ETV Bharat / state

ಪಾಕ್ ಪರ ಘೋಷಣೆ ರಾಷ್ಟ್ರ ವಿರೋಧಿ ಕೃತ್ಯ: ಕ್ರಮ ಕೈಗೊಳ್ಳುವಂತೆ ಕಟೀಲ್ ಒತ್ತಾಯ

ಭಾರತದ ಅನ್ನ ತಿಂದು, ಗಾಳಿ, ನೀರು ಸೇವಿಸಿ ಇನ್ನೊಂದು ದೇಶಕ್ಕೆ ಜೈಕಾರ ಹಾಕುವುದು ರಾಷ್ಟ್ರ ವಿರೋಧಿ ಕೃತ್ಯ. ಸಂವಿಧಾನದ ಮೇಲೆ ನಂಬಿಕೆ ಇಲ್ಲದ ರಾಷ್ಟ್ರ ವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದೇನೆ ಎಂದು ಕಟೀಲ್ ಹೇಳಿದರು.

author img

By

Published : Dec 30, 2020, 7:10 PM IST

Nalin Kumar Kateel Reaction ABout Pro-Pakistan Slogans
ನಳಿನ್ ಕುಮಾರ್ ಕಟೀಲ್

ಮಂಗಳೂರು: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಎಸ್​ಡಿಪಿಐ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಹಾಕಿರುವ ವಿಡಿಯೋವನ್ನು ಮಾಧ್ಯಮದಲ್ಲಿ ಗಮನಿಸಿದ್ದು, ಇದೊಂದು ರಾಷ್ಟ್ರ ವಿರೋಧಿ ಕೃತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ‌ಅವರು, ಭಾರತದ ಅನ್ನ ತಿಂದು, ಗಾಳಿ, ನೀರು ಸೇವಿಸಿ ಇನ್ನೊಂದು ದೇಶಕ್ಕೆ ಜೈಕಾರ ಹಾಕುವುದು ರಾಷ್ಟ್ರ ವಿರೋಧಿ ಕೃತ್ಯ. ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ಅವರಲ್ಲಿ ಮಾತನಾಡಿದ್ದೇನೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್​ ಹೊರಗಡೆ ಗೂಂಡಾಗಿರಿ ಮಾಡುತ್ತಿತ್ತು, ಈಗ ಪರಿಷತ್​ನಲ್ಲೂ ಮಾಡುತ್ತಿದೆ: ಕಟೀಲ್​​

ಇಂತಹ ಹಲವಾರು ಘಟನೆಗಳನ್ನು ಎಸ್​ಡಿಪಿಐ ಮಾಡಿದೆ. ರಾಜಕೀಯ ಪಕ್ಷವಾಗಿರುವ ಎಸ್​ಡಿಪಿಐ ವಿಚಾರ, ಸಿದ್ಧಾಂತ ಮರೆತು ಕೆಲಸ ಮಾಡುತ್ತಿದೆ. ಅವರಿಗೆ ರಾಷ್ಟ್ರದ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ನಂಬಿಕೆ ಇಲ್ಲ.

ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ

ಇದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಕೃತ್ಯದಲ್ಲಿ ತೊಡಗಿಸಿಕೊಂಡ ಎಸ್​ಡಿಪಿಐ, ಪಿಎಫ್​ಐನವರನ್ನು ಬಂಧಿಸಿ, ರಾಷ್ಟ್ರ ವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಒತ್ತಾಯಿಸುತ್ತೇನೆ ಎಂದರು.

ಮಂಗಳೂರು: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಎಸ್​ಡಿಪಿಐ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಹಾಕಿರುವ ವಿಡಿಯೋವನ್ನು ಮಾಧ್ಯಮದಲ್ಲಿ ಗಮನಿಸಿದ್ದು, ಇದೊಂದು ರಾಷ್ಟ್ರ ವಿರೋಧಿ ಕೃತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ‌ಅವರು, ಭಾರತದ ಅನ್ನ ತಿಂದು, ಗಾಳಿ, ನೀರು ಸೇವಿಸಿ ಇನ್ನೊಂದು ದೇಶಕ್ಕೆ ಜೈಕಾರ ಹಾಕುವುದು ರಾಷ್ಟ್ರ ವಿರೋಧಿ ಕೃತ್ಯ. ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ಅವರಲ್ಲಿ ಮಾತನಾಡಿದ್ದೇನೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್​ ಹೊರಗಡೆ ಗೂಂಡಾಗಿರಿ ಮಾಡುತ್ತಿತ್ತು, ಈಗ ಪರಿಷತ್​ನಲ್ಲೂ ಮಾಡುತ್ತಿದೆ: ಕಟೀಲ್​​

ಇಂತಹ ಹಲವಾರು ಘಟನೆಗಳನ್ನು ಎಸ್​ಡಿಪಿಐ ಮಾಡಿದೆ. ರಾಜಕೀಯ ಪಕ್ಷವಾಗಿರುವ ಎಸ್​ಡಿಪಿಐ ವಿಚಾರ, ಸಿದ್ಧಾಂತ ಮರೆತು ಕೆಲಸ ಮಾಡುತ್ತಿದೆ. ಅವರಿಗೆ ರಾಷ್ಟ್ರದ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ನಂಬಿಕೆ ಇಲ್ಲ.

ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ

ಇದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಕೃತ್ಯದಲ್ಲಿ ತೊಡಗಿಸಿಕೊಂಡ ಎಸ್​ಡಿಪಿಐ, ಪಿಎಫ್​ಐನವರನ್ನು ಬಂಧಿಸಿ, ರಾಷ್ಟ್ರ ವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಒತ್ತಾಯಿಸುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.