ETV Bharat / state

144 ಸೆಕ್ಷನ್​​​ ಜಾರಿಯಲ್ಲಿದ್ದರೂ ಕ್ಯಾರೇ ಎನ್ನದ ವ್ಯಾಪಾರಿಗಳಿಗೆ ಬಿಸಿ ಮುಟ್ಟಿಸಿದ ಡಿಸಿ - 144 ನಿಷೇಧಾಜ್ಞೆ ಜಾರಿ

ಧಾರವಾಡದಲ್ಲಿ ಈಗಗಾಗಲೇ 144 ಸೆಕ್ಷನ್​ ಜಾರಿಯಾಗಿದ್ದರೂ ವ್ಯಾಪಾರ-ವಹಿವಾಟು ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಅವುಗಳನ್ನು ಬಂದ್​ ಮಾಡಲು ಜಿಲ್ಲಾಧಿಕಾರಿ ದೀಪಾ ಚೋಳನ್​ ಫೀಲ್ಡ್​ಗಿಳಿದಿದ್ದರು.

Dharwad
ಧಾರವಾಡ ಮಂದಿಗೆ ಬಿಸಿ ಮುಟ್ಟಿಸಿದ 'ಡಿಸಿ'
author img

By

Published : Mar 23, 2020, 8:39 PM IST

ಧಾರವಾಡ: ಜಿಲ್ಲೆಯಲ್ಲಿ ಈಗಗಾಗಲೇ 144 ಸೆಕ್ಷನ್​ ಜಾರಿಯಾಗಿದ್ದರೂ ಕೆಲ ಅಂಗಡಿಗಳು ತೆರೆದು ವ್ಯಾಪಾರ ನಡೆಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಖುದ್ದು ಜಿಲ್ಲಾಧಿಕಾರಿ ದೀಪಾ ಚೋಳನ್​ ಫೀಲ್ಡಿಗಿಳಿದಿದ್ದು, ಮಾರ್ಕೆಟ್​ ಬಂದ್​ ಮಾಡುವ ಕಾರ್ಯಾಚರಣೆ ನಡೆಸಿದ್ದಾರೆ.

ಧಾರವಾಡ ಮಂದಿಗೆ ಬಿಸಿ ಮುಟ್ಟಿಸಿದ ಡಿಸಿ

ಬೆಳಗ್ಗೆಯಿಂದಲೇ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಜನ ಸೇರಿದ್ದರು. ಈ ಹಿನ್ನೆಲೆ ಕಂದಾಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದರೂ ಸಹ ಕ್ಯಾರೆ ಎನ್ನದ ವ್ಯಾಪಾರಿಗಳು ತಮ್ಮ ಕಾರ್ಯ ಮುಂದುವರೆಸಿದ್ದರು. ಹೀಗಾಗಿ ಸಂಜೆ ಹೊತ್ತಿಗೆ ಖುದ್ದು ಡಿಸಿ ದೀಪಾ‌ ಚೋಳನ್ ಫೀಲ್ಡ್​ಗಿಳಿದಿದ್ದರು. ಪೊಲೀಸರೊಂದಿಗೆ ತೆರಳಿ ಮಾರ್ಕೆಟ್ ಬ‌ಂದ್ ಮಾಡಿಸಿದರು.

ಈಗಾಗಲೇ 144 ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೊರಗೆ ತಿರುಗಾಡಬಾರದು. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಯಾವುದೇ ವ್ಯಾಪಾರ ವಹಿವಾಟುಗಳನ್ನು ನಡೆಸಬಾರದು ಎಂದು ಎಚ್ಚರಿಕೆ ನೀಡಿದ್ದರು.

ಧಾರವಾಡ: ಜಿಲ್ಲೆಯಲ್ಲಿ ಈಗಗಾಗಲೇ 144 ಸೆಕ್ಷನ್​ ಜಾರಿಯಾಗಿದ್ದರೂ ಕೆಲ ಅಂಗಡಿಗಳು ತೆರೆದು ವ್ಯಾಪಾರ ನಡೆಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಖುದ್ದು ಜಿಲ್ಲಾಧಿಕಾರಿ ದೀಪಾ ಚೋಳನ್​ ಫೀಲ್ಡಿಗಿಳಿದಿದ್ದು, ಮಾರ್ಕೆಟ್​ ಬಂದ್​ ಮಾಡುವ ಕಾರ್ಯಾಚರಣೆ ನಡೆಸಿದ್ದಾರೆ.

ಧಾರವಾಡ ಮಂದಿಗೆ ಬಿಸಿ ಮುಟ್ಟಿಸಿದ ಡಿಸಿ

ಬೆಳಗ್ಗೆಯಿಂದಲೇ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಜನ ಸೇರಿದ್ದರು. ಈ ಹಿನ್ನೆಲೆ ಕಂದಾಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದರೂ ಸಹ ಕ್ಯಾರೆ ಎನ್ನದ ವ್ಯಾಪಾರಿಗಳು ತಮ್ಮ ಕಾರ್ಯ ಮುಂದುವರೆಸಿದ್ದರು. ಹೀಗಾಗಿ ಸಂಜೆ ಹೊತ್ತಿಗೆ ಖುದ್ದು ಡಿಸಿ ದೀಪಾ‌ ಚೋಳನ್ ಫೀಲ್ಡ್​ಗಿಳಿದಿದ್ದರು. ಪೊಲೀಸರೊಂದಿಗೆ ತೆರಳಿ ಮಾರ್ಕೆಟ್ ಬ‌ಂದ್ ಮಾಡಿಸಿದರು.

ಈಗಾಗಲೇ 144 ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೊರಗೆ ತಿರುಗಾಡಬಾರದು. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಯಾವುದೇ ವ್ಯಾಪಾರ ವಹಿವಾಟುಗಳನ್ನು ನಡೆಸಬಾರದು ಎಂದು ಎಚ್ಚರಿಕೆ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.