ETV Bharat / state

ಕ್ಯಾ‌ನ್ಸರ್​ಗೆ ತುತ್ತಾದ ಮಗಳು.. ಪುತ್ರಿಯ ಆಸೆಯಂತೆ ಸುಂದರ ಮೂರ್ತಿ ಮಾಡಿಸಿದ ತಾಯಿ

author img

By ETV Bharat Karnataka Team

Published : Dec 14, 2023, 11:05 PM IST

Updated : Dec 15, 2023, 9:15 PM IST

ಕ್ಯಾನ್ಸರ್ ಕಾಯಿಲೆಯಿಂದ ನಿಧನಳಾದ ಮಗಳ ನೆನಪಿಗಾಗಿ ತಾಯಿಯೊಬ್ಬರು ಪುತ್ರಿಯ ಮೂರ್ತಿಯನ್ನು ಮಾಡಿಸಿದ್ದಾರೆ.

ಪುತ್ರಿಯ ಆಸೆಯಂತೆ ಸುಂದರ ಮೂರ್ತಿ ಮಾಡಿಸಿದ ತಾಯಿ
ಪುತ್ರಿಯ ಆಸೆಯಂತೆ ಸುಂದರ ಮೂರ್ತಿ ಮಾಡಿಸಿದ ತಾಯಿ
ಶಿಕ್ಷಕಿ ಜಿ ಎನ್ ಕಮಲಮ್ಮ

ದಾವಣಗೆರೆ : ಅವರು ಮಕ್ಕಳಿಗೆ ವಿದ್ಯಾದಾನ ಮಾಡುವ ಮುಖೇನ ಪರರ ಮಕ್ಕಳ ಬದುಕನ್ನು ಸುಂದರವಾಗಿಸಿದ ಶಿಕ್ಷಕಿ. ತನ್ನ ಮುದ್ದಿನ ಮಗಳಿಗೆ ಬಿಇ ಓದಿಸಿ ಮದುವೆ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದವರು. ಆ ಅಮ್ಮ- ಮಗಳು ಕಂಡಿದ್ದ ಕನಸುಗಳಿಗೆ ಕ್ಯಾನ್ಸರ್ ಎಂಬ ಮಹಾಮರಿ ಕೊಳ್ಳಿ ಇಟ್ಟಿದೆ.

ದಾವಣಗೆರೆಯ ಶಿಕ್ಷಕಿ ಜಿ ಎನ್ ಕಮಲಮ್ಮ ಅವರ ಪುತ್ರಿ ಕಾವ್ಯ ಹುಟ್ಟತ್ತಲೇ ತಂದೆಯ ಮುಖ ನೋಡದೇ ಬೆಳೆದವರು. ಮತ್ತೊಂದೆಡೆ ಕಾವ್ಯಾಗೆ ಕ್ಯಾನ್ಸರ್ ಎಂಬ ಮಹಾಮಾರಿ ಕಾಡಿತ್ತು. ನಾಲ್ಕು ವರ್ಷ ಆ ಮಹಾಮಾರಿಯೊಂದಿಗೆ ಹೋರಾಡಿದ ಕಾವ್ಯಾ (30) ಅಂತಿಮವಾಗಿ ಮರಣವನ್ನಪ್ಪಿದ್ದರು. ಆದರೆ, ಸಾವಿಗೂ ಮುನ್ನ ಕೆಲ ಬಯಕೆಗಳನ್ನು ವ್ಯಕ್ತಪಡಿಸಿದ್ದರಂತೆ. ಆ ಆಸೆಗಳನ್ನು ಕೊನೆಗೂ ಈಡೇರಿಸಿದ್ದಾರೆ. ಮಗಳ ಸುಂದರ ಮೂರ್ತಿ ನಿರ್ಮಿಸಿ 'ನನ್ನ ಮಗಳು ಜೀವಂತ ಇದ್ದಾಳೆ' ಎಂದು ಭಾವಿಸಿ ಒಂಟಿ ಜೀವನ ಸಾಗಿಸುತ್ತಿದ್ದಾರೆ.

