ETV Bharat / state

ಬಿಜೆಪಿ ಬೆೆಂಬಲಿಸೋದಾಗಿ ಹೇಳಿಕೆ ಕೊಡದೇ ಇದ್ದರೆ ಉಚ್ಚಾಟನೆ: ಬಂಡಾಯಗಾರರಿಗೆ ಈಶ್ವರಪ್ಪ ಗುದ್ದು

ದಾವಣಗೆರೆಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಈ ಹಿನ್ನೆಲೆಯಲ್ಲಿ ಬಂಡಾಯಗಾರರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಖಡಕ್ ವಾರ್ನಿಂಗ್ ನೀಡಿದ್ರು.

author img

By

Published : Nov 6, 2019, 8:06 PM IST

ಬಂಡಾಯಗಾರರಿಗೆ ಈಶ್ವರಪ್ಪ ಖಡಕ್ ವಾರ್ನಿಂಗ್

ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಲೆದೋರಿದೆ. ಇನ್ನೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತೇವೆ ಎಂಬುದಾಗಿ ಬಂಡಾಯ ನಾಯಕರು ಹೇಳಿಕೆ ನೀಡದಿದ್ದರೆ ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

ನಿಜಲಿಂಗಪ್ಪ ಬಡಾವಣೆಯ ಶಾರದಾಂಬ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಟಿಕೆಟ್ ಸಿಗದೆ ಬಂಡೆದ್ದು ಸ್ಪರ್ಧಿಸಿರುವವರ ಜೊತೆ ಪಕ್ಷದ ಮುಖಂಡರು ಮಾತನಾಡಿದ್ದು, ಮತ್ತೆ ಮನವೊಲಿಸುವ ಪ್ರಶ್ನೆಯೇ ಉದ್ಭವಿಸದು. ಹಾಗಾಗಿ ನಿರ್ಧಾರ ಬದಲಿಸದೇ ಇದ್ದರೆ ನವೆಂಬರ್ 8 ರಂದು ಪಕ್ಷದಿಂದ ಉಚ್ಚಾಟಿಸುವ ಬಗ್ಗೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಗರಂ ಆದರು.

ಬಂಡಾಯಗಾರರಿಗೆ ಈಶ್ವರಪ್ಪ ಖಡಕ್ ವಾರ್ನಿಂಗ್

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ಇದೆ. ಮಹಿಳಾ ಮೋರ್ಚಾದವರು ಪ್ರತಿ ಮನೆಗೂ ಹೋಗಿ ಹೆಣ್ಣು ಮಕ್ಕಳ ಮನವೊಲಿಸಿ. ಅವರ ಪತಿ ಕಾಂಗ್ರೆಸ್ ಆಗಿದ್ದರೂ ಬಿಡಬೇಡಿ. ಒಂದು ಮತವಾದರೂ ಬಿಜೆಪಿ ಹಾಕಿ ಎನ್ನಿ. ಸಾಧ್ಯವಾದರೆ ಪುರುಷರ ಮತವೂ ನಮಗೆ ಬರಲಿ. ಹೆಣ್ಣು ಮಕ್ಕಳ ಮಾತು ಯಾರೂ ಮೀರುವುದಿಲ್ಲ.‌ ನನ್ನನ್ನೂ ಸೇರಿಕೊಂಡು ಹೇಳುತ್ತೇನೆ ಎಂದರು.

