ETV Bharat / state

ಹದಗೆಟ್ಟ ರಾಜ್ಯ ಹೆದ್ದಾರಿ.. ಮಣ್ಣು-ಕಲ್ಲು ಹಾಕಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ತಾಯಿ-ಮಗಳು

author img

By

Published : Jul 28, 2021, 1:37 PM IST

ಉಪ್ಪಿನಂಗಡಿ ಸಮೀಪದ ಪೆರಿಯಡ್ಕದ ಕಿಂಡೋವಿನ ರಸ್ತೆಯಲ್ಲಿ ಬಿದ್ದ ಗುಂಡಿಗಳಿಗೆ ಸ್ಥಳೀಯ ಆಶಾ ಕಾರ್ಯಕರ್ತೆಯೂ ಆಗಿರುವ ಅನಂತಾವತಿ ಮತ್ತು ಅವರ ತಾಯಿ ಸೇಸಮ್ಮ ಸೇರಿಕೊಂಡು ಮಣ್ಣು ಮತ್ತು ಕಲ್ಲುಗಳನ್ನು ಹಾಕಿ ಮುಚ್ಚುತ್ತಿದ್ದಾರೆ.

Mother and daughter trying to close Potholes in uppinangady
ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ತಾಯಿ-ಮಗಳು

ಉಪ್ಪಿನಂಗಡಿ(ದಕ್ಷಿಣ ಕನ್ನಡ): ಅದು ಹೆಸರಿಗೆ ಮಾತ್ರ ರಾಜ್ಯ ಹೆದ್ದಾರಿ. ಅದರ ದುಸ್ಥಿತಿ ನೋಡಿದ್ರೆ ಇಲ್ಲಿ ಸಂಚರಿಸುವ ವಾಹನ ಸವಾರರು ಪ್ರಸವವೇದನೆ ಅನುಭವಿಸದೇ ಇರಲಾರರು. ಅಷ್ಟಕ್ಕೂ ಅಲ್ಲಿ ಈಗಾಗಲೇ ಹಲವು ಬಾರಿ ಅಪಘಾತಗಳು ಸಂಭವಿಸಿದ್ದು, ಜನರು ನೋವುಂಡಿದ್ದಾರೆ. ಇದೆಲ್ಲವನ್ನು ಕಂಡ ತಾಲೂಕಿನ ಅಮ್ಮ-ಮಗಳು ತಾವೇ ಮುಂದೆ ನಿಂತು ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚುತ್ತಿದ್ದಾರೆ.

ಹೌದು, ತಾಯಿ-ಮಗಳು ಸೇರಿಕೊಂಡು ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಉಂಟಾದ ಹೊಂಡಗಳಿಗೆ ಮಣ್ಣು ಮತ್ತು ಕಲ್ಲುಗಳನ್ನು ಹಾಕಿ ಮುಚ್ಚುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ಉಪ್ಪಿನಂಗಡಿ ಸಮೀಪದ ಪೆರಿಯಡ್ಕದ ಕಿಂಡೋವಿನ ರಸ್ತೆಯಲ್ಲಿ ಬಿದ್ದ ಗುಂಡಿಗಳಿಗೆ ಸ್ಥಳೀಯ ಆಶಾ ಕಾರ್ಯಕರ್ತೆಯೂ ಆಗಿರುವ ಅನಂತಾವತಿ ಮತ್ತು ಅವರ ತಾಯಿ ಸೇಸಮ್ಮ ಸೇರಿಕೊಂಡು ಮಣ್ಣು ಮತ್ತು ಕಲ್ಲುಗಳಿಂದ ಗುಂಡಿಗಳನ್ನು ಮುಚ್ಚುತ್ತಿದ್ದಾರೆ.

ಮಣ್ಣು-ಕಲ್ಲುಗಳನ್ನು ಹಾಕಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ತಾಯಿ-ಮಗಳು

ಸಾಮಾನ್ಯವಾಗಿ ಪ್ರತಿ ವರ್ಷವೂ ಈ ಜಾಗದಲ್ಲಿ ಮಳೆಗಾಲದಲ್ಲಿ ಹೊಂಡಗಳು ನಿರ್ಮಾಣವಾಗುತ್ತವೆ ಹಾಗೂ 3 ವರ್ಷಗಳಿಂದ ಅನೇಕ ಬಾರಿ ಅಪ‌ಘಾತಗಳಾಗಿ ಸಾವು-ನೋವು ಕೂಡ ಸಂಭವಿಸಿದೆ. ಅನಂತಾವತಿ ಅವರ ಮನೆಯು ಇಲ್ಲೇ ಸಮೀಪದಲ್ಲಿದೆ. ವಾಹನಗಳ ಚಕ್ರಗಳು ಈ ಹೊಂಡಗಳಿಗೆ ಸಿಲುಕಿದಾಗ ಭಾರಿ ಶಬ್ದ ಕೇಳಿಸುತ್ತದೆ. ಹಾಗಾಗಿ ಇಂತಹ ಘಟನೆಗಳು ಮುಂದೆ ಸಂಭವಿಸದಿರಲಿ ಎಂದು ತಮ್ಮಿಂದ ಆಗುವ ಸೇವೆ ಮಾಡುತ್ತಿದ್ದೇವೆ ಅಂತಾರೆ ಅನಂತಾವತಿ.

