ಹುಬ್ಬಳ್ಳಿ: ಸರ್ಕಾರಿ ಅದೇಶವನ್ನು ಗಾಳಿಗೆ ತೂರಿ ಕರ್ನಾಟಕ ಬ್ಯಾಂಕ್ ಗ್ರಾಹಕರಿಂದ ಸುಲಿಗೆಗೆ ಮುಂದಾಗಿದೆ ಎಂಬ ಆರೋಪ ನಗರದಲ್ಲಿ ಕೇಳಿ ಬಂದಿದೆ.
ಬ್ಯಾಂಕ್ ಇಎಂಐ ಕಟ್ಟಲು ವಿಳಂಬ ಮಾಡಿದಕ್ಕೆ ಒಂದೇ ತಿಂಗಳಲ್ಲಿ ಏಳು ಬಾರಿ ದಂಡ ವಿಧಿಸಿ ಕರ್ನಾಟಕ ಬ್ಯಾಂಕ್ ಗ್ರಾಹಕನ ಸುಲಿಗೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸಂಗಮೇಶ್ ಹಡಪದ ಎಂಬುವವರು ತಮ್ಮ ಸಲೂನ್ ಶಾಪ್ ಬಂದ್ ಆಗಿದ್ದರಿಂದ ಇಎಂಐ ಕಟ್ಟಿರಲಿಲ್ಲ. ಒಂದು ತಿಂಗಳ ಇಎಂಐ ವಿಳಂಬ ಮಾಡಿದ್ದಕ್ಕೆ 590 ರೂಪಾಯಿಯಂತೆ ಬ್ಯಾಂಕ್ ಒಟ್ಟು ಏಳು ಬಾರಿ 4150 ರೂಪಾಯಿ ದಂಡ ವಸೂಲಿ ಮಾಡಿದೆಯಂತೆ.
ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರಂತೆ. ಬಜಾಜ್ ಫೈನಾನ್ಸ್ನಲ್ಲಿ 30 ಸಾವಿರ ಸಾಲ ಮಾಡಿದ್ದ ಸಂಗಮೇಶ್ ಪ್ರತಿ ತಿಂಗಳು ಮೂರು ಸಾವಿರ ಇಎಂಐ ಕಟ್ಟುತ್ತಿದ್ದರು. ಕೇಂದ್ರ ಸರ್ಕಾರ ಆದೇಶವಿದ್ದರೂ ಸಹ ಬ್ಯಾಂಕುಗಳು ಮಾತ್ರ ಕಾಯಕ ನಿಲ್ಲಸಿಲ್ಲ. ಹೀಗಾಗಿ ಜೀವನ ನಡೆಸುವುದೇ ಕಷ್ಟವಾಗಿದೆ. ಕರ್ನಾಟಕ ಬ್ಯಾಂಕ್ ಮ್ಯಾನೇಜರ್ಗೆ ಕೇಳಿದ್ರೆ, ಸಮಸ್ಯೆ ಉದ್ಭವವಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ಹೇಳುತ್ತಿದ್ದಾರೆ ಎಂದು ಗ್ರಾಹಕ ಸಂಗಮೇಶ್ ಹಡಪದ ಹೇಳಿದ್ದಾರೆ.