ETV Bharat / state

ಆಶ್ರಯ ಮನೆಗಾಗಿ ಇದ್ದೊಂದು ಮನೆಯನ್ನೂ ಕೆಡವಿ ಬೀದಿಗೆ ಬಿದ್ದ ಬಡ ಕುಟುಂಬ

author img

By

Published : Jun 9, 2023, 9:35 PM IST

Updated : Jun 9, 2023, 10:03 PM IST

ಆಶ್ರಯ ಮನೆ ಪಂಚಾಯತ್ ವತಿಯಿಂದ ಮಂಜೂರಾದರೂ ಯಾವುದೇ ಬಿಲ್​ ಬಾರದೆ ಕುಟುಂಬ ಮನೆ ಕಳೆದುಕೊಂಡಿದೆ.

ಮನೆ ಕಳೆದಕೊಂಡು ಬೀದಿಗೆ ಬಿದ್ದ ಬಡ ಕುಟುಂಬ
ಮನೆ ಕಳೆದಕೊಂಡು ಬೀದಿಗೆ ಬಿದ್ದ ಬಡ ಕುಟುಂಬ
ಆಶ್ರಯ ಮನೆಗಾಗಿ ಇದ್ದೊಂದು ಮನೆಯನ್ನೂ ಕಳೆದುಕೊಂಡ ಕುಟುಂಬ

ಪುತ್ತೂರು (ದಕ್ಷಿಣ ಕನ್ನಡ) : ಆಶ್ರಯ ಮನೆಯ ಆಸೆಯಲ್ಲಿ ಇದ್ದ ಮನೆಯನ್ನೂ ಕೆಡವಿ ಬಡ ಕುಟುಂಬವೊಂದು ಬೀದಿಗೆ ಬಿದ್ದಿದೆ. ಪುತ್ತೂರು ತಾಲೂಕಿನ ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡ್ಯಾ ಎಂಬಲ್ಲಿನ ಸುದ್ದಿ ಇದು. ಮನೆ ಇಲ್ಲದ ಕಾರಣ ಕಳೆದ ಮೂರು ತಿಂಗಳಿನಿಂದ ಈ ಕುಟುಂಬ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಲ್ಲಿ ಬದುಕಬೇಕಾದ ಅನಿವಾರ್ಯ ಸ್ಥಿತಿಯಲ್ಲಿದೆ.

ಕಡ್ಯ ಗ್ರಾಮದ ಮೋನಪ್ಪ ಎಂಬವರ ಕುಟುಂಬ ಆಶ್ರಯ ಮನೆಗಾಗಿ ಕಳೆದ ವರ್ಷ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿತ್ತು. ಈ ನಡುವೆ ಇತ್ತೀಚೆಗಷ್ಟೇ ಇವರ ಕುಟುಂಬಕ್ಕೆ ಆಶ್ರಯ ಮನೆಯನ್ನು ಪಂಚಾಯತ್ ವತಿಯಿಂದ ಮಂಜೂರು ಮಾಡಲಾಗಿತ್ತು. ಆಶ್ರಯ ಮನೆ ಮಂಜೂರಾದ ಹಿನ್ನೆಲೆಯಲ್ಲಿ ಇದ್ದ ಮನೆಯನ್ನು ಕೆಡವಿ ಹೊಸ ಮನೆಗೆ ಅಡಿಪಾಯ ಹಾಕಿದ್ದ ಕುಟುಂಬ ಪಂಚಾಯತ್ ಹಣ ಬಿಡುಗಡೆಯಾಗುತ್ತೆ ಅನ್ನೋ‌ ಲೆಕ್ಕಾಚಾರದಲ್ಲಿ ಕೈ ಸಾಲ ಪಡೆದು ಅಡಿಪಾಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ.

