ರು ಇಂದು ಬೀದಿಗೆ ಬಿದ್ದಿದ್ದಾರೆ.....!

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ಮಿಸುವ ಸಲುವಾಗಿ ಜಾಗ ನೀಡಿ ಮನೆ ಕಳೆದುಕೊಂಡವರ ಬದುಕು ಇಂದು ಬೀದಿ ಪಾಲಾಗಿದೆ.

ವಿಮಾನ ನಿಲ್ದಾಣಕ್ಕಾಗಿ ಮನೆ ನೀಡಿದವ್ರು ಇಂದು ಬೀದಿಗೆ ಬಿದ್ದಿದ್ದಾರೆ.....!

2014 ರಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಜಗದೀಶ್ ನಗರದ ನಿವಾಸಿಗಳು ಜಾಗ ನೀಡಿ ಮನೆ ಕಳೆದುಕೊಂಡಿದ್ದರು. ಇಲ್ಲಿದ್ದ 188 ಕುಟುಂಬಗಳಿಗೆ ಬೇರೆ ಕಡೆಗೆ ಆಶ್ರಯ ಮನೆಗಳನ್ನ ಕಟ್ಟಿಕೊಡುವುದಾಗಿ ಅಂದಿನ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್​ ಭರವಸೆ ಕೊಟ್ಟಿದ್ದರು. ಕೊಟ್ಟ ಮಾತಿನಂತೆ 8.9 ಕೋಟಿ ವೆಚ್ಚದಲ್ಲಿ 188 ಆಶ್ರಯ ಮನೆಗಳನ್ನು ಸಹ ನಿರ್ಮಾಣ ಮಾಡಲಾಗಿತ್ತು. ಆದ್ರೆ, ಇನ್ನೂ ಆ ಮನೆಗಳ ಹಕ್ಕು ಪತ್ರಗಳು ಫಲಾನುಭವಿಗಳಿಗೆ ಹಸ್ತಾಂತರವಾಗದೇ ಅವರ ಬದುಕು ಸಂಕಷ್ಟಕ್ಕೀಡಾಗಿದೆ.

188 ಆಶ್ರಯ ಮನೆಗಳು ನಿರ್ಮಾಣವಾಗಿ 4 ವರ್ಷವೇ ಕಳೆದಿದೆ, ಇನ್ನೊಂದಿಷ್ಟು ಮನೆಗಳ ಕಾಮಗಾರಿ ಇನ್ನೂ ಬಾಕಿಯಿದೆ. ಆದರೆ, ನಿರ್ಮಾಣ ಮುಗಿದಿರುವ ಮನೆಗಳ ಪರಿಸ್ಥಿತಿಯಂತೂ ಇನ್ನೂ ಹೀನಾಯವಾಗಿದೆ. ಮನೆ ಸುತ್ತ ಬೇಡದ ಗಿಡಗಂಟಿಗಳು ಬೆಳೆದಿದ್ದು, ಇನ್ನೊಂದಿಷ್ಟು ಸಮಯ ಕಳೆದರೆ ವಾಸಿಸಲು ಯೋಗ್ಯವಿಲ್ಲದಂತಾಗುತ್ತದೆ. ಇನ್ನು ಆಶ್ರಯ ಕಳೆದುಕೊಂಡವರು ಬಾಡಿಗೆ ಮನೆಗಳಲ್ಲಿದ್ದು, ಖರ್ಚುವೆಚ್ಚಕ್ಕಾಗಿ ಪರದಾಡುತ್ತಿದ್ದಾರೆ. ಮನೆಗಳನ್ನ ಹಸ್ತಾಂತರ ಮಾಡು ಸಂಬಂಧ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಆರು ತಿಂಗಳಲ್ಲಿ ಮನೆ ವಿತರಿಸುವುದಾಗಿ ಆಶ್ವಾಸನೆ ನೀಡಿದ್ದ ಕಾರಣಕ್ಕೆ ಈ ನಿವಾಸಿಗಳು ವಿಮಾನ ನಿಲ್ದಾಣಕ್ಕೆ ಜಾಗ ಬಿಟ್ಟುಕೊಟ್ಟಿದ್ದರು. ಆದರೆ, ಈಗ 5 ವರ್ಷವೇ ಕಳೆದರು ಮನೆಯಿಲ್ಲದೆ ಪರದಾಡುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಮನೆಗಳು ನಿರ್ಮಾಣವಾಗಿದ್ರು, ಫಲಾನುಭವಿಗಳಿಗೆ ಮಾತ್ರ ಮನೆಗಳನ್ನ ಹಸ್ತಾಂತರ ಮಾಡುವುದಕ್ಕೆ ಜಿಲ್ಲಾಡಳಿತ ಮುಂದಾಗದಿರುವುದಕ್ಕೆ ಮನೆ ಕಳೆದುಕೊಂಡವ್ರು ಹಿಡಿ ಶಾಪ ಹಾಕುತ್ತಿದ್ದಾರೆ.

