ETV Bharat / state

ಬಿಆರ್​ಟಿಎಸ್ ಬಸ್​ನಲ್ಲಿ ಮರೆತು ಹೋಗಿದ್ದ 3 ಲಕ್ಷ ಮೌಲ್ಯದ ಬಂಗಾರದ ಆಭರಣ ಹಸ್ತಾಂತರಿಸಿದ ಸಿಬ್ಬಂದಿ..

ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಆನಂದ ಸೋಮಪ್ಪ ಕುಂಬಾರ ಮತ್ತು ಇವರ ಕುಟುಂಬ ಧಾರವಾಡದಿಂದ ಹುಬ್ಬಳ್ಳಿಗೆ ಬಿಆರ್​ಟಿಎಸ್ ಬಸ್​ನಲ್ಲಿ ಸಂಚರಿಸುವಾಗ ಆಕಸ್ಮಿಕವಾಗಿ ಬ್ಯಾಗನ್ನು ಬಿಟ್ಟು ಇಳಿದಿದ್ದರು.

author img

By

Published : Feb 10, 2022, 9:09 PM IST

BRTS staff
ಬಿಆರ್​ಟಿಎಸ್ ಸಿಬ್ಬಂದಿ

ಹುಬ್ಬಳ್ಳಿ: ಬಿಆರ್​ಟಿಎಸ್ ಬಸ್​ನಲ್ಲಿ ಮರೆತು ಹೋಗಿದ್ದ 3 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಸಂಬಂಧಿಸಿದವರಿಗೆ ಮರಳಿಸುವ ಮೂಲಕ ಆರ್​ಟಿಎಸ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಆನಂದ ಸೋಮಪ್ಪ ಕುಂಬಾರ ಮತ್ತು ಇವರ ಕುಟುಂಬ ಧಾರವಾಡದಿಂದ ಹುಬ್ಬಳ್ಳಿಗೆ ಬಿಆರ್​ಟಿಎಸ್ ಬಸ್​ನಲ್ಲಿ ಸಂಚರಿಸುವಾಗ ಆಕಸ್ಮಿಕವಾಗಿ ಬ್ಯಾಗನ್ನು ಬಿಟ್ಟು ಇಳಿದಿದ್ದರು.

ನಂತರ ಕುಂಬಾರ ಅವರು ಬೆಳಗ್ಗೆ 11 ಗಂಟೆಗೆ ಬಿಆರ್​ಟಿಎಸ್ ಕಚೇರಿಗೆ ಆಗಮಿಸಿ ಬಸ್​ನಲ್ಲಿ ಬ್ಯಾಗ್ ಮರೆತ್ತಿರುವುದಾಗಿ ದೂರನ್ನು ಸಲ್ಲಿಸಿದ್ದರು. ಆ ಪ್ರಕಾರ, ಕಂಟ್ರೋಲ್ ರೂಂನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಬ್ಯಾಗನ್ನು ಪತ್ತೆಹಚ್ಚಿ ನೋಡಿದಾಗ ಅದರಲ್ಲಿ ಬಂಗಾರದ ಆಭರಣಗಳಾದ ಒಂದು ಜೊತೆ ಕಿವಿ ಓಲೆ, ಮಾಂಗಲ್ಯಸೂತ್ರ, ನೆಕ್ಲೇಸ್, ನಾಲ್ಕು ಬಳೆಗಳು, ಒಂದು ವಾಚ್ ಸೇರಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಮಾಲೀಕರಿಗೆ ಒಪ್ಪಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಬಿಆರ್​ಟಿಎಸ್​ನ ಸಿಬ್ಬಂದಿ ಕಾರ್ಯ ವೈಖರಿಗೆ ಮರಳಿ ಬ್ಯಾಗ್ ಪಡೆದ ಕುಟುಂಬ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಾದ ಬಿ.ಡಿ ಜಾಧವ್, ವ್ಯವಸ್ಥಾಪಕರು(ಕಾರ್ಯಾಚರಣೆ) ಮತ್ತು ಮಂಜುನಾಥ ಜೆಡೇನವರ, ಸಾರ್ವಜನಿಕ ಸಂಪರ್ಕಾಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಓದಿ: ಶಾಂತಿ ಕದಡಲು ಯತ್ನಿಸಿದರೆ ಕ್ರಮ: ಪೊಲೀಸ್ ಪಥ ಸಂಚಲನ ಮಾಡಿ ಪೊಲೀಸ್‌ ಇಲಾಖೆ ಶಕ್ತಿ ಪ್ರದರ್ಶನ...!

