ಧಾರವಾಡ: ಕುಮಾರೇಶ್ವರ ನಗರದ ಕಟ್ಟಡ ಕುಸಿತ ದುರಂತ ಪ್ರಕರಣಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಟ್ಟಡದ ಮಾಲೀಕರು, ಮತ್ತು ಪ್ರಮುಖ ಅಧಿಕಾರಿಗಳು ಬಿಜೆಪಿಯ ಶಾಸಕರ, ಸಂಸದರ ಸಂಬಂಧಿಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು,ವಿನಯಕ್ ಕುಲಕರ್ಣಿ ವಿರೋಧಿಗಳೇ ಕಟ್ಟಡದ ಮಾಲೀಕರ ನಿಜ ಮಾಹಿತಿ ತಿಳಿದುಕೊಳ್ಳಿ ಎಂದು ಕಟ್ಟಡದ ಪಾಲುದಾರರ ಹೆಸರು ಮತ್ತು ಬಿಜೆಪಿ ಸಂಬಂಧದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
1. ರವಿ ಸಬರದ, ಬಿಜೆಪಿ ಧಾರವಾಡದ ಶಹರ ಶಾಸಕ ಅರವಿಂದ ಬೆಲ್ಲದ ಸಂಬಂಧಿ
2. ಬಸವರಾಜ್ ನಿಗದಿ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಿಜೆಪಿ ಮುಖಂಡ
3. ಗಂಗಪ್ಪ ಶಿಂತ್ರೆ ತಂಗಿಯ ಮಗ ಸವದತ್ತಿ ಬಿಜೆಪಿ ನಾಯಕ
4. ಮಹಾಬಳೇಶ್ವರ ಪುರದಗುಡಿ, ಸವದತ್ತಿ ಬಿಜೆಪಿ ನಾಯಕ
ಕಟ್ಟಡದ ನಾಲ್ವರು ಮಾಲೀಕರು ಬಿಜೆಪಿ ಪಕ್ಷದ ಮುಖಂಡರ ಸಂಬಂಧಿಗಳು. ಕಟ್ಟಡ ಕಾಮಗಾರಿಯ ಸಿಸಿ ಪರವಾನಗಿ ನೀಡಿದ ಮಹಾನಗರ ಪಾಲಿಕೆಯ ನಗರ ಯೋಜನಾ ಆಯುಕ್ತ ಮುಕುಂದ ಜೋಶಿ, ಸಂಸದ ಪ್ರಹ್ಲಾದ್ ಜೋಶಿ ಚಿಕ್ಕಪ್ಪನ ಮಗ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ.