ETV Bharat / state

ಬ್ಯಾಂಕ್​ಗಳು ಆರ್ಥಿಕ ಮುಗ್ಗಟ್ಟು ಎದುರಿಸಲು ಕೇಂದ್ರ ಸರ್ಕಾರವೇ ಕಾರಣ: ದೇವೇಗೌಡ - HD Devegowda talk about economic situation,

ಬ್ಯಾಂಕ್​ಗಳು ಈಗ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಹೀಗಾಗಲು ಕೇಂದ್ರ ಸರ್ಕಾರವೇ ಕಾರಣ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.

country economic situation, HD Devegowda talk about economic situation, HD Devegowda talk about  country economic situation, country economic situation news, ದೇಶದ ಆರ್ಥಿಕ ಸ್ಥಿತಿ, ದೇಶದ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಿದ ಹೆಚ್​ಡಿ ದೇವೇಗೌಡ, ಹುಬ್ಬಳ್ಳಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಿದ ದೇವೇಗೌಡ, ದೇಶದ ಆರ್ಥಿಕ ಸ್ಥಿತಿ ಸುದ್ದಿ,
ದೇಶದ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಿದ ಹೆಚ್​ಡಿ ದೇವೇಗೌಡ,
author img

By

Published : Mar 7, 2020, 7:05 PM IST

ಹುಬ್ಬಳ್ಳಿ: ದೇಶದ ಆರ್ಥಿಕ ‌ಪರಿಸ್ಥಿತಿ ಹದಗೆಡಲು ಆರ್​ಬಿಐಯನ್ನು ಅಸ್ಥಿರಗೊಳಿದ್ದೇ ಪ್ರಮುಖ‌ ಕಾರಣ ಎಂದು ಮಾಜಿ‌ ಪ್ರಧಾನಿ ‌ಹೆಚ್​.ಡಿ.ದೇವೇಗೌಡ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಿದ ಹೆಚ್.​ಡಿ.ದೇವೇಗೌಡ

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಸರ್ಕಾರ ಹತ್ತು ವರ್ಷ ಅಧಿಕಾರ ಮಾಡಿದೆ. ವಾಜಪೇಯಿ ಆರು ವರ್ಷ ಪ್ರಧಾನಿಯಾಗಿದ್ರು. ನರೇಂದ್ರ ಮೋದಿ ಆರು ವರ್ಷ ಆಯ್ತು ಪ್ರಧಾನಿಯಾಗಿದ್ದಾರೆ. ಇವರ ಕಾಲದಲ್ಲಿ ಆರ್​ಬಿಐಗೆ ಸ್ವಾತಂತ್ರ್ಯ ಕೊಡಬೇಕಿತ್ತು. ಮೋದಿಯವರ ಆಡಳಿತದಲ್ಲಿ ಆರ್​ಬಿಐಅನ್ನ ಅಸ್ಥಿರಗೊಳಿಸಲಾಯಿತು‌. ಮೊದಲಿನಿಂದ ಅದು ಸ್ವಾಯತ್ತ ಸಂಸ್ಥೆಯಾಗಿದೆ. ದುರಂತ ಅಂದ್ರೆ ಸದ್ಯ ಆರ್​ಬಿಐನಲ್ಲಿ ಕೇಂದ್ರ ಸರ್ಕಾರ ಭಾಗಿಯಾಯ್ತು. ಹಿಂದಿನ ಆರ್​ಬಿಐ ಗವರ್ನರ್ ರಘುರಾಮ್​ ರಾಜನ್ ಕೇಂದ್ರಕ್ಕೆ ಆಸ್ಪದ ನೀಡಿಲರಲಿಲ್ಲ‌ ಎಂದರು.

ಬ್ಯಾಂಕ್​ಗಳಿಗೆ ಈ ಸ್ಥಿತಿ ಬರಲು ಅರ್ಹತೆ ಇಲ್ಲದಿದ್ದರೂ ಸಾಲ ನೀಡಿ ಬ್ಯಾಂಕ್ ದುರ್ಬಳಕೆ ಮಾಡಿದ್ದಾರೆ. ಹೀಗಾಗೇ ಇಂದು ಬ್ಯಾಂಕ್​ಗಳು ಆರ್ಥಿಕ ಮುಗಟ್ಟು ಎದುರಿಸುತ್ತಿವೆ. ನೋಟ್ ಬಂದ್​ ಆಗಿದ್ದ ಸಮಯದಲ್ಲಿ ಹಲವಾರು ಅಕ್ರಮಗಳು ನಡೆದವು‌. ಕೆಲವೊಂದು ಉದ್ಯಮಿಗಳಿಗೆ ಅವರ ಆಸ್ತಿಗಿಂತ ಹೆಚ್ಚಿನ ಸಾಲವನ್ನ ಬ್ಯಾಂಕ್​ಗಳು ನೀಡಿವೆ. ಕೆಲವೊಂದಿಷ್ಟು ಹಣಕಾಸು ಸಲಹೆಗಾರರೇ ರಾಜೀನಾಮೆ ನೀಡಿ ಹೋದ್ರು ಎಂದರು.

