ETV Bharat / state

ಕೋವಿಡ್​​​: ಮಂಗಳೂರಿನಲ್ಲಿ ವಿಳಂಬವಾಗದಂತೆ ಮೃತ ದೇಹಗಳ ಹಸ್ತಾಂತರ!

author img

By

Published : May 8, 2021, 7:37 PM IST

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಮೃತದೇಹವನ್ನು ವಿಳಂಬವಾಗಿ ಅಂತ್ಯಕ್ರಿಯೆಗೆ ನೀಡಲಾಗಿದೆ ಎಂಬ ಆರೋಪ ಈವರೆಗೆ ವರದಿಯಾಗಿಲ್ಲ. ಆದರೆ ಅಂತ್ಯಸಂಸ್ಕಾರ ನಡೆಸಲು ದುಬಾರಿ ಹಣ ಕೇಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇತ್ತೀಚೆಗೆ ಮಂಗಳೂರು ಮಹಾನಗರ ಪಾಲಿಕೆ ಕೊರೊನಾ ಸೋಂಕಿತರ ಮೃತದೇಹದ ಅಂತ್ಯಕ್ರಿಯೆಯನ್ನು ಉಚಿತವಾಗಿ ನೆರವೇರಿಸಲು ನಿರ್ಧರಿಸಿದೆ.

transfer of dead bodies without delay in mangalore
ಕೋವಿಡ್​​​: ಮಂಗಳೂರಿನಲ್ಲಿ ವಿಳಂಬವಾಗದಂತೆ ಮೃತದೇಹಗಳ ಹಸ್ತಾಂತರ!

ಮಂಗಳೂರು: ಕೊರೊನಾ ಸೋಂಕಿಗೊಳಗಾಗಿ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರಕ್ಕೆ ಹಲವಾರು ನಿಯಮಗಳಿದೆ. ಸೋಂಕಿತರನ್ನು ಕಳೆದುಕೊಂಡ ಕುಟುಂಬಗಳು ಮೃತದೇಹದ ಅಂತ್ಯ ಸಂಸ್ಕಾರವನ್ನು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಮಾಡಬೇಕಾಗುತ್ತದೆ. ಇದರ ನಡುವೆ ಮಂಗಳೂರಿನಲ್ಲಿ ಸಾವನ್ನಪ್ಪಿದ ಕೊರೊನಾ ಸೋಂಕಿತರ ಮೃತದೇಹವನ್ನು ವಿಳಂಬವಾಗದಂತೆ ಹಸ್ತಾಂತರಿಸಲಾಗುತ್ತಿದೆ.

ವಿಳಂಬವಾಗದಂತೆ ಮೃತದೇಹಗಳ ಹಸ್ತಾಂತರ - ಜಿಲ್ಲಾ ಆರೋಗ್ಯಾಧಿಕಾರಿ ಪ್ರತಿಕ್ರಿಯೆ

ಮೊದಲನೇ ಅಲೆಯ ಕೋವಿಡ್​​ ಹಾವಳಿಯ ಸಂದರ್ಭದಲ್ಲಿ ಕೊರೊನಾದಿಂದ ಮೃತ ಪಡುವವರ ಸಂಖ್ಯೆ ಬೆಂಗಳೂರು ಹೊರತು ಪಡಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿತ್ತು. ಇದೀಗ ಎರಡನೇ ಅಲೆಯ ಸಂದರ್ಭದಲ್ಲಿ ದಿನೇ ದಿನೆ ಕೊರೊನಾದಿಂದ ನಿಧನ ಹೊಂದುವವರ ಸಂಖ್ಯೆ ಹೆಚ್ಚಿದೆ. ಕೊರೊನಾ ಮೊದಲನೇ ಅಲೆ ಆರಂಭದಿಂದ ಈವರೆಗೆ ಜಿಲ್ಲೆಯಲ್ಲಿ 780 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿತರ ಅಂತ್ಯಸಂಸ್ಕಾರದ ವಿಚಾರದಲ್ಲಿ ಆರಂಭದಲ್ಲಿ ಕೆಲ ಗೊಂದಲಗಳು ಇದ್ದರೂ ಬಳಿಕ ಬಗೆಹರಿದಿದೆ.

ಕೋವಿಡ್​​ ಮೊದಲನೆ ಅಲೆಯಲ್ಲಿ ಪ್ರತಿದಿನ 10 ರಿಂದ 15 ಸಾವಿನ ಪ್ರಕರಣಗಳು ವರದಿಯಾಗುತ್ತಿದ್ದವು. ಇದೀಗ 5 ರಿಂದ 7 ಪ್ರಕರಣಗಳು ವರದಿಯಾಗುತ್ತಿದೆ. ಇನ್ನೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಮೃತದೇಹವನ್ನು ವಿಳಂಬವಾಗಿ ಅಂತ್ಯಕ್ರಿಯೆಗೆ ನೀಡಲಾಗಿದೆ ಎಂಬ ಆರೋಪ ಈವರೆಗೆ ವರದಿಯಾಗಿಲ್ಲ.