ಹೌದು, ನಗರದ ಸರಸ್ವತಿ ಬಡಾವಣೆಯ ನಿವಾಸಿ, ನಿವೃತ್ತ ಶಿಕ್ಷಕಿ ಜಿ ಎನ್ ಕಮಲಮ್ಮನವರ ಪುತ್ರಿ ಕಾವ್ಯ ಅವರು ಇದ್ದಕ್ಕಿದ್ದಂತೆ ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್​ಗೆ ತುತ್ತಾದವರು. ಬಿಇ ಪದವಿ ಪಡೆದಿರುವ ಅವರಿಗೆ ಮದುವೆ ಕೂಡ ನಿಶ್ಚಿಯವಾಗಿತ್ತು. ವೈವಾಹಿಕ ಜೀವನಕ್ಕೂ ಕಾಲಿಡಬೇಕಿತ್ತು. ಆದರೆ, ಕ್ಯಾನ್ಸರ್ ಅವರನ್ನು ಮದುವೆಗೂ ಮುನ್ನ ಬಲಿ ಪಡೆದಿತ್ತು.

ಪುತ್ರಿಯ ಆಸೆಯಂತೆ ಸುಂದರ ಮೂರ್ತಿ ಮಾಡಿಸಿದ ತಾಯಿ
ಪುತ್ರಿಯ ಆಸೆಯಂತೆ ಸುಂದರ ಮೂರ್ತಿ ಮಾಡಿಸಿದ ತಾಯಿ

2019 ರಲ್ಲಿ ಬೆಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಆರಂಭ ಮಾಡಿದ್ದರು. ಹೀಗೆ ಸತತ ನಾಲ್ಕು ವರ್ಷಗಳ ಕಾಲ ಮಹಾಮಾರಿ ಕ್ಯಾನ್ಸರ್ ಜೊತೆ ಹೋರಾಡಿದ ಕಾವ್ಯ ಊಟ ಮಾಡ್ತಾ ತಾಯಿ ತೊಡೆಮೆಲೆ ಮಲಗಿ ಡಿ,10, 2022 ರಂದು ಕೊನೆಯುಸಿರೆಳೆದಿದ್ದರು. ಸಾವಿಗೂ ಮುನ್ನ ನನ್ನ ಸಮಾಧಿ ಮಾಡಿ ಉದ್ಯಾನ ನಿರ್ಮಿಸಿ, ತನ್ನದೊಂದು ಮೂರ್ತಿ ಮಾಡಿಸುವಂತೆ ಹಾಗೂ ಮೃತದೇಹವನ್ನು ಡೊನೆಟ್ ಮಾಡುವಂತೆ ಕೇಳಿಕೊಂಡಿದ್ದಳು. ಆದರೆ, ದೇಹ ದಾನ ಮಾಡಲು ಆಗಲ್ಲ ಎಂದು ವೈದ್ಯರು ನಿರಾಕರಿಸಿದ್ದರಿಂದ ಕಮಲಮ್ಮನವರು ಗೋಪನಾಳು ಗ್ರಾಮದಲ್ಲಿ 4 ಗುಂಟೆ ಜಮೀನು ಖರೀದಿಸಿ ಶವಸಂಸ್ಕಾರ ಮಾಡಿದ್ದರು. ಮಗಳ ಆಸೆಯಂತೆ ಉದ್ಯಾನ, ಗಿಡಗಳನ್ನು ನೆಟ್ಟು ಸಮಾಧಿ ನಿರ್ಮಿಸಿದ್ದು ಮೇಲೆ ಡೈಮೆಂಡ್ ಶೇಪ್ ಕಮಾನು ಕೂಡ ಕಟ್ಟಿಸಿದ್ದಾರೆ.

