ETV Bharat / state

ರಸ್ತೆ ಅಪಘಾತ ತಪ್ಪಿಸಲು ವಿಶಿಷ್ಟ ಪ್ರಯತ್ನ: ಬೀದಿ‌ ನಾಯಿಗಳಿಗೆ ಜೀವದುಡುಗೊರೆ ಕೊಟ್ಟ ಪ್ರಾಣಿಪ್ರಿಯ!

ಬೀದಿ ನಾಯಿಗಳೆಂದರೆ ಕೆಲವರಿಗೆ ಅಸಡ್ಡೆ. ತುತ್ತು ಅನ್ನ ಕೊಡದ ಮನುಷ್ಯ ಅವುಗಳನ್ನು ಪ್ರೀತಿಯಿಂದ ಕಾಣೋದು ಇನ್ನೂ ದೂರ. ಇದಕ್ಕೆ ಅಪವಾದ ಎಂಬಂತೆ ಮಂಗಳೂರಿನ ಯುವಕನೊಬ್ಬ ಮನಮಿಡಿಯುವ ಹವ್ಯಾಸಕ್ಕೆ ಕೈ ಹಾಕಿದ್ದಾನೆ.

author img

By

Published : Apr 27, 2019, 6:23 PM IST

ರಿಫ್ಲೆಕ್ಟೆಡ್​ ಬೆಲ್ಟ್​ ಕಟ್ಟುವ ಮೂಲಕ ಮೂಕ ಪ್ರಾಣಿಗಳ ಜೀವ ಉಳಿಸುತ್ತಿರುವ ತೌಸಿಫ್ ಅಹಮದ್

ಮಂಗಳೂರು: ರಾತ್ರಿ ವೇಳೆ ಅಪಘಾತಕ್ಕೆ ಸಿಲುಕಿ ವಿನಾ ಕರಣ ಪ್ರಾಣ ಕಳೆದುಕೊಳ್ಳುವ ಬೀದಿ ನಾಯಿಗಳ ರಕ್ಷಣೆಗೆ ಮುಂದಾಗಿರುವ ಪ್ರಾಣಿ ಪ್ರಿಯನ ಹವ್ಯಾಸವನ್ನು ನೀವು ಮೆಚ್ಚಲೇಬೇಕು. ತೌಸಿಫ್ ಅಹಮದ್ ಎಂಬ ಯುವಕ ಇಂತಹ ವಿಶಿಷ್ಟ ಹವ್ಯಾಸಕ್ಕೆ ಮುಂದಾಗಿದ್ದು, ಇದೀಗ ಎಲ್ಲರ ಗಮನ ಸೆಳೆದಿದೆ.

ರಾತ್ರಿ ವೇಳೆ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಬೀದಿ ನಾಯಿಗಳು ಸಾಕಷ್ಟು. ಇವುಗಳ ರಕ್ಷಣೆಗೆ ಮುಂದಾಗಿರುವ ತೌಸಿಫ್, ಅವುಗಳಿಗೆ ರಿಫ್ಲೆಕ್ಟೆಡ್ ಎಂಬ​ ಬೆಲ್ಟ್​ಗಳನ್ನು​ ಕಟ್ಟುವ ಮೂಲಕ ಮೂಕ ಪ್ರಾಣಿಗಳ ಜೀವ ಉಳಿಸುತ್ತಿದ್ದಾರೆ. ಈ ರೀತಿ ರಿಫ್ಲೆಕ್ಟೆಡ್​ ಬೆಲ್ಟ್​ ಕಟ್ಟುವುದರಿಂದ ವಾಹನ ಸವಾರರ ಪ್ರಾಣವೂ ಉಳಿಯುತ್ತೆ. ಜೊತೆಗೆ ಆಗುವ ಅನಾಹುತವೂ ತಪ್ಪಿಸಿದಂತಾಗುತ್ತೆ.

ಹೇಗೆ ಅಂತಿರಾ?

