ETV Bharat / state

ಕೋವಿಡ್​ ನಿಮಯ ಉಲ್ಲಂಘಿಸಿದ ಯು.ಟಿ ಖಾದರ್ ಕ್ವಾರಂಟೈನ್ ಆಗಲಿ: ಬಿಜೆಪಿ ಆಗ್ರಹ

author img

By

Published : Jun 24, 2020, 4:58 PM IST

ಪಿಪಿಇ ಕಿಟ್ ಧರಿಸದೆ ಮೃತ ಕೊರೊನಾ ಸೋಂಕಿತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಶಾಸಕ ಯು ಟಿ ಖಾದರ್ ತಕ್ಷಣ ಕ್ವಾರಂಟೈನ್​ಗೆ ಒಳಗಾಗಬೇಕು ಎಂದು ದಕ್ಷಿಣ ಕನ್ನಡ ಬಿಜೆಪಿ ಆಗ್ರಹಿಸಿದೆ.

dsd
ಯು.ಟಿ ಖಾದರ್ ಕ್ವಾರಂಟೈನ್ ಆಗಲಿ: ಬಿಜೆಪಿ ಆಗ್ರಹ

ಮಂಗಳೂರು: ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಕೋವಿಡ್ -19 ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಕೂಡಲೇ ಅವರು ಕ್ವಾರಂಟೈನ್ ಆಗಲಿ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ವಲಯ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಆಗ್ರಹಿಸಿದ್ದಾರೆ.

ಯು.ಟಿ ಖಾದರ್ ಕ್ವಾರಂಟೈನ್ ಕೇಂದ್ರದಲ್ಲಿರುವಂತೆ ಚಂದ್ರಹಾಸ್​ ಆಗ್ರಹ

ಪಿಪಿಇ ಕಿಟ್ ಧರಿಸದೆ ಮೃತ ಕೊರೊನಾ ಸೋಂಕಿತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಖಾದರ್ ವರ್ತನೆ ನಮಗೆ ನೋವು ತಂದಿದೆ. ಖಾದರ್ ಸಾರ್ವಜನಿಕವಾಗಿ ಎಲ್ಲರನ್ನೂ ಸಂಪರ್ಕ ಮಾಡುವ ವ್ಯಕ್ತಿ. ಅವರು ಬೇಜವಾಬ್ದಾರಿಯಿಂದ ಪಿಪಿಇ ಕಿಟ್ ಧರಿಸದೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ತಲೆತಗ್ಗಿಸುವ ಕಾರ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಖಾದರ್​ ಕೂಡಲೇ ಕ್ವಾರಂಟೈನ್ ಆಗಬೇಕು. ಸ್ವಯಂ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಮುಂದೆ ಇಂತಹ ಘಟನೆ ನಡೆದರೆ ಖಾದರ್ ವರ್ತನೆ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಮಂಗಳೂರು: ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಕೋವಿಡ್ -19 ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಕೂಡಲೇ ಅವರು ಕ್ವಾರಂಟೈನ್ ಆಗಲಿ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ವಲಯ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಆಗ್ರಹಿಸಿದ್ದಾರೆ.

ಯು.ಟಿ ಖಾದರ್ ಕ್ವಾರಂಟೈನ್ ಕೇಂದ್ರದಲ್ಲಿರುವಂತೆ ಚಂದ್ರಹಾಸ್​ ಆಗ್ರಹ

ಪಿಪಿಇ ಕಿಟ್ ಧರಿಸದೆ ಮೃತ ಕೊರೊನಾ ಸೋಂಕಿತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಖಾದರ್ ವರ್ತನೆ ನಮಗೆ ನೋವು ತಂದಿದೆ. ಖಾದರ್ ಸಾರ್ವಜನಿಕವಾಗಿ ಎಲ್ಲರನ್ನೂ ಸಂಪರ್ಕ ಮಾಡುವ ವ್ಯಕ್ತಿ. ಅವರು ಬೇಜವಾಬ್ದಾರಿಯಿಂದ ಪಿಪಿಇ ಕಿಟ್ ಧರಿಸದೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ತಲೆತಗ್ಗಿಸುವ ಕಾರ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಖಾದರ್​ ಕೂಡಲೇ ಕ್ವಾರಂಟೈನ್ ಆಗಬೇಕು. ಸ್ವಯಂ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಮುಂದೆ ಇಂತಹ ಘಟನೆ ನಡೆದರೆ ಖಾದರ್ ವರ್ತನೆ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.