ಯುವ ಮೋರ್ಚಾ ಅಧ್ಯಕ್ಷೆ 21 ಮಹಿಳೆಯರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದರು. ಆಗ ಈಶ್ವರಪ್ಪ ನಮ್ಮ ಮೀಸೆಗೆ ಬೆಲೆ ಇಲ್ಲವೇ ಎನ್ನುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರಲ್ಲದೇ, ಮಹಿಳೆಯರು‌ ಮನಸ್ಸು ಮಾಡಿದರೆ ಗೆಲುವು ಕಷ್ಟವಾಗಲಾರದು. ಪ್ರತಿಯೊಬ್ಬ ಕಾರ್ಯಕರ್ತನೂ ತಾನೇ ಅಭ್ಯರ್ಥಿ ಎಂದುಕೊಂಡು ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಕಳೆದ ಬಾರಿಯ ಶಿವಮೊಗ್ಗ ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ಬೂತ್‌ನಲ್ಲೂ ಮುಸ್ಲೀಮರ ಮತಗಳು ನನಗೆ ಬಿದ್ದಿವೆ. ಮುಸಲ್ಮಾನ ಹೆಣ್ಣುಮಕ್ಕಳು ನನ್ನ ಮನೆಗೆ ಕಷ್ಟ ಹೇಳಿಕೊಂಡು ಬರುವಾಗ ಬುರ್ಖಾ ಹಾಕಿಕೊಂಡು ಬರುತ್ತಿದ್ದರು. ಅವರ ಸಮಸ್ಯೆಗೆ ಸ್ಪಂದಿಸಿದ ಬಳಿಕ ಅಕ್ಕ ತಂಗಿಯರಂತೆ ಬುರ್ಖಾ ತೆಗೆದು ಬರುತ್ತಿದ್ದಾರೆ ಎಂದು ಹೇಳಿದರು.

ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಲೆದೋರಿದೆ. ಇನ್ನೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತೇವೆ ಎಂಬುದಾಗಿ ಬಂಡಾಯ ನಾಯಕರು ಹೇಳಿಕೆ ನೀಡದಿದ್ದರೆ ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

ನಿಜಲಿಂಗಪ್ಪ ಬಡಾವಣೆಯ ಶಾರದಾಂಬ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಟಿಕೆಟ್ ಸಿಗದೆ ಬಂಡೆದ್ದು ಸ್ಪರ್ಧಿಸಿರುವವರ ಜೊತೆ ಪಕ್ಷದ ಮುಖಂಡರು ಮಾತನಾಡಿದ್ದು, ಮತ್ತೆ ಮನವೊಲಿಸುವ ಪ್ರಶ್ನೆಯೇ ಉದ್ಭವಿಸದು. ಹಾಗಾಗಿ ನಿರ್ಧಾರ ಬದಲಿಸದೇ ಇದ್ದರೆ ನವೆಂಬರ್ 8 ರಂದು ಪಕ್ಷದಿಂದ ಉಚ್ಚಾಟಿಸುವ ಬಗ್ಗೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಗರಂ ಆದರು.

ಬಂಡಾಯಗಾರರಿಗೆ ಈಶ್ವರಪ್ಪ ಖಡಕ್ ವಾರ್ನಿಂಗ್

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ಇದೆ. ಮಹಿಳಾ ಮೋರ್ಚಾದವರು ಪ್ರತಿ ಮನೆಗೂ ಹೋಗಿ ಹೆಣ್ಣು ಮಕ್ಕಳ ಮನವೊಲಿಸಿ. ಅವರ ಪತಿ ಕಾಂಗ್ರೆಸ್ ಆಗಿದ್ದರೂ ಬಿಡಬೇಡಿ. ಒಂದು ಮತವಾದರೂ ಬಿಜೆಪಿ ಹಾಕಿ ಎನ್ನಿ. ಸಾಧ್ಯವಾದರೆ ಪುರುಷರ ಮತವೂ ನಮಗೆ ಬರಲಿ. ಹೆಣ್ಣು ಮಕ್ಕಳ ಮಾತು ಯಾರೂ ಮೀರುವುದಿಲ್ಲ.‌ ನನ್ನನ್ನೂ ಸೇರಿಕೊಂಡು ಹೇಳುತ್ತೇನೆ ಎಂದರು.