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ಮಿಸುವ ಸಲುವಾಗಿ ಜಾಗ ನೀಡಿ ಮನೆ ಕಳೆದುಕೊಂಡವರ ಬದುಕು ಇಂದು ಬೀದಿ ಪಾಲಾಗಿದೆ.

ವಿಮಾನ ನಿಲ್ದಾಣಕ್ಕಾಗಿ ಮನೆ ನೀಡಿದವ್ರು ಇಂದು ಬೀದಿಗೆ ಬಿದ್ದಿದ್ದಾರೆ.....!

2014 ರಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಜಗದೀಶ್ ನಗರದ ನಿವಾಸಿಗಳು ಜಾಗ ನೀಡಿ ಮನೆ ಕಳೆದುಕೊಂಡಿದ್ದರು. ಇಲ್ಲಿದ್ದ 188 ಕುಟುಂಬಗಳಿಗೆ ಬೇರೆ ಕಡೆಗೆ ಆಶ್ರಯ ಮನೆಗಳನ್ನ ಕಟ್ಟಿಕೊಡುವುದಾಗಿ ಅಂದಿನ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್​ ಭರವಸೆ ಕೊಟ್ಟಿದ್ದರು. ಕೊಟ್ಟ ಮಾತಿನಂತೆ 8.9 ಕೋಟಿ ವೆಚ್ಚದಲ್ಲಿ 188 ಆಶ್ರಯ ಮನೆಗಳನ್ನು ಸಹ ನಿರ್ಮಾಣ ಮಾಡಲಾಗಿತ್ತು. ಆದ್ರೆ, ಇನ್ನೂ ಆ ಮನೆಗಳ ಹಕ್ಕು ಪತ್ರಗಳು ಫಲಾನುಭವಿಗಳಿಗೆ ಹಸ್ತಾಂತರವಾಗದೇ ಅವರ ಬದುಕು ಸಂಕಷ್ಟಕ್ಕೀಡಾಗಿದೆ.