ಮಗಳನ್ನು ಉಳಿಸಿಕೊಳ್ಳಲು ಹೋರಾಡಿ ಸೋತ ತಾಯಿ: ಕ್ಯಾನ್ಸರ್​ಗೆ ತುತ್ತಾಗಿದ್ದ ತನ್ನ ಒಬ್ಬಳೇ ಮಗಳು ಕಾವ್ಯಳನ್ನು ಉಳಿಸಿಕೊಳ್ಳಲು 4 ವರ್ಷಗಳಲ್ಲಿ ತಾಯಿ ಕಮಲಮ್ಮ ಒಟ್ಟು 40 ಲಕ್ಷ ರೂ. ಖರ್ಚು ಮಾಡಿದ್ದಾರೆ. ಹುಟ್ಟುತ್ತಲೇ ತಂದೆಯನ್ನು ಕಳೆದುಕೊಂಡಿದ್ದ ಕಾವ್ಯಗೆ ಆ ಭಾವನೆ ಕಾಡಬಾರದೆಂಬ ರೀತಿಯಲ್ಲಿ ತಾಯಿ ಕಮಲಮ್ಮರವರೇ ತಂದೆ ಸ್ಥಾನ ತುಂಬಿದ್ದರು. ರಾಣೆಬೆನ್ನೂರಿನ ಇಂಜಿನಿಯರ್ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದ ಕಾವ್ಯ ಬಳಿಕ ಬೆಂಗಳೂರಿನಲ್ಲಿ ಎರಡು ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಸಹ ಮಾಡಿದ್ದರು. ಮೊಬೈಲ್​ನಲ್ಲಿ ಬಂದಂತಹ ಮಹಿಳೆಯೊಬ್ಬರ ಮೂರ್ತಿಯ ವಿಡಿಯೋವೊಂದನ್ನು ವೀಕ್ಷಿಸಿ ಈ ರೀತಿಯ ಮೂರ್ತಿ ಮಾಡಿಸುವಂತೆ ಕೇಳಿಕೊಂಡಿದ್ದಳು. ನನ್ನ ಮೂರ್ತಿ ಮನೆಯಲ್ಲಿದ್ದರೆ ನಾನು ನಿಜವಾಗಿಯೂ ಮನೆಯಲ್ಲಿದ್ದೇನೆ ಎಂದುಕೊಂಡು ತಾಯಿ ಜೀವನ ಮಾಡ್ತಾರೆ, ತನ್ನ ಸಾವಿನ ಬಳಿಕ ಕುಗ್ಗುವುದಿಲ್ಲ ಎಂಬ ಭಾವನೆ ನನ್ನ ಪುತ್ರಿಯ ತಲೆಯಲ್ಲಿ ಬಂದಿತ್ತು. ಆದ್ದರಿಂದ ಮೂರ್ತಿ ಮಾಡ್ಸಮ್ಮಾ ಎಂದು ಜೀವ ಹೋಗುವ ಅಂತಿಮ ದಿನಗಳಲ್ಲಿ ಹೇಳಿದ್ದನ್ನು ನೆನೆದು ತಾಯಿ ಕಮಲಮ್ಮ ಕಣ್ಣೀರಿಟ್ಟರು.

ಪ್ರಶಸ್ತಿ ಸ್ವೀಕರಿಸುತ್ತಿರುವ ಕಾವ್ಯಾ
ಕಾವ್ಯಾ ಬಾಲ್ಯದ ಫೋಟೋ

ಮೂರ್ತಿ ಮಾಡಿಸಿದ ತಾಯಿ ಕಮಲಮ್ಮ: ಮಗಳ ಆಸೆಯಂತೆ ತಾಯಿ ಕಮಲಮ್ಮನವರು ಪುತ್ರಿ ಕಾವ್ಯ ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮೂರ್ತಿ ಮಾಡುವವರನ್ನು ಹುಡುಕಿ ಕಲಾವಿದ ವಿಶ್ವನಾಥ್ ಎಂಬುವವರ ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಬೆಂಗಳೂರು ಮೂಲದ ಕಲಾವಿದ ವಿಶ್ವನಾಥ್ ಅವರು 3.30 ಲಕ್ಷದಲ್ಲಿ ಕಾವ್ಯ ಅವರ 'ಸಿಲಿಕಾನ್ ' ಮಾದರಿಯ ಸುಂದರ ಮೂರ್ತಿಯನ್ನು ತಾಯಿಯ ಭಾವನೆಗೆ ತಕ್ಕಂತೆ ನಿರ್ಮಿಸಿಕೊಟ್ಟಿದ್ದಾರೆ.

ಇನ್ನು ಈ ಮೂರ್ತಿಯನ್ನು ಮಾನವನ ಚರ್ಮದ ಮಾದರಿಯಲ್ಲೇ ನಿರ್ಮಿಸಿರುವುದು ಜನರನ್ನು ಆಕರ್ಷಿಸುತ್ತಿದೆ. ಈ ಸಿಲಿಕಾನ್ ಮಾದರಿಯ ಮೂರ್ತಿಯನ್ನು ಮನೆಯಲ್ಲಿಟ್ಟುಕೊಂಡು ತಾಯಿ ಕಮಲಮ್ಮ ಜೀವನ ನಡೆಸುತ್ತಿದ್ದಾರೆ. ಇನ್ನು ಕಾವ್ಯಾ ನೋವಿನ ಕಥೆ ಕೇಳಿ ಕಲಾವಿದ ವಿಶ್ವನಾಥ್ ಅವರು 5 ಲಕ್ಷದ ವೆಚ್ಚದ ಮೂರ್ತಿಯನ್ನು ಕೇವಲ 3.30 ಲಕ್ಷದಲ್ಲಿ ನಿರ್ಮಿಸಿದ್ದಾರೆ.