ಯುವ ಮೋರ್ಚಾ ಅಧ್ಯಕ್ಷೆ 21 ಮಹಿಳೆಯರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದರು. ಆಗ ಈಶ್ವರಪ್ಪ ನಮ್ಮ ಮೀಸೆಗೆ ಬೆಲೆ ಇಲ್ಲವೇ ಎನ್ನುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರಲ್ಲದೇ, ಮಹಿಳೆಯರು‌ ಮನಸ್ಸು ಮಾಡಿದರೆ ಗೆಲುವು ಕಷ್ಟವಾಗಲಾರದು. ಪ್ರತಿಯೊಬ್ಬ ಕಾರ್ಯಕರ್ತನೂ ತಾನೇ ಅಭ್ಯರ್ಥಿ ಎಂದುಕೊಂಡು ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಕಳೆದ ಬಾರಿಯ ಶಿವಮೊಗ್ಗ ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ಬೂತ್‌ನಲ್ಲೂ ಮುಸ್ಲೀಮರ ಮತಗಳು ನನಗೆ ಬಿದ್ದಿವೆ. ಮುಸಲ್ಮಾನ ಹೆಣ್ಣುಮಕ್ಕಳು ನನ್ನ ಮನೆಗೆ ಕಷ್ಟ ಹೇಳಿಕೊಂಡು ಬರುವಾಗ ಬುರ್ಖಾ ಹಾಕಿಕೊಂಡು ಬರುತ್ತಿದ್ದರು. ಅವರ ಸಮಸ್ಯೆಗೆ ಸ್ಪಂದಿಸಿದ ಬಳಿಕ ಅಕ್ಕ ತಂಗಿಯರಂತೆ ಬುರ್ಖಾ ತೆಗೆದು ಬರುತ್ತಿದ್ದಾರೆ ಎಂದು ಹೇಳಿದರು.

Intro:ರಿಪೋರ್ಟರ್ : ಯೋಗರಾಜ್

ಇನ್ನೆರಡು ದಿನಗಳಲ್ಲಿ ಬಂಡಾಯಗಾರರು ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸದಿದ್ದರೆ ಉಚ್ಚಾಟನೆ : ಈಶ್ವರಪ್ಪ ಖಡಕ್ ವಾರ್ನಿಂಗ್

ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಲೆದೋರಿದೆ. ಬಂಡಾಯಗಾರರಿಗೆ ಖಡಕ್ ವಾರ್ನಿಂಗ್ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ, ಇನ್ನೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತೇವೆ ಎಂಬುದಾಗಿ ಬಂಡಾಯಗಾರರು ಹೇಳಿಕೆ ನೀಡದಿದ್ದರೆ ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಹೇಳಿದ್ದಾರೆ.

ನಗರದ ನಿಜಲಿಂಗಪ್ಪ ಬಡಾವಣೆಯ ಶಾರದಾಂಬ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಟಿಕೆಟ್ ಸಿಗದೇ ಬಂಡೆದ್ದು ಸ್ಪರ್ಧಿಸಿರುವವರ ಜೊತೆ ಪಕ್ಷದ ಮುಖಂಡರು ಮಾತನಾಡಿ ಮುಗಿದಿದೆ. ಮತ್ತೆ ಮನವೊಲಿಸುವ ಪ್ರಶ್ನೆಯೇ ಇಲ್ಲ. ನಿರ್ಧಾರ ಬದಲಿಸದಿದ್ದರೆ ನವೆಂಬರ್ ೮ ರಂದು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ಇದೆ. ಮಹಿಳಾ ಮೋರ್ಚಾದವರು ಪ್ರತಿ ಮನೆಗೂ ಹೋಗಿ ಹೆಣ್ಣು ಮಕ್ಕಳ ಮನವೊಲಿಸಿ. ಅವರ ಪತಿ ಕಾಂಗ್ರೆಸ್ ಆಗಿದ್ದರೂ ಬಿಡಬೇಡಿ. ಒಂದು ಮತವಾದರೂ ಬಿಜೆಪಿ ಹಾಕಿ ಎನ್ನಿ. ಸಾಧ್ಯವಾದರೆ ಪುರುಷರ ಮತವೂ ನಮಗೆ ಬರಲಿ. ಹೆಣ್ಣು ಮಕ್ಕಳ ಮಾತು ಯಾರೂ ಮೀರುವುದಿಲ್ಲ.‌ ನನ್ನನ್ನೂ ಸೇರಿಕೊಂಡು ಹೇಳುತ್ತೇನೆ ಎಂದರು.