ಹುಬ್ಬಳ್ಳಿ: ಬಿಆರ್​ಟಿಎಸ್ ಬಸ್​ನಲ್ಲಿ ಮರೆತು ಹೋಗಿದ್ದ 3 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಸಂಬಂಧಿಸಿದವರಿಗೆ ಮರಳಿಸುವ ಮೂಲಕ ಆರ್​ಟಿಎಸ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಆನಂದ ಸೋಮಪ್ಪ ಕುಂಬಾರ ಮತ್ತು ಇವರ ಕುಟುಂಬ ಧಾರವಾಡದಿಂದ ಹುಬ್ಬಳ್ಳಿಗೆ ಬಿಆರ್​ಟಿಎಸ್ ಬಸ್​ನಲ್ಲಿ ಸಂಚರಿಸುವಾಗ ಆಕಸ್ಮಿಕವಾಗಿ ಬ್ಯಾಗನ್ನು ಬಿಟ್ಟು ಇಳಿದಿದ್ದರು.

ನಂತರ ಕುಂಬಾರ ಅವರು ಬೆಳಗ್ಗೆ 11 ಗಂಟೆಗೆ ಬಿಆರ್​ಟಿಎಸ್ ಕಚೇರಿಗೆ ಆಗಮಿಸಿ ಬಸ್​ನಲ್ಲಿ ಬ್ಯಾಗ್ ಮರೆತ್ತಿರುವುದಾಗಿ ದೂರನ್ನು ಸಲ್ಲಿಸಿದ್ದರು. ಆ ಪ್ರಕಾರ, ಕಂಟ್ರೋಲ್ ರೂಂನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಬ್ಯಾಗನ್ನು ಪತ್ತೆಹಚ್ಚಿ ನೋಡಿದಾಗ ಅದರಲ್ಲಿ ಬಂಗಾರದ ಆಭರಣಗಳಾದ ಒಂದು ಜೊತೆ ಕಿವಿ ಓಲೆ, ಮಾಂಗಲ್ಯಸೂತ್ರ, ನೆಕ್ಲೇಸ್, ನಾಲ್ಕು ಬಳೆಗಳು, ಒಂದು ವಾಚ್ ಸೇರಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಮಾಲೀಕರಿಗೆ ಒಪ್ಪಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಬಿಆರ್​ಟಿಎಸ್​ನ ಸಿಬ್ಬಂದಿ ಕಾರ್ಯ ವೈಖರಿಗೆ ಮರಳಿ ಬ್ಯಾಗ್ ಪಡೆದ ಕುಟುಂಬ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಾದ ಬಿ.ಡಿ ಜಾಧವ್, ವ್ಯವಸ್ಥಾಪಕರು(ಕಾರ್ಯಾಚರಣೆ) ಮತ್ತು ಮಂಜುನಾಥ ಜೆಡೇನವರ, ಸಾರ್ವಜನಿಕ ಸಂಪರ್ಕಾಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಓದಿ: ಶಾಂತಿ ಕದಡಲು ಯತ್ನಿಸಿದರೆ ಕ್ರಮ: ಪೊಲೀಸ್ ಪಥ ಸಂಚಲನ ಮಾಡಿ ಪೊಲೀಸ್‌ ಇಲಾಖೆ ಶಕ್ತಿ ಪ್ರದರ್ಶನ...!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.