ತೌಸಿಫ್ ಅಹಮದ್​ ಈಗಾಗಲೇ ಸುರತ್ಕಲ್, ಕುಳಾಯಿ, ತಣ್ಣೀರುಬಾವಿ, ಬಿಜೈ, ಕೂಳೂರು, ಮೋರ್ಗನ್ ಗೇಟ್ ಪ್ರದೇಶ ಸೇರಿದಂತೆ ಇತರೆಡೆ 500ಕ್ಕೂ ಅಧಿಕ ನಾಯಿಗಳಿಗೆ ರಿಫ್ಲೆಕ್ಟೆಡ್​ ಬೆಲ್ಟ್​ ಅಳವಡಿಸಿದ್ದಾರಂತೆ. ಈ ರೀತಿ ರಿಫ್ಲೆಕ್ಟೆಡ್​ ಬೆಲ್ಟ್​ ಕಟ್ಟುವುದರಿಂದ ರಾತ್ರಿ ವೇಳೆ ವಾಹನಗಳ ಹೆಡ್​ಲೈಟ್​​​ ಈ​ ಬೆಲ್ಟ್ ಮೇಲೆ ಬೀಳುತ್ತದೆ. ಆಗ ಈ​ ಬೆಲ್ಟ್ ಮಿನುಗುವುದರಿಂದ ವಾನಹ ಸವಾರರು ನೋಡಿಕೊಂಡು ನಿಧಾನವಾಗಿ ಚಲಿಸಬಹುದು. ಇಲ್ಲಿ ಇಬ್ಬರ ಪ್ರಾಣವೂ ಉಳಿಯುತ್ತದೆ. ಇಂದೋರ್​ನಿಂದ ಪ್ರತಿ ಬೆಲ್ಟ್​ಗೆ 40 ರೂ. ಕೊಟ್ಟು ಇವುಗಳನ್ನು ತರಿಸಲಾಗುತ್ತಿದೆ. ಕೆಂಪು, ನೀಲಿ, ಹಳದಿ, ನೇರಳೆ ಬಣ್ಣದಲ್ಲಿ ಮಿನುಗುವುದರಿಂದ ಪ್ರಾಣ ಹಾನಿ ಆಗವುದಿಲ್ಲ ಎನ್ನುತ್ತಾರೆ ತೌಸಿಫ್ ಅಹಮದ್.

ರಿಫ್ಲೆಕ್ಟೆಡ್​ ಬೆಲ್ಟ್​ ಕಟ್ಟುವ ಮೂಲಕ ಮೂಕ ಪ್ರಾಣಿಗಳ ಜೀವ ಉಳಿಸುತ್ತಿರುವ ತೌಸಿಫ್ ಅಹಮದ್

ಇನ್ನು ಹೊಸ ಪ್ರಯತ್ನಕ್ಕೆ ಕೈಹಾಕಿದ ಯುಕನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸ್ಥಳೀಯರು, ಪ್ರಾಣಿ ಪ್ರಿಯನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಉಪಾಯದಿಂದ ನಾಯಿಯ ಜೀವ ಹಾಗೂ ವಾಹನ ಸವಾರರ ಜೀವ ಉಳಿಯಲಿದೆ. ಜೊತೆಗೆ ಆಗುವ ಅನಾಹುತ ತಪ್ಪಿಸಿದಂತಾಗುತ್ತೆ ಎನ್ನುತ್ತಾರೆ ಸ್ಥಳೀಯರು.

ಮಂಗಳೂರು: ರಾತ್ರಿ ವೇಳೆ ಅಪಘಾತಕ್ಕೆ ಸಿಲುಕಿ ವಿನಾ ಕರಣ ಪ್ರಾಣ ಕಳೆದುಕೊಳ್ಳುವ ಬೀದಿ ನಾಯಿಗಳ ರಕ್ಷಣೆಗೆ ಮುಂದಾಗಿರುವ ಪ್ರಾಣಿ ಪ್ರಿಯನ ಹವ್ಯಾಸವನ್ನು ನೀವು ಮೆಚ್ಚಲೇಬೇಕು. ತೌಸಿಫ್ ಅಹಮದ್ ಎಂಬ ಯುವಕ ಇಂತಹ ವಿಶಿಷ್ಟ ಹವ್ಯಾಸಕ್ಕೆ ಮುಂದಾಗಿದ್ದು, ಇದೀಗ ಎಲ್ಲರ ಗಮನ ಸೆಳೆದಿದೆ.

ರಾತ್ರಿ ವೇಳೆ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಬೀದಿ ನಾಯಿಗಳು ಸಾಕಷ್ಟು. ಇವುಗಳ ರಕ್ಷಣೆಗೆ ಮುಂದಾಗಿರುವ ತೌಸಿಫ್, ಅವುಗಳಿಗೆ ರಿಫ್ಲೆಕ್ಟೆಡ್ ಎಂಬ​ ಬೆಲ್ಟ್​ಗಳನ್ನು​ ಕಟ್ಟುವ ಮೂಲಕ ಮೂಕ ಪ್ರಾಣಿಗಳ ಜೀವ ಉಳಿಸುತ್ತಿದ್ದಾರೆ. ಈ ರೀತಿ ರಿಫ್ಲೆಕ್ಟೆಡ್​ ಬೆಲ್ಟ್​ ಕಟ್ಟುವುದರಿಂದ ವಾಹನ ಸವಾರರ ಪ್ರಾಣವೂ ಉಳಿಯುತ್ತೆ. ಜೊತೆಗೆ ಆಗುವ ಅನಾಹುತವೂ ತಪ್ಪಿಸಿದಂತಾಗುತ್ತೆ.