ಕಲ್ಯಾಣ ಮಂಟಪದಲ್ಲಿ ಅದ್ಧೂರಿ ಕಾರ್ಯಕ್ರಮ‌ ಮಾಡಿ ಮೂರ್ತಿಯನ್ನು ಇರಿಸಿ ಮಗಳ ಹೆಸರಿನಲ್ಲಿ ಪುಸ್ತಕ ಬಿಡುಗಡೆ ಮಾಡಲಾಗಿದೆ. ಮಗಳು ಕಾವ್ಯಳ ಮೂರ್ತಿ ಮನೆಯಲ್ಲಿರುವುದರಿಂದ ತಾಯಿ ಕಮಲ ಅವರು ಆ ಮೂರ್ತಿಯೇ ತನ್ನ ಮಗಳೆಂದು ಭಾಸ ಮಾಡಿಕೊಂಡು, ಅದರೊಂದಿಗೆ ಲವಲವಿಕೆಯಿಂದ ಮಾತನಾಡಿಕೊಂಡು ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ.

ಪುತ್ರಿಯ ಆಸೆಯಂತೆ ಸುಂದರ ಮೂರ್ತಿ ಮಾಡಿಸಿದ ತಾಯಿ
ಪುತ್ರಿಯ ಆಸೆಯಂತೆ ಸುಂದರ ಮೂರ್ತಿ ಮಾಡಿಸಿದ ತಾಯಿ

ತಾಯಿ ಕಮಲಮ್ಮ ಹೇಳಿದ್ದು ಹೀಗೆ: ಈ ವೇಳೆ ಪ್ರತಿಕ್ರಿಯಿಸಿದ ತಾಯಿ ಜಿ ಎನ್ ಕಮಲಮ್ಮನವರು, ಮಗಳ ಆಸೆಯಂತೆ ಸಮಾಧಿ, ಉದ್ಯಾನ, ಒಂದು ಮೂರ್ತಿ ಮಾಡ್ಸಿದ್ದೇನೆ. ಕಾವ್ಯ ಆಸೆಯಂತೆ ಅವಳ ಹುಟ್ಟುಹಬ್ಬದಂದು ಅನಾಥ ಮಕ್ಕಳಿಗೆ ನನ್ನ ಕೈಲಾದಷ್ಟು ಸಹಾಯ ಮಾಡ್ತಿದ್ದೇನೆ. ನಾಲ್ಕು ವರ್ಷದಲ್ಲಿ ಮಗಳು ಗುಣ ಆಗ್ತಾಳೆಂದು ಪೆನ್ಷನ್ ಹಣ, ನಿವೇಶನ ಮಾರಿದ ಹಣ, ಒಟ್ಟು 40 ಲಕ್ಷ ಚಿಕಿತ್ಸೆಗಾಗಿ ಖರ್ಚು ಮಾಡಿದ್ದೇನೆ. ಕಾವ್ಯ ತನ್ನ ಕೊನೆಯ ದಿನಗಳಲ್ಲಿ ಮೂರ್ತಿ ಮಾಡಿಸುವಂತೆ ಆಸೆ ಪಟ್ಟಿದ್ದಳು. ಕಲಾವಿದ ವಿಶ್ವನಾಥ್ ಅವರು 3.30 ಲಕ್ಷದಲ್ಲಿ ಸಿಲಿಕಾನ್ ಮಾದರಿಯ ಮೂರ್ತಿ ನಿರ್ಮಿಸಿಕೊಟ್ಟರು. ಮಾನವನ ಚರ್ಮದ ಮಾದರಿ ಅಂದರೆ ಮನುಷ್ಯನ ಮಾದರಿಯಲ್ಲೇ ಈ ಸಿಲಿಕಾನ್ ಮಾದರಿಯ ಮೂರ್ತಿ ಮಾಡಿಸಿದ್ದೇನೆ ಎಂದರು.

ನೆರೆಹೊರೆಯಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದ ಕಾವ್ಯ: ಕಾವ್ಯ ಅವರ ಹೆಸರಿನಲ್ಲಿ ಕವನ ಸಂಕಲನ ಬಿಡುಗಡೆ ಮಾಡಲಾಗಿದೆ. ಅದು ಓದಿದ್ರೆ ಎರಡು ಕಣ್ಣಿನಲ್ಲಿ ನೀರು ಬರುತ್ತದೆ. ಕಾವ್ಯ ಚಿಕ್ಕ ವಯಸ್ಸಿನಲ್ಲೇ ಕವಿಗೋಷ್ಠಿ, ಚರ್ಚಾ ಸ್ಪರ್ಧೆ, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗಿಯಾಗಿ ಹೆಸರು ಮಾಡಿದ್ದರು.

