ETV Bharat / state

ಸಾರಿಗೆ ಇಲಾಖೆಯ ಯಾವ ಸಿಬ್ಬಂದಿಯೂ ಆತಂಕ ಪಡುವ ಅಗತ್ಯವಿಲ್ಲ: ಸಚಿವ ಸವದಿ ಅಭಯ - ವೇತನ ನೀಡಲು ಸರ್ಕಾರವು 460 ಕೋಟಿ ರೂಪಾಯಿ ಮೀಸಲು

ಈಗಾಗಲೇ ವೇತನ ನೀಡಲು ಸರ್ಕಾರವು 460 ಕೋಟಿ ರೂಪಾಯಿ ಮೀಸಲಿಟ್ಟಿದೆ. ಜೂನ್ 1 ರಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಹೆಚ್ಚು ಬಸ್​ಗಳ ಓಡಾಟಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ್​ ಸವದಿ ತಿಳಿಸಿದರು.

Transport Minister Lakshmana Sawadi
ಸಚಿವ ಲಕ್ಷ್ಮಣ ಸವದಿ
author img

By

Published : May 27, 2020, 6:38 PM IST

ದಾವಣಗೆರೆ: ಲಾಕ್​ಡೌನ್​ನಿಂದಾಗಿ ಸಾರಿಗೆ ಇಲಾಖೆಯು 1800 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಈಗ ಬಸ್ ಸೇವೆಯನ್ನು ಹಂತ ಹಂತವಾಗಿ ಪ್ರಾರಂಭಿಸುತ್ತೇವೆ. ಚಾಲಕರು, ನಿರ್ವಾಹಕರು ಸೇರಿದಂತೆ ಇಲಾಖೆಯ ಸಿಬ್ಬಂದಿಗೆ ಮೇ ತಿಂಗಳ ವೇತನ ನೀಡುತ್ತೇವೆ. ಯಾವ ಸಿಬ್ಬಂದಿಯೂ ಆತಂಕಪಡುವ ಅಗತ್ಯವಿಲ್ಲವೆಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಭಯ ನೀಡಿದ್ದಾರೆ.

ಸಾರಿಗೆ ಇಲಾಖೆ ಸಿಬ್ಬಂದಿಗೆ ಸಚಿವ ಲಕ್ಷ್ಮಣ್​ ಸವದಿ ಅಭಯ
ಈಗಾಗಲೇ ವೇತನ ನೀಡಲು ಸರ್ಕಾರವು 460 ಕೋಟಿ ರೂಪಾಯಿ ಮೀಸಲಿಟ್ಟಿದೆ. ಜೂನ್ 1 ರಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಹೆಚ್ಚು ಬಸ್​ಗಳ ಓಡಾಟಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಕ್ಕಪಕ್ಕದ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆ ಅಂತಾರಾಜ್ಯಗಳ ಬಸ್ ಓಡಾಟ ಸಂಬಂಧ ಇನ್ನೂ ಅಂತಿಮ‌ ನಿರ್ಧಾರಕ್ಕೆ ಬಂದಿಲ್ಲ.‌ ಹೊರ ರಾಜ್ಯಗಳ ಬಸ್ ಸಂಚಾರ ಸ್ವಲ್ಪ ದಿನಗಳ ಕಾಲ ಮುಂದೂಡಲಾಗಿದೆ ಎಂದು ತಿಳಿಸಿದರು.
ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರು ಲಾಕ್​ಡೌನ್​ ಕಾರಣ ಎರಡು ತಿಂಗಳಿಂದ ಸಂಕಷ್ಟ ಅನುಭವಿಸಿದ್ದಾರೆ. ಹೀಗಾಗಿ 5 ಸಾವಿರ ರೂಪಾಯಿಯನ್ನು ಅವರ ಅಕೌಂಟ್​ಗೆ ಹಾಕಲಾಗುವುದು. ಸೇವಾ ಸಿಂಧು ಆ್ಯಪ್​ನಲ್ಲಿ 1 ಲಕ್ಷದ 25 ಸಾವಿರ ಮಂದಿ ನೋಂದಣಿ ಮಾಡಿಸಿ ಅರ್ಜಿ ಹಾಕಿದ್ದು, ನಾಳೆಯಿಂದಲೇ ಹಣ ಹಾಕಲಾಗುವುದು. ಇನ್ನು ಆರೂವರೆ ಲಕ್ಷ ಚಾಲಕರು ಅರ್ಜಿ ಸಲ್ಲಿಸಬೇಕಿದೆ ಎಂದು ಮಾಹಿತಿ ನೀಡಿದರು.

