ETV Bharat / state

ಸ್ನೇಹಿತನೊಂದಿಗೆ ಸರಸ ಸಲ್ಲಾಪ ನಡೆಸು ಎಂದು ಪತಿಯಿಂದ ಪತ್ನಿಗೆ ಕಿರುಕುಳ!

author img

By

Published : Jan 16, 2020, 10:00 PM IST

Updated : Jan 16, 2020, 11:02 PM IST

ಮದುವೆಯಾದ ಎರಡನೇ ದಿನಕ್ಕೆ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಸ್ನೇಹಿತನೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗುವಂತೆ ಬೆದರಿಸಿ, ಮಾನಸಿಕ ಕಿರುಕುಳ ನೀಡಿರುವ ಬಗ್ಗೆ ಹುಬ್ಬಳ್ಳಿಯ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

husband-torturing-wife-for-to-be-with-another-man
husband-torturing-wife-for-to-be-with-another-man

ಹುಬ್ಬಳ್ಳಿ: ಮದುವೆಯಾಗಿ ಪತ್ನಿಯ ಜೊತೆ ಹನಿಮೂನ್ ಹೋಗಬೇಕಾದ ವ್ಯಕ್ತಿಯೊಬ್ಬ ಸ್ನೇಹಿತನೊಂದಿಗೆ ಸಹಕರಿಸು ಎಂದು ಕಿರುಕುಳ ನೀಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಗಣೇಶಪೇಟೆಯ ಮುಸ್ತಾಕ್ ಎನ್ನುವ ವ್ಯಕ್ತಿ ವಿರುದ್ದ ಆತನ ಪತ್ನಿ ದೂರು ದಾಖಲಿಸಿದ್ದಾಳೆ. 2019ರ ಜುಲೈನಲ್ಲಿ ಮುಸ್ತಾಕ್‌ಗೆ ವಿವಾಹವಾಗಿತ್ತು. ಎರಡು ದಿನ ಪತ್ನಿಯನ್ನು ಚೆನ್ನಾಗಿ ನೋಡಿಕೊಂಡ ಪತಿ, ನಂತರ ಸ್ನೇಹಿತನನ್ನು ಮನೆಗೆ ಕರೆದುಕೊಂಡು ಬಂದು, ಅವನ ಜೊತೆ ಸರಸಕ್ಕೆ ಸಹಕರಿಸಲು ಪೀಡಿಸಿದ್ದಾನೆ.

ಪತ್ನಿಯು ಪತಿಯ ಮಾತಿಗೆ ಒಪ್ಪದಿದ್ದಾಗ ಮಹಿಳಾ ಸಂಘದಲ್ಲಿ ಮಾಡಿರುವ 5 ಲಕ್ಷ ರೂಪಾಯಿ ಸಾಲ ತೀರಿಸು. ಇಲ್ಲಾ ಸ್ನೇಹಿತನ ಜೊತೆ ಸಹಕರಿಸು ಎಂದು ಹಿಂಸಿಸಿದ್ದಾನೆ. ಅಲ್ಲದೇ ತನ್ನ ಮಾತು ಕೇಳದಿದ್ದರೆ ಬೆಡ್ ರೂಂನಲ್ಲಿ ಕ್ಯಾಮಾರಾ ಇಟ್ಟು ಎಲ್ಲರಿಗೂ ವಿಡಿಯೋ ಕಳುಹಿಸುತ್ತೇನೆ ಎಂದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಸಂತ್ರಸ್ಥೆ ದೂರು ದಾಖಲಿಸಿದ್ದಾಳೆ.

ಘಟನೆಯ ಕುರಿತು ದೂರು ದಾಖಲಿಸಿಕೊಂಡಿರುವ ಮಹಿಳಾ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದು ವಿಕೃತ ಮನಸ್ಸಿನ ಪತಿರಾಯನಿಗೆ ಹುಡುಕಾಟ ನಡೆಸುತ್ತಿದ್ದಾರೆ.

ಹುಬ್ಬಳ್ಳಿ: ಮದುವೆಯಾಗಿ ಪತ್ನಿಯ ಜೊತೆ ಹನಿಮೂನ್ ಹೋಗಬೇಕಾದ ವ್ಯಕ್ತಿಯೊಬ್ಬ ಸ್ನೇಹಿತನೊಂದಿಗೆ ಸಹಕರಿಸು ಎಂದು ಕಿರುಕುಳ ನೀಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಗಣೇಶಪೇಟೆಯ ಮುಸ್ತಾಕ್ ಎನ್ನುವ ವ್ಯಕ್ತಿ ವಿರುದ್ದ ಆತನ ಪತ್ನಿ ದೂರು ದಾಖಲಿಸಿದ್ದಾಳೆ. 2019ರ ಜುಲೈನಲ್ಲಿ ಮುಸ್ತಾಕ್‌ಗೆ ವಿವಾಹವಾಗಿತ್ತು. ಎರಡು ದಿನ ಪತ್ನಿಯನ್ನು ಚೆನ್ನಾಗಿ ನೋಡಿಕೊಂಡ ಪತಿ, ನಂತರ ಸ್ನೇಹಿತನನ್ನು ಮನೆಗೆ ಕರೆದುಕೊಂಡು ಬಂದು, ಅವನ ಜೊತೆ ಸರಸಕ್ಕೆ ಸಹಕರಿಸಲು ಪೀಡಿಸಿದ್ದಾನೆ.