ಹೇಗೆ ಅಂತಿರಾ?

ತೌಸಿಫ್ ಅಹಮದ್​ ಈಗಾಗಲೇ ಸುರತ್ಕಲ್, ಕುಳಾಯಿ, ತಣ್ಣೀರುಬಾವಿ, ಬಿಜೈ, ಕೂಳೂರು, ಮೋರ್ಗನ್ ಗೇಟ್ ಪ್ರದೇಶ ಸೇರಿದಂತೆ ಇತರೆಡೆ 500ಕ್ಕೂ ಅಧಿಕ ನಾಯಿಗಳಿಗೆ ರಿಫ್ಲೆಕ್ಟೆಡ್​ ಬೆಲ್ಟ್​ ಅಳವಡಿಸಿದ್ದಾರಂತೆ. ಈ ರೀತಿ ರಿಫ್ಲೆಕ್ಟೆಡ್​ ಬೆಲ್ಟ್​ ಕಟ್ಟುವುದರಿಂದ ರಾತ್ರಿ ವೇಳೆ ವಾಹನಗಳ ಹೆಡ್​ಲೈಟ್​​​ ಈ​ ಬೆಲ್ಟ್ ಮೇಲೆ ಬೀಳುತ್ತದೆ. ಆಗ ಈ​ ಬೆಲ್ಟ್ ಮಿನುಗುವುದರಿಂದ ವಾನಹ ಸವಾರರು ನೋಡಿಕೊಂಡು ನಿಧಾನವಾಗಿ ಚಲಿಸಬಹುದು. ಇಲ್ಲಿ ಇಬ್ಬರ ಪ್ರಾಣವೂ ಉಳಿಯುತ್ತದೆ. ಇಂದೋರ್​ನಿಂದ ಪ್ರತಿ ಬೆಲ್ಟ್​ಗೆ 40 ರೂ. ಕೊಟ್ಟು ಇವುಗಳನ್ನು ತರಿಸಲಾಗುತ್ತಿದೆ. ಕೆಂಪು, ನೀಲಿ, ಹಳದಿ, ನೇರಳೆ ಬಣ್ಣದಲ್ಲಿ ಮಿನುಗುವುದರಿಂದ ಪ್ರಾಣ ಹಾನಿ ಆಗವುದಿಲ್ಲ ಎನ್ನುತ್ತಾರೆ ತೌಸಿಫ್ ಅಹಮದ್.

ರಿಫ್ಲೆಕ್ಟೆಡ್​ ಬೆಲ್ಟ್​ ಕಟ್ಟುವ ಮೂಲಕ ಮೂಕ ಪ್ರಾಣಿಗಳ ಜೀವ ಉಳಿಸುತ್ತಿರುವ ತೌಸಿಫ್ ಅಹಮದ್

ಇನ್ನು ಹೊಸ ಪ್ರಯತ್ನಕ್ಕೆ ಕೈಹಾಕಿದ ಯುಕನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸ್ಥಳೀಯರು, ಪ್ರಾಣಿ ಪ್ರಿಯನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಉಪಾಯದಿಂದ ನಾಯಿಯ ಜೀವ ಹಾಗೂ ವಾಹನ ಸವಾರರ ಜೀವ ಉಳಿಯಲಿದೆ. ಜೊತೆಗೆ ಆಗುವ ಅನಾಹುತ ತಪ್ಪಿಸಿದಂತಾಗುತ್ತೆ ಎನ್ನುತ್ತಾರೆ ಸ್ಥಳೀಯರು.

Intro:ಮಂಗಳೂರು: ರಾತ್ರಿ ಹೊತ್ತಿನಲ್ಲಿ ನಾಯಿಗಳು ರಸ್ತೆ ದಾಟುವಾಗ ಕಾಣದೆ ಹಲವು ಅಪಘಾತಗಳು ಸಂಭವಿಸುತ್ತದೆ. ಅಪಘಾತದಿಂದ ನಾಯಿಯ ಜೀವಕ್ಕೂ, ವಾಹನ ಸವಾರರ ಜೀವಕ್ಕೂ ಅಪಾಯ ತಂದೊಡ್ಡುವುದನ್ನು ತಪ್ಪಿಸಲು ಮಂಗಳೂರಿನ ಪ್ರಾಣಿ ಪ್ರಿಯರೊಬ್ಬರು ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ.