ಇದನ್ನೂ ಓದಿ: ಬೆಳ್ತಂಗಡಿ: ಜಮೀನಿನಲ್ಲಿ ಪ್ರಾಚೀನ ಕಾಲದ ಗೋಪಾಲಕೃಷ್ಣನ ವಿಗ್ರಹ ಪತ್ತೆ

ಶಿಕ್ಷಕಿ ಜಿ ಎನ್ ಕಮಲಮ್ಮ

ದಾವಣಗೆರೆ : ಅವರು ಮಕ್ಕಳಿಗೆ ವಿದ್ಯಾದಾನ ಮಾಡುವ ಮುಖೇನ ಪರರ ಮಕ್ಕಳ ಬದುಕನ್ನು ಸುಂದರವಾಗಿಸಿದ ಶಿಕ್ಷಕಿ. ತನ್ನ ಮುದ್ದಿನ ಮಗಳಿಗೆ ಬಿಇ ಓದಿಸಿ ಮದುವೆ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದವರು. ಆ ಅಮ್ಮ- ಮಗಳು ಕಂಡಿದ್ದ ಕನಸುಗಳಿಗೆ ಕ್ಯಾನ್ಸರ್ ಎಂಬ ಮಹಾಮರಿ ಕೊಳ್ಳಿ ಇಟ್ಟಿದೆ.

ದಾವಣಗೆರೆಯ ಶಿಕ್ಷಕಿ ಜಿ ಎನ್ ಕಮಲಮ್ಮ ಅವರ ಪುತ್ರಿ ಕಾವ್ಯ ಹುಟ್ಟತ್ತಲೇ ತಂದೆಯ ಮುಖ ನೋಡದೇ ಬೆಳೆದವರು. ಮತ್ತೊಂದೆಡೆ ಕಾವ್ಯಾಗೆ ಕ್ಯಾನ್ಸರ್ ಎಂಬ ಮಹಾಮಾರಿ ಕಾಡಿತ್ತು. ನಾಲ್ಕು ವರ್ಷ ಆ ಮಹಾಮಾರಿಯೊಂದಿಗೆ ಹೋರಾಡಿದ ಕಾವ್ಯಾ (30) ಅಂತಿಮವಾಗಿ ಮರಣವನ್ನಪ್ಪಿದ್ದರು. ಆದರೆ, ಸಾವಿಗೂ ಮುನ್ನ ಕೆಲ ಬಯಕೆಗಳನ್ನು ವ್ಯಕ್ತಪಡಿಸಿದ್ದರಂತೆ. ಆ ಆಸೆಗಳನ್ನು ಕೊನೆಗೂ ಈಡೇರಿಸಿದ್ದಾರೆ. ಮಗಳ ಸುಂದರ ಮೂರ್ತಿ ನಿರ್ಮಿಸಿ 'ನನ್ನ ಮಗಳು ಜೀವಂತ ಇದ್ದಾಳೆ' ಎಂದು ಭಾವಿಸಿ ಒಂಟಿ ಜೀವನ ಸಾಗಿಸುತ್ತಿದ್ದಾರೆ.

ಹೌದು, ನಗರದ ಸರಸ್ವತಿ ಬಡಾವಣೆಯ ನಿವಾಸಿ, ನಿವೃತ್ತ ಶಿಕ್ಷಕಿ ಜಿ ಎನ್ ಕಮಲಮ್ಮನವರ ಪುತ್ರಿ ಕಾವ್ಯ ಅವರು ಇದ್ದಕ್ಕಿದ್ದಂತೆ ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್​ಗೆ ತುತ್ತಾದವರು. ಬಿಇ ಪದವಿ ಪಡೆದಿರುವ ಅವರಿಗೆ ಮದುವೆ ಕೂಡ ನಿಶ್ಚಿಯವಾಗಿತ್ತು. ವೈವಾಹಿಕ ಜೀವನಕ್ಕೂ ಕಾಲಿಡಬೇಕಿತ್ತು. ಆದರೆ, ಕ್ಯಾನ್ಸರ್ ಅವರನ್ನು ಮದುವೆಗೂ ಮುನ್ನ ಬಲಿ ಪಡೆದಿತ್ತು.