ಇದನ್ನೂ ಓದಿ: ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಶಕ್ತಿಕೇಂದ್ರ ಪ್ರವೇಶಿಸಿದ ನೂತ‌ನ ಸಿಎಂ

ಉಪ್ಪಿನಂಗಡಿ(ದಕ್ಷಿಣ ಕನ್ನಡ): ಅದು ಹೆಸರಿಗೆ ಮಾತ್ರ ರಾಜ್ಯ ಹೆದ್ದಾರಿ. ಅದರ ದುಸ್ಥಿತಿ ನೋಡಿದ್ರೆ ಇಲ್ಲಿ ಸಂಚರಿಸುವ ವಾಹನ ಸವಾರರು ಪ್ರಸವವೇದನೆ ಅನುಭವಿಸದೇ ಇರಲಾರರು. ಅಷ್ಟಕ್ಕೂ ಅಲ್ಲಿ ಈಗಾಗಲೇ ಹಲವು ಬಾರಿ ಅಪಘಾತಗಳು ಸಂಭವಿಸಿದ್ದು, ಜನರು ನೋವುಂಡಿದ್ದಾರೆ. ಇದೆಲ್ಲವನ್ನು ಕಂಡ ತಾಲೂಕಿನ ಅಮ್ಮ-ಮಗಳು ತಾವೇ ಮುಂದೆ ನಿಂತು ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚುತ್ತಿದ್ದಾರೆ.

ಹೌದು, ತಾಯಿ-ಮಗಳು ಸೇರಿಕೊಂಡು ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಉಂಟಾದ ಹೊಂಡಗಳಿಗೆ ಮಣ್ಣು ಮತ್ತು ಕಲ್ಲುಗಳನ್ನು ಹಾಕಿ ಮುಚ್ಚುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ಉಪ್ಪಿನಂಗಡಿ ಸಮೀಪದ ಪೆರಿಯಡ್ಕದ ಕಿಂಡೋವಿನ ರಸ್ತೆಯಲ್ಲಿ ಬಿದ್ದ ಗುಂಡಿಗಳಿಗೆ ಸ್ಥಳೀಯ ಆಶಾ ಕಾರ್ಯಕರ್ತೆಯೂ ಆಗಿರುವ ಅನಂತಾವತಿ ಮತ್ತು ಅವರ ತಾಯಿ ಸೇಸಮ್ಮ ಸೇರಿಕೊಂಡು ಮಣ್ಣು ಮತ್ತು ಕಲ್ಲುಗಳಿಂದ ಗುಂಡಿಗಳನ್ನು ಮುಚ್ಚುತ್ತಿದ್ದಾರೆ.

ಮಣ್ಣು-ಕಲ್ಲುಗಳನ್ನು ಹಾಕಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ತಾಯಿ-ಮಗಳು

ಸಾಮಾನ್ಯವಾಗಿ ಪ್ರತಿ ವರ್ಷವೂ ಈ ಜಾಗದಲ್ಲಿ ಮಳೆಗಾಲದಲ್ಲಿ ಹೊಂಡಗಳು ನಿರ್ಮಾಣವಾಗುತ್ತವೆ ಹಾಗೂ 3 ವರ್ಷಗಳಿಂದ ಅನೇಕ ಬಾರಿ ಅಪ‌ಘಾತಗಳಾಗಿ ಸಾವು-ನೋವು ಕೂಡ ಸಂಭವಿಸಿದೆ. ಅನಂತಾವತಿ ಅವರ ಮನೆಯು ಇಲ್ಲೇ ಸಮೀಪದಲ್ಲಿದೆ. ವಾಹನಗಳ ಚಕ್ರಗಳು ಈ ಹೊಂಡಗಳಿಗೆ ಸಿಲುಕಿದಾಗ ಭಾರಿ ಶಬ್ದ ಕೇಳಿಸುತ್ತದೆ. ಹಾಗಾಗಿ ಇಂತಹ ಘಟನೆಗಳು ಮುಂದೆ ಸಂಭವಿಸದಿರಲಿ ಎಂದು ತಮ್ಮಿಂದ ಆಗುವ ಸೇವೆ ಮಾಡುತ್ತಿದ್ದೇವೆ ಅಂತಾರೆ ಅನಂತಾವತಿ.

ಇದನ್ನೂ ಓದಿ: ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಶಕ್ತಿಕೇಂದ್ರ ಪ್ರವೇಶಿಸಿದ ನೂತ‌ನ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.