ETV Bharat / state

ಹರಿಹರ ನ್ಯಾಯಾಲಯದಿಂದ ರಾಜ್ಯ ಸಾರಿಗೆ ಬಸ್ ಜಪ್ತಿ

author img

By

Published : Feb 6, 2020, 2:33 PM IST

ಹೊಸಪೇಟೆ ವಿಭಾಗದ ಎರಡು ಕೆಎಸ್​ಆರ್​​​ ಟಿಸಿ ಬಸ್​​ಗಳನ್ನು ನ್ಯಾಯಾಲಯದ ಸಿಬ್ಬಂದಿ ಜಪ್ತಿ‌ ಮಾಡಿದ್ದಾರೆ. ಅಲ್ಲದೇ ಬಳಿಕ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

Northeastern Karnataka State Transport Bus
ನ್ಯಾಯಾಲಯದಿಂದ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಬಸ್ ಜಪ್ತಿ

ಹರಿಹರ: ನಗರದ ಕೆಎಸ್​​​ಆರ್​​​ಟಿಸಿ ಬಸ್ ನಿಲ್ದಾಣದಲ್ಲಿ ಹೊಸಪೇಟೆ ವಿಭಾಗದ ಎರಡು ಕೆಎಸ್​ಆರ್​​​ ಟಿಸಿ ಬಸ್​​ಗಳನ್ನು ನ್ಯಾಯಾಲಯದ ಸಿಬ್ಬಂದಿ ಜಪ್ತಿ‌ ಮಾಡಿದ್ದಾರೆ. ಅಲ್ಲದೇ ಬಳಿಕ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ದಾವಣಗೆರೆ ಕೆಟಿಜೆ ನಗರದ ನಿವಾಸಿಯಾದ ಶ್ರೀಪತಿ ಅವರು 2018ರಲ್ಲಿ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದರು. ಅಂದು ಮೃತನ ಕುಟುಂಬದವರು ಪರಿಹಾರ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ನ್ಯಾಯಾಲಯದ ಆದೇಶವನ್ನು ಕೆಎಸ್​​​ಆರ್​​​ಟಿಸಿ ಸಂಸ್ಥೆಯ ಅಧಿಕಾರಿಗಳು ಪಾಲಿಸಿರಲಿಲ್ಲ.

ನ್ಯಾಯಾಲಯದಿಂದ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಬಸ್ ಜಪ್ತಿ

ಮೃತರ ಕುಟುಂಬಕ್ಕೆ ರೂ. 27,58,346 ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸಿರಲಿಲ್ಲ.ಈ ನಿಟ್ಟಿನಲ್ಲಿ ಎರಡು ಕೆಎಸ್​ಆರ್​ಟಿಸಿ ಬಸ್​​​ಗಳನ್ನು ವಶಪಡಿಸಿಕೊಳ್ಳಲು, ಹಿರಿಯ ಸಿವಿಲ್ ನ್ಯಾಯಾಧೀಶ ವೈ.ಕೆ. ಬೇನಾಳ್ ಆದೇಶ ನೀಡಿದ್ದಾರೆ.

ಹರಿಹರ: ನಗರದ ಕೆಎಸ್​​​ಆರ್​​​ಟಿಸಿ ಬಸ್ ನಿಲ್ದಾಣದಲ್ಲಿ ಹೊಸಪೇಟೆ ವಿಭಾಗದ ಎರಡು ಕೆಎಸ್​ಆರ್​​​ ಟಿಸಿ ಬಸ್​​ಗಳನ್ನು ನ್ಯಾಯಾಲಯದ ಸಿಬ್ಬಂದಿ ಜಪ್ತಿ‌ ಮಾಡಿದ್ದಾರೆ. ಅಲ್ಲದೇ ಬಳಿಕ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ದಾವಣಗೆರೆ ಕೆಟಿಜೆ ನಗರದ ನಿವಾಸಿಯಾದ ಶ್ರೀಪತಿ ಅವರು 2018ರಲ್ಲಿ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದರು. ಅಂದು ಮೃತನ ಕುಟುಂಬದವರು ಪರಿಹಾರ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ನ್ಯಾಯಾಲಯದ ಆದೇಶವನ್ನು ಕೆಎಸ್​​​ಆರ್​​​ಟಿಸಿ ಸಂಸ್ಥೆಯ ಅಧಿಕಾರಿಗಳು ಪಾಲಿಸಿರಲಿಲ್ಲ.

ನ್ಯಾಯಾಲಯದಿಂದ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಬಸ್ ಜಪ್ತಿ

ಮೃತರ ಕುಟುಂಬಕ್ಕೆ ರೂ. 27,58,346 ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸಿರಲಿಲ್ಲ.ಈ ನಿಟ್ಟಿನಲ್ಲಿ ಎರಡು ಕೆಎಸ್​ಆರ್​ಟಿಸಿ ಬಸ್​​​ಗಳನ್ನು ವಶಪಡಿಸಿಕೊಳ್ಳಲು, ಹಿರಿಯ ಸಿವಿಲ್ ನ್ಯಾಯಾಧೀಶ ವೈ.ಕೆ. ಬೇನಾಳ್ ಆದೇಶ ನೀಡಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.