ETV Bharat / state

ಹೆಣ್ಮಕ್ಕಳನ್ನು ಛೂ ಬಿಟ್ಟು ಲವ್ ಜಿಹಾದ್ ಆರೋಪ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ!

ಗಂಗಾಧರ್ ಬಿಲ್ಡರ್ ಹಾಗೂ ಹೋಲ್‌ಸೇಲ್ ವ್ಯಾಪಾರಿಯಾಗಿದ್ದು, ಉದ್ಯೋಗದ ನಿಮಿತ್ತ ಬೇರೆ ಬೇರೆ ಊರುಗಳಿಗೆ ಹೋಗುತ್ತಿರುತ್ತಾರೆ. ತಮ್ಮ ಇಬ್ಬರು ಮಕ್ಕಳು ವಿದೇಶದಲ್ಲಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

author img

By

Published : Mar 24, 2021, 3:00 AM IST

Love Zihad case in Mangalore
Love Zihad case in Mangalore

ಮಂಗಳೂರು: ಹೆಣ್ಮಕ್ಕಳನ್ನು ಛೂ ಬಿಟ್ಟು ಲವ್ ಜಿಹಾದ್ ನಡೆಸಿ 62ರ ವೃದ್ಧನನ್ನು ಮತಾಂತರ ಮಾಡಿ ಯುವತಿಯೋರ್ವಳೊಂದಿಗೆ ವಿವಾಹ ಮಾಡಿಸಲಾಗಿದೆ ಎಂದು ಆರೋಪಿಸಿರುವ ಪ್ರಕರಣವೊಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ದುಷ್ಕರ್ಮಿಗಳಿಂದ ಬಲವಂತವಾಗಿ ಅಪಹರಿಸಿ ತನ್ನನು ಅಕ್ರಮ ಬಂಧನದಲ್ಲಿರಿಸಿ ತನ್ನ ಪತಿಯನ್ನು ಲವ್ ಜಿಹಾದ್ ಮಾಡಿ ಯುವತಿಯ ಜತೆ ವಿವಾಹ ಮಾಡಿಸಿದ್ದಾರೆ ಎಂದು ಆರೋಪಿಸಿ ಪತ್ನಿ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರ ಬೋಳಾರ ನಿವಾಸಿ ಬಿ.ಎಸ್. ಗಂಗಾಧರ್ (62) ಎಂಬವರು ಯುವತಿಯೊಬ್ಬಳ ಜತೆಯಿರುವ ಫೋಟೋವನ್ನು ಪೊಲೀಸ್ ದೂರಿನ ಜತೆ ನೀಡಲಾಗಿದೆ.

Love Zihad case in Mangalore
ಮಂಗಳೂರಿನಲ್ಲೊಂದು ಲವ್​ ಜಿಹಾದ್​

ಇದನ್ನೂ ಓದಿ: ಗೋವಿಂದಪುರ ಡ್ರಗ್ಸ್​ ಕೇಸ್​: ಕೆಂಪೇಗೌಡ ಸಿನಿಮಾ ನಿರ್ಮಾಪಕ ಶಂಕರ್​ಗೌಡ ಬಂಧನ

ಗಂಗಾಧರ್ ಬಿಲ್ಡರ್ ಹಾಗೂ ಹೋಲ್‌ಸೇಲ್ ವ್ಯಾಪಾರಿಯಾಗಿದ್ದು, ಉದ್ಯೋಗದ ನಿಮಿತ್ತ ಬೇರೆ ಬೇರೆ ಊರುಗಳಿಗೆ ಹೋಗುತ್ತಿರುತ್ತಾರೆ. ತಮ್ಮ ಇಬ್ಬರು ಮಕ್ಕಳು ವಿದೇಶದಲ್ಲಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಉದ್ಯೋಗ ನಿಮಿತ್ತ ಹೊರಗೆ ಹೋದವರು ಜನವರಿ ಕೊನೆಯ ವಾರದಿಂದ ಮನೆಗೆ ಬಂದಿಲ್ಲ. ಅವರ ಮೊಬೈಲ್‌ಗೆ ಕರೆ ಮಾಡಿದಾಗ ಮಾ.8ರಂದು ಕರೆ ಸ್ವೀಕರಿಸಿ ಮಾತನಾಡಿದ್ದಾರೆ. ಆ ಬಳಿಕ ಅವರು ಕರೆಗೆ ಸಿಕ್ಕಿಲ್ಲ. ಮಾ.15ರಂದು ಪತಿಯನ್ನು ಯುವತಿ ಜೊತೆ ಬಲವಂತವಾಗಿ ವಿವಾಹ ಮಾಡಿಸಿರುವ ಬಗ್ಗೆ ಸ್ನೇಹಿತರು ಸಾಕ್ಷಿ ಸಮೇತ ತಿಳಿಸಿದ್ದಾರೆ. ಇದಕ್ಕೆ ಕಾರಣರಾದ ಆರೋಪಿಗಳನ್ನು ಹಾಗೂ ತನ್ನ ಪತಿಯನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪತ್ನಿ ಯಶೋಧಾ ಕೆ.ಎಚ್. ದೂರಿನಲ್ಲಿ ಆಗ್ರಹಿಸಿದ್ದಾರೆ.