ದಾವಣಗೆರೆ: ಲಾಕ್​ಡೌನ್​ನಿಂದಾಗಿ ಸಾರಿಗೆ ಇಲಾಖೆಯು 1800 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಈಗ ಬಸ್ ಸೇವೆಯನ್ನು ಹಂತ ಹಂತವಾಗಿ ಪ್ರಾರಂಭಿಸುತ್ತೇವೆ. ಚಾಲಕರು, ನಿರ್ವಾಹಕರು ಸೇರಿದಂತೆ ಇಲಾಖೆಯ ಸಿಬ್ಬಂದಿಗೆ ಮೇ ತಿಂಗಳ ವೇತನ ನೀಡುತ್ತೇವೆ. ಯಾವ ಸಿಬ್ಬಂದಿಯೂ ಆತಂಕಪಡುವ ಅಗತ್ಯವಿಲ್ಲವೆಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಭಯ ನೀಡಿದ್ದಾರೆ.

ಸಾರಿಗೆ ಇಲಾಖೆ ಸಿಬ್ಬಂದಿಗೆ ಸಚಿವ ಲಕ್ಷ್ಮಣ್​ ಸವದಿ ಅಭಯ
ಈಗಾಗಲೇ ವೇತನ ನೀಡಲು ಸರ್ಕಾರವು 460 ಕೋಟಿ ರೂಪಾಯಿ ಮೀಸಲಿಟ್ಟಿದೆ. ಜೂನ್ 1 ರಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಹೆಚ್ಚು ಬಸ್​ಗಳ ಓಡಾಟಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಕ್ಕಪಕ್ಕದ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆ ಅಂತಾರಾಜ್ಯಗಳ ಬಸ್ ಓಡಾಟ ಸಂಬಂಧ ಇನ್ನೂ ಅಂತಿಮ‌ ನಿರ್ಧಾರಕ್ಕೆ ಬಂದಿಲ್ಲ.‌ ಹೊರ ರಾಜ್ಯಗಳ ಬಸ್ ಸಂಚಾರ ಸ್ವಲ್ಪ ದಿನಗಳ ಕಾಲ ಮುಂದೂಡಲಾಗಿದೆ ಎಂದು ತಿಳಿಸಿದರು.
ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರು ಲಾಕ್​ಡೌನ್​ ಕಾರಣ ಎರಡು ತಿಂಗಳಿಂದ ಸಂಕಷ್ಟ ಅನುಭವಿಸಿದ್ದಾರೆ. ಹೀಗಾಗಿ 5 ಸಾವಿರ ರೂಪಾಯಿಯನ್ನು ಅವರ ಅಕೌಂಟ್​ಗೆ ಹಾಕಲಾಗುವುದು. ಸೇವಾ ಸಿಂಧು ಆ್ಯಪ್​ನಲ್ಲಿ 1 ಲಕ್ಷದ 25 ಸಾವಿರ ಮಂದಿ ನೋಂದಣಿ ಮಾಡಿಸಿ ಅರ್ಜಿ ಹಾಕಿದ್ದು, ನಾಳೆಯಿಂದಲೇ ಹಣ ಹಾಕಲಾಗುವುದು. ಇನ್ನು ಆರೂವರೆ ಲಕ್ಷ ಚಾಲಕರು ಅರ್ಜಿ ಸಲ್ಲಿಸಬೇಕಿದೆ ಎಂದು ಮಾಹಿತಿ ನೀಡಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.