ETV Bharat / state

ಯುವಕನ ಸುಟ್ಟು ಕೊಂದು ಶವ ಪ್ರಪಾತಕ್ಕೆಸೆದ ಸಲಿಂಗಕಾಮಿ.. ಆರೋಪ

author img

By

Published : Nov 8, 2022, 9:33 PM IST

Updated : Nov 8, 2022, 10:29 PM IST

ಪೆಟ್ರೋಲ್​​ ಸುರಿದು ಯುವಕನೊಬ್ಬನನ್ನು ಕೊಂದು ಗುಡ್ಡದಿಂದ ಆಳವಾದ ಪ್ರಪಾತಕ್ಕೆ ಎಸೆದಿರುವ ಘಟನೆ ಬಂಟ್ವಾಳದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ

youth-killed-by-homosexual-in-bantwal
ಯುವಕನ ಸುಟ್ಟು ಕೊಂದು ಶವವನ್ನು ಪ್ರಪಾತಕ್ಕೆಸೆದ ಸಲಿಂಗಕಾಮಿ

ಬಂಟ್ವಾಳ : ಯುವಕನೊಬ್ಬನನ್ನು ಪೆಟ್ರೋಲ್ ಸುರಿದು ಹತ್ಯೆ ಮಾಡಿ ಬಳಿಕ ಗುಡ್ಡದಿಂದ ಆಳವಾದ ಹೊಂಡಕ್ಕೆ ಎಸೆದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಕೊಳ್ನಾಡು ಗ್ರಾಮದ ಸುರಿಬೈಲು ನಿವಾಸಿ ಅಬ್ದುಲ್ ಸಮದ್ (19) ಕೊಲೆಯಾದ ಯುವಕ.

ಕೊಲೆ ಮಾಡಿದ ಆರೋಪಿಯನ್ನು ಬೋಳಂತೂರು ಗ್ರಾಮದ ವ್ಯಕ್ತಿ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ವಿಟ್ಲ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆಯ ವಿವರ: ಸಲಿಂಗಕಾಮಿ ಆರೋಪವಿರುವ ಆಟೋ ಚಾಲಕ ಅದ್ರಾಮ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ಕಾರಣ, ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಗಾಂಜಾವ್ಯಸನಿಯೂ ಆಗಿರುವ ಆರೋಪಿ ಅದ್ರಾಮ ನಾನು ಕೊಲೆಯೊಂದನ್ನು ಮಾಡಿದ್ದೇನೆ ಎಂದು ಹೇಳಿಕೊಂಡು ಬಂದಿರುವುದಾಗಿ ಹೇಳಲಾಗಿದೆ.

ಕೊಲೆ ಬಗ್ಗೆ ಆತನನ್ನು ವಿಚಾರಿಸಿದಾಗ ನಡೆದ ಘಟನೆಗಳನ್ನು ವಿವರಿಸಿದ್ದಾನೆ. ಮಂಚಿ-ಇರಾ, ಮುಡಿಪು ರಸ್ತೆಯ ನಿರ್ಜನ ಪ್ರದೇಶದ ಗುಡ್ಡದಲ್ಲಿ ಪೆಟ್ರೋಲ್ ಸುರಿದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಬಗ್ಗೆ ತಿಳಿದುಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಬಾಲಕಿಗೆ ಕಿರುಕುಳ ಆರೋಪ: ಯುವಕನ ಕೈಕಾಲು ಕಟ್ಟಿ ಗುಪ್ತಾಂಗಕ್ಕೆ ಕಾರದ ಪುಡಿ ಹಾಕಿ ಹಿಂಸೆ

ಬಂಟ್ವಾಳ : ಯುವಕನೊಬ್ಬನನ್ನು ಪೆಟ್ರೋಲ್ ಸುರಿದು ಹತ್ಯೆ ಮಾಡಿ ಬಳಿಕ ಗುಡ್ಡದಿಂದ ಆಳವಾದ ಹೊಂಡಕ್ಕೆ ಎಸೆದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಕೊಳ್ನಾಡು ಗ್ರಾಮದ ಸುರಿಬೈಲು ನಿವಾಸಿ ಅಬ್ದುಲ್ ಸಮದ್ (19) ಕೊಲೆಯಾದ ಯುವಕ.

ಕೊಲೆ ಮಾಡಿದ ಆರೋಪಿಯನ್ನು ಬೋಳಂತೂರು ಗ್ರಾಮದ ವ್ಯಕ್ತಿ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ವಿಟ್ಲ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆಯ ವಿವರ: ಸಲಿಂಗಕಾಮಿ ಆರೋಪವಿರುವ ಆಟೋ ಚಾಲಕ ಅದ್ರಾಮ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ಕಾರಣ, ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಗಾಂಜಾವ್ಯಸನಿಯೂ ಆಗಿರುವ ಆರೋಪಿ ಅದ್ರಾಮ ನಾನು ಕೊಲೆಯೊಂದನ್ನು ಮಾಡಿದ್ದೇನೆ ಎಂದು ಹೇಳಿಕೊಂಡು ಬಂದಿರುವುದಾಗಿ ಹೇಳಲಾಗಿದೆ.

ಕೊಲೆ ಬಗ್ಗೆ ಆತನನ್ನು ವಿಚಾರಿಸಿದಾಗ ನಡೆದ ಘಟನೆಗಳನ್ನು ವಿವರಿಸಿದ್ದಾನೆ. ಮಂಚಿ-ಇರಾ, ಮುಡಿಪು ರಸ್ತೆಯ ನಿರ್ಜನ ಪ್ರದೇಶದ ಗುಡ್ಡದಲ್ಲಿ ಪೆಟ್ರೋಲ್ ಸುರಿದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಬಗ್ಗೆ ತಿಳಿದುಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಬಾಲಕಿಗೆ ಕಿರುಕುಳ ಆರೋಪ: ಯುವಕನ ಕೈಕಾಲು ಕಟ್ಟಿ ಗುಪ್ತಾಂಗಕ್ಕೆ ಕಾರದ ಪುಡಿ ಹಾಕಿ ಹಿಂಸೆ

Last Updated : Nov 8, 2022, 10:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.