ಪತ್ನಿಯು ಪತಿಯ ಮಾತಿಗೆ ಒಪ್ಪದಿದ್ದಾಗ ಮಹಿಳಾ ಸಂಘದಲ್ಲಿ ಮಾಡಿರುವ 5 ಲಕ್ಷ ರೂಪಾಯಿ ಸಾಲ ತೀರಿಸು. ಇಲ್ಲಾ ಸ್ನೇಹಿತನ ಜೊತೆ ಸಹಕರಿಸು ಎಂದು ಹಿಂಸಿಸಿದ್ದಾನೆ. ಅಲ್ಲದೇ ತನ್ನ ಮಾತು ಕೇಳದಿದ್ದರೆ ಬೆಡ್ ರೂಂನಲ್ಲಿ ಕ್ಯಾಮಾರಾ ಇಟ್ಟು ಎಲ್ಲರಿಗೂ ವಿಡಿಯೋ ಕಳುಹಿಸುತ್ತೇನೆ ಎಂದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಸಂತ್ರಸ್ಥೆ ದೂರು ದಾಖಲಿಸಿದ್ದಾಳೆ.

ಘಟನೆಯ ಕುರಿತು ದೂರು ದಾಖಲಿಸಿಕೊಂಡಿರುವ ಮಹಿಳಾ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದು ವಿಕೃತ ಮನಸ್ಸಿನ ಪತಿರಾಯನಿಗೆ ಹುಡುಕಾಟ ನಡೆಸುತ್ತಿದ್ದಾರೆ.

Intro:ಹುಬ್ಬಳ್ಳಿ

ಮದುವೆಯಾಗಿ ಪತ್ನಿಯ ಜೊತೆ ಹನಿಮೂನ್ ಮಾಡಬೇಕಾದ ವ್ಯಕ್ತಿಯೊಬ್ಬ ಸ್ನೇಹಿತನೊಂದಿಗೆ ಸಹಕರಿಸು ಎಂದು ಕಿರುಕುಳ ನೀಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಮದುವೆಯಾದ ಎರಡನೇ ದಿನಕ್ಕೆ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಸ್ನೇಹಿತನೊಂದಿಗೆ ಸರಸ ಸಲಾಪ ಮಾಡಲು ಸಹಕರಿಸುವಂತೆ ಬೆದರಿಸಿ. ಮಾನಸಿಕ ಕಿರುಕುಳ ನೀಡಿರುವ ಬಗ್ಗೆ ಹುಬ್ಬಳ್ಳಿಯ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಣೇಶಪೇಟೆಯ ಮುಸ್ತಾಕ ಎನ್ನುವ ವ್ಯಕ್ತಿ ವಿರುದ್ದ ಆತನ ಪತ್ನಿ ದೂರು ದಾಖಲಿಸಿದ್ದು. 2019ರ ಜುಲೈನಲ್ಲಿ ಮುಸ್ತಾಕ ಜೊತೆ ಮದುವೆ ಆಗಿತ್ತು. ಎರಡು ದಿನ ಪತ್ನಿಯನ್ನ ಚೆನ್ನಾಗಿ ನೋಡಿಕೊಂಡ ಪತಿ ಮುಸ್ತಾಕ ನಂತರ ಸ್ನೇಹಿತನನ್ನ ಮನೆಗೆ ಕರೆದುಕೊಂಡು ಬಂದು, ಅವನ ಜೊತೆ ಸರಸಕ್ಕೆ ಸಹಕರಿಸಲು ಪೀಡಿಸಿದ್ದಾನೆ.

ಪತ್ನಿಯು ಪತಿಯ ಮಾತಿಗೆ ಒಪ್ಪದಿದ್ದಾಗ ಮಹಿಳಾ ಸಂಘದಲ್ಲಿ ಮಾಡಿರುವ ೫ ಲಕ್ಷ ರೂಪಾಯಿ ಸಾಲ ತಿರಿಸು. ಇಲ್ಲ ಸ್ನೇಹಿತನ ಜೊತೆ ಸಹಕರಿಸು ಎಂದು ಹಿಂಸೆ ನೀಡಿದ್ದಾನೆ. ಅಲ್ಲದೇ ತನ್ನ ಮಾತು ಕೇಳದಿದ್ದರೆ ಬೆಡ್ ರೂಂನಲ್ಲಿ ಕ್ಯಾಮಾರಾ ಇಟ್ಟು ಎಲ್ಲರಿಗೂ ವಿಡಿಯೋ ಕಳುಹಿಸುತ್ತೇನೆ ಎಂದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಸಂತ್ರಸ್ಥೆ ದೂರು ದಾಖಲಿಸಿದ್ದಾಳೆ.

ಘಟನೆಯ ಕುರಿತು ದೂರು ದಾಖಲಿಸಿಕೊಂಡಿರುವ ಮಹಿಳಾ ಠಾಣೆಯ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದು ವಿಕೃತ ಮನಸ್ಸಿನ ಪತಿರಾಯನಿಗೆ ಹುಡುಕಾಟ ನಡೆಸುತ್ತಿದ್ದಾರೆ.Body:H B GaddadConclusion:Etv hubli
Last Updated : Jan 16, 2020, 11:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.