ಸರ್ಕಾರದ ಹೊಸ ಮಾರ್ಗಸೂಚಿಯಂತೆ ಕೊರೊನಾ ಸೋಂಕಿತರ ಮೃತದೇಹವನ್ನು ಕುಟುಂಬಸ್ಥರಿಗೆ ಸರಕಾರದ ಮಾರ್ಗಸೂಚಿಯಂತೆ ನೀಡಲಾಗುತ್ತಿದೆ. ಕೊರೊನಾ ಮತ್ತು ಇತರ ಮೃತದೇಹಗಳನ್ನು ಕೊರೊನಾ ವರದಿ ಬರುವವರೆಗೂ ಕಾಯದೆ ನಿಯಮಾವಳಿಗಳಂತೆ ಅಂತ್ಯಕ್ರಿಯೆಗೆ ಆಸ್ಪತ್ರೆಯಿಂದ ನೀಡಲಾಗುತ್ತಿದೆ. ಬೆಂಗಳೂರಿಗೆ ಹೋಲಿಸಿದರೆ ಕೊಂಚ ಕಡಿಮೆ ಸಾವಿನ ಪ್ರಕರಣಗಳು ಇರುವುದರಿಂದ ಮೃತದೇಹದ ಹಸ್ತಾಂತರ ಪ್ರಕ್ರಿಯೆಯಲ್ಲಿ ವಿಳಂಬ ಈವರೆಗೆ ನಡೆದಿಲ್ಲ.

ಇದನ್ನೂ ಓದಿ: ಕಲಬುರಗಿ ಜಿಲ್ಲೆಯಲ್ಲಿಲ್ಲ ಕಟ್ಟಿಗೆ ಸಮಸ್ಯೆ!

ಇನ್ನೂ ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸಲು ದುಬಾರಿ ಹಣ ಕೇಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಇತ್ತೀಚೆಗೆ ಮಂಗಳೂರು ಮಹಾನಗರ ಪಾಲಿಕೆ ಕೊರೊನಾ ಸೋಂಕಿತರ ಮೃತದೇಹದ ಅಂತ್ಯಕ್ರಿಯೆಯನ್ನು ಉಚಿತವಾಗಿ ನೆರವೇರಿಸಲು ನಿರ್ಧರಿಸಿದೆ.

ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಕಳೆದ ವರ್ಷದಲ್ಲಿ ಇದ್ದ ಗೊಂದಲವನ್ನು ನಿವಾರಣೆ ಮಾಡಿರುವುದರಿಂದ ಯಾವುದೇ ಸಮಸ್ಯೆಗಳ ಬಗ್ಗೆ ಆರೋಪಗಳು ಕೇಳಿ ಬರುತ್ತಿಲ್ಲ.

ಮಂಗಳೂರು: ಕೊರೊನಾ ಸೋಂಕಿಗೊಳಗಾಗಿ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರಕ್ಕೆ ಹಲವಾರು ನಿಯಮಗಳಿದೆ. ಸೋಂಕಿತರನ್ನು ಕಳೆದುಕೊಂಡ ಕುಟುಂಬಗಳು ಮೃತದೇಹದ ಅಂತ್ಯ ಸಂಸ್ಕಾರವನ್ನು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಮಾಡಬೇಕಾಗುತ್ತದೆ. ಇದರ ನಡುವೆ ಮಂಗಳೂರಿನಲ್ಲಿ ಸಾವನ್ನಪ್ಪಿದ ಕೊರೊನಾ ಸೋಂಕಿತರ ಮೃತದೇಹವನ್ನು ವಿಳಂಬವಾಗದಂತೆ ಹಸ್ತಾಂತರಿಸಲಾಗುತ್ತಿದೆ.