188 ಆಶ್ರಯ ಮನೆಗಳು ನಿರ್ಮಾಣವಾಗಿ 4 ವರ್ಷವೇ ಕಳೆದಿದೆ, ಇನ್ನೊಂದಿಷ್ಟು ಮನೆಗಳ ಕಾಮಗಾರಿ ಇನ್ನೂ ಬಾಕಿಯಿದೆ. ಆದರೆ, ನಿರ್ಮಾಣ ಮುಗಿದಿರುವ ಮನೆಗಳ ಪರಿಸ್ಥಿತಿಯಂತೂ ಇನ್ನೂ ಹೀನಾಯವಾಗಿದೆ. ಮನೆ ಸುತ್ತ ಬೇಡದ ಗಿಡಗಂಟಿಗಳು ಬೆಳೆದಿದ್ದು, ಇನ್ನೊಂದಿಷ್ಟು ಸಮಯ ಕಳೆದರೆ ವಾಸಿಸಲು ಯೋಗ್ಯವಿಲ್ಲದಂತಾಗುತ್ತದೆ. ಇನ್ನು ಆಶ್ರಯ ಕಳೆದುಕೊಂಡವರು ಬಾಡಿಗೆ ಮನೆಗಳಲ್ಲಿದ್ದು, ಖರ್ಚುವೆಚ್ಚಕ್ಕಾಗಿ ಪರದಾಡುತ್ತಿದ್ದಾರೆ. ಮನೆಗಳನ್ನ ಹಸ್ತಾಂತರ ಮಾಡು ಸಂಬಂಧ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಆರು ತಿಂಗಳಲ್ಲಿ ಮನೆ ವಿತರಿಸುವುದಾಗಿ ಆಶ್ವಾಸನೆ ನೀಡಿದ್ದ ಕಾರಣಕ್ಕೆ ಈ ನಿವಾಸಿಗಳು ವಿಮಾನ ನಿಲ್ದಾಣಕ್ಕೆ ಜಾಗ ಬಿಟ್ಟುಕೊಟ್ಟಿದ್ದರು. ಆದರೆ, ಈಗ 5 ವರ್ಷವೇ ಕಳೆದರು ಮನೆಯಿಲ್ಲದೆ ಪರದಾಡುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಮನೆಗಳು ನಿರ್ಮಾಣವಾಗಿದ್ರು, ಫಲಾನುಭವಿಗಳಿಗೆ ಮಾತ್ರ ಮನೆಗಳನ್ನ ಹಸ್ತಾಂತರ ಮಾಡುವುದಕ್ಕೆ ಜಿಲ್ಲಾಡಳಿತ ಮುಂದಾಗದಿರುವುದಕ್ಕೆ ಮನೆ ಕಳೆದುಕೊಂಡವ್ರು ಹಿಡಿ ಶಾಪ ಹಾಕುತ್ತಿದ್ದಾರೆ.

Intro:ಹುಬ್ಬಳಿBody:ಸ್ಲಗ್: ವಿಮಾನ ನಿಲ್ದಾಣಕ್ಕೆ ಮನೆ ನೀಡಿದವ್ರು ಇಂದು ಬೀದಿಗೆ ಬಿದ್ದಿದ್ದಾರೆ.....!


ಹುಬ್ಬಳ್ಳಿ:- ದೇವರು ಕೊಟ್ರು ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮನೆ ಕಳೆದುಕೊಂಡವರ ಬದುಕು. ವಿಮಾನ ನಿಲ್ದಾಣಕ್ಕೆ ಮನೆ ಕಳೆದುಕೊಂಡವರಿಗೆ ಸರಕಾರ ಆಶ್ರಯ ಮನೆಗಳನ್ನ ನಿರ್ಮಾಣ ಮಾಡಿದೆ, ಆದ್ರೆ ಇದುವರೆಗು ಆ ಮನೆಗಳು ಮಾತ್ರ ಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ಹಸ್ತಾಂತರವಾಗದೆ, ಅವರ ಬದುಕು ಬೀದಿಗೆ ಬರುವವ ಪ್ರಸಂಗ ಬಂದೊಗಿದೆ.....ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಜಗದೀಶ್ ನಗರದ ನಿವಾಸಿಗಳು ಮನೆ ಕಳೆದುಕೊಂಡಿದ್ದರು. 2014 ರಲ್ಲಿ ವಿಮಾನ ನಿಲ್ದಾಣಕ್ಕಾಗಿ ತಾವು ವಾಸವಾಗಿದ್ದ ಜಾಗ ಬಿಟ್ಟು ಮನೆಗಳನ್ನ ಕೊಟ್ಟಿದ್ರು. ಇಲ್ಲಿದ್ದ 188 ಕುಟುಂಬಗಳಿಗೆ ಬೇರೆ ಕಡೆಗೆ ಆಶ್ರಯ ಮನೆಗಳನ್ನ ಕಟ್ಟಿಕೊಡುವುದಾಗಿ ಅಂದಿನ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ ಭರವಸೆ ಕೊಟ್ಟಿದ್ದರು. ಕೊಟ್ಟ ಮಾತಿನಂತೆ 8.9 ಕೋಟಿ ವೆಚ್ಚದಲ್ಲಿ 188 ಆಶ್ರಯ ಮನೆಗಳನ್ನು ಸಹ ನಿರ್ಮಾಣ ಮಾಡಲಾಗಿತ್ತು ಆದ್ರೆ ಇದುವರೆಗು ಆ ಮನೆಗಳು ಮಾತ್ರ ಫಲಾನುಭವಿಗಳಿಗೆ ಹಸ್ತಾಂತರವಾಗಿಲ್ಲ.