ಇದನ್ನೂ ಓದಿ : ತನ್ನದೇ ಮನೆಗಾಗಿ ಮಕ್ಕಳ ಜೊತೆ ಮನೆ ಮುಂದೆ ಪ್ರತಿಭಟನೆಗೆ ಕುಳಿತ ತಾಯಿ

ಆದರೆ, ಅಡಿಪಾಯ ಹಾಕಿ ಮೂರು ತಿಂಗಳು ಕಳೆದರೂ ಮೊದಲ ಕಂತಿನ ಅನುದಾನ ಬಿಡುಗಡೆಯಾಗದ ಕಾರಣ ಮನೆ ನಿರ್ಮಾಣದ ಕೆಲಸವನ್ನು ಮುಂದುವರಿಸಲು ಸಾಧ್ಯವಾಗದೇ ಅರ್ಧದಲ್ಲೇ ನಿಲ್ಲಿಸಲಾಗಿದೆ‌. ಹೊಸ ಮನೆಗಾಗಿ ಹಳೆ ಮನೆಯನ್ನು ಕೆಡವಿ ಹಾಕಿದ್ದ ಮೋನಪ್ಪ ಕುಟುಂಬ ಇದೀಗ ಅತ್ತ ಮನೆಯೂ ಇಲ್ಲ, ಇತ್ತ ಕುಳಿತುಕೊಳ್ಳಲೂ ಜಾಗವೂ ಇಲ್ಲದ ಸ್ಥಿತಿಯಲ್ಲಿದ್ದು, ಬೀದಿಗೆ ಬಂದಿದೆ.

ಸರಿಯಾದ ಮನೆ ಇಲ್ಲದ ಕಾರಣ ಮನೆ ಯಜಮಾನ ಮೋನಪ್ಪರ ಹೆಂಡತಿ ಮತ್ತು ಮಗ ತವರು ಮನೆ ಸೇರಿದ್ದು, ಮೋನಪ್ಪ ಅವರು ಮಾತ್ರ ಇದೀಗ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಿನಲ್ಲೇ ಜೀವನ ಸಾಗಿಸುವಂತಾಗಿದೆ. ಮುಂಡೂರು ಪಂಚಾಯತ್‌ಗೆ ಸಂಬಂಧಪಟ್ಟವರು ಈ ಭಾಗಕ್ಕೆ ಭೇಟಿ ನೀಡಿದರೂ ಈ ಕುಟುಂಬದ ಸಮಸ್ಯೆಯ ಬಗ್ಗೆ ಮೌನ ವಹಿಸಿದ್ದು, ಇನ್ನೇನು ಮಳೆಗಾಲ ಸಮೀಪಿಸುತ್ತಿದೆ, ಏನು ಮಾಡುವುದು ಎಂದು ತೋಚದ ಕುಟುಂಬ ಸದಸ್ಯರು ಆಕಾಶದ ಕಡೆಗೆ ಕೈ ತೋರಿಸಿಕೊಂಡು ಮರುಗುತ್ತಿದೆ.

ಇದನ್ನೂ ಓದಿ : Congress guarantees: ಪಂಚ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುವೆ: ಶಾಸಕ ಪ್ರದೀಪ್​ ಈಶ್ವರ್

ಮೋನಪ್ಪ ಮಾತನಾಡಿ, "ಕಳೆದ ಮೂರು ತಿಂಗಳಿಂದ ಯಾವುದೇ ಬಿಲ್ ಆಗಿಲ್ಲ. ಇನ್ನೇನು ಮಳೆಗಾಲ ಆರಂಭವಾಗುತ್ತಿದ್ದು, ಏನು ಮಾಡುವುದೆಂದು ಗೊತ್ತಾಗುತ್ತಿಲ್ಲ. ಅಧಿಕಾರಿಗಳು ಇಲ್ಲಿ ಬಂದು ನೋಡಿ ಹೋಗುತ್ತಾರೆ ಅಷ್ಟೇ. ಯಾವುದೇ ಸೌಲಭ್ಯಗಳು ಕೂಡ ನಮಗೆ ಸಿಗುತ್ತಿಲ್ಲ. ಕನಿಷ್ಟ ನೀರಿನ ಸೌಲಭ್ಯ ಸಹ ಇಲ್ಲ. ಎಲ್ಲ ಆ ದೇವರಿಗೆ ಬಿಟ್ಟಿದ್ದು" ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ : ಆಗಸ್ಟ್​ನಿಂದ ಮನೆ ಬೆಳಗಲಿದೆ ಗೃಹಜ್ಯೋತಿ.. 200 ಯೂನಿಟ್​ ಮೀರಿದ್ರೆ ಸಂಪೂರ್ಣ ಬಿಲ್ ಕಟ್ಟಿ​ - ಸಚಿವ ಜಾರ್ಜ್​