ಬಸನಗೌಡ ಯತ್ನಾಳ್​​ ಬಗ್ಗೆ ಮಾತನಾಡಲು‌ ನಿರಾಕರಿಸಿದ ಅವರು, ಯತ್ನಾಳ್​​​ ಈಗ ದೊಡ್ಡವರಾಗಿ ಬೆಳೆದಿದ್ದಾರೆ.‌ ನಾನು ಅವರ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದರು.

ಹುಬ್ಬಳ್ಳಿ: ದೇಶದ ಆರ್ಥಿಕ ‌ಪರಿಸ್ಥಿತಿ ಹದಗೆಡಲು ಆರ್​ಬಿಐಯನ್ನು ಅಸ್ಥಿರಗೊಳಿದ್ದೇ ಪ್ರಮುಖ‌ ಕಾರಣ ಎಂದು ಮಾಜಿ‌ ಪ್ರಧಾನಿ ‌ಹೆಚ್​.ಡಿ.ದೇವೇಗೌಡ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಿದ ಹೆಚ್.​ಡಿ.ದೇವೇಗೌಡ

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಸರ್ಕಾರ ಹತ್ತು ವರ್ಷ ಅಧಿಕಾರ ಮಾಡಿದೆ. ವಾಜಪೇಯಿ ಆರು ವರ್ಷ ಪ್ರಧಾನಿಯಾಗಿದ್ರು. ನರೇಂದ್ರ ಮೋದಿ ಆರು ವರ್ಷ ಆಯ್ತು ಪ್ರಧಾನಿಯಾಗಿದ್ದಾರೆ. ಇವರ ಕಾಲದಲ್ಲಿ ಆರ್​ಬಿಐಗೆ ಸ್ವಾತಂತ್ರ್ಯ ಕೊಡಬೇಕಿತ್ತು. ಮೋದಿಯವರ ಆಡಳಿತದಲ್ಲಿ ಆರ್​ಬಿಐಅನ್ನ ಅಸ್ಥಿರಗೊಳಿಸಲಾಯಿತು‌. ಮೊದಲಿನಿಂದ ಅದು ಸ್ವಾಯತ್ತ ಸಂಸ್ಥೆಯಾಗಿದೆ. ದುರಂತ ಅಂದ್ರೆ ಸದ್ಯ ಆರ್​ಬಿಐನಲ್ಲಿ ಕೇಂದ್ರ ಸರ್ಕಾರ ಭಾಗಿಯಾಯ್ತು. ಹಿಂದಿನ ಆರ್​ಬಿಐ ಗವರ್ನರ್ ರಘುರಾಮ್​ ರಾಜನ್ ಕೇಂದ್ರಕ್ಕೆ ಆಸ್ಪದ ನೀಡಿಲರಲಿಲ್ಲ‌ ಎಂದರು.

ಬ್ಯಾಂಕ್​ಗಳಿಗೆ ಈ ಸ್ಥಿತಿ ಬರಲು ಅರ್ಹತೆ ಇಲ್ಲದಿದ್ದರೂ ಸಾಲ ನೀಡಿ ಬ್ಯಾಂಕ್ ದುರ್ಬಳಕೆ ಮಾಡಿದ್ದಾರೆ. ಹೀಗಾಗೇ ಇಂದು ಬ್ಯಾಂಕ್​ಗಳು ಆರ್ಥಿಕ ಮುಗಟ್ಟು ಎದುರಿಸುತ್ತಿವೆ. ನೋಟ್ ಬಂದ್​ ಆಗಿದ್ದ ಸಮಯದಲ್ಲಿ ಹಲವಾರು ಅಕ್ರಮಗಳು ನಡೆದವು‌. ಕೆಲವೊಂದು ಉದ್ಯಮಿಗಳಿಗೆ ಅವರ ಆಸ್ತಿಗಿಂತ ಹೆಚ್ಚಿನ ಸಾಲವನ್ನ ಬ್ಯಾಂಕ್​ಗಳು ನೀಡಿವೆ. ಕೆಲವೊಂದಿಷ್ಟು ಹಣಕಾಸು ಸಲಹೆಗಾರರೇ ರಾಜೀನಾಮೆ ನೀಡಿ ಹೋದ್ರು ಎಂದರು.

ಬಸನಗೌಡ ಯತ್ನಾಳ್​​ ಬಗ್ಗೆ ಮಾತನಾಡಲು‌ ನಿರಾಕರಿಸಿದ ಅವರು, ಯತ್ನಾಳ್​​​ ಈಗ ದೊಡ್ಡವರಾಗಿ ಬೆಳೆದಿದ್ದಾರೆ.‌ ನಾನು ಅವರ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.