ಬೈಟ್ : ಫಕಿರಪ್ಪ, ಸ್ಥಳೀಯರು

ನಿರ್ಮಿತಿ ಕೇಂಧ್ರದಿಂದ 188 ಆಶ್ರಯ ಮನೆಗಳ ನಿರ್ಮಾಣವಾಗಿದೆ. ಒಂದಿಷ್ಟು ಮನೆಗಳ ಕಾಮಗಾರಿ ಇನ್ನೂ ಬಾಕಿಯಿದೆ. ಹೀಗಾಗಿ ಮನೆಗಳು ನಿರ್ಮಾಣವಾಗಿ ನಾಲ್ಕು ವರ್ಷಗಳೆ ಕಳೆದಿದ್ದು, ಮನೆಗಳು ಎಲ್ಲೆಂದರಲ್ಲಿ ಹಾಳಾಗುತ್ತಿವೆ. ಗಿಡಗಂಟಿಗಳು ಬೆಳೆಯುತ್ತಿವೆ. ಇವತ್ತಲ್ಲ ನಾಳೆ ಮನೆ ಸಿಗುತ್ತೆ ಎನ್ನುವ ಕನಸಿನೊಂದಿಗೆ ವಿಮಾನ ನಿಲ್ದಾಣಕ್ಕೆ ಮನೆ ಕಳೆದುಕೊಂಡವರು, ಬಾಡಿಗೆ ಮನೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಮನೆಗಳನ್ನ ಹಸ್ತಾಂತರ ಮಾಡುವಂತೆ ಹಲವಾರು ಬಾರಿ ಮನವಿ ನೀಡಿದ್ರು, ಇವರಿಗೆ ಮಾತ್ರ ಮನೆಗಳು ಸಿಕ್ಕಿಲ್ಲ.

ಬೈಟ್ : ನಾಗರಾಜ್, ಮನೆ ಕಳೆದುಕೊಂಡವರು

ಆರು ತಿಂಗಳಲ್ಲಿ ಮನೆ ಸಿಗುತ್ತೆ ಎನ್ನುವ ಕಾರಣಕ್ಕೆ, ವಿಮಾನ ನಿಲ್ದಾಣಕ್ಕೆ ಜಾಗ ಬಿಟ್ಟುಕೊಟ್ಟಿದ್ದವರು, ಈಗ 5 ವರ್ಷ ಕಳೆದರು ಮನೆಯಿಲ್ಲದೆ ಪರದಾಡುತ್ತಿದ್ದಾರೆ. ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ಮನೆಗಳು ನಿರ್ಮಾಣವಾಗಿದ್ರು, ಫಲಾನುಭವಿಗಳಿಗೆ ಮನೆಗಳನ್ನ ಹಸ್ತಾಂತರ ಮಾಡುವುದಕ್ಕೆ ಜಿಲ್ಲಾಡಳಿತ ಮುಂದಾಗದಿರುವುದು ಆಡಳಿತ ವೈಖರಿಗೆ ಮನೆ ಕಳೆದುಕೊಂಡವ್ರು ಹಿಡಿ ಶಾಪ ಹಾಕುತ್ತಿದ್ದಾರೆ.......


_________________________



ಹುಬ್ಬಳ್ಳಿ:- ಸ್ಟ್ರಿಂಜರ

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ‌ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.