ತನಿಖೆಗೆ ವಿಹಿಂಪ ಆಗ್ರಹ: ಹೆಣ್ಮಕ್ಕಳನ್ನು ಛೂಬಿಟ್ಟು ಲವ್ ಜಿಹಾದ್ ನಡೆಸಲಾಗುತ್ತಿದ್ದು, ಪ್ರಕರಣದ ವಿಶೇಷ ತನಿಖೆ ನಡೆಸಬೇಕೆಂದು ವಿಶ್ವ ಹಿಂದೂ ಪರಿಷತ್ ಶರಣ್ ಪಂಪ್‌ವೆಲ್ ಆಗ್ರಹಿಸಿದ್ದಾರೆ.

ಮಂಗಳೂರು: ಹೆಣ್ಮಕ್ಕಳನ್ನು ಛೂ ಬಿಟ್ಟು ಲವ್ ಜಿಹಾದ್ ನಡೆಸಿ 62ರ ವೃದ್ಧನನ್ನು ಮತಾಂತರ ಮಾಡಿ ಯುವತಿಯೋರ್ವಳೊಂದಿಗೆ ವಿವಾಹ ಮಾಡಿಸಲಾಗಿದೆ ಎಂದು ಆರೋಪಿಸಿರುವ ಪ್ರಕರಣವೊಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ದುಷ್ಕರ್ಮಿಗಳಿಂದ ಬಲವಂತವಾಗಿ ಅಪಹರಿಸಿ ತನ್ನನು ಅಕ್ರಮ ಬಂಧನದಲ್ಲಿರಿಸಿ ತನ್ನ ಪತಿಯನ್ನು ಲವ್ ಜಿಹಾದ್ ಮಾಡಿ ಯುವತಿಯ ಜತೆ ವಿವಾಹ ಮಾಡಿಸಿದ್ದಾರೆ ಎಂದು ಆರೋಪಿಸಿ ಪತ್ನಿ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರ ಬೋಳಾರ ನಿವಾಸಿ ಬಿ.ಎಸ್. ಗಂಗಾಧರ್ (62) ಎಂಬವರು ಯುವತಿಯೊಬ್ಬಳ ಜತೆಯಿರುವ ಫೋಟೋವನ್ನು ಪೊಲೀಸ್ ದೂರಿನ ಜತೆ ನೀಡಲಾಗಿದೆ.

Love Zihad case in Mangalore
ಮಂಗಳೂರಿನಲ್ಲೊಂದು ಲವ್​ ಜಿಹಾದ್​

ಇದನ್ನೂ ಓದಿ: ಗೋವಿಂದಪುರ ಡ್ರಗ್ಸ್​ ಕೇಸ್​: ಕೆಂಪೇಗೌಡ ಸಿನಿಮಾ ನಿರ್ಮಾಪಕ ಶಂಕರ್​ಗೌಡ ಬಂಧನ

ಗಂಗಾಧರ್ ಬಿಲ್ಡರ್ ಹಾಗೂ ಹೋಲ್‌ಸೇಲ್ ವ್ಯಾಪಾರಿಯಾಗಿದ್ದು, ಉದ್ಯೋಗದ ನಿಮಿತ್ತ ಬೇರೆ ಬೇರೆ ಊರುಗಳಿಗೆ ಹೋಗುತ್ತಿರುತ್ತಾರೆ. ತಮ್ಮ ಇಬ್ಬರು ಮಕ್ಕಳು ವಿದೇಶದಲ್ಲಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಉದ್ಯೋಗ ನಿಮಿತ್ತ ಹೊರಗೆ ಹೋದವರು ಜನವರಿ ಕೊನೆಯ ವಾರದಿಂದ ಮನೆಗೆ ಬಂದಿಲ್ಲ. ಅವರ ಮೊಬೈಲ್‌ಗೆ ಕರೆ ಮಾಡಿದಾಗ ಮಾ.8ರಂದು ಕರೆ ಸ್ವೀಕರಿಸಿ ಮಾತನಾಡಿದ್ದಾರೆ. ಆ ಬಳಿಕ ಅವರು ಕರೆಗೆ ಸಿಕ್ಕಿಲ್ಲ. ಮಾ.15ರಂದು ಪತಿಯನ್ನು ಯುವತಿ ಜೊತೆ ಬಲವಂತವಾಗಿ ವಿವಾಹ ಮಾಡಿಸಿರುವ ಬಗ್ಗೆ ಸ್ನೇಹಿತರು ಸಾಕ್ಷಿ ಸಮೇತ ತಿಳಿಸಿದ್ದಾರೆ. ಇದಕ್ಕೆ ಕಾರಣರಾದ ಆರೋಪಿಗಳನ್ನು ಹಾಗೂ ತನ್ನ ಪತಿಯನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪತ್ನಿ ಯಶೋಧಾ ಕೆ.ಎಚ್. ದೂರಿನಲ್ಲಿ ಆಗ್ರಹಿಸಿದ್ದಾರೆ.

ತನಿಖೆಗೆ ವಿಹಿಂಪ ಆಗ್ರಹ: ಹೆಣ್ಮಕ್ಕಳನ್ನು ಛೂಬಿಟ್ಟು ಲವ್ ಜಿಹಾದ್ ನಡೆಸಲಾಗುತ್ತಿದ್ದು, ಪ್ರಕರಣದ ವಿಶೇಷ ತನಿಖೆ ನಡೆಸಬೇಕೆಂದು ವಿಶ್ವ ಹಿಂದೂ ಪರಿಷತ್ ಶರಣ್ ಪಂಪ್‌ವೆಲ್ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.