ETV Bharat / state

ಅಜ್ಜನ ಕೈಬಿಡಿಸಿಕೊಂಡು ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ; ವಿಧಿಯಾಟಕ್ಕೆ ಕಂದಮ್ಮ ಬಲಿ

ಹಂಡೇಲು ದೇವಿನಗರ ಕ್ರಾಸ್ ಬಳಿ ಬಾಲಕಿ ತನ್ನ ಅಜ್ಜನ‌ ಕೈಬಿಡಿಸಿಕೊಂಡು ರಸ್ತೆ ದಾಟಿದ್ದಾಳೆ. ಈ ಸಂದರ್ಭದಲ್ಲಿ ಮಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

author img

By

Published : Jul 13, 2021, 4:20 PM IST

Road accident in Mangalore
ರಸ್ತೆ ಅಪಘಾತದಲ್ಲಿ ಬಾಲಕಿ ಸಾವು

ಮಂಗಳೂರು: ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ 5ರ ಹರೆಯದ ಮಗುವೊಂದು ಕಾರು ಡಿಕ್ಕಿಯಾಗಿ ಮೃತಪಟ್ಟ ಘಟನೆ ಮೂಡುಬಿದಿರೆ ತಾಲೂಕಿನ ತೋಡಾರು ಸಮೀಪದ ಹಂಡೇಲು ಎಂಬಲ್ಲಿ ನಡೆದಿದೆ.

ಪ್ರಸ್ತುತ ವಿದೇಶದಲ್ಲಿರುವ ಹಂಡೇಲಿನ ಅಬುಸ್ವಾಲಿಹ್ ಎಂಬವರ ಪುತ್ರಿ ಅಜ್ಮಾ ಫಾತಿಮಾ ಮೃತಪಟ್ಟ ಮಗು. ಸೋಮವಾರ ಪುಟ್ಟ ಬಾಲಕಿ ಹಾಗೂ ಮಗುವಿನ ಅವಳಿ ಸಹೋದರಿ ಅಜ್ಜನೊಂದಿಗೆ ಅಂಗಡಿಗೆ ತೆರಳಿದ್ದರು. ವಾಪಸ್ ಮನೆಗೆ ಬರುವ ವೇಳೆ ಹಂಡೇಲು ದೇವಿನಗರ ಕ್ರಾಸ್ ಬಳಿ ಅಜ್ಮಾ ಅಜ್ಜನ‌ ಕೈಬಿಡಿಸಿಕೊಂಡು ರಸ್ತೆ ದಾಟಿದ್ದಾಳೆ. ಈ ಸಂದರ್ಭ ಮಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾದರೂ, ದಾರಿ ಮಧ್ಯೆ ಮಗು ಮೃತಪಟ್ಟಿದೆ. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದೇಶದ ಮೊದಲ ಕೊರೊನಾ ಪೀಡಿತ ಯುವತಿಗೆ ಮತ್ತೆ ಲಕ್ಷಣ ರಹಿತ ಸೋಂಕು..

ಮಂಗಳೂರು: ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ 5ರ ಹರೆಯದ ಮಗುವೊಂದು ಕಾರು ಡಿಕ್ಕಿಯಾಗಿ ಮೃತಪಟ್ಟ ಘಟನೆ ಮೂಡುಬಿದಿರೆ ತಾಲೂಕಿನ ತೋಡಾರು ಸಮೀಪದ ಹಂಡೇಲು ಎಂಬಲ್ಲಿ ನಡೆದಿದೆ.

ಪ್ರಸ್ತುತ ವಿದೇಶದಲ್ಲಿರುವ ಹಂಡೇಲಿನ ಅಬುಸ್ವಾಲಿಹ್ ಎಂಬವರ ಪುತ್ರಿ ಅಜ್ಮಾ ಫಾತಿಮಾ ಮೃತಪಟ್ಟ ಮಗು. ಸೋಮವಾರ ಪುಟ್ಟ ಬಾಲಕಿ ಹಾಗೂ ಮಗುವಿನ ಅವಳಿ ಸಹೋದರಿ ಅಜ್ಜನೊಂದಿಗೆ ಅಂಗಡಿಗೆ ತೆರಳಿದ್ದರು. ವಾಪಸ್ ಮನೆಗೆ ಬರುವ ವೇಳೆ ಹಂಡೇಲು ದೇವಿನಗರ ಕ್ರಾಸ್ ಬಳಿ ಅಜ್ಮಾ ಅಜ್ಜನ‌ ಕೈಬಿಡಿಸಿಕೊಂಡು ರಸ್ತೆ ದಾಟಿದ್ದಾಳೆ. ಈ ಸಂದರ್ಭ ಮಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾದರೂ, ದಾರಿ ಮಧ್ಯೆ ಮಗು ಮೃತಪಟ್ಟಿದೆ. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದೇಶದ ಮೊದಲ ಕೊರೊನಾ ಪೀಡಿತ ಯುವತಿಗೆ ಮತ್ತೆ ಲಕ್ಷಣ ರಹಿತ ಸೋಂಕು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.