ETV Bharat / state

ನಾಳೆಯಿಂದ ಮಂಗಳವಾರದವರೆಗೆ ದಾವಣಗೆರೆ ಕಂಪ್ಲೀಟ್​ ಲಾಕ್​ಡೌನ್​

ದಾವಣಗೆರೆ ಜಿಲ್ಲೆಯ ಕೊರೊನಾ ಹೆಚ್ಚಾದ ಹಿನ್ನೆಲೆ ನಾಳೆಯಿಂದ ಮಂಗಳವಾರದವರೆಗೆ ದಾವಣಗೆರೆ ಸಂಪೂರ್ಣ ಲಾಕ್​ಡೌನ್ ಮಾಡಲು ನಿರ್ಧರಿಸಲಾಗಿದೆ. ಎಲ್ಲರೂ ದಯವಿಟ್ಟು ನಿಯಮ ಪಾಲಿಸಿ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮನವಿ ಮಾಡಿದ್ದಾರೆ.

author img

By

Published : May 20, 2021, 10:53 PM IST

Bhairati Basavaraj
ಸಚಿವ ಭೈರತಿ ಬಸವರಾಜ್​

ದಾವಣಗೆರೆ: ಕೊರೊನಾ ಆರ್ಭಟ ಹಿನ್ನೆಲೆ ನಾಳೆಯಿಂದ ಮಂಗಳವಾರದವರೆಗೆ ದಾವಣಗೆರೆ ಸಂಪೂರ್ಣ ಲಾಕ್​ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.

ಸಚಿವ ಭೈರತಿ ಬಸವರಾಜ್​

ಕೊರೊನಾ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ನಾಳೆ ಬೆಳಗ್ಗೆ 10 ಗಂಟೆಯಿಂದ ಸೋಮವಾರ 6 ಗಂಟೆ ತನಕ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ತಾಲೂಕುಗಳಲ್ಲಿ ಸೋಂಕು ಹೆಚ್ಚಳ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಿದ್ದು ಜಿಲ್ಲೆಯ ಜನ ಸಹಕರಿಸಬೇಕು ಎಂದಿದ್ದಾರೆ.

ಅಗತ್ಯ ಸೇವೆ ಬಿಟ್ಟು ಎಲ್ಲವು ಬಂದ್ ಆಗಲಿದ್ದು, ಹೋಟೆಲ್ ಪಾರ್ಸಲ್, ಮೆಡಿಕಲ್ ಓಪನ್​ ಇರುತ್ತೆ. ಹಾಲು, ಮೊಟ್ಟೆಗೆ ಬೆಳಗ್ಗೆ 10ರ ತನಕ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮೂರು ದಿನ ಮಾರುಕಟ್ಟೆ ಕೂಡ ಇರುವುದಿಲ್ಲ. ಬದಲಾಗಿ ಮನೆ ಮನೆಗೆ ತರಕಾರಿ ನೀಡಲು ಪಾಲಿಕೆ ವತಿಯಿಂದ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಓದಿ:18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪುನಾರಂಭ, ಆದ್ಯತೆ ಗುಂಪುಗಳಿಗೆ ಮೊದಲು ಲಸಿಕೆ

ದಾವಣಗೆರೆ: ಕೊರೊನಾ ಆರ್ಭಟ ಹಿನ್ನೆಲೆ ನಾಳೆಯಿಂದ ಮಂಗಳವಾರದವರೆಗೆ ದಾವಣಗೆರೆ ಸಂಪೂರ್ಣ ಲಾಕ್​ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.

ಸಚಿವ ಭೈರತಿ ಬಸವರಾಜ್​

ಕೊರೊನಾ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ನಾಳೆ ಬೆಳಗ್ಗೆ 10 ಗಂಟೆಯಿಂದ ಸೋಮವಾರ 6 ಗಂಟೆ ತನಕ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ತಾಲೂಕುಗಳಲ್ಲಿ ಸೋಂಕು ಹೆಚ್ಚಳ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಿದ್ದು ಜಿಲ್ಲೆಯ ಜನ ಸಹಕರಿಸಬೇಕು ಎಂದಿದ್ದಾರೆ.

ಅಗತ್ಯ ಸೇವೆ ಬಿಟ್ಟು ಎಲ್ಲವು ಬಂದ್ ಆಗಲಿದ್ದು, ಹೋಟೆಲ್ ಪಾರ್ಸಲ್, ಮೆಡಿಕಲ್ ಓಪನ್​ ಇರುತ್ತೆ. ಹಾಲು, ಮೊಟ್ಟೆಗೆ ಬೆಳಗ್ಗೆ 10ರ ತನಕ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮೂರು ದಿನ ಮಾರುಕಟ್ಟೆ ಕೂಡ ಇರುವುದಿಲ್ಲ. ಬದಲಾಗಿ ಮನೆ ಮನೆಗೆ ತರಕಾರಿ ನೀಡಲು ಪಾಲಿಕೆ ವತಿಯಿಂದ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಓದಿ:18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪುನಾರಂಭ, ಆದ್ಯತೆ ಗುಂಪುಗಳಿಗೆ ಮೊದಲು ಲಸಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.