Body:ಮಂಗಳೂರಿನ ಯುವಕ ತೌಸಿಫ್ ಅಹಮದ್ ಎಂಬವರು ಈ ವಿಶಿಷ್ಟ ಪ್ರಯತ್ನಕ್ಕಿಳಿದವರು. ಈಗಾಗಲೇ ತೌಸಿಫ್ ಅಹಮದ್ ಅವರು ಮಂಗಳೂರಿನ ಸುರತ್ಕಲ್ ,ಕುಳಾಯಿ, ತಣ್ಣೀರುಬಾವಿ, ಬಿಜೈ, ಕೂಳೂರು, ಮೋರ್ಗನ್ ಗೇಟ್ ಪ್ರದೇಶಗಳಲ್ಲಿ ಐದು ನೂರಕ್ಕೂ ಅಧಿಕ ನಾಯಿಗಳಿಗೆ ರಿಪ್ಲೆಕ್ಟಿಂಗ್ ಬೆಲ್ಟ್ ಅಳವಡಿಸಿದ್ದಾರೆ.

ಬೈಟ್ - ತೌಸಿಫ್ ಅಹಮದ್, ನಾಯಿಗಳಿಗೆ ರಿಪ್ಲೆಕ್ಟೆಡ್ ಬೆಲ್ಟ್ ಹಾಕುವವರು


ರಸ್ತೆ ಬದಿ ಕಂಬಗಳಿಗೆ ರಾತ್ರಿ ವೇಳೆ ವಾಹನಗಳ ಹೆಡ್ ಲೈಡ್ ಬಿದ್ದರೆ ಮಿನುಗುವ ಬಣ್ಣದ ಪಟ್ಟಿಯ ಮಾದರಿಯ ಬೆಲ್ಟ್ ಇದು. ಇಂದೋರ್ ನಿಂದ ಪ್ರತಿ ಬೆಲ್ಟ್ ಗೆ 40 ರೂ ಕೊಟ್ಟು ತರಿಸಲಾಗುತ್ತಿದೆ.ಈ ಬೆಲ್ಟ್ ಹಾಕಲಾದ ನಾಯಿಗಳು ವಾಹನಸವಾರರಿಗೆ ದೂರದಿಂದಲೆ ಗೋಚರವಾಗಲಿದೆ. ಇದರಿಂದ ಸಂಭಾವ್ಯ ಅಪಘಾತ ತಪ್ಪಿಸಲು ಸಾಧ್ಯವಾಗಲಿದೆ. ಈ ಬೆಲ್ಡ್ ಹಾಕಿದ ಬಳಿಕ ಬೆಲ್ಟ್ ಹಾಕಿಕೊಂಡ ನಾಯಿಗಳು ಅಪಘಾತಕ್ಕೆ ಸಿಲುಕಿಲ್ಲ ಎಂಬ ವಿಚಾರವನ್ನು ತೌಸಿಫ್ ಅಹಮದ್ ತಿಳಿದುಕೊಂಡಿದ್ದಾರೆ. ನಾಯಿಗಳಿಗೆ ಕೆಂಪು, ನೀಲಿ, ಹಳದಿ, ನೇರಳೆ ಬಣ್ಣ ಪ್ರತಿಫಲಿಸುವ ಕೊರಳಪಟ್ಟಿ ಹಾಕಲಾಗುತ್ತಿದೆ. ಆರಂಭದಲ್ಲಿ ಸ್ವಯಂ ಖರ್ಚು ಮಾಡಿ ಬೀದಿ ನಾಯಿಗಳಿಗೆ ರಿಪ್ಲೆಕ್ಟೆಡ್ ಬೆಲ್ಟ್ ಹಾಕಿದ ತೌಸಿಫ್ ಅಹಮದ್ ಅವರಿಗೆ ಈ ಕಾರ್ಯಕ್ಕೆ ಕೆಲವೊಂದು ದಾನಿಗಳು ಸಹಾಯ ಹಸ್ತ ನೀಡುತ್ತಿದ್ದಾರೆ. ಎನಿನಲ್ ಕೇರ್ ಟ್ರಸ್ಟ್ ಸದಸ್ಯರು ಆಗಿರುವ ತೌಸಿಫ್ ಅಹಮದ್ ಅವರ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
end PTC
ವಿನೋದ್ ಪುದು


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.