ಯುವ ಮೋರ್ಚಾ ಅಧ್ಯಕ್ಷೆ ೨೧ ಮಹಿಳೆಯರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದರು. ಆಗ ಈಶ್ವರಪ್ಪ ನಮ್ಮ ಮೀಸೆಗೆ ಬೆಲೆ ಇಲ್ಲವೇ ಎನ್ನುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರಲ್ಲದೇ, ಮಹಿಳೆಯರು‌ ಮನಸ್ಸು ಮಾಡಿದರೆ ಗೆಲುವು ಕಷ್ಟವಾಗಲಾರದು. ಪ್ರತಿಯೊಬ್ಬ ಕಾರ್ಯಕರ್ತನೂ ತಾನೇ ಅಭ್ಯರ್ಥಿ ಎಂದುಕೊಂಡು ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಕಳೆದ ಶಿವಮೊಗ್ಗ ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ಬೂತ್ ನಲ್ಲೂ ಮುಸ್ಲಿಂರ ಮತಗಳು ನನಗೆ ಬಂದಿವೆ. ಮುಸಲ್ಮಾನ ಹೆಣ್ಣುಮಕ್ಕಳು ನನ್ನ ಮನೆಗೆ ಕಷ್ಟ ಹೇಳಿಕೊಂಡು ಬರುವಾಗ ಬುರ್ಖಾ ಹಾಕಿಕೊಂಡು ಬರುತ್ತಿದ್ದರು. ಅವರ ಸಮಸ್ಯೆಗೆ ಸ್ಪಂದಿಸಿದ ಬಳಿಕ ಅಕ್ಕ ತಂಗಿಯರಂತೆ ಬುರ್ಖಾ ತೆಗೆದು ಬರುತ್ತಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಶಾಸಕರಾದ ಎಸ್. ಎ. ರವೀಂದ್ರನಾಥ್, ಮಾಡಾಳು ವಿರೂಪಾಕ್ಷಪ್ಪ, ಪ್ರೊ.‌ಲಿಂಗಣ್ಣ. ಎಸ್. ವಿ. ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಶಾಸಕ ನಾರಾಯಣ ಸ್ವಾಮಿ, ಮಹಾನಗರ ಪಾಲಿಕೆಯ ಬಹುತೇಕ ಬಿಜೆಪಿ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

ಬೈಟ್

ಕೆ. ಎಸ್. ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ


Body:ರಿಪೋರ್ಟರ್ : ಯೋಗರಾಜ್

ಇನ್ನೆರಡು ದಿನಗಳಲ್ಲಿ ಬಂಡಾಯಗಾರರು ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸದಿದ್ದರೆ ಉಚ್ಚಾಟನೆ : ಈಶ್ವರಪ್ಪ ಖಡಕ್ ವಾರ್ನಿಂಗ್

ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಲೆದೋರಿದೆ. ಬಂಡಾಯಗಾರರಿಗೆ ಖಡಕ್ ವಾರ್ನಿಂಗ್ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ, ಇನ್ನೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತೇವೆ ಎಂಬುದಾಗಿ ಬಂಡಾಯಗಾರರು ಹೇಳಿಕೆ ನೀಡದಿದ್ದರೆ ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಹೇಳಿದ್ದಾರೆ.