ಪುತ್ರಿಯ ಆಸೆಯಂತೆ ಸುಂದರ ಮೂರ್ತಿ ಮಾಡಿಸಿದ ತಾಯಿ
ಪುತ್ರಿಯ ಆಸೆಯಂತೆ ಸುಂದರ ಮೂರ್ತಿ ಮಾಡಿಸಿದ ತಾಯಿ

2019 ರಲ್ಲಿ ಬೆಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಆರಂಭ ಮಾಡಿದ್ದರು. ಹೀಗೆ ಸತತ ನಾಲ್ಕು ವರ್ಷಗಳ ಕಾಲ ಮಹಾಮಾರಿ ಕ್ಯಾನ್ಸರ್ ಜೊತೆ ಹೋರಾಡಿದ ಕಾವ್ಯ ಊಟ ಮಾಡ್ತಾ ತಾಯಿ ತೊಡೆಮೆಲೆ ಮಲಗಿ ಡಿ,10, 2022 ರಂದು ಕೊನೆಯುಸಿರೆಳೆದಿದ್ದರು. ಸಾವಿಗೂ ಮುನ್ನ ನನ್ನ ಸಮಾಧಿ ಮಾಡಿ ಉದ್ಯಾನ ನಿರ್ಮಿಸಿ, ತನ್ನದೊಂದು ಮೂರ್ತಿ ಮಾಡಿಸುವಂತೆ ಹಾಗೂ ಮೃತದೇಹವನ್ನು ಡೊನೆಟ್ ಮಾಡುವಂತೆ ಕೇಳಿಕೊಂಡಿದ್ದಳು. ಆದರೆ, ದೇಹ ದಾನ ಮಾಡಲು ಆಗಲ್ಲ ಎಂದು ವೈದ್ಯರು ನಿರಾಕರಿಸಿದ್ದರಿಂದ ಕಮಲಮ್ಮನವರು ಗೋಪನಾಳು ಗ್ರಾಮದಲ್ಲಿ 4 ಗುಂಟೆ ಜಮೀನು ಖರೀದಿಸಿ ಶವಸಂಸ್ಕಾರ ಮಾಡಿದ್ದರು. ಮಗಳ ಆಸೆಯಂತೆ ಉದ್ಯಾನ, ಗಿಡಗಳನ್ನು ನೆಟ್ಟು ಸಮಾಧಿ ನಿರ್ಮಿಸಿದ್ದು ಮೇಲೆ ಡೈಮೆಂಡ್ ಶೇಪ್ ಕಮಾನು ಕೂಡ ಕಟ್ಟಿಸಿದ್ದಾರೆ.

ಮಗಳನ್ನು ಉಳಿಸಿಕೊಳ್ಳಲು ಹೋರಾಡಿ ಸೋತ ತಾಯಿ: ಕ್ಯಾನ್ಸರ್​ಗೆ ತುತ್ತಾಗಿದ್ದ ತನ್ನ ಒಬ್ಬಳೇ ಮಗಳು ಕಾವ್ಯಳನ್ನು ಉಳಿಸಿಕೊಳ್ಳಲು 4 ವರ್ಷಗಳಲ್ಲಿ ತಾಯಿ ಕಮಲಮ್ಮ ಒಟ್ಟು 40 ಲಕ್ಷ ರೂ. ಖರ್ಚು ಮಾಡಿದ್ದಾರೆ. ಹುಟ್ಟುತ್ತಲೇ ತಂದೆಯನ್ನು ಕಳೆದುಕೊಂಡಿದ್ದ ಕಾವ್ಯಗೆ ಆ ಭಾವನೆ ಕಾಡಬಾರದೆಂಬ ರೀತಿಯಲ್ಲಿ ತಾಯಿ ಕಮಲಮ್ಮರವರೇ ತಂದೆ ಸ್ಥಾನ ತುಂಬಿದ್ದರು. ರಾಣೆಬೆನ್ನೂರಿನ ಇಂಜಿನಿಯರ್ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದ ಕಾವ್ಯ ಬಳಿಕ ಬೆಂಗಳೂರಿನಲ್ಲಿ ಎರಡು ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಸಹ ಮಾಡಿದ್ದರು. ಮೊಬೈಲ್​ನಲ್ಲಿ ಬಂದಂತಹ ಮಹಿಳೆಯೊಬ್ಬರ ಮೂರ್ತಿಯ ವಿಡಿಯೋವೊಂದನ್ನು ವೀಕ್ಷಿಸಿ ಈ ರೀತಿಯ ಮೂರ್ತಿ ಮಾಡಿಸುವಂತೆ ಕೇಳಿಕೊಂಡಿದ್ದಳು. ನನ್ನ ಮೂರ್ತಿ ಮನೆಯಲ್ಲಿದ್ದರೆ ನಾನು ನಿಜವಾಗಿಯೂ ಮನೆಯಲ್ಲಿದ್ದೇನೆ ಎಂದುಕೊಂಡು ತಾಯಿ ಜೀವನ ಮಾಡ್ತಾರೆ, ತನ್ನ ಸಾವಿನ ಬಳಿಕ ಕುಗ್ಗುವುದಿಲ್ಲ ಎಂಬ ಭಾವನೆ ನನ್ನ ಪುತ್ರಿಯ ತಲೆಯಲ್ಲಿ ಬಂದಿತ್ತು. ಆದ್ದರಿಂದ ಮೂರ್ತಿ ಮಾಡ್ಸಮ್ಮಾ ಎಂದು ಜೀವ ಹೋಗುವ ಅಂತಿಮ ದಿನಗಳಲ್ಲಿ ಹೇಳಿದ್ದನ್ನು ನೆನೆದು ತಾಯಿ ಕಮಲಮ್ಮ ಕಣ್ಣೀರಿಟ್ಟರು.

