ETV Bharat / state

ಬ್ಯಾಂಕ್​ಗಳು ಆರ್ಥಿಕ ಮುಗ್ಗಟ್ಟು ಎದುರಿಸಲು ಕೇಂದ್ರ ಸರ್ಕಾರವೇ ಕಾರಣ: ದೇವೇಗೌಡ

ಬ್ಯಾಂಕ್​ಗಳು ಈಗ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಹೀಗಾಗಲು ಕೇಂದ್ರ ಸರ್ಕಾರವೇ ಕಾರಣ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.

author img

By

Published : Mar 7, 2020, 7:05 PM IST

country economic situation, HD Devegowda talk about economic situation, HD Devegowda talk about  country economic situation, country economic situation news, ದೇಶದ ಆರ್ಥಿಕ ಸ್ಥಿತಿ, ದೇಶದ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಿದ ಹೆಚ್​ಡಿ ದೇವೇಗೌಡ, ಹುಬ್ಬಳ್ಳಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಿದ ದೇವೇಗೌಡ, ದೇಶದ ಆರ್ಥಿಕ ಸ್ಥಿತಿ ಸುದ್ದಿ,
ದೇಶದ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಿದ ಹೆಚ್​ಡಿ ದೇವೇಗೌಡ,

ಹುಬ್ಬಳ್ಳಿ: ದೇಶದ ಆರ್ಥಿಕ ‌ಪರಿಸ್ಥಿತಿ ಹದಗೆಡಲು ಆರ್​ಬಿಐಯನ್ನು ಅಸ್ಥಿರಗೊಳಿದ್ದೇ ಪ್ರಮುಖ‌ ಕಾರಣ ಎಂದು ಮಾಜಿ‌ ಪ್ರಧಾನಿ ‌ಹೆಚ್​.ಡಿ.ದೇವೇಗೌಡ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಿದ ಹೆಚ್.​ಡಿ.ದೇವೇಗೌಡ

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಸರ್ಕಾರ ಹತ್ತು ವರ್ಷ ಅಧಿಕಾರ ಮಾಡಿದೆ. ವಾಜಪೇಯಿ ಆರು ವರ್ಷ ಪ್ರಧಾನಿಯಾಗಿದ್ರು. ನರೇಂದ್ರ ಮೋದಿ ಆರು ವರ್ಷ ಆಯ್ತು ಪ್ರಧಾನಿಯಾಗಿದ್ದಾರೆ. ಇವರ ಕಾಲದಲ್ಲಿ ಆರ್​ಬಿಐಗೆ ಸ್ವಾತಂತ್ರ್ಯ ಕೊಡಬೇಕಿತ್ತು. ಮೋದಿಯವರ ಆಡಳಿತದಲ್ಲಿ ಆರ್​ಬಿಐಅನ್ನ ಅಸ್ಥಿರಗೊಳಿಸಲಾಯಿತು‌. ಮೊದಲಿನಿಂದ ಅದು ಸ್ವಾಯತ್ತ ಸಂಸ್ಥೆಯಾಗಿದೆ. ದುರಂತ ಅಂದ್ರೆ ಸದ್ಯ ಆರ್​ಬಿಐನಲ್ಲಿ ಕೇಂದ್ರ ಸರ್ಕಾರ ಭಾಗಿಯಾಯ್ತು. ಹಿಂದಿನ ಆರ್​ಬಿಐ ಗವರ್ನರ್ ರಘುರಾಮ್​ ರಾಜನ್ ಕೇಂದ್ರಕ್ಕೆ ಆಸ್ಪದ ನೀಡಿಲರಲಿಲ್ಲ‌ ಎಂದರು.

ಬ್ಯಾಂಕ್​ಗಳಿಗೆ ಈ ಸ್ಥಿತಿ ಬರಲು ಅರ್ಹತೆ ಇಲ್ಲದಿದ್ದರೂ ಸಾಲ ನೀಡಿ ಬ್ಯಾಂಕ್ ದುರ್ಬಳಕೆ ಮಾಡಿದ್ದಾರೆ. ಹೀಗಾಗೇ ಇಂದು ಬ್ಯಾಂಕ್​ಗಳು ಆರ್ಥಿಕ ಮುಗಟ್ಟು ಎದುರಿಸುತ್ತಿವೆ. ನೋಟ್ ಬಂದ್​ ಆಗಿದ್ದ ಸಮಯದಲ್ಲಿ ಹಲವಾರು ಅಕ್ರಮಗಳು ನಡೆದವು‌. ಕೆಲವೊಂದು ಉದ್ಯಮಿಗಳಿಗೆ ಅವರ ಆಸ್ತಿಗಿಂತ ಹೆಚ್ಚಿನ ಸಾಲವನ್ನ ಬ್ಯಾಂಕ್​ಗಳು ನೀಡಿವೆ. ಕೆಲವೊಂದಿಷ್ಟು ಹಣಕಾಸು ಸಲಹೆಗಾರರೇ ರಾಜೀನಾಮೆ ನೀಡಿ ಹೋದ್ರು ಎಂದರು.