ವಿಳಂಬವಾಗದಂತೆ ಮೃತದೇಹಗಳ ಹಸ್ತಾಂತರ - ಜಿಲ್ಲಾ ಆರೋಗ್ಯಾಧಿಕಾರಿ ಪ್ರತಿಕ್ರಿಯೆ

ಮೊದಲನೇ ಅಲೆಯ ಕೋವಿಡ್​​ ಹಾವಳಿಯ ಸಂದರ್ಭದಲ್ಲಿ ಕೊರೊನಾದಿಂದ ಮೃತ ಪಡುವವರ ಸಂಖ್ಯೆ ಬೆಂಗಳೂರು ಹೊರತು ಪಡಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿತ್ತು. ಇದೀಗ ಎರಡನೇ ಅಲೆಯ ಸಂದರ್ಭದಲ್ಲಿ ದಿನೇ ದಿನೆ ಕೊರೊನಾದಿಂದ ನಿಧನ ಹೊಂದುವವರ ಸಂಖ್ಯೆ ಹೆಚ್ಚಿದೆ. ಕೊರೊನಾ ಮೊದಲನೇ ಅಲೆ ಆರಂಭದಿಂದ ಈವರೆಗೆ ಜಿಲ್ಲೆಯಲ್ಲಿ 780 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿತರ ಅಂತ್ಯಸಂಸ್ಕಾರದ ವಿಚಾರದಲ್ಲಿ ಆರಂಭದಲ್ಲಿ ಕೆಲ ಗೊಂದಲಗಳು ಇದ್ದರೂ ಬಳಿಕ ಬಗೆಹರಿದಿದೆ.

ಕೋವಿಡ್​​ ಮೊದಲನೆ ಅಲೆಯಲ್ಲಿ ಪ್ರತಿದಿನ 10 ರಿಂದ 15 ಸಾವಿನ ಪ್ರಕರಣಗಳು ವರದಿಯಾಗುತ್ತಿದ್ದವು. ಇದೀಗ 5 ರಿಂದ 7 ಪ್ರಕರಣಗಳು ವರದಿಯಾಗುತ್ತಿದೆ. ಇನ್ನೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಮೃತದೇಹವನ್ನು ವಿಳಂಬವಾಗಿ ಅಂತ್ಯಕ್ರಿಯೆಗೆ ನೀಡಲಾಗಿದೆ ಎಂಬ ಆರೋಪ ಈವರೆಗೆ ವರದಿಯಾಗಿಲ್ಲ.

ಸರ್ಕಾರದ ಹೊಸ ಮಾರ್ಗಸೂಚಿಯಂತೆ ಕೊರೊನಾ ಸೋಂಕಿತರ ಮೃತದೇಹವನ್ನು ಕುಟುಂಬಸ್ಥರಿಗೆ ಸರಕಾರದ ಮಾರ್ಗಸೂಚಿಯಂತೆ ನೀಡಲಾಗುತ್ತಿದೆ. ಕೊರೊನಾ ಮತ್ತು ಇತರ ಮೃತದೇಹಗಳನ್ನು ಕೊರೊನಾ ವರದಿ ಬರುವವರೆಗೂ ಕಾಯದೆ ನಿಯಮಾವಳಿಗಳಂತೆ ಅಂತ್ಯಕ್ರಿಯೆಗೆ ಆಸ್ಪತ್ರೆಯಿಂದ ನೀಡಲಾಗುತ್ತಿದೆ. ಬೆಂಗಳೂರಿಗೆ ಹೋಲಿಸಿದರೆ ಕೊಂಚ ಕಡಿಮೆ ಸಾವಿನ ಪ್ರಕರಣಗಳು ಇರುವುದರಿಂದ ಮೃತದೇಹದ ಹಸ್ತಾಂತರ ಪ್ರಕ್ರಿಯೆಯಲ್ಲಿ ವಿಳಂಬ ಈವರೆಗೆ ನಡೆದಿಲ್ಲ.

ಇದನ್ನೂ ಓದಿ: ಕಲಬುರಗಿ ಜಿಲ್ಲೆಯಲ್ಲಿಲ್ಲ ಕಟ್ಟಿಗೆ ಸಮಸ್ಯೆ!

ಇನ್ನೂ ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸಲು ದುಬಾರಿ ಹಣ ಕೇಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಇತ್ತೀಚೆಗೆ ಮಂಗಳೂರು ಮಹಾನಗರ ಪಾಲಿಕೆ ಕೊರೊನಾ ಸೋಂಕಿತರ ಮೃತದೇಹದ ಅಂತ್ಯಕ್ರಿಯೆಯನ್ನು ಉಚಿತವಾಗಿ ನೆರವೇರಿಸಲು ನಿರ್ಧರಿಸಿದೆ.

ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಕಳೆದ ವರ್ಷದಲ್ಲಿ ಇದ್ದ ಗೊಂದಲವನ್ನು ನಿವಾರಣೆ ಮಾಡಿರುವುದರಿಂದ ಯಾವುದೇ ಸಮಸ್ಯೆಗಳ ಬಗ್ಗೆ ಆರೋಪಗಳು ಕೇಳಿ ಬರುತ್ತಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.