ETV Bharat / state

ಕಿರಿಕಿರಿ ಮಾಡುತ್ತಿದ್ದ ಮಗನನ್ನೇ ಕೊಂದ ಚಿಕ್ಕಪ್ಪ.. ಬೆಚ್ಚಿದ ವಿದ್ಯಾಕಾಶಿ!

author img

By

Published : Feb 15, 2021, 7:07 AM IST

ಮನೆಯಲ್ಲಿ ಕಿರಿ ಕಿರಿ ಮಾಡುತ್ತಿದ್ದ ಮಗನನ್ನೇ ಚಿಕ್ಕಪ್ಪನೋರ್ವ ಕೊಲೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

Man killed his brother son, Man killed his brother son in Dharwad, Dharwad murder, Dharwad murder news, Dharwad crime news, ಚಿಕ್ಕಪ್ಪನಿಂದ ಮಗನ ಕೊಲೆ, ಧಾರವಾಡದಲ್ಲಿ ಚಿಕ್ಕಪ್ಪನಿಂದ ಮಗನ ಕೊಲೆ, ಧಾರವಾಡ ಕೊಲೆ, ಧಾರವಾಡ ಕೊಲೆ ಸುದ್ದಿ, ಧಾರವಾಡ ಅಪರಾಧ ಸುದ್ದಿ,
ಕಿರಿಕಿರಿ ಮಾಡುತ್ತಿದ್ದ ಮಗನನ್ನೇ ಕೊಂದ ಚಿಕ್ಕಪ್ಪ

ಧಾರವಾಡ: ಕುಟುಂಬದೊಳಗಿನ ಒಳ ಜಗಳ ಹಿನ್ನೆಲೆ ಸಹೋದರ ಮಗನನ್ನು ಆತನ ಚಿಕ್ಕಪ್ಪನೊಬ್ಬ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

26 ವರ್ಷದ ಆಕಾಶ ಕೋಟೂರ ಎಂಬಾತ ಚಿಕ್ಕಪ್ಪನಿಂದ ಕೊಲೆಗೀಡಾಗಿರುವ ಯುವಕ. ಆಕಾಶನ ಚಿಕ್ಕಪ್ಪ ಪ್ರಕಾಶ ಕೋಟೂರ ಕೊಲೆ ಆರೋಪಿ.

ಕೊಲೆ ಬಗ್ಗೆ ಮಾಹಿತಿ ನೀಡುತ್ತಿರುವ ಡಿಸಿಪಿ

ಆಕಾಶ ಆಗಾಗ್ಗೆ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದನಂತೆ. ಅದೇ ವಿಷಯಕ್ಕೆ ನಿನ್ನೆ ಮನೆಯೊಳಗೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ಚಿಕ್ಕಪ್ಪ ಪ್ರಕಾಶ ಕಬ್ಬಿಣದ ಸಲಾಕೆಯಿಂದ ಆಕಾಶ ತಲೆಗೆ ಹೊಡೆದಿದ್ದಾನೆ. ಆಗ ಸ್ಥಳದಲ್ಲಿ ಆಕಾಶ ಪ್ರಾಣ ಬಿಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ಪ್ರಕಾಶ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಕೊಲೆಯ ಸುದ್ದಿ ತಿಳಿಯುತಿದ್ದಂತೆ ಸ್ಥಳಕ್ಕೆ ಡಿಸಿಪಿ ಕೆ. ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಕಾಶನನ್ನು ಆತನ ಚಿಕ್ಕಪ್ಪ ಪ್ರಕಾಶ ಕೊಲೆ ಮಾಡಿದ್ದಾರೆ. ಈ ಕೊಲೆಗೆ ಕುಟುಂಬದೊಳಗಿನ ಜಗಳವೇ ಕಾರಣವಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಆಕಾಶ ಆಗಾಗ್ಗೆ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದನಂತೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ ಚಿಕ್ಕಪ್ಪ ಪ್ರಕಾಶ ಹಾಗೂ ಆಕಾಶ ನಡುವೆ ಜಗಳ ನಡೆದಾಗ ಕೊಲೆಯಾಗಿದೆ. ಕೊಲೆ ಹಿಂದೆ ಬೇರೆ ಏನಾದರೂ ಬಲವಾದ ಕಾರಣ ಇದೆಯಾ ಎಂಬುದನ್ನು ತನಿಖೆ ನಡೆಸಿ ಪತ್ತೆ ಮಾಡಲಾಗುವುದು. ಸದ್ಯ ಕೊಲೆ ಮಾಡಿರುವ ಚಿಕ್ಕಪ್ಪ ಪರಾರಿಯಾಗಿದ್ದಾನೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಧಾರವಾಡ: ಕುಟುಂಬದೊಳಗಿನ ಒಳ ಜಗಳ ಹಿನ್ನೆಲೆ ಸಹೋದರ ಮಗನನ್ನು ಆತನ ಚಿಕ್ಕಪ್ಪನೊಬ್ಬ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