ಪ್ರಶಸ್ತಿ ಸ್ವೀಕರಿಸುತ್ತಿರುವ ಕಾವ್ಯಾ
ಕಾವ್ಯಾ ಬಾಲ್ಯದ ಫೋಟೋ

ಮೂರ್ತಿ ಮಾಡಿಸಿದ ತಾಯಿ ಕಮಲಮ್ಮ: ಮಗಳ ಆಸೆಯಂತೆ ತಾಯಿ ಕಮಲಮ್ಮನವರು ಪುತ್ರಿ ಕಾವ್ಯ ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮೂರ್ತಿ ಮಾಡುವವರನ್ನು ಹುಡುಕಿ ಕಲಾವಿದ ವಿಶ್ವನಾಥ್ ಎಂಬುವವರ ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಬೆಂಗಳೂರು ಮೂಲದ ಕಲಾವಿದ ವಿಶ್ವನಾಥ್ ಅವರು 3.30 ಲಕ್ಷದಲ್ಲಿ ಕಾವ್ಯ ಅವರ 'ಸಿಲಿಕಾನ್ ' ಮಾದರಿಯ ಸುಂದರ ಮೂರ್ತಿಯನ್ನು ತಾಯಿಯ ಭಾವನೆಗೆ ತಕ್ಕಂತೆ ನಿರ್ಮಿಸಿಕೊಟ್ಟಿದ್ದಾರೆ.

ಇನ್ನು ಈ ಮೂರ್ತಿಯನ್ನು ಮಾನವನ ಚರ್ಮದ ಮಾದರಿಯಲ್ಲೇ ನಿರ್ಮಿಸಿರುವುದು ಜನರನ್ನು ಆಕರ್ಷಿಸುತ್ತಿದೆ. ಈ ಸಿಲಿಕಾನ್ ಮಾದರಿಯ ಮೂರ್ತಿಯನ್ನು ಮನೆಯಲ್ಲಿಟ್ಟುಕೊಂಡು ತಾಯಿ ಕಮಲಮ್ಮ ಜೀವನ ನಡೆಸುತ್ತಿದ್ದಾರೆ. ಇನ್ನು ಕಾವ್ಯಾ ನೋವಿನ ಕಥೆ ಕೇಳಿ ಕಲಾವಿದ ವಿಶ್ವನಾಥ್ ಅವರು 5 ಲಕ್ಷದ ವೆಚ್ಚದ ಮೂರ್ತಿಯನ್ನು ಕೇವಲ 3.30 ಲಕ್ಷದಲ್ಲಿ ನಿರ್ಮಿಸಿದ್ದಾರೆ.

ಕಲ್ಯಾಣ ಮಂಟಪದಲ್ಲಿ ಅದ್ಧೂರಿ ಕಾರ್ಯಕ್ರಮ‌ ಮಾಡಿ ಮೂರ್ತಿಯನ್ನು ಇರಿಸಿ ಮಗಳ ಹೆಸರಿನಲ್ಲಿ ಪುಸ್ತಕ ಬಿಡುಗಡೆ ಮಾಡಲಾಗಿದೆ. ಮಗಳು ಕಾವ್ಯಳ ಮೂರ್ತಿ ಮನೆಯಲ್ಲಿರುವುದರಿಂದ ತಾಯಿ ಕಮಲ ಅವರು ಆ ಮೂರ್ತಿಯೇ ತನ್ನ ಮಗಳೆಂದು ಭಾಸ ಮಾಡಿಕೊಂಡು, ಅದರೊಂದಿಗೆ ಲವಲವಿಕೆಯಿಂದ ಮಾತನಾಡಿಕೊಂಡು ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ.