ನಗರದ ನಿಜಲಿಂಗಪ್ಪ ಬಡಾವಣೆಯ ಶಾರದಾಂಬ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಟಿಕೆಟ್ ಸಿಗದೇ ಬಂಡೆದ್ದು ಸ್ಪರ್ಧಿಸಿರುವವರ ಜೊತೆ ಪಕ್ಷದ ಮುಖಂಡರು ಮಾತನಾಡಿ ಮುಗಿದಿದೆ. ಮತ್ತೆ ಮನವೊಲಿಸುವ ಪ್ರಶ್ನೆಯೇ ಇಲ್ಲ. ನಿರ್ಧಾರ ಬದಲಿಸದಿದ್ದರೆ ನವೆಂಬರ್ ೮ ರಂದು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ಇದೆ. ಮಹಿಳಾ ಮೋರ್ಚಾದವರು ಪ್ರತಿ ಮನೆಗೂ ಹೋಗಿ ಹೆಣ್ಣು ಮಕ್ಕಳ ಮನವೊಲಿಸಿ. ಅವರ ಪತಿ ಕಾಂಗ್ರೆಸ್ ಆಗಿದ್ದರೂ ಬಿಡಬೇಡಿ. ಒಂದು ಮತವಾದರೂ ಬಿಜೆಪಿ ಹಾಕಿ ಎನ್ನಿ. ಸಾಧ್ಯವಾದರೆ ಪುರುಷರ ಮತವೂ ನಮಗೆ ಬರಲಿ. ಹೆಣ್ಣು ಮಕ್ಕಳ ಮಾತು ಯಾರೂ ಮೀರುವುದಿಲ್ಲ.‌ ನನ್ನನ್ನೂ ಸೇರಿಕೊಂಡು ಹೇಳುತ್ತೇನೆ ಎಂದರು.

ಯುವ ಮೋರ್ಚಾ ಅಧ್ಯಕ್ಷೆ ೨೧ ಮಹಿಳೆಯರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದರು. ಆಗ ಈಶ್ವರಪ್ಪ ನಮ್ಮ ಮೀಸೆಗೆ ಬೆಲೆ ಇಲ್ಲವೇ ಎನ್ನುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರಲ್ಲದೇ, ಮಹಿಳೆಯರು‌ ಮನಸ್ಸು ಮಾಡಿದರೆ ಗೆಲುವು ಕಷ್ಟವಾಗಲಾರದು. ಪ್ರತಿಯೊಬ್ಬ ಕಾರ್ಯಕರ್ತನೂ ತಾನೇ ಅಭ್ಯರ್ಥಿ ಎಂದುಕೊಂಡು ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಕಳೆದ ಶಿವಮೊಗ್ಗ ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ಬೂತ್ ನಲ್ಲೂ ಮುಸ್ಲಿಂರ ಮತಗಳು ನನಗೆ ಬಂದಿವೆ. ಮುಸಲ್ಮಾನ ಹೆಣ್ಣುಮಕ್ಕಳು ನನ್ನ ಮನೆಗೆ ಕಷ್ಟ ಹೇಳಿಕೊಂಡು ಬರುವಾಗ ಬುರ್ಖಾ ಹಾಕಿಕೊಂಡು ಬರುತ್ತಿದ್ದರು. ಅವರ ಸಮಸ್ಯೆಗೆ ಸ್ಪಂದಿಸಿದ ಬಳಿಕ ಅಕ್ಕ ತಂಗಿಯರಂತೆ ಬುರ್ಖಾ ತೆಗೆದು ಬರುತ್ತಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಶಾಸಕರಾದ ಎಸ್. ಎ. ರವೀಂದ್ರನಾಥ್, ಮಾಡಾಳು ವಿರೂಪಾಕ್ಷಪ್ಪ, ಪ್ರೊ.‌ಲಿಂಗಣ್ಣ. ಎಸ್. ವಿ. ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಶಾಸಕ ನಾರಾಯಣ ಸ್ವಾಮಿ, ಮಹಾನಗರ ಪಾಲಿಕೆಯ ಬಹುತೇಕ ಬಿಜೆಪಿ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

ಬೈಟ್

ಕೆ. ಎಸ್. ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.