ಆಶ್ರಯ ಮನೆಗಾಗಿ ಇದ್ದೊಂದು ಮನೆಯನ್ನೂ ಕಳೆದುಕೊಂಡ ಕುಟುಂಬ

ಪುತ್ತೂರು (ದಕ್ಷಿಣ ಕನ್ನಡ) : ಆಶ್ರಯ ಮನೆಯ ಆಸೆಯಲ್ಲಿ ಇದ್ದ ಮನೆಯನ್ನೂ ಕೆಡವಿ ಬಡ ಕುಟುಂಬವೊಂದು ಬೀದಿಗೆ ಬಿದ್ದಿದೆ. ಪುತ್ತೂರು ತಾಲೂಕಿನ ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡ್ಯಾ ಎಂಬಲ್ಲಿನ ಸುದ್ದಿ ಇದು. ಮನೆ ಇಲ್ಲದ ಕಾರಣ ಕಳೆದ ಮೂರು ತಿಂಗಳಿನಿಂದ ಈ ಕುಟುಂಬ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಲ್ಲಿ ಬದುಕಬೇಕಾದ ಅನಿವಾರ್ಯ ಸ್ಥಿತಿಯಲ್ಲಿದೆ.

ಕಡ್ಯ ಗ್ರಾಮದ ಮೋನಪ್ಪ ಎಂಬವರ ಕುಟುಂಬ ಆಶ್ರಯ ಮನೆಗಾಗಿ ಕಳೆದ ವರ್ಷ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿತ್ತು. ಈ ನಡುವೆ ಇತ್ತೀಚೆಗಷ್ಟೇ ಇವರ ಕುಟುಂಬಕ್ಕೆ ಆಶ್ರಯ ಮನೆಯನ್ನು ಪಂಚಾಯತ್ ವತಿಯಿಂದ ಮಂಜೂರು ಮಾಡಲಾಗಿತ್ತು. ಆಶ್ರಯ ಮನೆ ಮಂಜೂರಾದ ಹಿನ್ನೆಲೆಯಲ್ಲಿ ಇದ್ದ ಮನೆಯನ್ನು ಕೆಡವಿ ಹೊಸ ಮನೆಗೆ ಅಡಿಪಾಯ ಹಾಕಿದ್ದ ಕುಟುಂಬ ಪಂಚಾಯತ್ ಹಣ ಬಿಡುಗಡೆಯಾಗುತ್ತೆ ಅನ್ನೋ‌ ಲೆಕ್ಕಾಚಾರದಲ್ಲಿ ಕೈ ಸಾಲ ಪಡೆದು ಅಡಿಪಾಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ.