ಪುತ್ರಿಯ ಆಸೆಯಂತೆ ಸುಂದರ ಮೂರ್ತಿ ಮಾಡಿಸಿದ ತಾಯಿ
ಪುತ್ರಿಯ ಆಸೆಯಂತೆ ಸುಂದರ ಮೂರ್ತಿ ಮಾಡಿಸಿದ ತಾಯಿ

ತಾಯಿ ಕಮಲಮ್ಮ ಹೇಳಿದ್ದು ಹೀಗೆ: ಈ ವೇಳೆ ಪ್ರತಿಕ್ರಿಯಿಸಿದ ತಾಯಿ ಜಿ ಎನ್ ಕಮಲಮ್ಮನವರು, ಮಗಳ ಆಸೆಯಂತೆ ಸಮಾಧಿ, ಉದ್ಯಾನ, ಒಂದು ಮೂರ್ತಿ ಮಾಡ್ಸಿದ್ದೇನೆ. ಕಾವ್ಯ ಆಸೆಯಂತೆ ಅವಳ ಹುಟ್ಟುಹಬ್ಬದಂದು ಅನಾಥ ಮಕ್ಕಳಿಗೆ ನನ್ನ ಕೈಲಾದಷ್ಟು ಸಹಾಯ ಮಾಡ್ತಿದ್ದೇನೆ. ನಾಲ್ಕು ವರ್ಷದಲ್ಲಿ ಮಗಳು ಗುಣ ಆಗ್ತಾಳೆಂದು ಪೆನ್ಷನ್ ಹಣ, ನಿವೇಶನ ಮಾರಿದ ಹಣ, ಒಟ್ಟು 40 ಲಕ್ಷ ಚಿಕಿತ್ಸೆಗಾಗಿ ಖರ್ಚು ಮಾಡಿದ್ದೇನೆ. ಕಾವ್ಯ ತನ್ನ ಕೊನೆಯ ದಿನಗಳಲ್ಲಿ ಮೂರ್ತಿ ಮಾಡಿಸುವಂತೆ ಆಸೆ ಪಟ್ಟಿದ್ದಳು. ಕಲಾವಿದ ವಿಶ್ವನಾಥ್ ಅವರು 3.30 ಲಕ್ಷದಲ್ಲಿ ಸಿಲಿಕಾನ್ ಮಾದರಿಯ ಮೂರ್ತಿ ನಿರ್ಮಿಸಿಕೊಟ್ಟರು. ಮಾನವನ ಚರ್ಮದ ಮಾದರಿ ಅಂದರೆ ಮನುಷ್ಯನ ಮಾದರಿಯಲ್ಲೇ ಈ ಸಿಲಿಕಾನ್ ಮಾದರಿಯ ಮೂರ್ತಿ ಮಾಡಿಸಿದ್ದೇನೆ ಎಂದರು.

ನೆರೆಹೊರೆಯಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದ ಕಾವ್ಯ: ಕಾವ್ಯ ಅವರ ಹೆಸರಿನಲ್ಲಿ ಕವನ ಸಂಕಲನ ಬಿಡುಗಡೆ ಮಾಡಲಾಗಿದೆ. ಅದು ಓದಿದ್ರೆ ಎರಡು ಕಣ್ಣಿನಲ್ಲಿ ನೀರು ಬರುತ್ತದೆ. ಕಾವ್ಯ ಚಿಕ್ಕ ವಯಸ್ಸಿನಲ್ಲೇ ಕವಿಗೋಷ್ಠಿ, ಚರ್ಚಾ ಸ್ಪರ್ಧೆ, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗಿಯಾಗಿ ಹೆಸರು ಮಾಡಿದ್ದರು.

ಇದನ್ನೂ ಓದಿ: ಬೆಳ್ತಂಗಡಿ: ಜಮೀನಿನಲ್ಲಿ ಪ್ರಾಚೀನ ಕಾಲದ ಗೋಪಾಲಕೃಷ್ಣನ ವಿಗ್ರಹ ಪತ್ತೆ

Last Updated : Dec 15, 2023, 9:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.