ETV Bharat / state

ಕೊರೊನಾಗೆ ದಾವಣಗೆರೆ ಸಂಚಾರಿ ಪೊಲೀಸ್ ಹೆಡ್ ಕಾನ್ಸ್​​ಟೇಬಲ್ ಬಲಿ

author img

By

Published : Nov 6, 2020, 1:27 PM IST

ಪೊಲೀಸ್ ಇಲಾಖೆಗೆ 1,999ರ ಬ್ಯಾಚ್​​ನಲ್ಲಿ ಆಯ್ಕೆಯಾಗಿದ್ದ ಅರಸ್ ಸರಳ ವ್ಯಕ್ತಿ ಆಗಿದ್ದರು. ಇದೀಗ ಕೊರೊನಾ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ

davangere-traffic-police-head-constable-passes-away-from-corona
ಕೊರೊನಾಗೆ ದಾವಣಗೆರೆ ಸಂಚಾರಿ ಪೊಲೀಸ್ ಹೆಡ್ ಕಾನ್ಸ್​​ಟೇಬಲ್ ಬಲಿ

ದಾವಣಗೆರೆ: ಕೊರೊನಾದಿಂದಾಗಿ ನಗರದ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್​​ಸ್ಟೇಬಲ್ ಬಲಿಯಾಗಿದ್ದಾರೆ. ನಾರಾಯಣ ಅರಸ್ ಮೃತಪಟ್ಟ ಪೊಲೀಸ್ ಸಿಬ್ಬಂದಿಯಾಗಿದ್ದು, ಇತ್ತೀಚೆಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಅವರು ತೀವ್ರ ಅಸ್ವಸ್ಥಗೊಂಡಿದ್ದರು.

ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಮೃತಪಟ್ಟಿದ್ದಾರೆ‌. ಪೊಲೀಸ್ ಇಲಾಖೆಗೆ 1999ರ ಬ್ಯಾಚ್​​ನಲ್ಲಿ ಆಯ್ಕೆಯಾಗಿದ್ದ ಅರಸ್ ಸರಳ ವ್ಯಕ್ತಿ ಆಗಿದ್ದರು. ಇಲಾಖೆಯಲ್ಲಿಯೂ ಒಳ್ಳೆಯ ಹೆಸರು ಪಡೆದಿದ್ದರು. ಅರಸ್ ಅಕಾಲಿಕ‌ ನಿಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಎಸ್​ಪಿ ರಾಜೀವ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.

ದಾವಣಗೆರೆ: ಕೊರೊನಾದಿಂದಾಗಿ ನಗರದ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್​​ಸ್ಟೇಬಲ್ ಬಲಿಯಾಗಿದ್ದಾರೆ. ನಾರಾಯಣ ಅರಸ್ ಮೃತಪಟ್ಟ ಪೊಲೀಸ್ ಸಿಬ್ಬಂದಿಯಾಗಿದ್ದು, ಇತ್ತೀಚೆಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಅವರು ತೀವ್ರ ಅಸ್ವಸ್ಥಗೊಂಡಿದ್ದರು.

ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಮೃತಪಟ್ಟಿದ್ದಾರೆ‌. ಪೊಲೀಸ್ ಇಲಾಖೆಗೆ 1999ರ ಬ್ಯಾಚ್​​ನಲ್ಲಿ ಆಯ್ಕೆಯಾಗಿದ್ದ ಅರಸ್ ಸರಳ ವ್ಯಕ್ತಿ ಆಗಿದ್ದರು. ಇಲಾಖೆಯಲ್ಲಿಯೂ ಒಳ್ಳೆಯ ಹೆಸರು ಪಡೆದಿದ್ದರು. ಅರಸ್ ಅಕಾಲಿಕ‌ ನಿಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಎಸ್​ಪಿ ರಾಜೀವ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.