ಇದನ್ನೂ ಓದಿ : ತನ್ನದೇ ಮನೆಗಾಗಿ ಮಕ್ಕಳ ಜೊತೆ ಮನೆ ಮುಂದೆ ಪ್ರತಿಭಟನೆಗೆ ಕುಳಿತ ತಾಯಿ

ಆದರೆ, ಅಡಿಪಾಯ ಹಾಕಿ ಮೂರು ತಿಂಗಳು ಕಳೆದರೂ ಮೊದಲ ಕಂತಿನ ಅನುದಾನ ಬಿಡುಗಡೆಯಾಗದ ಕಾರಣ ಮನೆ ನಿರ್ಮಾಣದ ಕೆಲಸವನ್ನು ಮುಂದುವರಿಸಲು ಸಾಧ್ಯವಾಗದೇ ಅರ್ಧದಲ್ಲೇ ನಿಲ್ಲಿಸಲಾಗಿದೆ‌. ಹೊಸ ಮನೆಗಾಗಿ ಹಳೆ ಮನೆಯನ್ನು ಕೆಡವಿ ಹಾಕಿದ್ದ ಮೋನಪ್ಪ ಕುಟುಂಬ ಇದೀಗ ಅತ್ತ ಮನೆಯೂ ಇಲ್ಲ, ಇತ್ತ ಕುಳಿತುಕೊಳ್ಳಲೂ ಜಾಗವೂ ಇಲ್ಲದ ಸ್ಥಿತಿಯಲ್ಲಿದ್ದು, ಬೀದಿಗೆ ಬಂದಿದೆ.

ಸರಿಯಾದ ಮನೆ ಇಲ್ಲದ ಕಾರಣ ಮನೆ ಯಜಮಾನ ಮೋನಪ್ಪರ ಹೆಂಡತಿ ಮತ್ತು ಮಗ ತವರು ಮನೆ ಸೇರಿದ್ದು, ಮೋನಪ್ಪ ಅವರು ಮಾತ್ರ ಇದೀಗ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಿನಲ್ಲೇ ಜೀವನ ಸಾಗಿಸುವಂತಾಗಿದೆ. ಮುಂಡೂರು ಪಂಚಾಯತ್‌ಗೆ ಸಂಬಂಧಪಟ್ಟವರು ಈ ಭಾಗಕ್ಕೆ ಭೇಟಿ ನೀಡಿದರೂ ಈ ಕುಟುಂಬದ ಸಮಸ್ಯೆಯ ಬಗ್ಗೆ ಮೌನ ವಹಿಸಿದ್ದು, ಇನ್ನೇನು ಮಳೆಗಾಲ ಸಮೀಪಿಸುತ್ತಿದೆ, ಏನು ಮಾಡುವುದು ಎಂದು ತೋಚದ ಕುಟುಂಬ ಸದಸ್ಯರು ಆಕಾಶದ ಕಡೆಗೆ ಕೈ ತೋರಿಸಿಕೊಂಡು ಮರುಗುತ್ತಿದೆ.

ಇದನ್ನೂ ಓದಿ : Congress guarantees: ಪಂಚ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುವೆ: ಶಾಸಕ ಪ್ರದೀಪ್​ ಈಶ್ವರ್

ಮೋನಪ್ಪ ಮಾತನಾಡಿ, "ಕಳೆದ ಮೂರು ತಿಂಗಳಿಂದ ಯಾವುದೇ ಬಿಲ್ ಆಗಿಲ್ಲ. ಇನ್ನೇನು ಮಳೆಗಾಲ ಆರಂಭವಾಗುತ್ತಿದ್ದು, ಏನು ಮಾಡುವುದೆಂದು ಗೊತ್ತಾಗುತ್ತಿಲ್ಲ. ಅಧಿಕಾರಿಗಳು ಇಲ್ಲಿ ಬಂದು ನೋಡಿ ಹೋಗುತ್ತಾರೆ ಅಷ್ಟೇ. ಯಾವುದೇ ಸೌಲಭ್ಯಗಳು ಕೂಡ ನಮಗೆ ಸಿಗುತ್ತಿಲ್ಲ. ಕನಿಷ್ಟ ನೀರಿನ ಸೌಲಭ್ಯ ಸಹ ಇಲ್ಲ. ಎಲ್ಲ ಆ ದೇವರಿಗೆ ಬಿಟ್ಟಿದ್ದು" ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ : ಆಗಸ್ಟ್​ನಿಂದ ಮನೆ ಬೆಳಗಲಿದೆ ಗೃಹಜ್ಯೋತಿ.. 200 ಯೂನಿಟ್​ ಮೀರಿದ್ರೆ ಸಂಪೂರ್ಣ ಬಿಲ್ ಕಟ್ಟಿ​ - ಸಚಿವ ಜಾರ್ಜ್​

Last Updated : Jun 9, 2023, 10:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.