ETV Bharat / state

ಸಾಗುವಾನಿ ಮರದ ತುಂಡುಗಳನ್ನ ಕಳವು ಮಾಡಿದ್ದ ಐವರ ಬಂಧನ

author img

By

Published : Jul 29, 2020, 12:07 PM IST

ಶೆಡ್​ ಒಂದರಲ್ಲಿ ದಾಸ್ತಾನಿರಿಸಿದ್ದ ಸಾಗುವಾನಿ ಮರದ ತುಂಡುಗಳನ್ನು ಕಳವು ಮಾಡಿದ್ದ ಐವರು ಆರೋಪಿಗಳನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ

Arrest of Davangere theft accused
ದಾವಣಗೆರೆ ಕಳ್ಳತನ ಆರೋಪಿಗಳ ಬಂಧನ

ದಾವಣಗೆರೆ : ಸಾಗುವಾನಿ ಮರದ ತುಂಡುಗಳನ್ನು ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ನಾಗರಕಟ್ಟೆ ಗ್ರಾಮದ ಮಂಜನಾಯ್ಕ, ನಾಗೇಶ್ ನಾಯ್ಕ, ಸುರೇಶ್ ನಾಯ್ಕ, ಮಂಜನಾಯ್ಕ, ಸುರೇಶ್ ನಾಯ್ಕ, ಲೋಕೇಶ್ ನಾಯ್ಕ ಬಂಧಿತ ಆರೋಪಿಗಳು. ಎಲೆಬೇತೂರಿನ ಬಾಲರಾಜು ಎಂಬುವವರು ಎರಡು ವರ್ಷಗಳ ಹಿಂದೆ ರಸ್ತೆ ವಿಸ್ತರಣೆಗಾಗಿ ಸಾಗುವಾನಿ ಮರ ಕಡಿದು ತುಂಡುಗಳನ್ನು ತನ್ನ ಜಮೀನಿನ ಶೆಡ್​ನಲ್ಲಿ ದಾಸ್ತಾನು ಇಟ್ಟಿದ್ದರು. ಜುಲೈ 5 ರಂದು ಅದು ಕಳ್ಳತನವಾಗಿತ್ತು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳು ಬೇರೆ ಬೇರೆ ಕಡೆಗಳಲ್ಲಿ ಮಾರಾಟ ಮಾಡಿದ್ದ 1 ಲಕ್ಷ ರೂಪಾಯಿ ಮೌಲ್ಯದ ಸಾಗುವಾನಿ ಹಾಗೂ ಮಾವಿನ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರು ಇದೇ ಮೊದಲ ಬಾರಿಗೆ ಈ ಕೃತ್ಯ ಎಸಗಿದ್ದಾರೋ ಅಥವಾ ಈ ಹಿಂದೆಯೂ ಕಳ್ಳತನ ಮಾಡಿದ್ದಾರೋ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ದಾವಣಗೆರೆ : ಸಾಗುವಾನಿ ಮರದ ತುಂಡುಗಳನ್ನು ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ನಾಗರಕಟ್ಟೆ ಗ್ರಾಮದ ಮಂಜನಾಯ್ಕ, ನಾಗೇಶ್ ನಾಯ್ಕ, ಸುರೇಶ್ ನಾಯ್ಕ, ಮಂಜನಾಯ್ಕ, ಸುರೇಶ್ ನಾಯ್ಕ, ಲೋಕೇಶ್ ನಾಯ್ಕ ಬಂಧಿತ ಆರೋಪಿಗಳು. ಎಲೆಬೇತೂರಿನ ಬಾಲರಾಜು ಎಂಬುವವರು ಎರಡು ವರ್ಷಗಳ ಹಿಂದೆ ರಸ್ತೆ ವಿಸ್ತರಣೆಗಾಗಿ ಸಾಗುವಾನಿ ಮರ ಕಡಿದು ತುಂಡುಗಳನ್ನು ತನ್ನ ಜಮೀನಿನ ಶೆಡ್​ನಲ್ಲಿ ದಾಸ್ತಾನು ಇಟ್ಟಿದ್ದರು. ಜುಲೈ 5 ರಂದು ಅದು ಕಳ್ಳತನವಾಗಿತ್ತು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳು ಬೇರೆ ಬೇರೆ ಕಡೆಗಳಲ್ಲಿ ಮಾರಾಟ ಮಾಡಿದ್ದ 1 ಲಕ್ಷ ರೂಪಾಯಿ ಮೌಲ್ಯದ ಸಾಗುವಾನಿ ಹಾಗೂ ಮಾವಿನ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರು ಇದೇ ಮೊದಲ ಬಾರಿಗೆ ಈ ಕೃತ್ಯ ಎಸಗಿದ್ದಾರೋ ಅಥವಾ ಈ ಹಿಂದೆಯೂ ಕಳ್ಳತನ ಮಾಡಿದ್ದಾರೋ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.