ಬಸನಗೌಡ ಯತ್ನಾಳ್​​ ಬಗ್ಗೆ ಮಾತನಾಡಲು‌ ನಿರಾಕರಿಸಿದ ಅವರು, ಯತ್ನಾಳ್​​​ ಈಗ ದೊಡ್ಡವರಾಗಿ ಬೆಳೆದಿದ್ದಾರೆ.‌ ನಾನು ಅವರ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದರು.

ಹುಬ್ಬಳ್ಳಿ: ದೇಶದ ಆರ್ಥಿಕ ‌ಪರಿಸ್ಥಿತಿ ಹದಗೆಡಲು ಆರ್​ಬಿಐಯನ್ನು ಅಸ್ಥಿರಗೊಳಿದ್ದೇ ಪ್ರಮುಖ‌ ಕಾರಣ ಎಂದು ಮಾಜಿ‌ ಪ್ರಧಾನಿ ‌ಹೆಚ್​.ಡಿ.ದೇವೇಗೌಡ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಿದ ಹೆಚ್.​ಡಿ.ದೇವೇಗೌಡ

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಸರ್ಕಾರ ಹತ್ತು ವರ್ಷ ಅಧಿಕಾರ ಮಾಡಿದೆ. ವಾಜಪೇಯಿ ಆರು ವರ್ಷ ಪ್ರಧಾನಿಯಾಗಿದ್ರು. ನರೇಂದ್ರ ಮೋದಿ ಆರು ವರ್ಷ ಆಯ್ತು ಪ್ರಧಾನಿಯಾಗಿದ್ದಾರೆ. ಇವರ ಕಾಲದಲ್ಲಿ ಆರ್​ಬಿಐಗೆ ಸ್ವಾತಂತ್ರ್ಯ ಕೊಡಬೇಕಿತ್ತು. ಮೋದಿಯವರ ಆಡಳಿತದಲ್ಲಿ ಆರ್​ಬಿಐಅನ್ನ ಅಸ್ಥಿರಗೊಳಿಸಲಾಯಿತು‌. ಮೊದಲಿನಿಂದ ಅದು ಸ್ವಾಯತ್ತ ಸಂಸ್ಥೆಯಾಗಿದೆ. ದುರಂತ ಅಂದ್ರೆ ಸದ್ಯ ಆರ್​ಬಿಐನಲ್ಲಿ ಕೇಂದ್ರ ಸರ್ಕಾರ ಭಾಗಿಯಾಯ್ತು. ಹಿಂದಿನ ಆರ್​ಬಿಐ ಗವರ್ನರ್ ರಘುರಾಮ್​ ರಾಜನ್ ಕೇಂದ್ರಕ್ಕೆ ಆಸ್ಪದ ನೀಡಿಲರಲಿಲ್ಲ‌ ಎಂದರು.

ಬ್ಯಾಂಕ್​ಗಳಿಗೆ ಈ ಸ್ಥಿತಿ ಬರಲು ಅರ್ಹತೆ ಇಲ್ಲದಿದ್ದರೂ ಸಾಲ ನೀಡಿ ಬ್ಯಾಂಕ್ ದುರ್ಬಳಕೆ ಮಾಡಿದ್ದಾರೆ. ಹೀಗಾಗೇ ಇಂದು ಬ್ಯಾಂಕ್​ಗಳು ಆರ್ಥಿಕ ಮುಗಟ್ಟು ಎದುರಿಸುತ್ತಿವೆ. ನೋಟ್ ಬಂದ್​ ಆಗಿದ್ದ ಸಮಯದಲ್ಲಿ ಹಲವಾರು ಅಕ್ರಮಗಳು ನಡೆದವು‌. ಕೆಲವೊಂದು ಉದ್ಯಮಿಗಳಿಗೆ ಅವರ ಆಸ್ತಿಗಿಂತ ಹೆಚ್ಚಿನ ಸಾಲವನ್ನ ಬ್ಯಾಂಕ್​ಗಳು ನೀಡಿವೆ. ಕೆಲವೊಂದಿಷ್ಟು ಹಣಕಾಸು ಸಲಹೆಗಾರರೇ ರಾಜೀನಾಮೆ ನೀಡಿ ಹೋದ್ರು ಎಂದರು.

ಬಸನಗೌಡ ಯತ್ನಾಳ್​​ ಬಗ್ಗೆ ಮಾತನಾಡಲು‌ ನಿರಾಕರಿಸಿದ ಅವರು, ಯತ್ನಾಳ್​​​ ಈಗ ದೊಡ್ಡವರಾಗಿ ಬೆಳೆದಿದ್ದಾರೆ.‌ ನಾನು ಅವರ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.