26 ವರ್ಷದ ಆಕಾಶ ಕೋಟೂರ ಎಂಬಾತ ಚಿಕ್ಕಪ್ಪನಿಂದ ಕೊಲೆಗೀಡಾಗಿರುವ ಯುವಕ. ಆಕಾಶನ ಚಿಕ್ಕಪ್ಪ ಪ್ರಕಾಶ ಕೋಟೂರ ಕೊಲೆ ಆರೋಪಿ.

ಕೊಲೆ ಬಗ್ಗೆ ಮಾಹಿತಿ ನೀಡುತ್ತಿರುವ ಡಿಸಿಪಿ

ಆಕಾಶ ಆಗಾಗ್ಗೆ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದನಂತೆ. ಅದೇ ವಿಷಯಕ್ಕೆ ನಿನ್ನೆ ಮನೆಯೊಳಗೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ಚಿಕ್ಕಪ್ಪ ಪ್ರಕಾಶ ಕಬ್ಬಿಣದ ಸಲಾಕೆಯಿಂದ ಆಕಾಶ ತಲೆಗೆ ಹೊಡೆದಿದ್ದಾನೆ. ಆಗ ಸ್ಥಳದಲ್ಲಿ ಆಕಾಶ ಪ್ರಾಣ ಬಿಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ಪ್ರಕಾಶ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಕೊಲೆಯ ಸುದ್ದಿ ತಿಳಿಯುತಿದ್ದಂತೆ ಸ್ಥಳಕ್ಕೆ ಡಿಸಿಪಿ ಕೆ. ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಕಾಶನನ್ನು ಆತನ ಚಿಕ್ಕಪ್ಪ ಪ್ರಕಾಶ ಕೊಲೆ ಮಾಡಿದ್ದಾರೆ. ಈ ಕೊಲೆಗೆ ಕುಟುಂಬದೊಳಗಿನ ಜಗಳವೇ ಕಾರಣವಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಆಕಾಶ ಆಗಾಗ್ಗೆ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದನಂತೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ ಚಿಕ್ಕಪ್ಪ ಪ್ರಕಾಶ ಹಾಗೂ ಆಕಾಶ ನಡುವೆ ಜಗಳ ನಡೆದಾಗ ಕೊಲೆಯಾಗಿದೆ. ಕೊಲೆ ಹಿಂದೆ ಬೇರೆ ಏನಾದರೂ ಬಲವಾದ ಕಾರಣ ಇದೆಯಾ ಎಂಬುದನ್ನು ತನಿಖೆ ನಡೆಸಿ ಪತ್ತೆ ಮಾಡಲಾಗುವುದು. ಸದ್ಯ ಕೊಲೆ ಮಾಡಿರುವ ಚಿಕ್ಕಪ್ಪ ಪರಾರಿಯಾಗಿದ್ದಾನೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.